Recent Posts

 ಪಂಜರ ಶಾಲೆ - ೫ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


 ಪಂಜರ ಶಾಲೆ
ಕೃತಿಕಾರರ ಪರಿಚಯ  ;ಬಿ.ವಿ ಕಾರಂತ : ಬಾಬುಕೊಡಿ ನಾರಾ ಅವರು ಕ್ರಿ.ಶ. 1928 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮಂಚಿ ಗ್ರಾಮದಲ್ಲಿ ಜನಿಸಿದರು . ತಂದೆ ಬಾಬುಕೊಡಿ ನಾರಾಯಣಪ್ಪಯ್ಯ , ತಾಯಿ ಲಕ್ಷ್ಮಮ್ಮ . ಬಾಲ್ಯದಲ್ಲಿ ನಾಟಕದ ಬಗೆಗೆ ಬಹಳ ಆಸಕ್ತಿಯುಂಟಾಗಿ ಗುಬ್ಬಿ ನಾಟಕ ಕಂಪನಿಗೆ ಸೇರಿದರು . ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ . ಇವರು ಈಡಿಪಸ್ , ಪಂಜರಶಾಲೆ , ಗೋಕುಲ ನಿರ್ಗಮನ , ಸತ್ತವರ ನೆರಳು , ಜೋಕುಮಾರಸ್ವಾಮಿ ಮೊದಲಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ . ಇವರಿಗೆ ಪದ್ಮಶ್ರೀ ಪ್ರಶಸ್ತಿ , ಕಾಳಿದಾಸ ಸಮ್ಮಾನ , ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ , ಗುಬ್ಬಿ ವೀರಣ್ಣ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ . ರವೀಂದ್ರನಾಥ್ ಟ್ಯಾಗೋರ್ ಅವರ ಈ ಬಂಗಾಳಿ ನಾಟಕವನ್ನು ಪಂಜರಶಾಲೆ ಎಂದು ಕನ್ನಡಕ್ಕೆ ಅನುವಾದಿಸಿ ನಿರ್ದೇಶಿಸಿದ್ದಾರೆ .
 
ಪದಗಳ ಅರ್ಥ  
ಖಗ = ಪಕ್ಷಿ ತರ್ಕ = ಆರು ದರ್ಶನಗಳಲ್ಲಿ ಒಂದು = ಪುರಾಣ , = ಹಿಂದಿನ ಕಾಲದಲ್ಲಿ ನಡೆದುಹೋದ ಕಥೆ ಪುಜ್ಞಾವಧಾನಿ = ತಿಳಿವಳಿಕೆ ಹಾಗೂ ಸ್ಮರಣೆ ಶಕ್ತಿಯುಳ್ಳವನು ಮಧುಫಲ = ಸಿಹಿಯಾದ ಹಣ್ಣು ಮೃಗ = ಪ್ರಾಣಿ ರಕ್ಷಕರು = ಕಾಪಾಡುವವರು ವಿದ್ಯಾವತಂಸ = ವಿದ್ಯಾವಂತ ವಂದಿಮಾಗಧರು = ಸ್ತುತಿ ಪಾಠಕರು , ಹೊಗಳುಭಟ್ಟರು ಶುಕ = ಗಿಳಿ ಪರಾಕು = ಜಯಘೋಷ ಸಭ್ಯ = ಮರ್ಯಾದಸ್ಯ , ಒಳ್ಳೆಯ ಮಹಾವಾಚಾಳ = ಜಾಸ್ತಿಯಾಗಿ ಮಾತನಾಡು ನಿರಕ್ಷರ ಕುಕ್ಷಿ = ವಿದ್ಯೆ ಕಲಿಯದ , ಒಂದಕ್ಷರವೂ ಬರದ . ಮನೋಜ್ಞ = ಮನಸ್ಸಿಗೆ ಮುಟ್ಟುವಂತೆ ಸ್ವಚದ = ಯಾವ ನಿರ್ಬಂಧವಿಲ್ಲದೆ ನೇಪದ = ಪರದೆಯ ಹಿಂದೆ ( ವೀಕ್ಷಕರಿಗೆ ಕಾಣದಿರುವು ಗಿಳಿವಿಂಡು = ಗಿಳಿಗಳ ಸಮೂಹ
 ಅಭ್ಯಾಸ
 
1.    ಗಿಳಿಮರಿಯು ಏನನ್ನು ತಿನ್ನಲು ತನ್ನ ಬಳಗವನ್ನು ಕರೆಯಿತು ?
ಗಿಳಿಮರಿಯು ಮಧುಫಲ ( ಹಣ್ಣನ್ನು ತಿನ್ನಲು ತನ್ನ ಬಳಗವನ್ನು ಕೂಗಿ ಕರೆಯಿತು .
 
