Recent Posts

ಅನ್ವೇಷಣೆ - Class 8th Second Language Kannada Textbook Solutions

 ಅನ್ವೇಷಣೆ

ಕವಿ/ಲೇಖಕರ ಪರಿಚಯ 
 
* ಜಿ.ಎಸ್. ಶಿವರುದ್ರಪ್ಪ ಇವರು 1926 ರಲ್ಲಿ ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲೂಕಿನ ಈಸೂರು ಎಂಬ ಗ್ರಾಮದಲ್ಲಿ ಜನಿಸಿದರು.
* ಇವರು ಸೌಂದರ್ಯ ಸಮೀಕ್ಷೆ, ದೀಪದ ಹೆಜ್ಜೆ, ಸಾಮಗಾನ, ಕಾರ್ತೀಕ, ಅನಾವರಣ, ಚೆಲುವು-ಒಲವು, ಗೋಡೆ, ತೆರೆದದಾರಿ, ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಳು, ಕಾವ್ಯಾರ್ಥ ಚಿಂತನ -ಇನ್ನು ಮುಂತಾದ ಕೃತಿಗಳನ್ನು ಬರೆದಿದ್ದಾರೆ.
* ಶ್ರೀಯುತರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಹಾಗೂ ರಾಷ್ಟ್ರಕವಿ ಪ್ರಶಸ್ತಿಗಳು ಲಭಿಸಿದೆ.
• ಪ್ರಸ್ತುತ 'ಅನ್ವೇಷಣೆ' ಕವಿತೆಯನ್ನು ಅವರ 'ಗೋಡೆ' ಕವನ ಸಂಕಲನದಿಂದ ಆಯ್ಕೆಮಾಡಲಾಗಿದೆ.

                                     ಪದಗಳ ಅರ್ಥ 
 
ಅನ್ವೇಷಣೆ- ಹುಡುಕು; ಶೋಧಿಸು  
ಕಲಕು - ಕದಡು 
ಗುರುತಿಸು – ಗೊತ್ತು ಹಚ್ಚು 
ಬಂಧನ - ಸೆರೆ; ಕಟ್ಟು  ಗರ್ವ: ಪ್ರತಿಷ್ಠೆ  
ಕೋಟೆ – ಕಲ್ಲಿನ ರಕ್ಷಣಾ ಗೋಡೆ. 
ಹೆಮ್ಮೆ – ಅಭಿಮಾನ; ಹಿರಿಮೆ: 
ಸಂತೋಷ - ನಂದನ - ಉದ್ಯಾನವನ

●    ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ,

1. ಕವಿ ಜಿ.ಎಸ್. ಶಿವರುದ್ರಪ್ಪನವರು ಮೊದಲು ದೇವರನ್ನು ಎಲ್ಲಿ ಹುಡುಕಿ ವಿಫಲರಾದರು?

ಉತ್ತರ:- ಕವಿ ಜಿ.ಎಸ್. ಶಿವರುದ್ರಪ್ಪನವರು ಮೊದಲು ದೇವರನ್ನು ಕಲ್ಲು ಮಣ್ಣುಗಳ ಗುಡಿಯೊಳಗೆ ಹುಡುಕಿ ವಿಫಲರಾದರು.

 2.ಕವಿ ಜಿ.ಎಸ್.ಎಸ್, ಅವರು ನಿಜವಾದ ದೇವರನ್ನು ಕಂಡದ್ದು ಎಲ್ಲಿ?
ಯಾವ ರೂಪದಲ್ಲಿ?

ಉತ್ತರ:- ಕವಿ ಜಿ.ಎಸ್.ಎಸ್. ಅವರು ನಿಜವಾದ ದೇವರನ್ನು ನಮ್ಮೊಳಗೆ ಕಂಡರು. ಪ್ರೀತಿ ಸ್ನೇಹಗಳ ರೂಪದಲ್ಲಿ ಕಂಡರು.

3.ನ೦ದನ ಮತ್ತು ಬಂಧನ ಎಂದರೇನು?
ಉತ್ತರ:- ಅವು ಎಲ್ಲಿವೆ? ನಂದನ ಎಂದರೆ ಉದ್ಯಾನವನ ಬಂಧನ ಎಂದರೆ ಸೆರೆ. ಅವು ನಮ್ಮೊಳಗೆ ಇವೆ.

4. ಅಮೃತದ ಸವಿ ನಾಲಗೆಗೆ ಯಾವಾಗ ಸಿಗುತ್ತದೆ?
ಉತ್ತರ:- ಅಮೃತದ ಸವಿ ನಾಲಗೆಗೆ ತಿಳಿಯನು ಕಲಕದೆ ಇದ್ದರೆ ಸಿಗುತ್ತದೆ.

