Recent Posts

ಅಜ್ಜಿಯ ತೋಟದಲ್ಲಿ ಒಂದು ದಿನ  - ೪ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ಅಜ್ಜಿಯ ತೋಟದಲ್ಲಿ ಒಂದು ದಿನ  
 
ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
 
1.    ಮಕ್ಕಳು ಎಲ್ಲಿಗೆ ಹೊರ ಸಂಚಾರ ಹೊರಟರು ?
 ಉತ್ತರ :
ಮಕ್ಕಳು ಕಿಶೋರನ ಅಜ್ಜನ ತೋಟಕ್ಕೆ ಗುರುಗಳೊ ಹೊರ ಸಂಚಾರ ಹೊರಟರು .
 
2.    ಸಾಮಾನ್ಯವಾಗಿ ಹೊಲವನ್ನು ಯಾವುದರಿಂದ ಊಳುತ್ತಾರೆ ?
 ಉತ್ತರ :
ಸಾಮಾನ್ಯವಾಗಿ ನೇಗಿಲು , ನೊಗ , ಎತ್ತು , ಕೋಣವನ್ನು ಬಳಸಿ ಹೊಲವನ್ನು ಊಳು Rejono
 
3.    ಎರೆಗೊಬ್ಬರವನ್ನು ಯಾವುದರಿಂದ ತಯಾರಿಸುತ್ತಾರೆ ?
 ಉತ್ತರ :
ಎರೆಗೊಬ್ಬರವನ್ನು ಎರೆಹುಳದ ಸಹಾಯದಿಂದ ತಯಾರಿಸುತ್ತಾರೆ .
 
4.    ತೋಟದಲ್ಲಿ ಹೆಚ್ಚಾಗಿ ಯಾವ ಗೊಬ್ಬರವನ್ನು ಬಳಸುತ್ತಿದ್ದರು ?
ಉತ್ತರ :
ತೋಟದಲ್ಲಿ ಹೆಚ್ಚಾಗಿ ಸಾವಯವ ಗೊಬ್ಬರವನ್ನು ಬಳಸುತ್ತಿದ್ದರು . ಇತರೆ
 
5.    ಶೀಲಾ ಅಜ್ಜಿಯ ಮನೆಯ ಅಂಗಳದಲ್ಲಿ ಯಾವ ಯಂತ್ರವನ್ನು ನೋಡಿದಳು ?
 ಉತ್ತರ :
ಶೀಲಾ ಅಜ್ಜಿಯ ಮನೆಯ ಅಂಗಳದಲ್ಲಿ ಗದ್ದೆ ಊಳುವ ಯಂತ್ರವನ್ನು ನೋಡಿದಳು .
 
ಆ ) ಎರಡು / ಮೂರು ವಾಕ್ಯಗಳಲ್ಲಿ ಉತ್ತರ ?
 

1.    ಅಜ್ಜಿಯ ತೋಟದಲ್ಲಿ ಯಾವ ಯಾವ ಗಿಡಗಳಿದ್ದವು ?
ಉತ್ತರ :
ಅಜ್ಜಿಯ ತೋಟದಲ್ಲಿ ಅಡಿಕೆ , ತೆಂ ಕಾಳುಮೆಣಸು , ಕಾಫಿ , ಏಲಕ್ಕಿ ಗಿಡಗಳಿದ್ದವು .
 
2.    ಉಳುಮೆಯ ಬಗೆ , ನೀಡಿದ ವಿವರಣೆ ಏನು ?
ಉತ್ತರ :
ಗದ್ದೆಗಳನ್ನು ಊಳಲು ಬಳಸುವ ಸಾಧನಗಳೆಂದರೆ – ನೇಗಿಲು , ನೊಗ , ಎತ್ತು , ಕೋಣ , ಈಗಂತೂ ಊಳುವ ಯಂತ್ರಗಳೇ ಬಂದಿವೆ .
 
