Recent Posts

ಯಶೋಧರೆ - ೮ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

                                   
 
ಯಶೋಧರೆ
    
ಕವಿ ಪರಿಚಯ
-ಮಾಸ್ತಿ ವೆಂಕಟೇಶ ಐಯ್ಯಂಗಾರ್  ,ಕನ್ನಡ ಸಾಹಿತ್ಯ ಲೋಕದಲ್ಲಿ ‘ಸಣ್ಣಕಥೆಗಳ ಜನಕ’ ರೆಂದೇ ಖ್ಯಾತಿಪಡೆದು, ‘ಶ್ರೀನಿವಾಸ’ ಕಾವ್ಯನಾಮದಿಂದ ಹೆಸರಾಂತ ಮಾಸ್ತಿ ವೆಂಕಟೇಶ ಅಯ್ಯಂಗಾರರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಎಂಬ ಗ್ರಾಮದಲ್ಲಿ ೬-೬-೧೮೯೧ ರಲ್ಲಿ ಜನಿಸಿದರು. ಇವರು ಕಾವ್ಯ, ನಾಟಕ, ಕಾದಂಬರಿ ವಿಮರ್ಶೆ – ಹೀಗೆ ಕನ್ನಡ ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ. ಇವರ ಸಣ್ಣಕಥೆಗಳು ಒಟ್ಟು ಹದಿಮೂರು ಸಂಪುಟಗಳಲ್ಲಿ ಪ್ರಕಟವಾಗಿವೆ. `ಗೌತಮಿ ಹೇಳಿದ ಕಥೆ’, `ಸಾರಿಪುತ್ರನ ಕೊನೆಯ ದಿನಗಳು’, `ಕುಚೇಲನ ಭಾಗ್ಯ, `ಹೇಮಕೂಟದಿಂದ ಬಂದ ಮೇಲೆ’, `ಚಿಕವೀರರಾಜೇಂದ್ರ ಮೊದಲಾದವು ಪ್ರಮುಖ ಕೃತಿಗಳು. ಇವರ ಚಿಕ್ಕವೀರರಾಜೇಂದ್ರ ಕೃತಿಗೆ 19830 ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಇವರು6 -6-1986 ೬ರಲ್ಲಿ ನಿಧನರಾದರು. ಪ್ರಸ್ತುತ ಗದ್ಯಭಾಗವನ್ನು ಮಾಸ್ತಿ ವೆಂಕಟೇಶ ಅಯ್ಯಂಗಾರರ ‘ಯಶೋ್ದರೆ ’ ನಾಟಕದಿಂದ ಸಂಪಾದಿಸಿ ನಿಗದಿಪಡಿಸಿದೆ.

ಪದಗಳ ಅರ್ಥ
ಆಣ್ಮ-ಒಡೆಯ,  ಸ್ವಾಮಿ;   
ಆಶಿಸು-ಬಯಸು;      
ಉದ್ಗಾತೃ-ಋತ್ವಿಜ, ಯಜ್ಞದಲ್ಲಿ ಸಾಮಗಾನವನ್ನು ಹಾಡುವವನು;
ಎನಿತು-ಎಷ್ಟು;                  
ಎಸಗಲಿ-ಆರ್ಶೀವದಿಸಲಿ;            
ಕವಿ-ಆವರಿಸು, ಮುತ್ತು;     
ಕಾನನ-ಕಾಡು, ಅರಣ್ಯ;  
 ಚೇತನ-ಶಕ್ತಿ, ಚೈತನ್ಯ;
ತರಗು-ಕುಂದುವಿಕೆ,       
  ಇರುಳು-ರಾತ್ರಿ;       
ತುಡುಕಿ-ಕಸಿದುಕೊಂಡು, ಕಿತ್ತುಕೊಳ್ಳು;       
ತೊಳಲು-ಚಿಂತೆಮಾಡು, ಶ್ರಮಪಡು;
ಪರಿಪಾಲಿಸುರಕ್ಷಣೆ ಮಾಡು , ಕಾಪಾಡು;   
ಬೇಹು-ಗುಪ್ತಾಚಾರ;        
ಮಂಕು-ಬ್ರಾಂತಿ ;     
ವಿನೋದ – ಹಾಸ್ಯ, ಉತ್ಸುಕತೆ;
ವೃಂದ-ಸಮೂಹ, ಗುಂಪು;   
 ಸಂದೇಹ-ಅನುಮಾನ;  
ಸತಿ-ಹೆಂಡತಿ; ಸಲಹುಕಾಪಾಡು;   
ಸುತೆ-ಮಗಳು; ಹವನಹೋಮ, ಯಜ್ಞ;  
 ಹಸುಳೆ-ಮಗು;

ಅಭ್ಯಾಸ

ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ಯಶೋಧರೆ ಮತ್ತೊಮ್ಮೆ ಯಾರನ್ನು ನೀಡಬೇಕೆಂದು ರಾಜನಲ್ಲಿ ಬೇಡುತ್ತಾಳೆ?
2.  ತಂದೆಯನ್ನು ಕರೆತರಲು ಹೋಗುವೆನೆಂದು ಹೇಳಿದವರಾರು?
3.   ರಾಜನಿಗೆ ಕನಸಿನ ವಿಚಾರವನ್ನು ತಿಳಿಸಿದವರಾರು?
4. ಸಂಪ್ರದಾಯಕ್ಕೆ ವಿರುದ್ಧವಾದದ್ದು ಯಾವುದು?
5.  ಈಗ ನೀನಿರುವ ರೀತಿ ಯಾವುದೆಂದು ಯಶೋಧರೆಯನ್ನು ರಾಜ ಕೇಳಿದನು?

ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯದಲ್ಲಿ ಉತ್ತರಿಸಿ
1. ರಾಜನನ್ನು ಪೀಠದಲ್ಲಿ ಕುಳ್ಳಿರಿಸಿ ಯಶೋಧರೆ ಏನೆಂದು ವಿನಂತಿಸುತ್ತಾಳೆ?
2. ಯಶೋಧರೆ ಮಂಡಿಯೂರಿ ನಮಸ್ಕರಿಸುತ್ತಾ ಏನು ಹೇಳುತ್ತಾಳೆ?
3. ರಾಜನು ಈಗ ನೀನಿರುವ ರೀತಿ ಸನ್ಯಾಸವಲ್ಲವೆ ಎನ್ನಲು ಕಾರಣವೇನು?
4. ಯಶೋಧರೆಯ ಆಂತರ್ಯದಲ್ಲಿರುವ ಸಂದೇಹವೇನು?

ಇ. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು-ಐದು ವಾಕ್ಯದಲ್ಲಿ ಉತ್ತರಿಸಿ.
1. ಬೇಹಿನವರನ್ನು ಕಳಿಸುವ ವಿಚಾರದಲ್ಲಿ ರಾಹುಲನ ಅಭಿಪ್ರಾಯವೇನು?
 2. ಯಶೋಧರೆಯ ವಿಧಿಯ ಬಗ್ಗೆ ರಾಜನು ಏನೆಂದು ಹೇಳಿದನು?

