ಮಗುವಿನ ಮೊರೆ
ಕೃತಿಕಾರರ ಪರಿಚಯ : ಸಿದ್ಧಯ್ಯ ಪುರಾಣಿಕ ಅವರು ಕ್ರಿ.ಶ. 1918 ರಲ್ಲಿ ಕೊಪ್ಪಳ ಜಿಲ್ಲೆಯ ಯಲಬರ್ಗಾ ತಾಲ್ಲೂಕಿನ ದ್ಯಾಂಪುರ ಗ್ರಾಮದಲ್ಲಿ ಜನಿಸಿದರು . ಇವರ ತಂದೆ ಪಂಡಿತ ಕಲ್ಲಿನಾಥ ಶಾಸ್ತಿ ಪುರಾಣಿಕ , ತಾಯಿ ದಾನಮ್ಮ ಪುರಾಣಿಕ . ಇವರು ಬಾಲ್ಯದಲ್ಲಿಯೇ ಸಾಹಿತ್ಯ ಮತ್ತು ಸಾಂಸ್ಕೃತಿಕ ವಾತಾವರಣವಿದ್ದ ಮನೆಯಲ್ಲಿ ಬೆಳೆದದ್ದರಿಂದ ಸಹಜವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮವಾದ ಸೇವೆಯನ್ನು ಸಲ್ಲಿಸಲು ಸಾಧ್ಯವಾಯಿತು . ‘ ವಚನೋದ್ಯಾನದ ಅನುಭಾವಿ ‘ ಬಿರುದಾಂಕಿತರು . ” ಕಾವ್ಯಾನಂದ ‘ ಕಾವ್ಯನಾಮಾಂಕಿತರು . ಐ.ಎ.ಎಸ್ . ಸ್ಥಾನಾಲಂಕೃತರು . ಇವರು ಜಲಪಾತ , ಕರುಣಾ ಶ್ರಾವಣ , ಮಾನಸ ಸರೋವರ , ಮೊದಲು ಮಾನವನಾಗು , ವಚನೋದ್ಯಾನ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ . ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಹಾಗೂ ಗುಲ್ಬರ್ಗಾದಲ್ಲಿ 58 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವು ಸಂದಿದೆ .
ಪದಗಳ ಅರ್ಥ
ಒರತೆ = ನೀರು ಜಿನುಗುವ ತಗ್ಗು
ತೆರ = ರೀತಿ
ನಾವೆ = ದೋಣಿ, ನೀರಿನ ಮೇಲೆ ಪ್ರಯಾಣ ಮಾಡಲು ಬಳಸುವ ಸಾಧನ
ವಿಭು = ದೇವರು, ಪರಮಾತ್ಮ, ಒಡೆಯ
ಹಣತೆ = ದೀಪ
ಇರವಿಗೊಂದು = ಇರುವಿಕೆಗೆ ಒಂದು
ಗೊಳ ಮೊಟ್ಟೆಯಿಟ್ಟು = ಬರಿ ಮೊಟ್ಟೆ ಇಟ್ಟು
ಒರತೆ = ನೀರು ಜಿನುಗುವ ತಗ್ಗು
ತೆರ = ರೀತಿ
ನಾವೆ = ದೋಣಿ, ನೀರಿನ ಮೇಲೆ ಪ್ರಯಾಣ ಮಾಡಲು ಬಳಸುವ ಸಾಧನ
ವಿಭು = ದೇವರು, ಪರಮಾತ್ಮ, ಒಡೆಯ
ಹಣತೆ = ದೀಪ
ಇರವಿಗೊಂದು = ಇರುವಿಕೆಗೆ ಒಂದು
ಗೊಳ ಮೊಟ್ಟೆಯಿಟ್ಟು = ಬರಿ ಮೊಟ್ಟೆ ಇಟ್ಟು
ಅಭ್ಯಾಸ
ಮಗುವಿನ ಮೊರೆ ಪದ್ಯ ಪ್ರಶ್ನೆ ಉತ್ತರಗಳು
ಅ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
೧. ಯಾವುದು ಉರಿಯಲಿಲ್ಲ ಆರಲಿಲ್ಲ?