2.    ಮಂತ್ರಿಯ ಪ್ರಕಾರ ಗಿಳಿಮರಿಗೆ ಏನೇನು ಬರುವುದಿಲ್ಲ ಎಂದು ಹೇಳಿದನು ?
ಮಂತ್ರಿಯ ಪುಕಾರ ಗಿಳಿಮರಿಗೆ ಮಾತಾಡಲು , ಹಾಡು ಹೇಳಲೂ … ಏನೂ ಬರುವುದಿಲ್ಲ . ರಾಜನಿಗೆ ಹೇಳಿದನು .
 
3.ರಾಜನು ಗಿಳಿಮರಿಯನ್ನು ಇಟ್ಟು ಅವನು ಶಾಲೆಗೆ ಸೇರಿಸಲು ಆದೇಶ ಮಾಡಿದನು ?
ರಾಜನು ಗಿಳಿಮರಿಯನ್ನು ರಾಜಶಾಲೆಗೆ ಸೇರಿಸಲು ಆದೇಶ ಮಾಡಿದನು .
 
4 .ರಾಜನು ಯಾರನ್ನು ಶುಕಶಿಕ್ಷಣ ಮಂತ್ರಿಯನ್ನಾಗಿ ನೇಮಿಸಿದನು ?
 ರಾಜನು ತನ್ನ ಅಳಿಯನನ್ನು ಶುಕಶಿಕ್ಷಣ ಮಂತ್ರಿಯ ನ್ನಾಗಿ ನೇಮಿಸಿದನು .
 
5.    ರಾಜನು ಗಿಳಿಮರಿಗೆ ಏನನ್ನು ಕಲಿಸಬೇಕು ಎಂದು ಹೇಳಿದನು ?
ರಾಜನು ಗಿಳಿಮರಿಗೆ ಸಭ್ಯತೆ , ಶಾಸ್ತ್ರ ವ್ಯಾಕರಣವನ್ನು ಕಲಿಸಿ ಸುಸಂಸ್ಕೃತವನ್ನಾಗಿ ಮಾಡಬೇಕೆಂದು ತಿಳಿಸಿದನು .
 
ಆ ) ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .
 
1.    ಗಿಳಿಮರಿಯ ಬಗೆಗೆ ಮಂತ್ರಿಯು ರಾಜನಿಗೆ ಏನು ಹೇಳಿದನು ?
ಗಿಳಿಮರಿಯು ಅರಣ್ಯವಾಸಿ , ನಿರಕ್ಷರ ಕುಕ್ಷಿ  , ತೀರ ಅಸಂಸ್ಕೃತ , ಸಂಗೀತವಿಲ್ಲ , ನೃತ್ಯವಿಲ್ಲ , ಗದ್ಯ
ಬೇಧ ಗೊತ್ತಿಲ್ಲ . ಒಂದು ಎರಡರ ಮಗಿ ಕೂಡಾ ಬರೋದಿಲ್ಲ . ಇದಕ್ಕೆ ಬರೋದು ಒಂದೋ ಗಿಡಮರ
ಹತ್ತಿ  ಕೊಂಬೆ ಮುರಿದು ಹಣ್ಣು ತಿನ್ನೋದು ಉದುರಿಸೋದು  , ಎಂದು ಮಂತ್ರಿಯು ರಾಜನಿಗೆ ಹೇಳಿದನು
 
2.    ರಾಜನು ಗಿಳಿಮರಿಗೆ ಏನು ಮಾಡುವಂತೆ ಮಂತ್ರಿಗೆ ಹೇಳಿದನು ?
ರಾಜನು ಮಂತ್ರಿಗೆ ಈ ಗಿಳಿಮರಿಯನ್ನು ರಾಜಶಾಲೆಗೆ  ಸೇರಿಸತಕ್ಕದ್ದು ಶುಕಪಕ್ಷಿಯ ಆದಿಮಪವೃತ್ತಿಗಳನ್ನು ಸುಧಾರಿಸಿ ಆಧುನಿಕ ಮಾಡತಕ್ಕದ್ದು  ಎಂದು ಅಪ್ಪಣೆ ಮಾಡುತ್ತಾನೆ .
 