5.ಮಾನವನಲ್ಲಿ ಅಹಂ ತುಂಬಿದಾಗ ಹೇಗೆ ವರ್ತಿಸುತ್ತಾನೆ?
ಉತ್ತರ:- ಮಾನವನಲ್ಲಿ ಅಹಂ ತುಂಬಿದಾಗ ಹತ್ತಿರವಿದ್ದರೂ ದೂರ ನಿಲ್ಲುವವನಂತೆ ವರ್ತಿಸುತ್ತಾನೆ.

6. ನಾಲ್ಕು ದಿನದ ಬದುಕಿನಲ್ಲಿ ಯಾವುದು ಕಷ್ಟವಾಗಿದೆ?
ಉತ್ತರ:- ನಾಲ್ಕು ದಿನದ ಬದುಕಿನಲ್ಲಿ ಹೊಂದಾಣಿಕೆ ಎಂಬುದು ಕಷ್ಟವಾಗಿದೆ.

●    ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ಕವಿ ಜಿ.ಎಸ್.ಎಸ್. ಅವರು ದೇವರನ್ನು ಅನ್ವೇಷಿಸಿದ ಬಗೆ ಹೇಗೆ?

ಉತ್ತರ:- ಕವಿ ಜಿ.ಎಸ್.ಶಿವರುದ್ರಪ್ಪನವರು ದೇವರನ್ನು ಮೊದಲು ಮಾನವರು ನಿರ್ಮಿಸಿರುವ ಗುಡಿ-ಗೋಪುರಗಳಲ್ಲಿ ಅನ್ವೇಷಿಸಿದರು. ಅಲ್ಲಿ ದೇವರು ಸಿಗದೆ ವ್ಯರ್ಥ ಸಮಯ ಹಾಳಾಯಿತು. ಆದರೆ ಆ ದೇವರು ನಮ್ಮ ಸುತ್ತಲಿನ ನಮ್ಮೊಳಗಿನ ಮನುಷ್ಯರ ಮನುಷ್ಯತ್ವದಲ್ಲಿದೆ. ಅವರ ಪ್ರೀತಿ ಸ್ನೇಹಗಳ ರೂಪದಲ್ಲಿ ಅದನ್ನು ನಾವು ಕಾಣಬಹುದಾಗಿದೆ ಎಂಬ ಬಗೆಯನ್ನು ಕವಿ ಆನಂತರ ಅರಿತುಕೊಂಡರು.

2 ಕವಿ ಹೇಳುವಂತೆ ಬದುಕಿನಲ್ಲಿ ಯಾವುದು ಕಷ್ಟ? ಅದನ್ನು ಪಡೆಯುವುದು ಹೇಗೆ?
ಉತ್ತರ:- ಕವಿ ಹೇಳುವಂತೆ ಬದುಕಿನಲ್ಲಿ ಎಲ್ಲೋ ಇರುವ ದೇವರನ್ನು ಹುಡುಕುವುದು, ಎಲ್ಲೋ ಇರುವ ನಂದನವನವನ್ನು ಹುಡುಕುವುದು, ಅಮೃತದ ಹಾಗಾಗಿ ಹಾತೊರೆಯುವುದು, ಹೊಂದಾಣಿಕೆಟಗಿ ಪರಿತಪಿಸುವುದು ಕಷ್ಟಕರವಾಗಿದೆ. ಇವುಗಳನ್ನು ಪಡೆಯಲು ಪ್ರೀತಿ ಸ್ನೇಹಗಳ ಗುರುತಿಸಬೇಕು. ಒಳಗಿನ ತಿಳಿಯನು ಅರಿಯಬೇಕು. ನಾಲ್ಕು ದಿನದ ಬದುಕಿನಲ್ಲಿ ಹೊಂದಾಣಿಕೆಯೊಂದಿಗೆ ಎಲ್ಲವೂ ನಮ್ಮೊಳಗೆ ಇದೆ ಎಂದು ಭಾವಿಸಿದಾಗ ಎಲ್ಲವೂ ಪಡೆಯಬಹುದಾಗಿದೆ ಎಂದು ಕವಿ ಹೇಳಿದ್ದಾರೆ. 
 
  *  ಸಂದರ್ಭದೊಂದಿಗೆ ವಿವರಿಸಿರಿ.

1. ಪ್ರೀತಿ ಸ್ನೇಹಗಳ ಗುರುತಿಸದಾದೆವು ನಮ್ಮೊಳಗೆ
ಆಯ್ಕೆ:
- ಈ ವಾಕ್ಯವನ್ನು "ಜಿ.ಎಸ್. ಶಿವರುದ್ರಪ್ಪ" ಅವರು ಬರೆದಿರುವ 'ಗೋಡೆ' ಎಂಬ ಕೃತಿಯಿಂದ ಆಯ್ದ "ಅನ್ವೇಷಣೆ" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕವಿ ಹೇಳಿದ್ದಾರೆ.  ಎಲ್ಲೋ ಇರುವ ದೇವರ ಹುಡುಕಲು ಗುಡಿಗೋಪುರಗಳನ್ನು ಅರಸುವ ಬದಲು ನಮ್ಮ
ಸುತ್ತಲಿರುವ ಪ್ರೀತಿ, ಸ್ನೇಹಗಳ ಗುರುತಿಸಿ ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬ೦ದಿದೆ.