೨. ಯಾವುದು ಮುಳುಗಲಿಲ್ಲ ತೇಲಲಿಲ್ಲ?
೩. ಯಾವುದನ್ನು ನಾವು ದೇವರಲ್ಲಿ ಬೇಡಿಕೊಳ್ಳಬೇಕು.
೪. ನಾವು ಏನೆಂದು ಹಾಡಿಕೊಳ್ಳಬೇಕು?
೫. ಸಿದ್ದಯ್ಯ ಪುರಾಣಿಕ ಅವರ ಕಾವ್ಯನಾಮ ಯಾವುದು?
ಆ) ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ, ಹಾಗೂ ಕಂಠಪಾಠ ಮಾಡಿರಿ.
೧. ಉರಿಯಲಿಲ್ಲ ಆರಲಿಲ್ಲ
ಬಾಳ ಹಣತೆ ಹೇ ಪ್ರಭೋ!
ಬತ್ತಲಿಲ್ಲ ತುಂಬಲಿಲ್ಲ
ಬಾಳ ಒರತೆ ಹೇ ವಿಭೋ!
ಬಾಳ ಹಣತೆ ಹೇ ಪ್ರಭೋ!
ಬತ್ತಲಿಲ್ಲ ತುಂಬಲಿಲ್ಲ
ಬಾಳ ಒರತೆ ಹೇ ವಿಭೋ!
೨. ಇರವಿಗೊಂದು ಗುರಿಯ ತೋರು
ಇದನೆ ಬೇಡಿಕೊಳ್ಳುವೆ !
ಬದುಕಿಗೊಂದು ಅರ್ಥ ತೋರು
ಅದನೆ ಹಾಡಿಕೊಳ್ಳುವೆ!
ವ್ಯಾಕರಣ ಮಾಹಿತಿ
ಇದನೆ ಬೇಡಿಕೊಳ್ಳುವೆ !
ಬದುಕಿಗೊಂದು ಅರ್ಥ ತೋರು
ಅದನೆ ಹಾಡಿಕೊಳ್ಳುವೆ!
ವ್ಯಾಕರಣ ಮಾಹಿತಿ
ಅ) ಕ್ರಿಯಾಪದ
ಕರ್ತೃವಿನ ಕ್ರಿಯೆಯನ್ನು ಹೇಳುವ ಪದವೇ ಕ್ರಿಯಾಪದ,
ಇದು ಕರ್ತೃವು ಮಾಡುವ ಕೆಲಸವನ್ನು ತಿಳಿಸುವುದರಿಂದ ವಾಕ್ಯದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.
ಉದಾ : ರಾಮನು ನದಿಯಲ್ಲಿ ಈಜಿದನು.
ಇಲ್ಲಿ ʼಈಜುʼ ಪದವು ಕ್ರಿಯೆಯನ್ನು ಸೂಚಿಸುತ್ತದೆ.
ಕರ್ತೃವಿನ ಕ್ರಿಯೆಯನ್ನು ಹೇಳುವ ಪದವೇ ಕ್ರಿಯಾಪದ,
ಇದು ಕರ್ತೃವು ಮಾಡುವ ಕೆಲಸವನ್ನು ತಿಳಿಸುವುದರಿಂದ ವಾಕ್ಯದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.
ಉದಾ : ರಾಮನು ನದಿಯಲ್ಲಿ ಈಜಿದನು.
ಇಲ್ಲಿ ʼಈಜುʼ ಪದವು ಕ್ರಿಯೆಯನ್ನು ಸೂಚಿಸುತ್ತದೆ.
ಆ) ಕೆಳಗಿನ ವಾಕ್ಯಗಳಲ್ಲಿ ಕಂಡುಬರುವ ಕ್ರಿಯಾಪದಗಳನ್ನು ಓದಿ ತಿಳಿಯಿರಿ.