3.    ಇಂಗುಗುಂಡಿಯ ಪ್ರಯೋಜನಗಳೇನು ?
ಉತ್ತರ :
ಇಂಗುಗುಂಡಿಗಳ ಮೂಲಕ ಮಳೆಯ ನೀರನ್ನು ಇಂಗಿಸಿದರೆ ಭೂಮಿಯಲ್ಲಿ ಅಂತರ್ಜಲ ಹೆಚ್ಚುತ್ತದೆ ಇಂಗುಗುಂಡಿಯ ಮೂಲಕ ನೀರನ್ನು ಇಂಗಿಸಿದರೆ ಬಾವಿಯಲ್ಲಿ ನೀರು ಎಂದಿಗೂ ಕಡಿಮೆ ಆಗುವುದಿಲ್ಲ . ಇವು ಇಂಗುಗುಂಡಿಗಳ ಪ್ರಯೋಜನಗಳಾಗಿವೆ .
 
ಇ ) ವಾಕ್ಯದಲ್ಲಿ ಬಿಟ್ಟಿರುವ ಸ್ಥಳಕ್ಕೆ ಸರಿಯಾದ ಪದ ತುಂಬಿ .
 
1.    ಕಿಶೋರನ ಅಜ್ಜಿಯ ಮನೆ ………. ತಪ್ಪಲಿ
ಉತ್ತರ : ಬೆಟ್ಟದ
 
2.    ಮನೆಯ ಹಿಂದಿನ ಗುಡ್ಡದಲ್ಲಿ ತೋಟಗಳಿವೆ .
 ಉತ್ತರ : ಅಡಿಕೆ
 
3.    ಮಳೆಯ ನೀರನ್ನು ಮೂಲಕ ಇಂಗಿಸುತೇವೆ .
 ಉತ್ತರ : ಗುಂಡಿಗಳ
 
4.    ಅಜ್ಜಿ ಎಲ್ಲರಿಗೂ ……… ಹಂಚಿದರು . ಉತ್ತರ : ಗೋಡಂಬಿ
 
 ಈ ) ಹೊಂದಿಸಿ ಬರೆ . . ”
ಅ                               ಆ

೧. ಎರೆಹುಳ            ಹಿರೇಕಾಯಿ___________
 
 ೨ , ಕೊಕೊ              ಭತ್ತ __________  
 
 ೩. ತೆನೆ                    ಚಾಕಲೇಟು _______
 
೪ ಮಳೆಕೊಯ್ಲು      ರೈತನಮಿತ್ರ_____
 
೫. ಹಟ್ಟಿಗೊಬ್ಬರ        ಅಂತರ್ಜಲ______  
         ಅ              ಆ          ಉತ್ತರ
1.ಎರೆಹುಳ       ಹಿರೇಕಾಯಿ
    ರೈತನಮಿತ್ರ
2 .ಕೊಕೊ    ಚಾಕಲೇಟು     ಚಾಕಲೇಟು
3.ತೆನೆ     ಭತ್ತ    ಭತ್ತ
 4. ಮಳೆಕೊಯ್ಲು      ರೈತನಮಿತ್ರ    ಅಂತರ್ಜಲ
 5. ಹಟ್ಟಿಗೊಬ್ಬರ    ಸಾವಯವ ಗೊಬ್ಬರ     ಸಾವಯವ ಗೊಬ್ಬರ
    ಅಂತರ್ಜಲ     
 
ಭಾಷಾ  ಚಟುವಟಿಕೆ
 
ಆ ) ಕೊಟ್ಟಿರುವ ಪದಗಳನ್ನು ಬಳಸಿ ಸಂತ ವಾಕ್ಯ ರಚಿಸಿ .

 
1.    ಕಿರುಚು : ‘ ಅಜ್ಜಿ ! ಹಾವಿನ ಮರಿ ‘ ಎಂದು ಶೀಲಾ ಕಿರುಚಿದಳು .
 
2.    ಹೊರಸಂಚಾರ : ಶಾಲೆಯ ಮಕ್ಕಳು ಕಿಶೋರನ ಅಜ್ಜನ ತೋಟಕ್ಕೆ ಗುರುಗಳೊಂದಿಗೆ ಹೊರಸಂಚಾರ ಹೊರಟರು .
 