3 ಗಿಳಿಮರಿಯು ಏನೇನು ಕಲಿಯಬೇಕು ಎಂದು ರಾಜನು ಹೇಳುತ್ತಾನೆ ?
ಗಿಳಿಮರಿಯು ಸಭ್ಯತೆ ಕಲಿಯಲಿ ಕಾಡುತನ ಮರೆಯಲಿ ಶತ್ರವ್ಯಾಕರಣ ಕಲಿತು ಸುಶೀತವಾಗಲಿ
ಸುಸಂಸ್ಕೃತವಾಗಿ ಕಾಡಿನ ಉಳಿದ ಶುಕ ಪಕ್ಷಿಗಳನ್ನು ಸಭ್ಯವನ್ನಾಗಿ ಮಾಡಲಿ ಎಂದು ರಾಜನು ಹೇಳುತ್ತಾನೆ .
 
4.    ರಾಜನ ಅಳಿಯನು ಏನೆಂದು ನಿವೇದನೆ ಮಾಡಿದನು ?
ರಾಜನ ಅಳಿಯನು ತನ್ನ ಮಾವನಾದ ರಾಜನ ಮೊದಲು ಈ ಗಿಳಿಯ ಬಗ್ಗೆ ತಥ ( ಸತ್ಯ ) ವನ್ನು ಕಂಡುಹಿಡಿಯಬೇಕು .
ಇದರ ಅಸಭ್ಯತೆಗೆ , ಅವಿದ್ಯೆಗ ಮೂಲಕಾರಣ ಹಾಗೂ ಇದು ಏನು ತಿನ್ನುವುದು , ಹತ್ತಿರ ಕುಡಿಯುವುದು , ಆವರಣ ಎಂತದು , ಹಾರೋದು , ರೆಕ್ಕೆ ಪುಕ್ಕ , ಕೊಕ್ಕು ಇತ್ಯಾದಿ ಅಂಶಗಳ ಬಗ್ಗೆ ದೀರ್ಘ ಸಂಶೋಧನೆ ನಡೆಯಬೇಕು ಎಂದು ವಿನಮ್ರವಾಗಿ ನಿವೇದನೆ ಮಾಡಿದನು .
 
5.    ಮಂತ್ರಿಯು ರಾಜನ ಅಳಿಯನ ಬಗ್ಗೆ ಹೇಳಿದ ಮಾತುಗಳಾವುವು ?
ಮಂತ್ರಿಯು ರಾಜನ ಅಳಿಯನ ಬಗ್ಗೆ , ” ಅಳಿಯದೇವರು ಮಹಾಪ್ರತಿ ತು , ದೇಶಕೋಶ ಸುತ್ತಿ ಬಂದವರು ,ವಿದೇಶಗಳಿಂದ ಪದವಿಗಳನ್ನು ಹೊತ್ತು ತಂದವರು , ಕಾಂಭೋಜ ದೇಶದಲ್ಲಿ ಪ್ರಾಣಿಶಾಸ್ತ್ರ , ಪಕ್ಷಿಶಾಸ್ತ್ರ ಪಾರಂಗತರಾದವರು ,
ಅವರಿಗೆ ಶುಕ ಶಿಕ್ಷಣದ ಜವಾಬ್ದಾರಿಯನ್ನು ವಹಿಸಬಹುದೆಂಬ ಸಲಹೆಯನ್ನು ಕೊಟ್ಟನು .
 
ಇ ) ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತಪದಗಳಿಂದ ತುಂಬಿರಿ .
1.    ಬನ್ನಿ ಬನ್ನಿ , ಮಧುಫಲ ತಿನ್ನಿ , ಬೇಗ , ಹಾರಿಬನ್ನಿ ,
2.    ಈ ಅಸಭ್ಯ ಪಕ್ಷಿಯನ್ನು ರಾಜಶಾಲೆಗೆ ಸೇರಿಸತಕ್ಕದ್ದು .
3.    ತಾನು ಸುಸಂಸ್ಕೃತವಾಗಿ ಕಾಡಿನ ಉಳಿದ ಶುಕಪಕ್ಷಿ ಗಳನ್ನು ಸಭ್ಯಮಾಡಲಿ .
4.    ಅಳಿಯ ರಾಜ , ಇಂದಿನಿಂದ ನೀನು ಶುಕಶಿಕ್ಷಣದ ಮಂತ್ರಿ
5.    ಒಂದು ಪಕ್ಷಿಯ ಶಿಕ್ಷಣ ದಲ್ಲೂ ರಾ ಜನ ಆಸಕ್ತಿ ಎಷ್ಟಿದೆ ಎನ್ನುವುದು . ವ್ಯಾಕರಣ ಮಾಹಿತಿ
 