೧. ರೈತನು ಗದ್ದೆಯಲ್ಲಿ ದುಡಿಯುವನು.
೨. ರೈತನು ಭತ್ತವನ್ನು ಚೀಲದಲ್ಲಿ ತುಂಬುವನು.
೩. ಎತ್ತುಗಳು ಗದ್ದೆಯಲ್ಲಿ ನೇಗಿಲನ್ನು ಎಳೆಯುವವು.
ಅ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
೧. ಕ್ರಿಯಾಪದ ಎಂದರೇನು? ಉದಾಹರಣೆಯೊಂದಿಗೆ ವಿವರಿಸಿ
ಕರ್ತೃವಿನ ಕ್ರಿಯೆಯನ್ನು ಹೇಳುವ ಪದವೇ ಕ್ರಿಯಾಪದ,
ಉದಾ : ನಾನು ಪುಸ್ತಕವನ್ನು ಓದಿದೆನು.
“ಓದಿದೆನು”ಎಂಬುದು ಕ್ರಿಯಾಪದ ಇದು ಕರ್ತೃವಾದ ನಾನು ಮಾಡಿದ ಕೆಲಸವನ್ನು ತಿಳಿಸುತ್ತದೆ. ʼಓದುʼ ಎಂಬುದು ಕ್ರಿಯೆಯನ್ನು ಸೂಚಿಸುತ್ತದೆ.
ಕರ್ತೃವಿನ ಕ್ರಿಯೆಯನ್ನು ಹೇಳುವ ಪದವೇ ಕ್ರಿಯಾಪದ,
ಉದಾ : ನಾನು ಪುಸ್ತಕವನ್ನು ಓದಿದೆನು.
“ಓದಿದೆನು”ಎಂಬುದು ಕ್ರಿಯಾಪದ ಇದು ಕರ್ತೃವಾದ ನಾನು ಮಾಡಿದ ಕೆಲಸವನ್ನು ತಿಳಿಸುತ್ತದೆ. ʼಓದುʼ ಎಂಬುದು ಕ್ರಿಯೆಯನ್ನು ಸೂಚಿಸುತ್ತದೆ.
೨. ತಿನ್ನು, ಓದು, ಆಡು – ಈ ಪದಗಳನ್ನು ಮಾದರಿಯಂತೆ ಬರೆಯಿರಿ.
ಮಾದರಿ : ಕುಣಿ – ಕುಣಿಯುತ್ತಾನೆ – ಕುಣಿದನು
ತಿನ್ನು – ತಿನ್ನುತ್ತಾನೆ – ತಿಂದನು
ಓದು – ಓದುತ್ತಾನೆ – ಓದಿದನು
ಆಡು – ಆಡುತ್ತಾನೆ – ಆಡಿದನು
ಮಾದರಿ : ಕುಣಿ – ಕುಣಿಯುತ್ತಾನೆ – ಕುಣಿದನು
ತಿನ್ನು – ತಿನ್ನುತ್ತಾನೆ – ತಿಂದನು
ಓದು – ಓದುತ್ತಾನೆ – ಓದಿದನು
ಆಡು – ಆಡುತ್ತಾನೆ – ಆಡಿದನು
ಇ) ಶುಭನುಡಿ
೧. ಕಾಯಕವೇ ಕೈಲಾಸ
೨. ದುಡಿಮೆಯೇ ಜೀವನದ ಬಹುಮುಖ್ಯ ಗುರಿ.
ಮಗುವಿನ ಮೊರೆ ಪದ್ಯದ ಸಾರಾಂಶ
೧. ಕಾಯಕವೇ ಕೈಲಾಸ
೨. ದುಡಿಮೆಯೇ ಜೀವನದ ಬಹುಮುಖ್ಯ ಗುರಿ.