3.    ಆರೈಕೆ : ರೈತನು ದನ – ಕರುಗಳನ್ನು ಆರೈಕೆ ಮಾಡುವನು .
 
4.    ಹುಲುಸಾಗಿ : ರೈತನು ಸಾವಯವ ಗೊಬ್ಬರ ಬಳಸಿ ಹುಲುಸಾಗಿ ಬೆಳೆ ಬೆಳೆಯುವನು .
 
ಆ ) ಗುಂಪಿಗೆ ಸೇರದ ಪದ ಆರಿಸಿ ಬರೆಯಿರಿ .
 
1.ತೆಂಗು , ಅಡಿಕೆ , ಬಾಳೆ , ಭತ್ತ ಉತ್ತರ : ಭತ್ತ
2.    ಮೊಲ , ಹಂದಿ , ಮುಂಗುಸಿ , ಚಿಟ್ಟೆ ಉತ್ತರ : ಚಿಟ್ಟೆ
3.    ಸೀಬೆಕಾಯಿ , ಸಪೋಟ , ನಸು , ಕೊಕೊ ಉತ್ತರ : ಕೊಕೊ
 
 ಇ ) ಕೆಳಗಿನವುಗಳನ್ನು ಕೂಡಿಸಿ ಬರೆಯಿರಿ .
ಉದಾ : ಒಂದು + = ಒಂದಾದ
 ಉತ್ತರ :
1.    ಇಲ್ಲಿ + ಒಂದು = ಇಲ್ಲೊಂದು
2.    ಹೇರಳ + ಆಗಿ = ಹೇರಳವಾಗಿ
3.    ಹದ + ಆಗಿತ್ತು = ಹದವಾಗಿತ್ತು .
 
ಬಳಕೆ ಚಟುವಟಿಕೆ 
 
ಅ ) ಮನೆಗಳಿಂದ ಅಕ್ಷರಗಳನ್ನು ಆರಿಸಿ ನೀರಿನ ಮೂಲಗಳನ್ನು ಕಂಡುಹಿಡಿದು ಬರೆ .
ಕೊ    ಳ    ತೊ    ಸು    ರಂ    ಗ    ಬಿ
ಳ    ಕೆ    ರೆ    ಸ    ರೋ    ವ    ರ
ವೆ    ಹೊ    ಳೆ    ಮು    ಹ    ಳ್ಳ    ತೆ
ಬಾ    ನ    ದಿ    ದ್ರ    ಕ    ಡ    ಲು
ವಿ    ಸಾ    ಗ    ರ    ಟ್ಟೆ    ಮ    ಳೆ
ಉತ್ತರ ;ತರಗತಿಯಲ್ಲಿ ಚರ್ಚಿಸಿ , ನಿಮ್ಮ ತೀರ್ಮಾನವನ್ನು ಕೆಳಗೆ ಬರೆ .
ಉತ್ತರ :ನಮ್ಮ ಶಾಲಾ ಕೈತೋಟದಲ್ಲಿ ಹೂವಿನ ಗಿಡಗಳನ್ನು
ಹಾಗೂ ಹಸಿರು ಹುಲ್ಲನ್ನು ಬೆಳೆಯಬೇಕು . ಹೂವಿನ
ಗಿಡಗಳನ್ನು ಚೌಕಾಕಾರದಲ್ಲಿ ಸುತ್ತಲೂ ಬೆಳೆಸಬೇಕು .
ಮಧ್ಯದಲ್ಲಿ ಹಸಿರು ಹುಲ್ಲನ್ನು ಬೆಳೆಯಬೇಕು.ಹೂವಿನ
 ಗಿಡಗಳಿಗೆ ನಿತ್ಯವೂ ನೀರು ಹಾಯಿಸಬೇಕು . ಹಸಿರು
ಹುಲ್ಲಿನಲ್ಲಿ ಇತರೆ ಕಸ ಬೆಳೆಯದಂತೆ ನೋಡಿಕೊಳ್ಳಬೇಕು .
 