ಈ.  ಕೆಳಗಿನ ಹೇಳಿಕೆಗಳನ್ನು ಯಾರು ಯಾರಿಗೆ ಯಾವ ಸಂದರ್ಭದಲ್ಲಿ ಹೇಳಿದರು.
1. ಸೋದರಿಯ ಸುತೆಯೆಂದು ಎಳೆತನದಲೇ ನನ್ನ ಕರೆತಂದು ಸಾಕಿದಿರಿ
2.  ಅಮ್ಮಾಜಿ, ನಿನಗೆ ಭಯ ಬೇಡಮ್ಮ ನಾ ಮರಳಿ ಬಹೆನಮ್ಮ
3.  ನಿನ್ನ ವಿಧಿ ಕೆಟ್ಟುದೆಂದೆಣಿಸದಿರು ಅಮ್ಮಾಜಿ
4 ನಿದ್ದೆಯಲಿ ಮುಳುಗಲಿನ್ನಾವ ಕನಸಿನ ಮೊಸಳೆ ಹಿಡಿಯುವುದೋ

ಉ. ಹೊಂದಿಸಿ ಬರೆಯಿರಿ
1.  ಯಶೋಧರೆ -  ಸಖಿ
2. ಶುದ್ಧೋದನ  -  ಬುದ್ಧನ ಮಗ
3. ಅಂಬಿಕೆ  -  ರಾಜ
4. ರಾಹುಲ  -  ಗೌತಮ ಬುದ್ಧ
5. ಸಿದ್ಧಾರ್ಥ  -  ಯುವರಾಣಿ

ಊ. ಈ ಕೆಳಗಿನ ಪದಗಳಿಗೆ ತದ್ಭವ ಪದಗಳನ್ನು ಬರೆಯಿರಿ.      
ವಿನೋದ,  ದುಃಖ,  ರಾಜ,  ಕಾರ್ಯ.
ಋ. ಈ ಪದಗಳನ್ನು ಬಿಡಿಸಿ ಸಂಧಿಯನ್ನು ಹೆಸರಿಸಿ.    ನಿನ್ನಾಣ್ಮ , ಚಕ್ರಾಧಿಪತಿ, ಹರಕೆಯನು, ಪತಿಯೊಡನೆ, ಇಂದಳುತ,

ಸೈದ್ಧಾಂತಿಕ ಭಾಷಾಭ್ಯಾಸ
ಲಿಂಗ, ವಚನ ಮತ್ತು ವಾಕ್ಯಗಳ ಪರಿಚಯಾತ್ಮಕ ವಿವರ
ಲಿಂಗಗಳು
- ಶ್ಯಾಮ ಗಿರೀಶನಿಗೆ ಬುದ್ಧಿ ಹೇಳಿದನು.
- ಗೌರಿ ತನ್ನ ತಂಗಿಗೆ ಪುಸ್ತಕವನ್ನು ಕೊಟ್ಟಳು.
- ಆಡು ಸೊಪ್ಪನ್ನು ತಿನ್ನುತ್ತದೆ.
ಮೊದಲ  ವಾಕ್ಯದಲ್ಲಿರುವ  `ಶ್ಯಾಮ,  `ಗಿರೀಶ  ಪದಗಳು  ಗಂಡಸರಿಗೂ  `ಗೌರಿ,  `ತಂಗಿ ಪದಗಳು  ಹೆಂಗಸರಿಗೂ  `ಆಡು,  `ಸೊಪ್ಪು  ಪದಗಳು  ಗಂಡಸೂ  ಅಲ್ಲದ  ಹೆಂಗಸೂ  ಅಲ್ಲದ ಬೇರೆ ಯಾವುದಕ್ಕೋ ಸಂಬಂಧಿಸಿದ್ದೆಂದು ತಿಳಿಯುತ್ತದೆ.
`ಗಂಡಸು ಎಂಬ ಅರ್ಥ ನೀಡುವ ಪದಗಳನ್ನು ಪುಲ್ಲಿಂಗ ಎಂತಲೂ `ಹೆಂಗಸು ಎಂಬ ಅರ್ಥ ನೀಡುವ ಪದಗಳನ್ನು ಸ್ತ್ರೀಲಿಂಗ ಎಂತಲೂ `ಗಂಡಸು ಎಂಬ ಅರ್ಥವನ್ನೂ ಹೆಂಗಸು ಎಂಬ ಅರ್ಥವನ್ನೂ ನೀಡದ ಪದಗಳನ್ನು ನಪುಂಸಕಲಿಂಗ ಎಂತಲೂ ಕರೆಯುವರು.

ವಚನಗಳು
ವಚ ನ   ಎಂದರೆ ಎಣಿಕೆ ಎಂದರ್ಥ. ವಸ್ತು ಅಥವಾ ವ್ಯಕ್ತಿಗಳನ್ನು ಎಣಿಸುವಾಗ ಒಂದು ಅಥವಾ ಒಂದಕ್ಕಿಂತ  ಹೆಚ್ಚು  ಎಂದು  ಎಣಿಸಿ  ಒಂದಕ್ಕಿಂತ  ಹೆಚ್ಚಾದರೆ  ಎಷ್ಟು  ಎಂದು  ನಿರ್ಧರಿಸುತ್ತೇವೆ. ಹೀಗೆ - ಒಂದು ವಸ್ತು ಅಥವಾ ಒಬ್ಬ ವ್ಯಕ್ತಿಯನ್ನು ಸೂಚಿಸುವ ಪದಗಳೇ ಏಕವಚನ. ಒಂದಕ್ಕಿಂತ ಹೆಚ್ಚು ಇರುವ ವಸ್ತು ಅಥವಾ ವ್ಯಕ್ತಿಗಳನ್ನು ಸೂಚಿಸುವ ಪದಗಳೇ ಬಹುವಚನ.
ಏಕವಚನದ  ನಾಮಪ್ರಕೃತಿಗಳಿಗೆ  ಅರು,  ವು,  ಗಳು,  ಅಂದಿರು  ಇತ್ಯಾದಿ  ಬಹುವಚನ ಸೂಚಕಗಳು ಸೇರಿ ಬಹುವಚನ ಪದಗಳಾಗುತ್ತವೆ.
ಉದಾ :  ರಾಜ + ಅರು > ರಾಜರು  ನೀನು + ವು > ನೀವು           ಮರ + ಗಳು > ಮರಗಳು     ಅಣ್ಣ + ಅಂದಿರು > ಅಣ್ಣಂದಿರು         ರಾಣಿ + ಅರು > ರಾಣಿಯರು

ವಾಕ್ಯಗಳು

ಮಾತು  ಪದಗಳಿಂದ  ಆರಂಭವಾಗುತ್ತದೆ.  ಆದರೆ  ಅದು  ವಿಕಾಸಗೊಳ್ಳುವುದು  ವಾಕ್ಯಗಳ ಮೂಲಕ.  ಹಾಗಾಗಿ  ಪದಗಳ  ಅರ್ಥಪೂರ್ಣ  ಸಮೂಹವೇ  ವಾಕ್ಯ.  ಹಾಗೆಂದ  ಮಾತ್ರಕ್ಕೆ ಅದೊಂದು ಪದಗಳ ಗುಂಪು ಎಂದು ಹೇಳಲಾಗದು. ಆ ಪದಗಳು ಒಂದು ನಿದರ್ಿಷ್ಟ ರೀತಿಯಲ್ಲಿ (ಅರ್ಥವತ್ತಾದ) ಜೋಡಣೆಯಾದಾಗ ಮಾತ್ರ ವಾಕ್ಯ ಎನಿಸಿಕೊಳ್ಳುತ್ತದೆ.