ಮಗುವಿನ ಮೊರೆ ಪದ್ಯದ ಸಾರಾಂಶ
ಪ್ರವೇಶ
ನಮ್ಮ ಬಾಳು ‘ ಆರಕ್ಕೆ ಏರಲಿಲ್ಲ ಮೂರಕ್ಕೆ ಇಳಿಯಲಿಲ್ಲ ‘ ಎನ್ನುವಂತೆ ಆಗಬಾರದು . ಹುಟ್ಟಿದ ಮೇಲೆ ವ್ಯರ್ಥವಾಗಿ ಬದುಕದೆ ಏನಾದರೂ ಸಾಧಿಸಬೇಕು . ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸದಾ ಇರಬೇಕು . ನಮ್ಮ ಇರುವಿಕೆಗೆ ಒಂದು ಗುರಿ ಇರಬೇಕು . ಆ ಗುರಿಯ ಕಡೆಗೆ ನಮ್ಮ ಪಯಣ ಸಾಗಬೇಕು. ನಮ್ಮ ಬದುಕಿಗೆ ಒಂದು ಅರ್ಥ ಬರಬೇಕು ಎಂಬುದೇ ಈ ಪದ್ಯದ ಆಶಯವಾಗಿದೆ .
ನಮ್ಮ ಬಾಳು ‘ ಆರಕ್ಕೆ ಏರಲಿಲ್ಲ ಮೂರಕ್ಕೆ ಇಳಿಯಲಿಲ್ಲ ‘ ಎನ್ನುವಂತೆ ಆಗಬಾರದು . ಹುಟ್ಟಿದ ಮೇಲೆ ವ್ಯರ್ಥವಾಗಿ ಬದುಕದೆ ಏನಾದರೂ ಸಾಧಿಸಬೇಕು . ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸದಾ ಇರಬೇಕು . ನಮ್ಮ ಇರುವಿಕೆಗೆ ಒಂದು ಗುರಿ ಇರಬೇಕು . ಆ ಗುರಿಯ ಕಡೆಗೆ ನಮ್ಮ ಪಯಣ ಸಾಗಬೇಕು. ನಮ್ಮ ಬದುಕಿಗೆ ಒಂದು ಅರ್ಥ ಬರಬೇಕು ಎಂಬುದೇ ಈ ಪದ್ಯದ ಆಶಯವಾಗಿದೆ .
ಮುಖ್ಯಾಂಶಗಳು
ಮನುಷ್ಯ ಸೃಷ್ಟಿಯ ಕಿರೀಟ . ( Man is the crown of creation ) ಅಮೂಲ್ಯವಾದ ಮನುಷ್ಯ ಜೀವನ ವ್ಯರ್ಥವಾಗಬಾರದು ಎಂದರೆ ಒಂದು ಗುರಿಯಿರಬೇಕು . ಆ ಗುರಿಗಾಗಿ ಸಾಧನೆ ಮಾಡಬೇಕು.
ಈ ನಮ್ಮ ಜೀವನ ಉರಿಯಲೂ ಇಲ್ಲ ; ಆರಲೂ ಇಲ್ಲ , ಹೇ ಪ್ರಭುವೇ ನಮ್ಮ ಬಾಳ ಹಣತೆಯ ಉದ್ದೇಶವೇನು ? ಜೀವನದ ನದಿ ಬತ್ತಿಹೋಗಲಿಲ್ಲ ಅದೇ ತರಹ ತುಂಬಿ ಹರಿಯಲೂ ಇಲ್ಲ , ಬದುಕಿನ ಹೂವು ಅರಳಲೂ ಇಲ್ಲ , ಉರುಳಲೂ ಇಲ್ಲ , ಜೀವನ ನೌಕೆ ತೇಲಲೂ ಇಲ್ಲ ; ಮುಳುಗಲೂ ಇಲ್ಲ . ಈ ರೀತಿಯ ಬಾಳು ಏಳಲೂ ಆಗದೆ ಬೀಳಲು ಆಗದೆ , ಬರೀ ಮೊಟ್ಟೆಯಿಟ್ಟು ಬೇಸರ ಪಡುವಂತಾಗಿದೆ . ನಮ್ಮ ಇರುವಿಕೆಗೊಂದು ಅರ್ಥಕೊಡು , ಗುರಿ ಅಥವಾ ಉದ್ದೇಶವನ್ನು ತೋರಿಸು . ಹೇ ದೇವರೇ ನಿನ್ನಲ್ಲಿ ಬೇಡಿಕೊಳ್ಳುವೆ ನಮ್ಮ ಬದುಕಿಗೊಂದು ಸಾರ್ಥಕತೆ ನೀಡು ಎಂದು ಕವಿಯು ಆವಿಧಾತನಲ್ಲಿ ಬೇಡಿಕೊಳ್ಳುತ್ತಿದ್ದಾರೆ . ಪ್ರತಿಯೊಬ್ಬರ ಬದುಕಿಗೂ ಗುರಿ ಅವಶ್ಯಕ . ಆ ಗುರಿಯಲ್ಲಿ ಸಾಧನೆ ಮಾಡುವ ಹಂಬಲ ಎಲ್ಲರಲ್ಲೂ ಮೂಡಲಿ ಎಂಬುದೇ ಈ ಪದ್ಯದ ಆಶಯ .