ಇ ) ನಿಮ್ಮ ಶಾಲೆಯಲ್ಲಿ ರೈತನೊಬ್ಬನನ್ನು  .
 ಸನ್ಮಾನಿಸುವ ಸಮಾರಂಭದ ಮುಖ್ಯ ಅತಿಥಿಯಾಗಿ
ನೀನು ಮಾಡುವ ಭಾಷಣವನ್ನು ಇಲ್ಲಿ ಬರೆ . ನಂತರ
 ತರಗತಿಯಲ್ಲಿ ಶಿಕ್ಷಕರೆದುರು ಭಾಷಣ ಮಾಡು .
ಉತ್ತರ: ವೇದಿಕೆಮೇಲೆ ಆಸೀನರಾದ  ಅಧ್ಯಕ್ಷರ , ಗುರು – ಹಿರಿಯರೆ ,
ಪಲಕರೇ , ಹಾಗೂ ನನ್ನ ಆತ್ಮೀಯ ಸ್ನೇಹಿತರೆ ,
ರೈತನು ನಮ್ಮ ದೇಶದ ಬೆನ್ನೆಲುಬು . ಆತನಿಂದಲೇ ನಮ್ಮ
 ನಿತ್ಯದ ದಿನಚರಿ ಪ್ರಾರಂಭವಾಗುತ್ತದೆ . ರೈತನು
 ಕಪ್ಪಪಟ್ಟು ಹೊಲಗಳಲ್ಲಿ ಬೆಳೆದ ಪೈರುಗಳಾಗಲಿ ,
 ಕಾಳುಗಳಾಗಲಿ , ಹಣ್ಣು – ಹಂಪಲುಗಳಾಗಲಿ ಅವುಗಳು
ಮಾರುಕಟ್ಟೆಗೆ ಬಂದ ನಂತರವೇ ನಾವು ಅವುಗಳನ್ನು
ಖರೀದಿಸಿ ನಿಮ್ಮ ಜೀವನೋಪಾಯವನ್ನು
ಸಾಗಿಸುತ್ತಿದೇವೆ . ರೈತನು ನಮ್ಮ ದೇಶಕ್ಕೆ ಅತ್ಯಮೂಲ್ಯ
 ಕೊಡುಗೆಯಾಗಿದ್ಯಾನೆ . ಇವತ್ತು ಅಂತಹ ಒಬ್ಬ ರೈತನನ್ನು
 ನಮ್ಮ ಈ ಶಾಲೆಯಲ್ಲಿ ಸನ್ಮಾನಿಸುತ್ತಿರುವುದು ನಿಜಕ್ಕೂ
ತುಂಬಾ ಹೆಮ್ಮೆಯ ಸಂಗತಿ . ನಾನೂ ಕೂಡ ಈ ಸಮಾರಂಭದಲ್ಲಿ
ಪಾಲ್ಗೊಂಡಿದ್ದು ನನ್ನ ಭಾಗ್ಯವೇ ? ಈ ಶಾಲೆಯಲ್ಲಿ ಇಂದಿನ
 ಸಮಾರಂಭಕ್ಕೆ ಮುಖ್ಯ ಕುರಿತು ಎರಡು ಮಾತನಾಡಲು ಅವಕಾಶ
ನೀಡಿದಕ್ಕಾಗಿ ತಮ್ಮೆಲ್ಲರಿಗೂ ಧನ್ಯವಾದಗಳು .
 
 ಈ ) ಗೆಳೆಯರೊಂದಿಗೆ ಚರ್ಚಿಸಿ ರಿಸಿರಿ .
 