ಈ ವಾಕ್ಯಗಳನ್ನು ಗಮನಿಸಿ
1.  ಜಿಂಕೆ ಹುಲ್ಲನ್ನು ತಿಂದಿತು.
2.  ಕೃಷ್ಣ ಧೇನುಕಾಸುರನನ್ನು ಕೊಂದ.
ಈ  ಎರಡೂ  ವಾಕ್ಯಗಳು  ಸಂಪೂರ್ಣ  ಅರ್ಥವನ್ನು  ಕೊಡುತ್ತವೆ.  ಆದರೆ  ಪ್ರತಿಯೊಂದು ವಾಕ್ಯದಲ್ಲಿರುವ ಯಾವುದಾದರೂ ಒಂದು ಪದ ಇಲ್ಲವಾದಲ್ಲಿ ಆ ವಾಕ್ಯ ಪೂರ್ಣ ಅರ್ಥ ಕೊಡದೆ ಪ್ರಶ್ನೆ ಮೂಡುವಂತೆ ಮಾಡುತ್ತದೆ.
ಉದಾ  :  ಮೊದಲ  ವಾಕ್ಯದಲ್ಲಿರುವ  `ಜಿಂಕೆ  ಪದ ಇಲ್ಲವಾದರೆ  ಹುಲ್ಲನ್ನು  ತಿಂದುದು ಯಾವುದು? ಎಂಬ ಪ್ರಶ್ನೆ ಮೂಡುತ್ತದೆ. `ಹುಲ್ಲನ್ನು ಪದ ಇಲ್ಲವಾದರೆ ಜಿಂಕೆ ಏನನ್ನು ತಿಂದಿತು ಎಂಬ  ಪ್ರಶ್ನೆ  ಮೂಡುತ್ತದೆ.  `ತಿಂದಿತು  ಪದ  ಇಲ್ಲವಾದರೆ  ಜಿಂಕೆ  ಹುಲ್ಲನ್ನು  ಏನು  ಮಾಡಿತು ಎಂಬ ಪ್ರಶ್ನೆ ಮೂಡುವಂತೆ ಮಾಡುತ್ತದೆ. ಇಲ್ಲಿ `ಜಿಂಕೆ ಎಂಬುದು `ಕತೃಪದ; `ಹುಲ್ಲು ಎಂಬುದು `ಕರ್ಮಪದ; `ತಿಂದಿತು ಎಂಬುದು `ಕ್ರಿಯಾಪದ. ಅರ್ಥಪೂರ್ಣ ವಾಕ್ಯ ಎಂದರೆ ಕತೃ, ಕರ್ಮ, ಕ್ರಿಯಾಪದಗಳಿಂದ ವ್ಯವಸ್ಥಿತವಾಗಿ ಕೂಡಿರುವ ಪದಸಮೂಹ. ಆದರೆ ಕೆಲವು ಕ್ರಿಯಾಪದಗಳುಕರ್ಮಪದವನ್ನು ಅಪೇಕ್ಷಿಸುವುದಿಲ್ಲ. ಅಂತಹ ಕ್ರಿಯಾಪದದ ಜತೆಗೆ ಕತೃ ಪದ ಇದ್ದರೆ ಅರ್ಥಪೂರ್ಣ ವಾಕ್ಯವಾಗುತ್ತದೆ.

ಅಭ್ಯಾಸ ಚಟುವಟಿಕೆ

ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ
1.  ಲಿಂಗದ ವಿಧಗಳಾವುವು?
2.  ಬಹುವಚನವನ್ನು ನಿದರ್ಶನದ ಮೂಲಕ ವಿವರಿಸಿ.
3.  ವಾಕ್ಯ ಎಂದರೇನು?

ಪ್ರಾಯೋಗಿಕ ಭಾಷಾಭ್ಯಾಸ
 
1ಕೊಟ್ಟಿರುವ ಪದಗಳನ್ನು ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕ ಲಿಂಗಗಳಾಗಿ ವರ್ಗಿಕರಿಸಿ.
 
2.ರಾಹುಲ  ಯಶೋಧರೆ  ಸಖಿ  ಅಮ್ಮಾಜಿ  ರಾಜ  ವಿಧಿ  ಅಂಬಿಕೆ
3.ಲೋಕ   ಅರಮನೆ  ತಂದೆ  ಸನ್ಯಾಸ  ಸತಿ  ಹುಲಿ  ಕನಸು

2.  ಕೊಟ್ಟಿರುವ ಪದಗಳ ಬಹುವಚನ ರೂಪ ಬರೆಯಿರಿ.
ನಾನು   ಅಮ್ಮ    ಕಿರಿಯ    ರಾಜ    ನನ್ನ    ಲೋಕ    ಬಾಲಕ    ಮಗು    ತಾಯಿ   ದೇವ      ಸ್ವರ   ತಾತ    ನೀನು

3.  ಕೊಟ್ಟಿರುವ ವಾಕ್ಯಗಳಲ್ಲಿರುವ ಕರ್ಮ, ಕ್ರಿಯಾ ಹಾಗೂ ಕತೃ ಪದಗಳನ್ನು ಆರಿಸಿ  ಬರೆಯಿರಿ.
 1. ಅಮ್ಮ ಅಣ್ಣನನ್ನು ಕರೆಯುವೆನು.
2.   ಸನ್ಯಾಸವನು ಕೊಂಡು ಪತಿಯನ್ನು ಸೇರುವೆನು.
3.  ಸಿದ್ಧಾರ್ಥನು ಕರೆಯನ್ನು ಕೇಳಿಸಿಕೊಳ್ಳಲಿಲ್ಲ.

ಪೂರಕ ಓದು
 ಡಾ|| ಪ್ರಭುಶಂಕರ್ರವರ ಬುದ್ಧ ನಾಟಕ ಚಕ್ರ ಗೀತಾನಾಟಕಗಳನ್ನು ಓದಿರಿ.
ದ.ರಾ. ಬೇಂದ್ರೆಯವರ ಬುದ್ಧ ಕವನವನ್ನು ಓದಿರಿ.

