Recent Posts

ಲಾಕಪ್ಪಿನಲ್ಲಿ ಒಂದು ರಾತ್ರಿ - ೧೦ ನೇ ತರಗತಿ ನುಡಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ಲಾಕಪ್ಪಿನಲ್ಲಿ ಒಂದು ರಾತ್ರಿ

ಲೇಖಕರ ಪರಿಚಯ
*ಗೊರೂರು ರಾಮಸ್ವಾಮಿ ಅಯ್ಯಂಗಾರ್*
ಜನ್ಮ : 1904 ಜುಲೈ 4
ಜನ್ಮ ಸ್ಥಳ : ಹಾಸನ ಜಿಲ್ಲೆಯ ಗೊರೂರು
ಕೃತಿಗಳು :1)ಅಮೇರಿಕಾದಲ್ಲಿಗೊರೂರು, 2) ನಮ್ಮ ಊರಿನ ರಸಿಕರು, 3) ಹೇಮಾವತಿ, 4)ಮೆರವಣಿಗೆ,  5) ಹಳ್ಳಿಯ ಹಾಡು.
 
ಒಂದು ವಾಕ್ಯದಲ್ಲಿ ಉತ್ತರಿಸಿ.
 
1. ಬೆಳಗಾಗುವ ವೇಳೆ ಕಾಲು ಕೊರಡಾಗಬಹುದೆಂಬ ಭಾವನೆಯು ಗೊರೂರರ ಮನಸ್ಸಿಗೆ ಏಕೆ ಬಂದಿತು?
ಉತ್ತರ : ರಾತ್ರಿ ಚಳಿ ಆರಂಭವಾದ ಕಾರಣ ಕಾಲು ಕೊರಡಾಗಬಹುದೆಂಬ ಭಾವನೆಯು ಗೊರೂರರ ಮನಸ್ಸಿಗೆ ಬಂದಿತ.

2. ಭಾರತದಲ್ಲಿರುವ ಅಲೆಮಾರಿಗಳಿಗೆ ರಾತ್ರಿ ವೇಳೆಯಲ್ಲಿ ತಂಗಲು ಇರುವ ಸ್ಥಳಗಳಾವವು?
ಉತ್ತರ : ಛತ್ರ, ಧರ್ಮಶಾಲೆ, ದೇವಾಲಯ, ರೇಲ್ವೆಸ್ಟೇಷನ್, ವಿಮಾನ ನಿಲ್ದಾಣ ಇವು ಭಾರತದಲ್ಲಿರುವ ಅಲೆಮಾರಿಗಳಿಗೆ ರಾತ್ರಿ ವೇಳೆ ತಂಗಲು ಇರುವಂಥ ಸ್ಥಳಗಳು.

3. ಅಮೇರಿಕಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿವೇಳೆ ತಂಗುವಂತಿಲ್ಲ ಏಕೆ?
ಉತ್ತರ : ಕಾರಣ ಅಂತಹ ಸ್ಥಳಗಳಲ್ಲಿ ರಾತ್ರಿ ತಂಗಿದರೆ ಅಲೆಮಾರಿ ಎಂದು ತಿಳಿದು ಲಾಕಪ್ಪಿಗೆ ಹಾಕುತ್ತಾರೆ.

4. ಮಿನಿ ಪೋಲೀಸ್ ನಗರದಲ್ಲಿ ದಾರಿತಪ್ಪಿದ ಗೊರೂರರು ರಾತ್ರಿ ಕಳೆಯಲು ಹೋಟೆಲಿಗೆ ಹೋಗಲಾಗಲಿಲ್ಲ ಏಕೆ?
ಉತ್ತರ : ಕಾರಣ ಅವರ ಹತ್ತಿರ ಹೆಚ್ಚು ಡಾಲರ್ಗಳಿರಲಿಲ್ಲ.

