Recent Posts

ಸೋಮೇಶ್ವರ ಶತಕ - ೧೦ ನೇ ತರಗತಿ ನುಡಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ಸೋಮೇಶ್ವರ ಶತಕ

ಕವಿ ಪರಿಚಯ

* ಪುಲಿಗೆರೆ ಸೋಮನಾಥ * 
ಕಾಲ: 13 ನೇ ಶತಮಾನ                                                                                               
ಜನ್ಮ ಸ್ಥಳ: ಧಾರವಾಡ ಜಿಲ್ಲೆಯ ಲಕ್ಷ್ಮೇಶ್ವರ                                                                      
ಅಂಕಿತನಾಮ: "ಹರಹರಾ ಶ್ರೀ ಚೆನ್ನಸೋಮೇಶ್ವರಾ"                                                                      
ಕೃತಿ: ಸೋಮೇಶ್ವರ ಶತಕ.                           

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಸೂಕ್ತವಾದ ಉತ್ತರ ಬರೆಯಿರಿ. 
 
1) ಪುಲಿಗೆರೆ ಸೋಮನಾಥ ಹೇಳಿರುವಂತೆ ಮಗನಾದವನಲ್ಲಿ ಇರಬೇಕಾದ ಗುಣ ಯಾವುದು?  
- ಮಗನಾದವನಲ್ಲಿ ವಿನಯಶೀಲ ಗುಣವಿರಬೇಕೆಂದು ಪುಲಿಗೆರೆ ಸೋಮನಾಥನು ಹೇಳಿದ್ದಾನೆ.                

2) ಪುಲಿಗೆರೆ ಸೋಮನಾಥ ಹೇಳಿರುವಂತೆ ಋಷಿಯಲ್ಲಿ ಯಾವ ಗುಣವಿರಬೇಕು? 
- ಪುಲಿಗೆರೆ ಸೋಮನಾಥ ಹೇಳಿರುವಂತೆ ಋಷಿಯಲ್ಲಿ ಪರಿಶುದ್ಧವಾದ ಗುಣವಿರಬೇಕು.

3) ಕವಿ ಸೋಮನಾಥನು ಯಾರನ್ನು ದೊಡ್ಡ ಮನುಷ್ಯನೆಂದು ಹೆಸರಿಸಲಾಗುವುದಿಲ್ಲ ಎಂದಿದ್ದಾನೆ?
- ಕವಿ ಸೋಮನಾಥ ಕೆಟ್ಟವರ ಸಹವಾಸದಲ್ಲಿರುವವನನ್ನು ದೊಡ್ಡ ಮನುಷ್ಯನೆಂದು ಕರೆಯಲಾಗುವುದಿಲ್ಲ ಎಂದು ಹೇಳಿದ್ದಾನೆ.

4) ಸೋಮೇಶ್ವರ ಶತಕದಲ್ಲಿ ಹೇಳಿರುವಂತೆ ಭಟ ಮತ್ತು ಆಚಾರವಂತ ಎನಿಸಿಕೊಳ್ಳಲು ಯಾರು ಅರ್ಹರಲ್ಲ?     
- ಸೋಮೇಶ್ವರ ಶತಕದಲ್ಲಿ ಯುದ್ಧಕ್ಕಾಗದ ಭಟನು ಶಿವನನ್ನು ಬಿಟ್ಟಿರುವ ಆಚಾರವಂತನು ಆಯಾ ಹೆಸರಿಗೆ ಅರ್ಹರಲ್ಲ ಎಂದು ಹೇಳಲಾಗಿದೆ.

5) ಮಂತ್ರಿಯಾಗಲು ಮತ್ತು ರಾಜನಾಗಲು ಯಾವ ಗುಣಗಳನ್ನು ಹೊಂದಿರಬೇಕೆಂದು ಸೋಮೇಶ್ವರ ಶತಕದಲ್ಲಿ ತಿಳಿಸಲಾಗಿದೆ?
- ನಾನಾ ವಿಧದ ಚಮತ್ಕಾರಗಳನ್ನು ತಿಳಿದವನೇ ಮಂತ್ರಿಯಾಗಬೇಕು. ಯಾರು ಏನೇ ಅಂದರು ಕೋಪಿಸಿಕೊಳ್ಳದೇ ತಾಳ್ಮೆಯಿಂದ ಇರುವವನೇ ರಾಜನಾಗಬೇಕೆಂದು ಸೋಮೇಶ್ವರ ಶತಕದಲ್ಲಿ ತಿಳಿಸಲಾಗಿದೆ.