ಪೂರ್ವ ಕಥೆ ಮತ್ತು ನಾಟಕದ ಸಾರಾಂಶ
ಸಿದ್ಧಾರ್ಥ ರಾಜ್ಯವನ್ನು ಪರಿತ್ಯಾಗ ಮಾಡಿ ಹೋಗಿ ಹತ್ತು ವರ್ಷಗಳು ಕಳೆದಿವೆ. ತಂದೆಯನ್ನೇ ಕಾಣದ ಮಗು ರಾಹುಲನಿಗೂ ಹತ್ತು ವರ್ಷಗಳಾಗಿವೆ. ಇತ್ತ ಕಪಿಲವಸ್ತುವಿನ ಅರಮನೆಯ ಅಂತಃಪುರದಲ್ಲಿ ಯಶೋಧರಾ ಒಬ್ಬಳೇ ಚಿಂತಾಮಗ್ನಳಾಗಿ ಸಿದ್ಧಾರ್ಥನ ಪಠವನ್ನು ನೋಡುತ್ತಾ ಕಣ್ಣೀರಿಡುತ್ತಾ ಕುಳಿತಿರುತ್ತಾಳೆ. ದುಃಖಿಸಲು ಕಾರಣವನ್ನು ಆಕೆಯ ಸಖಿ ಅಂಬಿಕೆ ಕೇಳಲಾಗಿ ಹಿಂದಿನ ರಾತ್ರಿಅಮಂಗಳವನ್ನು ಸೂಚಿಸುವ ಕನಸೊಂದನ್ನು ಕಂಡೆನೆಂದು ಹೇಳುತ್ತಾ, ಹತ್ತು ವರ್ಷಗಳ ಹಿಂದೆ ಇಂಥಹ ಕನಸೊಂದನ್ನು ಕಂಡು ಎಚ್ಚರವಾಗಿ ನೋಡಿದರೆ ನನ್ನ ಮನದನ್ನ ಇರದೇ ರಾಜ್ಯ ತೊರೆದು ಹೋಗಿದ್ದ. ಇಂದು ಕನಸಿನಿಂದ ಎಚ್ಚೆತ್ತು ನೋಡಿದರೆ ಮಗ ಇದ್ದಾನೆ. ಆದರೆ ಎಲ್ಲಿ ನನ್ನನ್ನು ತೊರೆದು ಹೋಗುತ್ತಾನೆಂದು ವ್ಯಾಕುಲತೆಗೆ ಒಳಗಾಗಿರುವುದಾಗಿ ತಿಳಿಸುತ್ತಾಳೆ. ಅಭ್ಯಾಸಕ್ಕೆ ಹೋಗಿದ್ದ ರಾಹುಲನು ಬಂದು ಅಮ್ಮ ತಂದೆಯನ್ನು ನಾನು ನೋಡಿಯೇ ಇಲ್ಲ, ಆತನನ್ನು ಕರೆತರಲು ನಾನು ಹೋಗುವುದಾಗಿ ತಿಳಿಸುತ್ತಾ ಇದಕ್ಕೆ ತಾತನ ಅನುಮತಿ ಪಡೆದಿರುವುದಾಗಿ ತಿಳಿಸುತ್ತಾನೆ. ಇದರಿಂದ ಆತಂಕಗೊಂಡು  ರಾಜನನ್ನು ಕರೆಯಲು ಸಖಿ ಅಂಬಿಕೆಯನ್ನು ಕಳಿಸುತ್ತಾಳೆ. ರಾಜ ಅಂತಃಪುರಕ್ಕೆ ಅಂಬಿಕೆಯೊಂದಿಗೆ  ಆಗಮಿಸುತ್ತಾನೆ.ರಾಜನು ಅರಮನೆಗೆ ಬಂದಾಗ ಯಶೋಧರೆಯು ಎದ್ದು ಬಂದು ನಮಸ್ಕರಿಸಿ, “ಬಹಳ ದಿನಗಳಿಂದ ಬೇಡುತ್ತಿದ್ದೇನೆ. ನಿಮ್ಮ ಸೋದರಿಯ ಮಗಳೆಂದು ಬಾಲ್ಯದಲ್ಲಿಯೇ ನನ್ನ ಕರೆದುಕೊಂಡು ಬಂದು ಸುಖವಾಗಿ ಬೆಳೆಸಿದ್ದೀರಿ, ಮನೆಯ ಸೊಸೆಯಾಗಿ ಮಾಡಿಕೊಂಡಿದ್ದೀರಾ, ನನ್ನ ಬಾಳನ್ನು ಬೆಳಗಿಸಿದ್ದೀರ, ನಾನು ಕನಸ್ಸಿನಲ್ಲೂ ಕಾಣದ ಸುಖವನ್ನು ಅನುಭವಿಸುವಂತೆ ಮಾಡಿದ್ದಿರ. ನಿಮ್ಮ ಐಶ್ವರ್ಯದಲ್ಲಿ ಸ್ವಲ್ಪವೂ ಇಲ್ಲ ಅನ್ನದೇ ಎಲ್ಲವನ್ನ ಕೊಟ್ಟಿದ್ದೀರ.ಈಗ ಮತ್ತೋಮ್ಮೆ ನನ್ನ ಪತಿಯನ್ನು ಕೊಟ್ಟು ನನ್ನ ರಕ್ಷಿಸಿರಿ” ಎಂದು ಕೇಳಿಕೊಳ್ಳುತ್ತಾಳೆ. ಆಗ ರಾಜನು ನಾನು ಏನು ಮಾಡಬೇಕೆಂದು ಕೇಳುತ್ತಿರುವೆ? ಎಂದಾಗ ಯಶೋಧರೆಯು “ರಾಹುಲನು ತಂದೆಯನ್ನು ಕರೆ ತರಲು ಹೋಗುತ್ತೇನೆಂದಾಗ ನೀವು ಒಪ್ಪಿಗೆ ಕೊಟ್ಟಿದ್ದಿರಂತೆ, ನಾನು ಮೊದಲೆ ನಿಮ್ಮ ಕೇಳಿಕೊಂಡು ಇದ್ದೇನೆ ನನ್ನ ಪತಿ ಇರುವ ಜಾಗಕ್ಕೆ ನಾನು ಹೋಗುತ್ತೇನೆ. ರಾಹುಲನು ಇಲ್ಲೇ ಇರಲಿ” ಎಂದು ಕೇಳುತ್ತಾಳೆ.ಆಗ ರಾಜನು “ಯಶೋಧರೆ, ರಾಹುಲನು ತನ್ನ ತಂದೆಯನ್ನು ಕರೆ ತರುತ್ತೇನೆ ಎಂದಾಗ ಕೇವಲ ತಮಾಷೆಗಾಗಿ ಆಗಬಹುದು ಎಂದೆನು. ಇಂತಹ ಕೆಲಸಕ್ಕೆ ಗುಪ್ತಚಾರರನ್ನು ಕಳುಹಿಸಬೇಕು. ಚಿಕ್ಕ ಬಾಲಕನಾದ ರಾಹುಲನನ್ನು ಯಾರಾದರೂ ಕಳುಹಿಸುತ್ತಾರ?” ಎಂದ ತಕ್ಷಣವೇ ‘ಏನು ತಾತ, ಮೊದಲು ತಂದೆಯನ್ನ ಕರೆತರಲು ಹೋಗು ಎಂದು ಹೇಳಿದ್ದವರು ಈಗ ಈ ರೀತಿ ಹೇಳುತ್ತಿದ್ದೀರ? ದೊಡ್ಡವರು ನನಗೊಂದು ರೀತಿ ತಾಯಿಗೆ ಮತ್ತೊಂದು ರೀತಿ ಹೇಳಬಹುದೇ?” ತಂದೆ ಬರದಿದ್ದರೆ ನನ್ನ ತಾಯಿ ಅಳುತ್ತಲೇ ಇರುವಳು ಅದಕ್ಕಾಗಿ ನಾನು ಹೋಗಿ ಕರೆ ತರುತ್ತೇನೆ” ಎಂದು ಹೇಳುತ್ತಾನೆ.ಯಶೋಧರೆಯ ಕನಸಿನ ಬಗ್ಗೆ ಅಂಬಿಕೆಯಿಂದ ಕೇಳಿ ತಿಳಿದ ರಾಜನು “ಯಶೋಧರೆಯ ಪತಿ ಸಿದ್ಧಾರ್ಥನು ಮನೆ ಬಿಟ್ಟು ಹೋಗಿರುವ ನೋವೇ ಸಾಕಾಗಿದೆ, ಅದರ ಜೊತೆಗೆ ಕೆಟ್ಟ ಕನಸು ಬೇರೆ ಯಶೋಧರೆಗೆ ಹಿಂಸೆ ಪಡಿಸುತ್ತಿದೆ” ಎಂದು ಹೇಳಿದನು. ಸಿದ್ಧಾರ್ಥನು ಹತ್ತು ವರ್ಷಗಳ ಹಿಂದೆ ಹೆಂಡತಿ, ಮಕ್ಕಳು, ಅರಮನೆ ಎಲ್ಲವನ್ನು ಬಿಟ್ಟು ಮಧ್ಯೆ ರಾತ್ರಿಯಲ್ಲಿ ಜ್ಞಾನ ಸಂಪಾದಿಸಲು ಹೊರಟು ಹೋಗಿದ್ದನು. ಅಂದಿನಿಂದ  ಇಂದಿನವರೆಗೂ ಯಶೋಧರೆಯು ಅರಮನೆಯಲ್ಲಿದ್ದರೂ ಕೂಡ ಸನ್ಯಾಸಿಯಂತೆ ಬದುಕುತ್ತಿದ್ದಳು. ಅಷ್ಟೆ ಅಲ್ಲ “ನಾನೂ ಸಹ ಪತಿಯಂತೆ ಸನ್ಯಾಸವನ್ನು ಸ್ಪೀಕರಿಸಿ ಪತಿಯ ಬಳಿಗೆ ಹೋಗುವೆನು. ಅವರೊಡನೆ ಸನ್ಯಾಸಿಯಂತೆಯೇ ಜೀವನ ನಡೆಸುವೆನು” ಎಂದು ಹೇಳುತ್ತಾಳೆ. ಆದ್ದರಿಂದ ರಾಜನು ಈಗ ನೀನಿರುವ ರೀತಿ ಸನ್ಯಾಸವಲ್ಲವೇ ಎಂದು ಹೇಳಿದನು. ನಿನ್ನ ದುಃಖವ ನಾನು ಕಾಣೆನೇ ? ಏಳಮ್ಮ, ಯಶೋಧರಾ ಎದ್ದು ಕುಳಿತುಕೊಂಡು