5. ಅಮೇರಿಕಾದ ಪೋಲೀಸರು ಭಾರತದ ಪೋಲೀಸರ ಬಗೆಗೆ ಗೊರೂರರಲ್ಲಿ ಯಾವ ವಿಚಾರವನ್ನು ಕೇಳಿ ತಿಳಿದುಕೊಂಡರು?
ಉತ್ತರ : ಸಂಬಳ ಮತ್ತು ಸಾರಿಗೆ ಈ ಎರಡು ವಿಚಾರಗಳನ್ನು ಕೇಳಿ ತಿಳಿದುಕೊಂಡರು.

ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ.
 
1)  ಗೊರೂರರು ಮಿನಿಪೋಲೀಸ್ ನಗರದಲ್ಲಿ ಇಳಿದ ಸ್ಥಳದಿಂದ ಏಕೆ ತಪ್ಪಿಸಿಕೊಂಡರು?
ಉತ್ತರ : ಮಿನಿ ಪೋಲೀಸ್ ನಗರದಲ್ಲಿ ಲೇಖಕರು ತನಗೆ ಅರಿವಿಲ್ಲದಂತೆ ಸುತ್ತುತ್ತ ಬಣ್ಣದ ಬಲ್ಬುಗಳನ್ನು, ಕಮಾನುಗಳನ್ನು, ಕಿಟಕಿಗಳನ್ನು ನೋಡುತ್ತ ರಸ್ತೆಯ ಆಚೆ-ಈಚೆ ಹೊರಟು ಹೋದ ಕಾರಣ ಅವರು ಕಾರು ಇಳಿದ ಸ್ಥಳದಿಂದ ತಪ್ಪಿಸಿಕೊಂಡರು.

2)  ಮಿನಿಪೋಲೀಸ್ ನಗರದಲ್ಲಿ ಪೋಲೀಸ್ರು ಗೊರೂರರನ್ನು ಹೇಗೆ ಉಪಚರಿಸಿದರು?
ಉತ್ತರ: ಮಿನಿಪೋಲೀಸ್ ನಗರದಲ್ಲಿ ಪೋಲೀಸ್ರು ಗೊರೂರರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಮನೆಗೆ ಕರೆದುಕೊಂಡು ಹೋದರು. ರಾತ್ರಿಯ ಊಟವೆಂದು ಬ್ರೆಡ್, ಹಾಲು, ಹಣ್ಣು, ಬಿಸ್ಕೀಟ್ಗಳನ್ನು ನೀಡಿದರು. ತಮ್ಮ ಮನೆಯ ಹಾಸಿಗೆ ಧೂಳು ತುಂಬಿದ ಕಾರಣ ತಮ್ಮ ವಶದಲ್ಲಿರುವ ಲಾಕಪ್ಪಿನಲ್ಲಿ ಮಲಗುವ ವ್ಯವಸ್ಥೆ ಮಾಡಿ ಚೆನ್ನಾಗಿಯೇ ಉಪಚರಿಸಿದರು.

3)  ಗೊರೂರರು ಒಂದು ರಾತ್ರಿಯನ್ನು ಲಾಕಪ್ಪಿನಲ್ಲಿ ಕಳೆಯಬೇಕಾಯಿತು ಏಕೆ?
ಉತ್ತರ : ಲೇಖಕರು ತಮಗೆ ಅರಿವಿಲ್ಲದಂತೆ ಬಣ್ಣದ ಬಲ್ಬುಗಳು, ಕಿಟಕಿಗಳು, ಕಿಟಕಿಗಳ ದೀಪಾಲಂಕಾರ, ಕಮಾನುಗಳು, ದೀಪ ರಾಶಿ ಮುಂತಾದವುಗಳನ್ನೆಲ್ಲಾ ನೋಡುತ್ತ ರಸ್ತೆಯ ಆಚೆ-ಈಚೆ ಹೊರಟು ಹೋದರು. ಮಿತ್ರರ ಪರಿಚಿತ ವ್ಯಕ್ತಿ ಕರೆದುಕೊಂಡು ಹೋಗುವುದಾಗಿ ಹೇಳಿದ್ದ ಆ ಸ್ಥಳ ಸಿಗದೇ ಹೋಯಿತು. ನಂತರ ಗೊರೂರರು ಟ್ರಾಫಿಕ್ ಪೋಲೀಸನವರ ಕೈಗೆ ಸಿಕ್ಕಿಹಾಕಿಕೊಂಡ ಕಾರಣ ಒಂದು ರಾತ್ರಿ ಲಾಕಪ್ಪಿನಲ್ಲಿ ಕಳೆಯಬೇಕಾಯಿತು.     

4)  ಪೋಲೀಸರು ಗೊರುರರನ್ನು ಲಾಕಪ್ಪಿನಲ್ಲಿ ಮಲಗಿಸಲು ಯೋಚಿಸಿದ್ದೇಕೆ?
ಉತ್ತರ : ಟ್ರಾಫಿಕ್ ಪೋಲೀಸ್ನವರ ಮನೆಯ ಹಾಸಿಗೆ ದೂಳಿನಿಂದ ತುಂಬಿತ್ತು, ಆ ಕಾರಣದಿಂದಾಗಿ ಪೊಲೀಸ್ನವರು ಗೊರೂರರನ್ನು ತಮ್ಮ ವಶದಲ್ಲಿರುವ ಲಾಕಪ್ಪಿನಲ್ಲಿ ಮಲಗಿಸಲು ಯೋಚಿಸಿದರು.

ಎಂಟು/ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

1)  ಮಿನಿಪೊಲೀಸ್ ನಗರದಲ್ಲಿ ಗೊರೂರರಿಗೆ ಎದುರಾದ ಸಮಸ್ಯೆಗಳು ಯಾವವು?
ಉತ್ತರ : ಮಿನಿಪೊಲೀಸ್ ನಗರಕ್ಕೆ ಲೇಖಕರು ತಮ್ಮ ಮಿತ್ರರನ್ನು ನೋಡಲು ಹೋದಾಗ ಅವರು ಭೇಟಿಯಾಗಲಿಲ್ಲ. ಅವರ ಪರಿಚಯವಿರುವ ವ್ಯಕ್ತಿಯೊಬ್ಬರು ಬೆಟಿಯಾದರು. ಅವರು ಲೇಖಕರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ತಮ್ಮ ಕೆಲಸದ ಮೇಲೆ ಹೋದಾಗ ಲೇಖಕರು ನಡುದಾರಿಯಲ್ಲಿ ಇಳಿದುಕೊಂಡರು. ಮಧ್ಯರಾತ್ರಿ 2-00 ಗಂಟೆಗೆ ತಮ್ಮನ್ನು ಕರೆದುಕೊಂಡು ಹೋಗಲು ಹೇಳಿದರು. ಸಂಜೆ ದೀಪ ಹೊತ್ತಿದ ನಂತರ ಲೇಖಕರು ತಮಗೆ ಅರಿವಿಲ್ಲದಂತೆ ಸುಂದರ ನಗರದ ದೃಶ್ಯಾವಳಿಗಳನ್ನು ನೋಡುತ್ತ ರಸ್ತೆಯ ಆಚೆ-ಈಚೆ ಹೊರಟು ಹೋದರು. ಆಮೇಲೆ ಆ ನಿಗದಿಪಡಿಸಿದ ಜಾಗ ಸಿಗದೇ ಹೋಗಿ, ರಾತ್ರಿ 9 ಗಂಟೆಯಾಯಿತು. ರಾತ್ರಿ ಚಳಿ ಬೇರೆ ಜೋರಾಗಿತ್ತು. ಹೋಟೆಲಿನಲ್ಲಿ ಉಳಿಯಲು ಇವರ ಹತ್ತಿರ ಹೆಚ್ಚು ಡಾಲರ್‌ಗಳು ಇರಲಿಲ್ಲ.  ಅಮೇರಿಕಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಲಗಿದರೆ ಅಲೆಮಾರಿ ಎಂದು ತಿಳಿದು ಲಾಕಪ್ಪಿಗೆ ಹಾಕುತ್ತಾರೆ. ಇಂತಹ ಸ್ಥಿತಿಯಲ್ಲಿ ಅವರಿಗೆ ಒಬ್ಬ ಟ್ರಾಫಿಕ್ ಪೊಲೀಸ್ ಭೇಟಿಯಾಗಿ, ಅವರೇ ಲೇಖಕರನ್ನು ಸರಿಯಾಗಿ ಉಪಚರಿಸಿ ಲಾಕಪ್ಪಿನಲ್ಲಿ ಮಲಗುವ ವ್ಯವಸ್ಥೆ ಮಾಡಿದರು.
 
2)  ಮಿನಿಪೋಲೀಸ್ ನಗರದಲ್ಲಿ ಎದುರಾದ ಸಮಸ್ಯೆಯಿಂದ ಲೇಖಕರು ಪಾರಾದುದು ಹೇಗೆ? ವಿವರಿಸಿ.
ಉತ್ತರ : ಮಿನಿಪೊಲೀಸ್ ನಗರದಲ್ಲಿ ಲೇಖಕರು ದಾರಿತಪ್ಪಿ ಅಲೆದಾಡುವಾಗ, ಆಗ ತಾನೇ ಕರ್ತವ್ಯ ಮುಗಿಸಿ ಬರುತ್ತಿದ್ದ ಟ್ರಾಫಿಕ್ ಪೋಲೀಸ್ನವನು ಸಿಕ್ಕಿದನು. ಅವನಿಗೆ ಲೇಖಕರು ತಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ, ಅವನು ತನ್ನ ಮನೆಗೆ ಕರೆದುಕೊಂಡು ಹೋದನು. ರಾತ್ರಿ ಊಟವೆಂದು ಬ್ರೆಡ್, ಹಾಲು, ಹಣ್ಣು ಬಿಸ್ಕೀಟ್ಗಳನ್ನು ನೀಡಿದನು. ತನ್ನ ಮನೆಯ ಹಾಸಿಗೆ ಅನೇಕ ದಿನಗಳಿಂದ ಉಪಯೋಗಿಸದೇ ಇರುವುದರಿಂದ ಧೂಳು ತುಂಬಿದೆ. ಆ ಕಾರಣ ತನ್ನ ವಶದಲ್ಲಿರುವ ಲಾಕಪ್ಪಿನಲ್ಲಿ ಹೋಗಿ ಮಲಗಿರಿ ಎಂದು ಹೇಳಿದನು. ಈ ರೀತಿಯಾಗಿ ಲೇಖಕರು ತನಗೆ ಎದುರಾದ ಸಮಸ್ಯೆಗಳಿಂದ ಪಾರಾದರು.

ಸಂದರ್ಭ ಸ್ಪಷ್ಟಿಕರಿಸಿ.
 
1)  ಈಗ ನೀವು ನನ್ನ ವಶವಾದಿರಿ. ನಾನು ನಿಮ್ಮನ್ನು ಕೈ ಬಿಡುವುದಿಲ್ಲ.
ಪಾಠದ ಹೆಸರು : ಲಾಕಪ್ಪಿನಲ್ಲಿ ಒಂದು ರಾತ್ರಿ.
ಲೇಖಕರ ಹೆಸರು : ಗೊ.ರಾ.ಅಯ್ಯಂಗಾರ್.
ಸಂದರ್ಭ: ಟ್ರಾಫಿಕ್ ಪೋಲೀಸ್ನವರು ಈ ಮಾತನ್ನು ಲೇಖಕರಿಗೆ ನುಡಿದಿದ್ದಾರೆ.
ವಿವರಣೆ : ಮಿನಿಪೋಲೀಸ್ ನಗರದ ದೀಪರಾಶಿ ಕಮಾನುಗಳು, ಕಿಟಕಿಗಳು, ಕಿಟಕಿಗಳ ದೀಪಾಲಂಕಾರ ಮೊದಲಾದವುಗಳನ್ನೆಲ್ಲಾ ನೋಡುತ್ತ ಲೇಖಕರು ರಸ್ತೆಯ ಆಕಡೆ ಈಕಡೆ ಹೊರಟು ಹೋದರು. ನಂತರ ಮಿತ್ರರ ಪರಿಚಿತರು ಕರೆದುಕೊಂಡು ಹೋಗಲು ಹೇಳಿದ ಜಾಗ ಏನು ಮಾಡಿದರು ಸಿಗಲೇ ಇಲ್ಲ. ಕೊನೆಗೆ ಲೇಖಕರು ಟ್ರಾಫಿಕ್ ಪೋಲೀಸನವರ ಕೈಗೆ ಸಿಕ್ಕಿ ಹಾಕಿಕೊಂಡಾಗ ಅವರು ಮೇಲಿನ ಈ ಮಾತನ್ನು ಲೇಖಕರಿಗೆ ನುಡಿಯುವರು.