ಅ ) ಪ್ರತ್ಯಯಗಳ ಪರಿಚಯ
ಪ್ರತ್ಯಯಗಳು ನಾಮಪ್ರಕೃತಿಗೆ ( ಮೂಲ ಪದಕ್ಕೆ ನಿರ್ದಿಷ್ಟ ಅರ್ಥ ಬರುವಂತೆ ಮಾಡುತ್ತವೆ .
ಪ್ರತ್ಯಯಗಳನ್ನು ಸ್ವತಂತ್ರವಾಗಿ ಬಳಸಲು ಬರುವುದಿಲ್ಲ . ಹಾಗೆ ಬಳಸಿದರೆ ಅರ್ಥವೂ ಬರುವುದಿಲ್ಲ .
ವಾಕ್ಯ ರಚನೆಯ ಸಂದರ್ಭದಲ್ಲಿ ನಾಮಪಕೃತಿಗಳು ಪಡೆಯಬೇಕಾದ ಅರ್ಥ ವಿಶೇಷಗಳನ್ನು ತಂದುಕೊಡಲು ಸಹಾಯ ಮಾಡುವ ಕಾರಕಗಳೇ ಪ್ರತ್ಯಯಗಳು . ಇವುಗಳನ್ನು ವಿಭಕ್ತಿ ಪ್ರತ್ಯಯವೆಂದೂ ಕರೆಯುತ್ತಾರೆ .  ‘ ಮನೆ ‘ ಎಂಬುದು ನಾಮಪದದ ಮೂಲರೂಪ . ಇದನ್ನು ನಾಮಪಕೃತಿ ಎನ್ನುವರು . ಈ ನಾಮಪುಕೃತಿಗೆ ಪ್ರತ್ಯಯಗಳು ಸೇರಿದಾಗ ‘ ಪದ ‘ ಆಗುತ್ತದೆ:
ಉದಾ : ಮನೆ + ಉ = ಮನೆಯು , ಮನೆ + ಅಲ್ಲಿ = ಮನೆಯಲ್ಲಿ
 
ಆ ) ವಿಭಕ್ತಿ ಪ್ರತ್ಯಯ
    ವಿಭಕ್ತಿ                 ವಿಭಕ್ತಿ ಪ್ರತ್ಯಯ
1.    ಪ್ರಥಮಾ             ಉ
2.    ದ್ವಿತೀಯಾ          ಅನ್ನು                         
3.    ತೃತೀಯಾ          ಇಂದ
4.    ಚತುರ್ಥಿ             ಗೆ ಇಗೆ ಕೈ
5.    ಪಂಚಮೀ         ದೆಸೆಯಿಂದ
6.    ಷಷ್ಠಿ                    ಅ
7.    ಸಪ್ತಮೀ            ಅಲ್ಲಿ
 
ನಾಮಪುಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿದಾಗ ಏನಾಗುವುದು ಎಂಬುದನ್ನು ಗಮನಿಸೋಣ .
ನಾಮಪುಕೃತಿ          ವಿಭಕ್ತಿ ಪ್ರತ್ಯಯ           ಪದ

ರಾಜ                       ಉ                                ರಾಜನು
ರಾಜ                      ಅನ್ನು                         ರಾಜನನ್ನು
ರಾಜ ,                      ಇಂದ                        ರಾಜನಿಂದ
 ರಾಜ                   ಗೆ ಇಗೆ ಕೈ                        ರಾಜನಿಗೆ
 ರಾಜ                   ದೆಸೆಯಿಂದ                   ರಾಜನ ದೆಸೆಯಿಂದ
 ರಾಜ                           ಅ                              ರಾಜನ
ರಾಜ                            ಅಲ್ಲಿ                        ರಾಜನಲ್ಲಿ
 