2.ಅಮೃತದ ಸವಿಯಿದೆ ನಾಲಗೆಗೆ
ಆಯ್ಕೆ:
- ಈ ವಾಕ್ಯವನ್ನು "ಜಿ.ಎಸ್. ಶಿವರುದ್ರಪ್ಪ" ಅವರು ಬರೆದಿರುವ 'ಗೋಡೆ'ಎಂಬ ಕೃತಿಯಿಂದ ಆಯ್ದ"ಅನ್ವೇಷಣೆ" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕವಿ ಹೇಳಿದ್ದಾರೆ ನಾವು ನಮ್ಮೊಳಗಿನ ಅಂತರಾಳವನ್ನು ಕಲಕಿ ರಾಡಿ ಮಾಡದೆ ಇದ್ದರೆ ಅಮೃತದ ಸವಿ
ನಾಲಗೆಗೆ ಸಿಗುತ್ತದೆ ಎಂದು ಕವಿ ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

3.ಹತ್ತಿರವಿದ್ದೂ ದೂರ ನಿಲ್ಲುವವು
ಆಯ್ಕೆ
:- ಈ ವಾಕ್ಯವನ್ನು "ಜಿ.ಎಸ್. ಶಿವರುದ್ರಪ್ಪ" ಅವರು ಬರೆದಿರುವ'ಗೋಡೆ'ಎಂಬ ಕೃತಿಯಿಂದ ಆಯ್ದ"ಅನ್ವೇಷಣೆ" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕವಿ ಹೇಳಿದ್ದಾರೆ.  ಮನುಷ್ಯರು ನಮ್ಮ ನಡುವಿನ ಅಡ್ಡಗೋಡೆಯಂತೆ ಅಹಂಕಾರವನ್ನು ಬೆಳೆಸಿಕೊಂಡಿದ್ದಾರೆ. ಈ ಆಹಂಕಾರದಿಂದ ಹತ್ತಿರವಿದ್ದೂ ದೂರ ನಿಲ್ಲುವೆವು ನಾವುಗಳು ಎಂದು ತಿಳಿಸುವ ಸಮಯದಲ್ಲಿ ಈ ಮೇಲಿನ ಮಾತು ಬ೦ದಿದೆ.

                                 ಭಾಷಾಭ್ಯಾಸ 
 
 * ಕೆಳಗಿನ ಪದಗಳಿಗೆ ಸಮಾನಾರ್ಥಕಗಳನ್ನು ಬರೆಯಿರಿ.
ಗುಡಿ - ದೇವಸ್ಥಾನ 
ಹತ್ತಿರ - ಸನಿಹ, 
ಬಂಧನ- ಸೆರೆ, 
ಸ್ನೇಹ - ಗೆಳೆತನ,

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಬರೆಯಿರಿ.
ಪ್ರೀತಿ X ದ್ವೇಷ, 
ದೊರೆ X ಹತ್ತಿರ, 
ಅಮೃತ X ವಿಷ 
ಸಿಹಿ X ಕಹಿ, 
ಕಷ್ಟ X ಸುಖ, 
ಬ೦ಧನ X ಬಿಡುಗಡೆ,

ಇ) ಈ ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.
ಹತ್ತಿರವಿದ್ದು = ಹತ್ತಿರ + ಇದ್ದು,  
ಗುಡಿಯೊಳಗೆ = ಗುಡಿ + ಒಳಗೆ 
ಸವಿಯಿದೆ = ಸ + ಇದೆ.  ನಮ್ಮೊಳಗೆ = ನಮ್ಮ + ಒಳಗೆ
 
ಉ) ಸುಳಿವು ಪದಗಳನ್ನು ಬಳಸಿ ಜೋಡಿ ಪದಗಳನ್ನು ಬರೆಯಿರಿ.
ಉದಾ : ಕಲ್ಲು – ಮಣ್ಣು, 
ಪ್ರೀತಿ – ಸ್ನೇಹ  
ಗಿಡ – ಮರ  
ಹೂವು - ಹೆಣ್ಣು 
ಕಳ್ಳ – ಸುಳ್ಳ  
ಮಳೆ – ಬೆಳೆ  
ಗುಡ್ಡ - ಬೆಟ್ಟ

You Might Like

Post a Comment

0 Comments