ಪಠ್ಯ ಪೂರಕ
ಸಾರ್ಥಕ
– ದಿನಕರ ದೇಸಾಯಿ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ. .
೧. ಗಾಳಿಯಲ್ಲಿ ಬೂದಿಯನ್ನು ತೂರಿದಾಗ ಎಲ್ಲಿ ಬೀಳುತ್ತದೆ?
ಉತ್ತರ : ಗಾಳಿಯಲ್ಲಿ ಬೂದಿಯನ್ನು ತೂರಿದಾಗ ಭತ್ತ ಬೆಳೆಯುವ ನಾಡಿನಲ್ಲಿ ಹೋಗಿ ಬೀಳುತ್ತದೆ.
೨. ಬೂದಿಯನ್ನು ಹೊಳೆಯಲ್ಲಿ ಹರಿಯಬಿಟ್ಟಾಗ ಯಾರಿಗೆ ಸಿಗುತ್ತದೆ?
ಉತ್ತರ : ಬೂದಿಯನ್ನು ಹೊಳೆಯಲ್ಲಿ ಹರಿಯಬಿಟ್ಟಾಗ ಮೀನಿನ ಬಾಯಿಗೆ ಸಿಗುತ್ತದೆ.
೩. ದೇಹ ಏಕೆ ವ್ಯರ್ಥವಾಗಿದೆ?
ಉತ್ತರ : ತನ್ನ ದೇಹ ಸ್ವಾರ್ಥವ ನೆನೆದು ವ್ಯರ್ಥವಾಗಿದೆ.
೪. ಬೂದಿಯನ್ನು ಕೊಳದಲ್ಲಿ ಬಿಡುವುದರಿಂದ ಬದುಕು ಧನ್ಯವಾಗುವುದು ಹೇಗೆ? – ವಿವರಿಸಿ.
ಉತ್ತರ : ನಮ್ಮ ಹೆಣದ ಬೂದಿಯನ್ನು ನೀರಿನಲ್ಲಿ ಬಿಡುವುದರಿಂದ ಅದು ಕೆಸರಿನೊಡನೆ ಕೂಡಿ ಫಲವತ್ತಾದ ಮಣ್ಣಾಗುತ್ತದೆ. ಅದರಲ್ಲಿ ಕಮಲ ಅರಳಿದಾಗ ನಾವು ಹುಟ್ಟು ಸಾವಿನಿಂದ ಮುಕ್ತರಾಗಿ ನಮ್ಮ ಬದುಕು ಧನ್ಯವಾಗುತ್ತದೆ.
೫. ಸಾರ್ಥಕ ಪದ್ಯದ ಯಾವ ಅಂಶಗಳನ್ನು ನೀವು ಮೆಚ್ಚುವಿರಿ?
ಉತ್ತರ : ಮಾನವನು ತನ್ನ ಸ್ವಾರ್ಥ ಗುಣಗಳನ್ನು ತೊರೆದು ಪರೋಪಕಾರಿಯಾದಾಗ ಬದುಕು ಸಾರ್ಥಕ ಎಂಬ ಅಂಶವನ್ನು ನಾನು ಮೆಚ್ಚುತ್ತೇನೆ.
0 Comments