ಭಾಷಾಭ್ಯಾಸ
 
ಅ ) ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ .
1.    ಪ್ರತ್ಯಯಗಳು ಎಂದರೇನು ?
 ವಾಕ್ಯರಚನೆಯ ಸಂದರ್ಭದಲ್ಲಿ ನಾಮಪುಕೃತಿ , ಪಡೆಯಬೇಕಾದ ಅರ್ಥ ವಿಶೇಷಗಳನ್ನು ತಂದುಕೊಡಲು ಸಹಾಯ ಮಾಡುವ ಕಾರಕಗಳೇ ಪ್ರತ್ಯಯಗಳು . ಇವುಗಳನ್ನು ವಿಭಕ್ತಿ ಪ್ರತ್ಯಯವೆಂದೂ ಕರೆಯುತ್ತಾರೆ .
2.    ಇಂದು , ನಾನು , ಅಲ್ಲಿ , ಬೇಗ ಗೆ –  ಇವುಗಳಲ್ಲಿ , ಪ್ರತ್ಯಯಗಳನ್ನು ರಚಿಸಿ ಬರೆಯಿರಿ
ಇಂದ , ಅಲ್ಲಿಗೆ – ಇವು ಪ್ರತ್ಯಗಳು
3.    ಮನೆ , ಕಲ್ಲನ್ನು ನೆಲ , ಹೊಲ , ಶಾಲೆಯಲ್ಲಿ – ಇವುಗಳಲ್ಲಿ ನಾಮ ಪುಕೃತಿಗಳನ್ನು ಆರಿಸಿ ಬರೆಯಿರಿ .
ಮನೆ , ನೆಲ , ಹೊಲ ಇವು ನಾಮ ಪುಕೃತಿಗಳು .
4.    ಉ , ಅನ್ನು , ಇಂದ , ಅಲ್ಲಿ – ಈ ಪ್ರತ್ಯಯಗಳನ್ನು ಕೆಳಗಿನ ನಾಮಪ್ರಕೃತಿಗಳಿಗೆ ಮಾದರಿಯಂತೆ ಹಚ್ಚಿರಿ .
 ಮಾದರಿ : ಮನೆ + ಉ = ಮನೆಯು
 ಮನೆ + ಅನ್ನು = ಮನೆಯನ್ನು
ಮನೆ + ಇಂದ = ಮನೆಯಿಂದ
ಮನೆ + ಅಲ್ಲಿ = ಮನೆಯಲ್ಲಿ
ಶಾಲೆ + ಉ = ಶಾಲೆಯು
ಶಾಲೆ + ಅನ್ನು = ಶಾಲೆಯನ್ನು
ಶಾಲೆ + ಇಂದ = ಶಾಲೆಯಿಂದ
ಶಾಲೆ + ಅಲ್ಲಿ = ಶಾಲೆಯಲ್ಲಿ
 ಪುಸ್ತಕ + ಉ = ಪುಸ್ತಕವು
ಪುಸ್ತಕ + ಅನ್ನು = ಪುಸ್ತಕವನ್ನು
 ಪುಸ್ತಕ + ಇಂದು =
 ಹೂವು + ಉ = ಹೂವು
ಹೂವು + ಅನ್ನು = ಹೂವನ್ನು
 ಹೂವ + ಇಂದ = ಹೂವಿನಿಂದ
 ಹೂವು + ಅಲ್ಲಿ = ಹೂವಲ್ಲಿ 3
ಬಳೆ + ಅನ್ನು = ಬಳೆಯನ್ನು
ಬಳೆ + ಅಲ್ಲಿ = ಬಳಯಲ್ಲಿ
ಬಳೆ + ಆಗ ಇಂದು = ಬಳೆಯಿಂದ
 ಹುಡುಗ+ ಉ = ಹುಡುಗನು
ಹುಡುಗ + ಅನ್ನು = ಹುಡುಗನನ್ನು
ಹುಡುಗ + ಇಂದ = ಹುಡುಗನಿಂದ +
 ಹುಡುಗ + ಅಲ್ಲಿ = ಹುಡುಗನಲ್ಲಿ
ರೈತ + ಉ = ರೈತನು ರೈತ + ಅನ್ನು = ರೈತನನ್ನು
ರೈತ + ಇಂದ = ರೈತನಿಂದ
ರೈತ + ಅಲ್ಲಿ = ರೈತನಲ್ಲಿ
 
ಈ ) ಶುಭನುಡಿ .
1.    ಕಲಿಯಲು ಸ್ವತಂತ್ರ ಇರಬೇಕು . ಒತ್ತಡ ಇರಬಾರದು .
2.    ಆಡಿ ಕಲಿ , ಹಾಡಿ ಕಲಿ , ನೋಡಿ ಕಲಿ , ಮಾಡಿ ಕಲಿ .
 