ನಾನೇ ಹೋಗುವೆನು ಎಂದಾಗ ಸನ್ಯಾಸಿಯಾದವನು ಸತಿಯ ನೋಡುವ ಮಾತು ಸಂಪ್ರದಾಯಕೆ ವಿರೋಧ. ಎಂದು ರಾಜನು ಹೇಳುತ್ತಾನೆ. ಈ ದಿನವೇ ಗುಪ್ತಚಾರರನ್ನು ಕಳುಹಿಸುತ್ತೇನೆ. ಎಂದು ರಾಹಿಲನು ನಾನೇ ಹೋಗುತ್ತೇನೆ ಎಂದು ಹಠ ಹಿಡಿಯುತ್ತಾನೆ. ಯಶೋಧರೆ ಅಣ್ಣಯ್ಯ  ಮೊದಲು ಗುಪ್ತಚಾರರು ಹೋಗಿ ಅವರಿಚ್ಛೆಯನು ತಿಳಿದು ಮರಳಲಿ. ಎಂದು ಹೇಳುತ್ತಾಳೆ. ನಿಮಗೇನು ಅಣ್ಣನನು ನೋಡಿದ್ದೀರ, ನೋಡಬೇಕೆಂದಾಸೆ ಅಷ್ಟು ಬಲವಾಗಿಲ್ಲ. ನಾನವರ ನೋಡಿಲ್ಲ. ಇನ್ನೆಷ್ಟು ದಿನಕ್ಕೆ ನೋಡುವುದು? ಯಶೋಧರೆಯು ಮೊದಲು ಬೇಹಿನ ಜನರು ಹೋಗಿ ಅವರಿಚ್ಛೆಯನು ತಿಳಿದು ಮರಳಲಿ ಎಂದಾಗ ಬೇಹಿನವರನ್ನು ಕಳುಹಿಸಲು ರಾಹುಲನು ಇಷ್ಟಪಡಲಿಲ್ಲ . ಏಕೆಂದರೆ ತಾನೇ ತನ್ನ ತಂದೆಯನ್ನು ಹುಡುಕಿ ಮಾತನಾಡಿಸಿ ಅರಮನೆಗೆ ಕರೆತರಬೇಕೆಂಬುದು ರಾಹುಲನ ಆಸೆಯಾಗಿತ್ತು, ಇದನ್ನು ಮೊದಲೇ ತಿಳಿದ ರಾಜನು ಮೊಮ್ಮಗನಾದ ರಾಹುಲನಿಗೆ ಅನುಮತಿಯನ್ನು ಕೊಟ್ಟಿದ್ದನು. ಬೇಹಿನವರು ಹೋಗಿ ಬಂದಮೇಲೆ ಮತ್ತೆ ಹೋಗುವುದಕ್ಕೆ ನಾನೊಲ್ಲೆ. ನಾನೀಗಲೇ ಹೋಗಬೇಕು. ನಿಮಗೇನು ತಂದೆಯನ್ನು ನೋಡಿದ್ದಿರ,ನೋಡಬೇಕೆಂದಾಸೆ ಅಷ್ಟು  ಬಲವಾಗಿಲ್ಲ. ನಾನವರ ನೋಡಿಲ್ಲ. ಇನ್ನೆಷ್ಟು ದಿನಕೆನೋಡುವುದು. ಬೇಹಿನವರನ್ನು ಕಳುಹಿಸುವುದಾಗಿ ಹೇಳಿದಾಗ ರಾಹುಲನಿಗೆ ನಿರಾಶೆಯಾಯಿತು. ಕೊನೆಗೆ ಅವರೊಂದಿಗೆ ತಾನು ಹೋಗಿ ಬರುವುದಾಗಿ ಹಠ ಅಮ್ಮಾಜಿ, ನಿನಗೆ ಭಯ ಬೇಡಮ್ಮ, ನಾ ಮರಳಿ ಬರುವೆನು. ಎಂದು ಹೇಳುತ್ತಾನೆ. ಕನಸು ನಿಜವಾಯಿತು. ಕನಸಿನಲಿ ಕಂಡ ಹುಲಿ ನಿಜದೊಳೆದುರಿಗೆ ಬಂದು, ಕೊಡು ನಿನ್ನ ಜೀವವನು, ಎಂದು ಕೇಳುತಲಿಹುದು. ಎಂದು ಯಶೋಧರೆ ದುಃಖಿಸುವಳು.
ರಾಹುಲನು ತಾಯಿ ಮತ್ತು ತಾತನ ಅನುಮತಿಯನ್ನು ಪಡೆದು ಅಂಬಿಕೆಯ ಜೊತೆಗೆ ತನ್ನ ತಂದೆಯನ್ನು ಕರೆ ತರಲು ಹೊರಡುತ್ತಾನೆ. ಆಗ ರಾಜನು “ಯಶೋಧರೆ ಅಂಬಿಕೆಯ ಜೊತೆಯಲ್ಲಿ ರಾಹುಲನ ಕಳುಹಿಸಿದರೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಧೈರ್ಯವಾಗಿರು” ಎಂದು ರಾಜನು ಹೇಳಿದಾಗ ಬಾಲಕನು ತನ್ನ ತಂದೆಯನೋಡಬೇಕೆಂದು ಆಶಿಸಲು ಬೇಡವೆನ್ನುವುದು ಸರಿಯೇ, ಕಳುಹಿಸುವುದು ಸರಿ ಎಂದರೆ ಕಳುಹಿರಿ ಬೇಡ ಎಂದುಹೇಳುವುದಿಲ್ಲ ಎಂದು ಯಶೋಧರೆ ಹೇಳುವಳು. ರಾಹುಲನು ಅಮ್ಮಾ, ಎಷ್ಟು ಒಳ್ಳೆಯವಳಮ್ಮಾ. ಅಂಬಿಕೇ, ನಡೆ, ಹೋಗಿ ಅಣ್ಣನನು ಕರೆತರೋಣ. ತಾತಾನಾನು ಹೋಗಿ ಬರುತ್ತೇನೆ. ? ಅಮ್ಮ ನಾವು ಹೋಗಿ ಬರುತ್ತೇವೆ. ಎಂದು ಅನುಮತಿಯನ್ನು ಪಡೆದು ಹೊಡಲು ಸಿದ್ಧರಾಗುವರು. ಆಗ ಯಶೋಧರೆ ನನ್ನ ಮರೆಯದಿರಣ್ಣ. ನಿಮ್ಮ ತಂದೆ ನಮ್ಮ ಮರೆತರು, ನನ್ನ ಬದುಕೆಲ್ಲ ಬಯಲಾಯ್ತು. ಅವರು ಬಿಟ್ಟಂತೆ ನೀನೆನ್ನ ಕೈ ಬಿಡಬೇಡ. ಹೋಗಿಬಾ. ಹೋಗಿಬಾ. ಎಂದು ಹೇಳುತ್ತಾಳೆ. ಆದರೆ ನನ್ನ ಮರೆಯದಿರು ಅಂಬಿಕೆ ಎಂದು ಹೇಳಿ , ನಂತರ ಮರೆತರು ತಪ್ಪಿಲ್ಲ ಬಿಡಿ ಎಲ್ಲಾ ನನ್ನ ವಿಧಿ. ಎಂದು ವ್ಯಥೆ ಪಡುತ್ತಾಳೆ. ಆಗ ರಾಜ ನಿನ್ನ ವಿಧಿ ಕೆಟ್ಟುದೆಂದೆಣಿಸದಿರು ನಿನ್ನರಸನೀಗ ಲೋಕಕೆ ಪೂಜ್ಯನೆನಿಸಿಹನು. ರಾಜ್ಯವಾಳುವುದೆಂಬ ಕಿರಿಯ ಹಿರಿಮೆಯನು. ಜಗದ ಜೀವಗಳ ಉದ್ಧರಿಪ ಹಿರಿಹಿರಿಮೆಯನು ಅಳವಟ್ಟು, ರಾಜ ಅಧಿರಾಜ ವೃಂದಗಳಿಂದ ಓಲೈಸಿಕೊಳ್ಳುತ್ತಾ  ಚಕ್ರಾಧಿಪತಿಯಂತೆ ನಿಂದಿಹನು. ಏಕೆ ಚಿಂತಿಸುವೆ ಎಂದು ಸಮಾಧಾನ ಪಡಿಸುವನು. ಯಶೋಧರೆಯ ವಿಧಿಯ ಬಗ್ಗೆ ರಾಜನು “ವಿಧಿ ಲಿಖಿತವೆಂದು ಸಂಕಟ ಪಡಬೇಡಮ್ಮ ನಿನ್ನ ವಿಧಿ ಕೆಟ್ಟದೆಂದು ಯೋಚಿಸದಿರು, ನಿನ್ನ ಅರಸನು ಈಗ ಇಡೀ ಲೋಕಕ್ಕೆ ಪೂಜ್ಯನೆನಿಸಿದ್ದಾನೆ. ರಾಜ್ಯವನ್ನಾಳುವ ಬರಿ ಕಿರಿಯ ಹಿರಿಮೆಯನ್ನು ಬಿಟ್ಟು ಇಡೀ ಜಗತ್ತಿನ ಚಕ್ರವರ್ತಿಯಾಗಿ ಮೆರೆಯುತ್ತಿದ್ದಾನೆ. ಆದ್ದರಿಂದ ಚಿಂತಿಸಬೇಡ. ಹತ್ತು ವರ್ಷಗಳ ನಿಮ್ಮ ತಪಸ್ಸು ಖಂಡಿತ ವ್ಯರ್ಥವಾಗದು. ಯಜ್ಞ ಯಗಾದಿಗಳಲ್ಲಿ ಪುರೋಹಿತರು ಹೇಳುವ ಮಂತ್ರದಿಂದ ದೇವರೇ ಧರೆಗಿಳಿದಂತೆ ನಮ್ಮ ಈ ಬಾಲಕ ತನ್ನ ತಂದೆಯನ್ನು ಖಂಡಿತ ಕರೆತರುವನು. ಚಿಂತಿಸಬೇಡ” ಎಂದು ಹೇಳಿದನು. ರಾಹುಲನು ತಂದೆಯನ್ನು
ಕರೆತರಲು ಹೊರಡುವನು