2)  ನನ್ನ ಖೈದಿಯ ರಕ್ಷಣೆಯನ್ನು ನಾನು ಸರಿಯಾಗಿ ಮಾಡಬೇಕಷ್ಟೆ
ಪಾಠದ ಹೆಸರು : ಲಾಕಪ್ಪಿನಲ್ಲಿ ಒಂದು ರಾತ್ರಿ.
ಲೇಖಕರ ಹೆಸರು : ಗೊ.ರಾ.ಅಯ್ಯಂಗಾರ್.
ಸಂದರ್ಭ: ಟ್ರಾಫಿಕ್ ಪೊಲೀಸ್ನವರು ಈ ಮಾತನ್ನು ಲೇಖಕರಿಗೆ ನುಡಿದಿದ್ದಾರೆ.
ವಿವರಣೆ : ಲೇಖಕರು ತಮ್ಮ ಸಮಸ್ಯೆಯನ್ನು ಟ್ರಾಫಿಕ್ ಪೊಲೀಸ್ನವರಿಗೆ ಹೇಳಿದರು. ಪೋಲೀಸ್ನವರು ಲೇಖಕರನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡು ಮನೆಗೆ ಬಂದರು.  ರಾತ್ರಿಯ ಊಟಕೆಂದು ಬ್ರೆಡ್, ಹಾಲು, ಹಣ್ಣು, ಬಿಸ್ಕೀಟ್ಗಳನ್ನು ನೀಡಿದರು. ನಂತರ ತನ್ನ ವಶದಲ್ಲಿರುವ ಲಾಕಪ್ಪಿನಲ್ಲಿ ಎಲ್ಲ ವ್ಯವಸ್ಥೆಇದೆ.ಅಲ್ಲಿ ಹೋಗಿ ಮಲಗಿದರೆ ಸೊಗಸಾದ ನಿದ್ರೆ ಬರುತ್ತದೆ ಎಂದು ಹೇಳುತ್ತ ಈ ಮೇಲಿನ ಮಾತನ್ನು ಅವರು ಲೇಖಕರಿಗೆ ನುಡಿದರು.

3)  ಪೊಲೀಸ್ನವರ ಸಹವಾಸವಾದ ಮೇಲೆ ಲಾಕಪ್ ಆಗಲೇಬೇಕಷ್ಟೆ."  
ಪಾಠದ ಹೆಸರು : ಲಾಕಪ್ಪಿನಲ್ಲಿ ಒಂದು ರಾತ್ರಿ.
ಲೇಖಕರ ಹೆಸರ : ಗೊ.ರಾ.ಅಯ್ಯಂಗಾರ್.
ಸಂದರ್ಭ : ಲೇಖಕರು ಈ ಮಾತನ್ನು ಟ್ರಾಫಿಕ್ ಪೋಲೀಸ್ನವರ ಕುರಿತು ತನ್ನ ಮನದೊಳಗೆ ಅಂದುಕೊಂಡಿದ್ದಾರೆ.
ವಿವರಣೆ : ಟ್ರಾಫಿಕ್ ಪೊಲೀಸ್ನವರು ಲೇಖಕರನ್ನು ತನ್ನ ಮನೆಗೆ ಕರೆದುಕೊಂಡು ಬಂದರು. ರಾತ್ರಿಯ ಊಟ ನೀಡಿದರು. ತನ್ನ ಮನೆಯ ಹಾಸಿಗೆ ಸ್ವಚ್ಛವಿರದ ಕಾರಣ ತನ್ನ ವಶದಲ್ಲಿರುವ ಲಾಕಪ್ಪಿನಲ್ಲಿ ಹೋಗಿ ಮಲಗಿರಿ.  ಸೊಗಸಾದ ನಿದ್ರೆ ಬರುತ್ತದೆ ಎಂದು ಹೇಳಿದಾಗ ಈ ಮೇಲಿನ ಮಾತನ್ನು ಲೇಖಕರು ತನ್ನ ಮನದೊಳಗೆ ಅಂದುಕೊಂಡರು.