ಪ್ರವೇಶ
” ಪಂಜರದೊಳಗಿಟ್ಟು ನಯ , ವಿನಯ ಕಲಿಸಿ ” ಎಂಬ ರಾಜಾಜ್ಞೆ , ಸ್ವತಂತ್ರ ಸ್ವಚಂದವಾಗಿ ಬದುಕಿದ ಹಾಡುಹಕ್ಕಿಯ ತೊಳಲಾಟ ಈ ನಾಟಕದಲ್ಲಿ ಮನೋಜ್ಞವಾಗಿ ಮೂಡಿ ಬಂದಿದೆ . ಕಾಡಿನಲ್ಲಿ ಸಿಕ್ಕ n ಗಿಳಿಯನ್ನು ರಾಜನು ಬಂಧಿಸಿ ವಿರ . ಕಾಡಿನಲ್ಲಿ ಸಿಕ್ ಬಲವಂತದ ಶಿಕ್ಷಣ , ಸಂಸ್ಕೃತಿ ಕಲಿಸುವ ಆದೇಶ ಮಾಡುತ್ತಾನೆ . ಯಾರನೇ ಆಗಲಿ ಒತ್ತಡದಿಂದ ಏನನ್ನು ಕಲಿಸಲು ಈ ನಾಟಕದ ಆಶಯವಾಗಿದೆ .  ಮುಖ್ಯಾಂಶಗಳು  ಪ್ರಸ್ತುತ ಗದ್ಯವು ಮಹಾನ್ ತಜ್ಞರಾದಂತಹ ರವೀಂದ್ರನಾಥ್ ಠಾಗೋರ್ರವರು ರಚಿಸಿದ ನಾಟಕ . ಶಿಕ್ಷಣದ ಈ ನಾಟಕದ ಮೂಲಕ ಕೊಡುತ್ತಿರುವ ಸಂದೇಶವು ಪ್ರಮುಖವಾದುದು . ಇಂತಹ ಬಂಗಾಳಿ ನಾಟಕವನ್ನು ಇನ್ನೊಬ್ಬ ಮಹಾನ್ ನಾಟಕ ನಿರ್ದೇಶಕರು ಅನುವಾದ ಮಾಡಿದ್ದಾರೆ . ಹೆಸರೇ – ಸೂಚಿಸುವಂತೆ ಕಲಿಯಬೇಕಿರುವವರು ( ಮಕ್ಕಳು ಸ್ವಚಂಧ ಮನೋಭಾವದಿಂದ ಹಕ್ಕಿಯಂತೆ ಹಾರುತ್ತಿರುತ್ತಾರೆ . ಅಂತಹವರಿಗೆ ಕಲಿಕೆ ಪಂಜರವಾಗಬಾರದು ಎಂಬುದನ್ನು ಈ ನಾಟಕ ತಿಳಿಸುತ್ತಿದೆ . ನಾಟಕದ ಕಥಾವಸ್ತು – ಒಂದು ರಾಜೋದ್ಯಾನದಲ್ಲಿ ಗಿಳಿ ಸಮೂಹ ವಿಹರಿಸಿ ಹೊರಡಲು ಸಿದ್ಧವಾಗುವಷ್ಟರಲ್ಲಿ ಪುಟ್ಟ ಗಿಳಿಮರಿಯೊಂದು ಗಿಡವನ್ನು ಕಂಡು ಸಂತೋಂದ ಬಾಗಿದ ತನ್ನವರನ್ನೆಲ್ಲಾ ಕೂಗಿ ಕರೆಯುತ್ತದೆ.ಇದರ ಇವರನ್ನು ಕಂಡ ಗಿಳಿ ಇಬ್ಬರು ರಕ್ಷಕರುಓಡಿ , ‘ ವಲು ಕಾಯುತ್ತಿದ್ದ ಸಮೂಹ ಹಾರಿ ಹೋಗುತ್ತವೆ . ಆದರೆ ಈ ಪುಟ್ಟ ಗಿಳಿಮರಿ ಇದರ ಪರಿವೆಯೇ ಇಲ್ಲದೆ ಇನ್ನೂ ತನ್ನ ಸಮೂಹವನ್ನು ಕರೆಯುತ್ತ , ಹಣ್ಣು ತಿನ್ನುವುದರಲ್ಲಿ ಮಗ್ನವಾಗಿರುತ್ತದೆ . ಹಣ್ಣು ತುಂಬಿದ ಮರವನ್ನು ರಕ್ಷಿಸುತ್ತಿದ್ದ ರಕ್ಷಕರ ಕೈಗೆ ಸಿಗದೆ ಎಲ್ಲಾ ಗಿಳಿಯೂ ಪರಾರಿಯಾಗಿರುತ್ತದೆ . ಅದರಿಂದ ಕೋಪಗೊಂಡ ರಕ್ಷಕರ ಕೈಗೆ ಇನ್ನೂ ಕೂಗಿ ಕರೆಯುತ್ತಿದ್ದ ಈ ಪುಟ್ಟ ಮರಿಯು ಸಿಕ್ಕಿ ಬೀಳುತ್ತದೆ . ಅವರು ತಮ್ಮ ಕೋಪದಿಂದ ಈ ಪುಟ್ಟ ಮರಿಯನ್ನು ಯದ್ವಾತದ್ವಾ ಬೈಯುತ್ತಾರೆ . ಇವರನ್ನು ಸಾಕಷ್ಟು , ರೀತಿಯಲ್ಲಿ ಆಟ ಆಡಿಸಿ , ಇವರ ಬಲೆಗೆ ಸಿಕ್ಕಿ ಬೀಳುತ್ತದೆ . ಅಷ್ಮರಲ್ಲಿ ವಂದಿಮಾಗಧರ ಧ್ವನಿ ಕೇಳಿ ಬರುತ್ತದೆ . ರಾಜ , ಮಂತ್ರಿ ಮತ್ತು ರಾಜನ ಅಳಿಯನ ಪ್ರವೇಶವಾಗುತ್ತದೆ . ಗಿಳಿಮರಿ ಕೂಗುತ್ತದೆ . ಅದರ ಭಾಷೆ ಯಾರಿಗೂ ಅರ್ಥವಾಗುವುದಿಲ್ಲ . ರಾಜನು ಮಂತ್ರಿಯೊಂದಿಗೆ ಗಿಳಿಯ ಬಗ್ಗೆ , ಅದರ ಭಾಷೆ , ಮಾತು , ಹಾಡು , ಓದು , ನೃತ್ಯ , ತರ್ಕ , ಶಾಸ್ತ್ರ , ಪುರಾಣ , ವ್ಯಾಕರಣ ಇವುಗಳ ಬಗ್ಗೆ ಹೇಳತ್ತಾನೆ   ಇವರ ಮಾತನ್ನು ಕೇಳುತ್ತಿದ್ದ ಗಿಳಿಯು ಮಧ್ಯ ಮಧ್ಯ ಟೀಂ ಟೇಂ ಎಂದು ಕೂಗುತ್ತಿರುತ್ತದೆ . ಮಂತ್ರಿಯು ರಾಜ ಕೇಳಿದ ಯಾವುದೂ ಗಿಳಿಗೆ ಬರುವುದಿಲ್ಲ . ಅದೊಂದು ಅರಣ್ಯವಾಸಿ , ನಿರಕ್ಷರ ಕುಕ್ಕಿ , ತೀರಾ ಅಸಂಸ್ಕೃತ ಅದಕ್ಕೆ ಮಗ್ಗಿ ಸಹಾ ಬರಲ್ಲ . ಅದಕ್ಕೆ ಗೊತ್ತಿರುವುದು , ಗಿಡಮರ ಹತ್ತಿ , ಕೊಂಬೆ ಮುರಿದು , ಹಣ್ಣು ಉದುರಿಸೋದು ಮತ್ತು ತಿನ್ನುವುದು . ಇದನ್ನು ಕೇಳಿ ರಾಜನು ಕನಿಕರಪಡುತ್ತಾನೆ ಅವನೊಂದಿಗೆ ವಂದಿಮಾಗಧರು ರಕ್ಷಕರೂ ಸಹ ತಮ್ಮ ಧ್ವನಿಗೂಡಿಸಿ ಅಯ್ಯೋ ಪಾಪ ಎನ್ನುವರು . ರಾಜನು ತನ್ನ ಸುಶಿಕ್ಷಿತ ನಾಗರಿಕ ರಾಜ್ಯದಲ್ಲಿ ಈ ಅನಾಗರಿಕ ಪಕ್ಷಿ , ಇಂತಹ ಅಸಭ್ಯ ಪಕ್ಷಿಯನ್ನು ಏನು ಮಾಡುವುದು ,ಇದನ್ನು ಸುಶಿಕ್ಷಿತ ಮತ್ತು ಸುಸಂಸ್ಕೃತವಾಗಿ ಮಾಡಬೇಕಾದರೆ ರಾಜಶಾಲೆಗೆ ಸೇರಿಸಿ , ರಾಜಾಧ್ಯಾಪಕರಿಂದ ಶಿಕ್ಷಣ ಕೊಡಿಸು ಎಂದು ಮಂತ್ರಿಗೆ ಆಜ್ಞೆ ಮಾಡುತ್ತಾನೆ . ಈ ಗಿಳಿಯು ಸುಸಂಸ್ಕತವಾಗಿ ಕಾಡಿನ ಉಳಿದ ಶುಕ ಪಕ್ಷಿಗಳನ್ನು ಸಭ್ಯವನ್ನಾಗಿ ಮಾಡಲಿ ಎಂದಾಗ ರಾಜನ ಅಳಿಯ ತನ್ನ ಮಾವನಿಗೆ ಈ ಗಿಳಿಯನ್ನು ಇದರ ಅಸಭ್ಯತೆಗೆ ಹಾಗೂ ಅವಿದ್ಯೆಗೆ ಮೂಲಕಾರಣವನ್ನು ಕಂಡಿಯಬೇಕು . ಇದು ಏನು ಸಂಶೋಧನೆ ನಡೆಂ y , ಅಂಶಗಳ ಬು . ಆಗ ಮಂತ್ರಿಯು ತಿನ್ನುವುದು , ಕುಡಿಯುವುದು . ಇದರ ಆವರಣ ಎಂಥದು ….. ಇತ್ಯಾದಿ ಅಂಶಗ ಯುವರಾಜ ಅಳಿಯ ದೇವರು ಮಹಾಪ್ರತಿಭಾ ಶಾಲಿಗಳು , ಪ್ರಾಣಿಶಾಸ್ತ್ರ , ಪಕ್ಷಿಶಾಸ್ತ್ರ ಪಾರಂಗತರು … ಇತ್ಯಾದಿ ಈ .ಶುಕ ಶಿಕ್ಷಣದ ಜವಾಬ್ದಾರಿಯನ್ನು ಅವರಿಗೇ ವಹಿಸಬಹುದೆಂದು ರಾಜನಲ್ಲಿ ವಿನಂತಿ ಮಾಡಿಕೊಳ್ಳುತ್ತಾನೆ . ಅದಕ್ಕೆ ರಾಜನು ಅಂದಿನಿಂದ ಅಳಿಯನನ್ನು ಶುಕಶಿಕ್ಷಣದ ಮಂತ್ರಿಯನ್ನಾಗಿ ನೇಮಿಸಿ , ಅದನ್ನು ರಾಜ್ಯದ ಮೂಲೆಮೂಲೆಯಲ್ಲಿಯೂ ಡಂಗುರ ಸಾರಿಸುವಂತೆ ಆಜ್ಞಾಪಿಸುತ್ತಾನೆ . ಹಾಗೆಯೇ ರಾಜ್ಯದ ಪ್ರತಿಯೊಬ್ಬ ಪುಜೆಗೂ ಗೊತ್ತಾಗಲಿ , ಒಂದು ಅಲ್ಪವಾದ ಗಿಳಿ ( ಪಕ್ಷಿಯ ಶಿಕ್ಷಣದಲ್ಲೂ ರಾಜನು ಎಷ್ಟೊಂದು ಆಸಕ್ತಿ ವಹಿಸಿದ್ದಾನೆ ಮತ್ತು ತನ್ನ ಮಗಳಿಗೂ ಅವಳ ಗಂಡ ಶುಕ ಶಿಕ್ಷಣ ಮಂತ್ರಿಯಾದನೆಂದು ಸಂತೋಪ ಪಡಲಿ ಎಂದು ಹೇಳುವನು . ( ಮನಃ ಪರಾಕು ಹೇಳುತ್ತಾ ಎಲ್ಲರೂ ನಿರ್ಗಮಿಸುವರು )


You Might Like

Post a Comment

0 Comments