ಮನುಷ್ಯ ಸೃಷ್ಟಿಯ ಕಿರೀಟ . ( Man is the crown of creation ) ಅಮೂಲ್ಯವಾದ ಮನುಷ್ಯ ಜೀವನ ವ್ಯರ್ಥವಾಗಬಾರದು ಎಂದರೆ ಒಂದು ಗುರಿಯಿರಬೇಕು . ಆ ಗುರಿಗಾಗಿ ಸಾಧನೆ ಮಾಡಬೇಕು.
ಈ ನಮ್ಮ ಜೀವನ ಉರಿಯಲೂ ಇಲ್ಲ ; ಆರಲೂ ಇಲ್ಲ , ಹೇ ಪ್ರಭುವೇ ನಮ್ಮ ಬಾಳ ಹಣತೆಯ ಉದ್ದೇಶವೇನು ? ಜೀವನದ ನದಿ ಬತ್ತಿಹೋಗಲಿಲ್ಲ ಅದೇ ತರಹ ತುಂಬಿ ಹರಿಯಲೂ ಇಲ್ಲ , ಬದುಕಿನ ಹೂವು ಅರಳಲೂ ಇಲ್ಲ , ಉರುಳಲೂ ಇಲ್ಲ , ಜೀವನ ನೌಕೆ ತೇಲಲೂ ಇಲ್ಲ ; ಮುಳುಗಲೂ ಇಲ್ಲ . ಈ ರೀತಿಯ ಬಾಳು ಏಳಲೂ ಆಗದೆ ಬೀಳಲು ಆಗದೆ , ಬರೀ ಮೊಟ್ಟೆಯಿಟ್ಟು ಬೇಸರ ಪಡುವಂತಾಗಿದೆ . ನಮ್ಮ ಇರುವಿಕೆಗೊಂದು ಅರ್ಥಕೊಡು , ಗುರಿ ಅಥವಾ ಉದ್ದೇಶವನ್ನು ತೋರಿಸು . ಹೇ ದೇವರೇ ನಿನ್ನಲ್ಲಿ ಬೇಡಿಕೊಳ್ಳುವೆ ನಮ್ಮ ಬದುಕಿಗೊಂದು ಸಾರ್ಥಕತೆ ನೀಡು ಎಂದು ಕವಿಯು ಆವಿಧಾತನಲ್ಲಿ ಬೇಡಿಕೊಳ್ಳುತ್ತಿದ್ದಾರೆ . ಪ್ರತಿಯೊಬ್ಬರ ಬದುಕಿಗೂ ಗುರಿ ಅವಶ್ಯಕ . ಆ ಗುರಿಯಲ್ಲಿ ಸಾಧನೆ ಮಾಡುವ ಹಂಬಲ ಎಲ್ಲರಲ್ಲೂ ಮೂಡಲಿ ಎಂಬುದೇ ಈ ಪದ್ಯದ ಆಶಯ .
0 Comments