4) ನಾನು ಏನು ಮಾಡಿದರು ಕಾನೂನು ಬಿಟ್ಟು ಹೋಗುವುದಿಲ್ಲ. 
ಪಾಠದ ಹೆಸರು : ಲಾಕಪ್ಪಿನಲ್ಲಿ ಒಂದು ರಾತ್ರಿ.
ಲೇಖಕರ ಹೆಸರು : ಗೊ.ರಾ.ಅಯ್ಯಂಗಾರ್.
ಸಂದರ್ಭ: ಟ್ರಾಫಿಕ್ ಪೋಲೀಸ್ನವರು ಈ ಮಾತನ್ನು ಲೇಖಕರಿಗೆ ನುಡಿದಿದ್ದಾರೆ.
ವಿವರಣೆ : ಟ್ರಾಫಿಕ್ ಪೊಲೀಸ್ನವರು ಲೇಖಕರಿಗೆ ರಾತ್ರಿಯ ಊಟ ನೀಡುತ್ತಾರೆ. ಊಟವಾದ ನಂತರ ಅಮೇರಿಕಾದ ಪೊಲೀಸ್ನವರ ಕರ್ತವ್ಯಗಳ ಕುರಿತು ಮಾತನಾಡುತ್ತ ಈ ಮೇಲಿನ ಮಾತನ್ನು ಲೇಖಕರಿಗೆ ನುಡಿಯುತ್ತಾರೆ.

ಭಾಷಾಭ್ಯಾಸ:

ಅ) ಕೆಳಗೆ ಕೊಟ್ಟಿರುವ ಪದಗಳನ್ನು ಬಿಡಿಸಿ, ಬರೆದು ಸಂಧಿಯನ್ನು ಹೆಸರಿಸಿ.
ದೇವ+ಆಲಯ=ದೇವಾಲಯ (ಸವರ್ಣದೀರ್ಘ ಸಂಧಿ)      
ದೀಪ+ಅಲಂಕಾರ=ದೀಪಾಲಂಕಾರ (ಸವರ್ಣದೀರ್ಘ ಸಂಧಿ)
ಧರ್ಮ+ಅರ್ಥ= ಧರ್ಮಾರ್ಥ (ಸವರ್ಣದೀರ್ಘ ಸಂಧಿ)     
ಊಟ+ಆಯಿತು=ಊಟವಾಯಿತು (ವಕಾರಾಗಮ ಸಂಧಿ)
ರಕ್ಷಣೆ+ಅನ್ನು=ರಕ್ಷಣೆಯನ್ನು (ಯಕಾರಾಗಮ ಸಂಧಿ)    
ಬೇಕು+ಅಷ್ಟೇ=ಬೇಕಷ್ಟೇ (ಲೋಪಸಂಧಿ)
ಅರಿವು+ಇಲ್ಲ=ಅರಿವಿಲ್ಲ (ಲೋಪಸಂಧಿ)             
ವಾರಕ್ಕೆ+ಎರಡು=ವಾರಕ್ಕೆರಡು (ಲೋಪಸಂಧಿ)
ಸ್ವಚ್ಛ+ಆದ=ಸ್ವಚ್ಛವಾದ (ವಕಾರಾಗಮ ಸಂಧಿ)        
ನನ್ನ+ಅಲ್ಲಿ=ನನ್ನಲ್ಲಿ (ಲೋಪಸಂಧಿ)