ಅಭ್ಯಾಸ

ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ಯಶೋಧರೆ ಮತ್ತೊಮ್ಮೆ ಯಾರನ್ನು ನೀಡಬೇಕೆಂದು ರಾಜನಲ್ಲಿ ಬೇಡುತ್ತಾಳೆ?
ಉತ್ತರ :
ಯಶೋಧರೆ ಮತ್ತೊಮ್ಮೆ ಪತಿಯನ್ನು ತನಗೆ ನೀಡಬೇಕೆಂದು ರಾಜನಲ್ಲಿ ಬೇಡುತ್ತಾಳೆ.

2. ತಂದೆಯನ್ನು ಕರೆತರಲು ಹೋಗುವೆನೆಂದು ಹೇಳಿದವರಾರು?
ಉತ್ತರ :
ತಂದೆಯನ್ನು ಕರೆತರಲು ರಾಹುಲ ಹೋಗುವೆನೆಂದು ಹೇಳಿದನು.

3. ರಾಜನಿಗೆ ಕನಸಿನ ವಿಚಾರವನ್ನು ತಿಳಿಸಿದವರಾರು?
ಉತ್ತರ :
ರಾಜನಿಗೆ ಕನಸಿನ ವಿಚಾರವನ್ನು ಹೇಳಿದವಳು ಅಂಬಿಕೆ.

4. ಸಂಪ್ರದಾಯಕ್ಕೆ ವಿರುದ್ಧವಾದದ್ದು ಯಾವುದು?
ಉತ್ತರ :
ಸನ್ಯಾಸಿಯಾದವನು ಸತಿಯನ್ನು  ನೋಡುವುದು, ಮಾತನಾಡುವುದು ಸಂಪ್ರದಾಯಕ್ಕೆ ವಿರೋಧವಾದದ್ದು.

5. ಈಗ ನೀನಿರುವ ಸ್ಥಿತಿ ಯಾವುದೆಂದು ರಾಜ ಹೇಳುತ್ತಾನೆ?
ಉತ್ತರ :
“ಈಗ ನೀನಿರುವ ಸ್ಥಿತಿ ಸನ್ಯಾಸಿಯ ಸ್ಥಿತಿಯೇ” ಎಂದು ರಾಜ ಹೇಳುತ್ತಾನೆ.

ಆ. ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯದಲ್ಲಿ ಉತ್ತರಿಸಿ.