6) ಯೋಗಿಯಾದವನು ಏನನ್ನು ಜಯಿಸಬೇಕೆಂದು ಸೋಮೇಶ್ವರ ಶತಕದಲ್ಲಿ ಹೇಳಿದೆ?
- ಯೋಗಿಯಾದವನು ಅರಿಷಡ್ವರ್ಗಗಳನ್ನು ಜಯಿಸಬೇಕೆಂದು ಸೋಮೇಶ್ವರ ಶತಕದಲ್ಲಿ ಹೇಳಿದೆ.

7) ಬೇರೆಯವರ ಸಾಲಕ್ಕೆ ಯಾವಾಗ ಹೊಣೆಯಾಗಬೇಕೆಂದು ಕವಿ ಸೋಮನಾಥನು ಹೇಳಿದ್ದಾನೆ? (2018)           
- ತನ್ನ ಕೈಯಿಂದ ದಂಡ ತೆರುವ ಸಾಮಥ್ರ್ಯವಿರುವವನು ಮಾತ್ರ ಬೇರೆಯವರ ಸಾಲಕ್ಕೆ ಹೊಣೆಯಾಗಬೇಕೆಂದು ಕವಿ ಸೋಮನಾಥನು ಹೇಳಿದ್ದಾನೆ.  

8) ಪುಲಿಗೆರೆ ಸೋಮನಾಥನ ಅಂಕಿತ ಯಾವುದು?                 
- ಪುಲಿಗೆರೆ ಸೋಮನಾಥನ ಅಂಕಿತನಾಮ "ಹರಹರಾ ಶ್ರೀ ಚೆನ್ನಸೋಮೇಶ್ವರಾ."

9) ಸೋಮೇಶ್ವರ ಶತಕದಲ್ಲಿ ಹೇಳಿರುವಂತೆ ಯಾವ ಗುಣವನ್ನು ಹೊಂದಿದವರು ಯಾವ ಹೆಸರಿಗೆ ಅರ್ಹರಾಗುತ್ತಾರೆ?                         
- ವಿನಯಶೀಲವಿರುವ ಮಗ, ಪರಿಶುದ್ಧನಾಗಿರುವ ಋಷಿ, ಬೈಯದೇ ಇರುವ ಹೆಂಡತಿ, ರುಚಿಯಾದ ಊಟ, ಕೆಟ್ಟವರ ಸಹವಾಸದಲ್ಲಿರದ ದೊಡ್ಡ ಮನುಷ್ಯ, ಶೌರ್ಯದಿಂದ ಯುದ್ಧ ಮಾಡುವ ಬಟ , ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ನಂಟ, ಶಿವನನ್ನು ಬಿಟ್ಟಿರದ ಆಚಾರವಂತ ಈ ಎಲ್ಲ ಗುಣಗಳನ್ನು ಹೊಂದಿದವರು ಆಯಾ ಹೆಸರಿಗೆ ಅರ್ಹರಾಗಿರುತ್ತಾರೆಂದು  ಸೋಮೇಶ್ವರ ಶತಕದಲ್ಲಿ ಹೇಳಲಾಗಿದೆ.

10) ಪುಲಿಗೆರೆ ಸೋಮನಾಥನು ಹೇಳಿರುವಂತೆ ಯಾವ ಯಾವ ಸಾಮಥ್ರ್ಯದಿಂದ ಯಾವ ಯಾವ ಕಾರ್ಯಗಳನ್ನು ಮಾಡಬೇಕು?         
- ಯುದ್ಧ ಮಾಡುವ ಕಲೆ ಬಲ್ಲವನೇ ಭಟನಾಗಬೇಕು. ವಿವಿದ ಚಮತ್ಕಾರಗಳನ್ನು ತಿಳಿದವನೇ ಮಂತ್ರಿಯಾಗಬೇಕು. ಯಾರು ಏನೇ ಅಂದರೂ ಕೋಪಿಸಿಕೊಳ್ಳದೇ ತಾಳ್ಮೆಯಿಂದ ಇರುವವನೇ ದೊರೆಯಾಗಬೇಕು. ಅರಿಷಡ್ವರ್ಗಗಳನ್ನು ಗೆಲ್ಲುವ ಸಾಮಥ್ರ್ಯ ಹೊಂದಿದವನು ಯೋಗಿಯಾಗಬೇಕು. ತನ್ನ ಕೈಯಿಂದ ದಂಡ ತೆರುವ ಸಾಮಥ್ರ್ಯವಿರುವವನು ಮಾತ್ರ ಮತ್ತೊಬ್ಬರು ಮಾಡುವ ಸಾಲಕ್ಕೆ ಹೊಣೆಯಾಗಬೇಕು ಎಂದು ಪುಲಿಗೆರೆ ಸೋಮನಾಥನು ಹೇಳಿದ್ದಾನೆ.








                                                   
You Might Like

Post a Comment

0 Comments