1.    ನಿನ್ನ ಶಾಲೆಗೆ ಜಮೀನು ಕೆ ಇಟ್ಟರೆ ನೀನೇನು ಮಾಡುವಿ ?
ಉತ್ತರ :
ನನ್ನ ಶಾಲೆಗೆ ಜಮೀನನ್ನು ಕೊಟ್ಟರೆ , ಮೊದಲು ನಾನು ಆ
ಜಮೀನಿನ ಎತ್ತರವಾಗಿ ಬೆಳೆಯುವ ಬದಿಗೂ ಗಿಡಗಳನ್ನು ನೆಡುವೆನು .
ಆ ಜಮೀನಿನಲ್ಲಿ ಗಿಡಗಳಿಗೆ ನೀರುಣಿಸಲು ಕೊಳವೆಬಾವಿಯನ್ನು ಹಾಕಿಸುವೆನು .
 ಜಮೀನಿನ ಅರ್ಧ ಭಾಗದಲ್ಲಿ ಹೂದೋಟ
ನಿರ್ಮಿಸುವೆನು , ಅರ್ಧ ಭಾಗದಲ್ಲಿ ಮಕ್ಕಳಿಗೆ
ಆಟವಾಡಲು ಅನುವು ಮಾಡಿಕೊಡುವೆನು .
 
2.    ರೈತರು ಕೈ ಕೆಸರಾಗುತ್ತದೆ ಎಂದು ಸುಮ್ಮನೆ ಕುಳಿತರೆ ಏನಾಗಬಹುದು ?
ಉತ್ತರ :
ರೈತರು ನಮ್ಮ ದೇಶದ ಆಸ್ತಿ ಮತ್ತು ಬೆನ್ನೆಲುಬು ಕೂಡಾ
ಹೌದು . ರೈತರು ನಮ್ಮ ಕೆಲಸದಲ್ಲಿ ತೊಡಗಿದರೇನೇ
 ನಮ್ಮ ನಿತ್ಯ ದಿನಚರಿ ಸಾಗುತ್ತದೆ . ಏಕೆಂದರೆ ಒಂದು ದೇಶ ,
 ರಾಜ್ಯ ಹಾಗೂ ಜಿಲ್ಲೆ ಪ್ರಗತಿಯನ್ನು ಹೊಂದಬೇಕಾದರೆ
ಆಯಾ ಪ್ರದೇಶದ ರೈತರು ಬೆಳೆಯುವ ಬೆಳೆಯ ಮೇಲೆ
 ಅವಲಂಬಿಸಿರುತ್ತದೆ . ಒಂದು ವೇಳೆ ರೈತರು ಕೈ
 ಕೆಸರಾಗುತ್ತದೆ ಎಂದು ಸುಮ್ಮನೆ ಕುಳಿತರೆ ? ತತ್ತರಿಸಿ
“ಬಾರದೇ ಹಾಹಾಕಾರ ಉಂಟಾಗುತ್ತದೆ” . ಜನ ರೈತ ಬಿತ್ತದಿದ್ದರೆ
 ಜಗತ್ತು  ನಗುವುದು.
 
 ಊ ) ಒಗಟು ಓದಿ
 
1.    ” ಅಕ ಅಕ್ಕ ಗಿಡದ ಮೇಲೆ ಕಾಯಿನೋಡು ,ಕಾ ಯಿ ತಿಂದೋರ ಬಾಯಿ ನೋಡು .
” ಉತ್ತರ :
ಹಲಸಿನ ಹಣ್ಣು
 
2.    ” ಅಡ್ಡ ” ಸುರದಲ್ಲಿ ದೊಡ್ಡ ಕುಳಿತಿದ್ಯಾನೆ . ”
ಉತ್ತರ :
ತೆಂಗಿನಕಾಯಿ
 
3.    ಹಸಿರು ಗಿಡದಲ್ಲಿ ಮೊಸರು ಚೆಲ್ಲಿದೆ . ” ಸ ರಿ ಜಗತ್ತು |
ಉತ್ತರ :
ಮಲ್ಲಿಗೆ .
 
4.    ” ಮಣ್ಣು ಕೊರೆದೆ , ಕಲ್ಕು ಸಿಕಿತು , ಕಲ್ಲು ಕೊರೆದೆ ಬೆಳ್ಳಿ ಸಿಕ್ಕಿತು . ಬೆಳ್ಳಿ ಕೊರೆದೆ
ನೀರು ಸಿಕ್ಕಿತು . “
 ಉತ್ತರ :
ಏಲಕ್ಕಿ ,


You Might Like

Post a Comment

0 Comments