1. ರಾಜನನ್ನು ಪೀಠದಲ್ಲಿ ಕುಳ್ಳಿರಿಸಿ ಯಶೋಧರೆ ಏನೆಂದು ವಿನಂತಿಸುತ್ತಾಳೆ?
ಉತ್ತರ :
ರಾಜನನ್ನು ಪೀಠದಲ್ಲಿ ಕುಳ್ಳಿರಿಸಿ ಯಶೋಧರೆ “ಬಹಳ ದಿನಗಳಿಂದ ಬೇಡುತ್ತಿದ್ದೇನೆ. ನಿಮ್ಮ ಸೋದರಿಯ ಮಗಳೆಂದು ಬಾಲ್ಯದಲ್ಲಿಯೇ ನನ್ನ ಕರೆದುಕೊಂಡು ಬಂದು ಸುಖವಾಗಿ ಬೆಳೆಸಿದ್ದೀರಿ, ಮನೆಯ ಸೊಸೆಯಾಗಿ ಮಾಡಿಕೊಂಡಿದ್ದೀರಾ, ನನ್ನ ಬಾಳನ್ನು ಬೆಳಗಿಸಿದ್ದೀರ, ನಾನು ಕನಸ್ಸಿನಲ್ಲೂ ಕಾಣದ ಸುಖವನ್ನುಅನುಭವಿಸುವಂತೆ ಮಾಡಿದ್ದಿರ. ನಿಮ್ಮ ಐಶ್ವರ್ಯದಲ್ಲಿ ಸ್ವಲ್ಪವೂ ಇಲ್ಲ ಅನ್ನದೇ ಎಲ್ಲವನ್ನೂ ಕೊಟ್ಟಿದ್ದೀರ. ಈಗ ಮತ್ತೋಮ್ಮೆ ನನ್ನ ಪತಿಯನ್ನು ಕೊಟ್ಟು  ನನ್ನ ರಕ್ಷಿಸಿರಿ” ಎಂದು ವಿನಂತಿಸುತ್ತಾಳೆ.

2. ಯಶೋಧರೆ ಮಂಡಿಯೂರಿ ನಮಸ್ಕರಿಸುತ್ತಾ ಏನು ಹೇಳುತ್ತಾಳೆ?
ಉತ್ತರ :
ಯಶೋಧರೆಯ ಕನಸಿನ ಬಗ್ಗೆ ಅಂಬಿಕೆಯಿಂದ  ಕೇಳಿ ತಿಳಿದ ರಾಜನು “ಯಶೋಧರೆಯ ಪತಿ ಸಿದ್ಧಾರ್ಥನು ಮನೆ ಬಿಟ್ಟು  ಹೋಗಿರುವ ನೋವೇ ಸಾಕಾಗಿದೆ, ಅದರ ಜೊತೆಗೆ ಕೆಟ್ಟ ಕನಸು ಬೇರೆ ಯಶೋಧರೆಗೆ ಹಿಂಸೆ ಪಡಿಸುತ್ತಿದೆ” ಎಂದು ಹೇಳಿದನು. ಇಂದು ಇರುಳಾಗುತ್ತಿದೆ ಕನಸಿನ ಮೊಸಳೆ ಹಿಡಿದು ನನಗೆ ಇನ್ನೂ ಯಾವ ನೋವು ಕೊಡುತ್ತದೆಯೋ! ಇನ್ನೆನಿತು ತೊಳಲಬೇಕೋ, ಭಯದಿಂದ ನನ್ನ ಚೇತನಗಳೆಲ್ಲ ಕಲಕಿಹೋಗಿವೆ. ನನ್ನನುದ್ಧರಿಸಬೇಕು. ಎಂದು ಮಂಡಿಯೂರಿ ನಮಸ್ಕರಿಸುವಳು .

3. ರಾಜನು ಈಗ ನೀನಿರುವ ರೀತಿ ಸನ್ಯಾಸವಲ್ಲವೆ ಎನ್ನಲು ಕಾರಣವೇನು?
ಉತ್ತರ :
ಸಿದ್ಧಾರ್ಥನು ಹತ್ತು ವರ್ಷಗಳ ಹಿಂದೆ ಹೆಂಡತಿ, ಮಕ್ಕಳು, ಅರಮನೆ ಎಲ್ಲವನ್ನೂ ಬಿಟ್ಟು ಮಧ್ಯೆ ರಾತ್ರಿಯಲ್ಲಿ ಜ್ಞಾನ ಸಂಪಾದಿಸಲು ಹೊರಟು ಹೋಗಿದ್ದನು. ಅಂದಿನಿಂದ  ಇಂದಿನವರೆಗೂ ಯಶೋಧರೆಯು ಅರಮನೆಯಲ್ಲಿದ್ದರೂ ಕೂಡ ಸನ್ಯಾಸಿಯಂತೆ ಬದುಕುತ್ತಿದ್ದಳು. ಅಷ್ಟೆ ಅಲ್ಲ “ನಾನೂ ಸಹ ಪತಿಯಂತೆ ಸನ್ಯಾಸವನ್ನು ಸ್ಪೀಕರಿಸಿ ಪತಿಯ ಬಳಿಗೆ ಹೋಗುವೆನು. ಅವರೊಡನೆ ಸನ್ಯಾಸಿಯಂತೆಯೇ ಜೀವನ ನಡೆಸುವೆನು”ಎಂದು ಹೇಳುತ್ತಾಳೆ . ಆದ್ದರಿಂದ ರಾಜನು ಈಗ ನೀನಿರುವ ರೀತಿ ಸನ್ಯಾಸವಲ್ಲವೇ ಎಂದು ಹೇಳಿದನು.

4. ಯಶೋಧರೆಯ ಆಂತರ್ಯದಲ್ಲಿರುವ ಸಂದೇಹವೇನು?
ಉತ್ತರ :
ರಾಹುಲನು ‘ನಾನು ಹೋಗಿ ನನ್ನ ತಂದೆಯನ್ನು ಕರೆ ತರುತ್ತೇನೆ’ ಎಂದು ತಾತನ ಅಪ್ಪಣೆ ಪಡೆದಿರುವುದಾಗಿಹೇಳಿದಾಗ ಯಶೋಧರೆಗೆ ಗಾಬರಿಯಾಯಿತು. ಹತ್ತು ವರ್ಷಗಳ ಹಿಂದೆ ಪತಿ ಬಿಟ್ಟೋಹೋದಂತೆ ಎಲ್ಲಿ ತನ್ನ ಮಗನು ತನ್ನನ್ನು ಬಿಟ್ಟು ಹೊರಟು ಹೋಗುವನು. “ನನ್ನ ಪತಿಯನ್ನುನೋಡುವಪುಣ್ಯವು ನನ್ನ ಕಣ್ಣುಗಳಿಗೆ ಇದೆಯೋ ಇಲ್ಲವೋ ತಿಳಿದಿಲ್ಲ, ಈಗ ಮಗನು ತಂದೆಯನ್ನು ನೋಡಬೇಕೆಂದು ಬಯಸಲು ಬೇಡ ಎನ್ನುವುದು ಸರಿಯೇ?” ಎಂಬ ಸಂದೇಹ ಯಶೋಧರೆಯ ಆಂತರ್ಯದಲ್ಲಿ ಮೂಡಿತು.

ಇ. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು-ಐದು ವಾಕ್ಯದಲ್ಲಿ ಉತ್ತರಿಸಿ.