ಆ) ಲಾಕಪ್ಪಿನಲ್ಲಿ ಒಂದು ರಾತ್ರಿ ಗದ್ಯಭಾಗದಲ್ಲಿಬಂದಿರುವ ಅನ್ಯದೇಶ್ಯ ಪದಗಳನ್ನು ಆರಿಸಿ ಬರೆಯಿರಿ.
ಮಿನಿ, ಪೊಲೀಸ್, ಲಾಕಪ್, ಮೋಟಾರು, ಬಲ್ಬು, ಡಾಲರು, ಹೋಟಲು, ಬ್ರೆಡ್, ಬಿಸ್ಕಿಟ್, ರಿಟರ್ನ್, ಟಿಕೇಟು, ರೈಲ್ವೆ, ಸ್ಟೇಷನ್, ಕಾರು.

ಇ) ಪದಗಳ ವಿರುದ್ಧಾರ್ಥಕ ರೂಪ ಬರೆಯಿರಿ.
ಪರಿಚಿತರು - ಅಪರಿಚಿತರು
ಹಗಲು - ಇರುಳು
ದರ್ಮ - ಅದರ್ಮ
ಮಿತ್ರ - ಶತ್ರು
ಬೆಳಕು - ಕತ್ತಲು

ಈ) ಕೆಳಗೆ ಕೊಟ್ಟಿರುವ ಪದಗಳ ಬಹುವಚನ ರೂಪ ಬರೆಯಿರಿ.
ಕಣ್ಣು-ಕಣ್ಣುಗಳು
ಮರ - ಮರಗಳು
ಕಾರು - ಕಾರುಗಳು
ನಗರ - ನಗರಗಳು
ಮನೆ - ಮನೆಗಳು
ದಿನ - ದಿನಗಳು
ಮಿತ್ರ - ಮಿತ್ರರು
ದೀಪ - ದೀಪಗಳು

ಎ) ಕೆಳಗೆ ಕೊಟ್ಟಿರುವ ಪದಗಳ ಲಿಂಗ ಹೆಸರಿಸಿ.
ಹುಡುಗಿ -ಸ್ತ್ರೀಲಿಂಗ
ಅಣ್ಣ- ಪುಲ್ಲಿಂಗ, ಹುಲ್ಲಿಂಗ
ಕವಯಿತ್ರಿ - ಸ್ತ್ರೀಲಿಂಗ
ರಾಮ - ಪುಲ್ಲಿಂಗ

ಏ) ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.
1) ಗೊರೂರರು ಅಮೇರಿಕಾದಲ್ಲಿ ಮಿತ್ರರನ್ನು ನೋಡಲು ಹೋಗಿದ್ದ ಸ್ಥಳದ ಹೆಸರು ಮಿನಿಪೊಲೀಸ್ ನಗರ.
2) ಮಿನಿ ಪೊಲೀಸ್ ನಗರದಲ್ಲಿ ದಾರಿತಪ್ಪಿದ ಗೊರೂರರಿಗೆ ಆಶ್ರಯ ನೀಡಿದಾತ ಟ್ರಾಫಿಕ್ ಪೊಲೀಸ್.
3) ಮಿನಿ ಪೊಲೀಸ್ ನಗರದಲ್ಲಿ ಗೊರೂರರ ಜೇಬಿನಲ್ಲಿ ಎರಡು ಡಾಲರ್ ಜೊತೆಗೆಇದ್ದುದು ಒಂದು ರಿಟರ್ನ್ ಟಿಕೇಟು.
4) ಮಿನಿಪೊಲೀಸ್ ನಗರದ ಲಾಕಪ್ನ್ನು ಸಾರಣೆ ಮಾಡಲು ಬಳಸುತ್ತಿದ್ದ ವಸ್ತು ಕ್ರಿಮಿನಾಶಕ.
5) ಗೊರೂರರು ಬರೆದಿರುವ ಪ್ರವಾಸಕಥನದ ಹೆಸರು ಅಮೆರಿಕಾದಲ್ಲಿ ಗೊರೂರು.





 
You Might Like

Post a Comment

0 Comments