1. ಬೇಹಿನವರನ್ನು ಕಳಿಸುವ ವಿಚಾರದಲ್ಲಿ ರಾಹುಲನ ಅಭಿಪ್ರಾಯವೇನು?
ಉತ್ತರ :
ಯಶೋಧರೆಯು ಮೊದಲು ಬೇಹಿನ ಜನರು ಹೋಗಿ ಅವರಿಚ್ಛೆಯನು ತಿಳಿದು ಮರಳಲಿ ಎಂದಾಗ ಬೇಹಿನವರನ್ನು ಕಳುಹಿಸಲು ರಾಹುಲನು ಇಷ್ಟಪಡಲಿಲ್ಲ. ಏಕೆಂದರೆ ತಾನೇ ತನ್ನ ತಂದೆಯನ್ನು ಹುಡುಕಿ ಮಾತನಾಡಿಸಿ ಅರಮನೆಗೆ ಕರೆತರಬೇಕೆಂಬುದು ರಾಹುಲನ ಆಸೆಯಾಗಿತ್ತು, ಇದನ್ನು ಮೊದಲೇ ತಿಳಿದ ರಾಜನು ಮೊಮ್ಮಗನಾದ ರಾಹುಲನಿಗೆ ಅನುಮಟೀಯನ್ನು  ಕೊಟ್ಟಿದ್ದನು. ಬೇಹಿನವರು ಹೋಗಿ ಬಂದಮೇಲೆ ಮತ್ತೆ ಹೋಗುವುದಕ್ಕೆ ನಾನೊಲ್ಲೆ. ನಾನೀಗಲೇ ಹೋಗಬೇಕು. ನಿಮಗೇನು ತಂದೆಯನ್ನು ನೋಡಿದ್ದಿರ, ನೋಡಬೇಕೆಂದಾಸೆ ಅಷ್ಟು  ಬಲವಾಗಿಲ್ಲ. ನಾನವರ ನೋಡಿಲ್ಲ. ಇನ್ನೆಷ್ಟು ದಿನಕೆ ನೋಡುವುದು. ಬೇಹಿನವರನ್ನು ಕಳುಹಿಸುವುದಾಗಿ ಹೇಳಿದಾಗ ರಾಹುಲನಿಗೆ ನಿರಾಶೆಯಾಯಿತು. ಕೊನೆಗೆ ಅವರೊಂದಿಗೆ ತಾನು ಹೋಗಿ ಬರುವುದಾಗಿ ಹಠ ಹಿಡಿದನು.

2. ಯಶೋಧರೆಯ ವಿಧಿಯ ಬಗ್ಗೆ ರಾಜನು ಏನೆಂದು ಹೇಳಿದನು?
ಉತ್ತರ :
ಯಶೋಧರೆಯ ವಿಧಿಯ ಬಗ್ಗೆ ರಾಜನು “ವಿಧಿ ಲಿಖಿತವೆಂದು ಸಂಕಟ ಪಡಬೇಡಮ್ಮ ನಿನ್ನ ವಿಧಿ ಕೆಟ್ಟದೆಂದು ಯೋಚಿಸದಿರು, ನಿನ್ನ ಅರಸನು ಈಗ ಇಡೀ ಲೋಕಕ್ಕೆ ಪೂಜ್ಯನೆನಿಸಿದ್ದಾನೆ. ರಾಜ್ಯವನ್ನಾಳುವ ಬರಿ ಕಿರಿಯ ಹಿರಿಮೆಯನ್ನು ಬಿಟ್ಟು ಇಡೀ ಜಗತ್ತಿನ ಚಕ್ರವರ್ತಿಯಾಗಿ ಮೆರೆಯುತ್ತಿದ್ದಾನೆ. ಆದ್ದರಿಂದ ಚಿಂತಿಸಬೇಡ. ಹತ್ತು ವರ್ಷಗಳ ನಿಮ್ಮ ತಪಸ್ಸು ಖಂಡಿತ ವ್ಯರ್ಥವಾಗದು. ಯಜ್ಞ ಯಗಾದಿಗಳಲ್ಲಿ ಪುರೋಹಿತರು ಹೇಳುವ ಮಂತ್ರದಿಂದ  ದೇವರೇ ಧರೆಗಿಳಿದಂತೆ ನಮ್ಮ ಈ ಬಾಲಕ ತನ್ನ ತಂದೆಯನ್ನು ಖಂಡಿತ ಕರೆತರುವನು. ಚಿಂತಿಸಬೇಡ” ಎಂದು ಹೇಳಿದನು. ಈ. ಕೆಳಗಿನ ಹೇಳಿಕೆಗಳನ್ನು ಯಾರು ಯಾರಿಗೆ ಯಾವ ಸಂದರ್ಭದಲ್ಲಿ ಹೇಳಿದರು.

1. “ಸೋದರಿಯ ಸುತೆಯೆಂದು  ಎಳೆತನದಲೇ ನನ್ನ ಕರೆತಂದು ಸಾಕಿದಿರಿ”
ಆಯ್ಕೆ :
ಈ ವಾಕ್ಯವನ್ನು ‘ಮಾಸ್ತಿ ವೆಂಕಟೇಶ್ ಅಯ್ಯಂಗಾರ್’ ಅವರು ರಚಿಸಿರುವ ‘ಯಶೋಧರೆ’
ನಾಟಕದಿಂದ ಆಯ್ದ ‘ಯಶೋಧರೆ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಈ ವಾಕ್ಯವನ್ನು ಯಶೋಧರೆ ತನ್ನ ಮಾವನವರಾದ ಶುದ್ಧೋದನ ರಾಜನಿಗೆ ಹೇಳಿದಳು.
ರಾಜನು ಅರಮನೆಗೆ ಬಂದಾಗ ಯಶೋಧರೆಯು ಎದ್ದು ಬಂದು ನಮಸ್ಕರಿಸಿ, “ಬಹಳ ದಿನಗಳಿಂದ ಬೇಡುತ್ತಿದ್ದೇನೆ. ನಿಮ್ಮ ಸೋದರಿಯ ಮಗಳೆಂದು ಬಾಲ್ಯದಲ್ಲಿಯೇ ನನ್ನ ಕರೆದುಕೊಂಡು ಬಂದು ಸುಖವಾಗಿ ಬೆಳೆಸಿದ್ದೀರಿ, ಮನೆಯ ಸೊಸೆಯಾಗಿ ಮಾಡಿಕೊಂಡಿದ್ದೀರಾ, ನನ್ನ ಬಾಳನ್ನು ಬೆಳಗಿಸಿದ್ದೀರ” ಎಂದು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ : ಯಶೋಧರೆಯು ಶುದ್ಧೋದನನ ಸಹೋದರಿಯ ಮಗಳು ಎಂದು ಪ್ರೀತಿಯಿಂದ ತಮ್ಮ ಅರಮನೆಗೆ ಕರೆದು  ತಂದು  ಎಷ್ಟು ಪ್ರೀತಿಯಿಂದ ಸಾಕಿ ಸಲುಹಿದನು ಎಂಬುದು ಸ್ವಾರಸ್ಯಕರವಾಗಿದೆ.

2. “ಅಮ್ಮಾಜಿ, ನಿನಗೆ ಭಯ ಬೇಡಮ್ಮ ನಾ ಮರಳಿ ಬಹೆನಮ್ಮ”
ಆಯ್ಕೆ :
ಈ ವಾಕ್ಯವನ್ನು ‘ಮಾಸ್ತಿ ವೆಂಕಟೇಶ್ ಅಯ್ಯಂಗಾರ್’ ಅವರು ರಚಿಸಿರುವ ‘ಯಶೋಧರೆ’ ನಾಟಕದಿಂದ ಆಯ್ದ ‘ಯಶೋಧರೆ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ರಾಹುಲನು ತನ್ನ ತಂದೆಯನ್ನು ಹುಡುಕಿ ಕರೆ ತರುವೆನೆಂದು ಹೇಳುತ್ತಾನೆ. ಆಗ ಯಶೋಧಗೆ ತಂದೆಯ ಬಳಿಗೆ ಮಗನನ್ನು ಕಳುಹಿಸಲು ಭಯಗೊಂಡಳು ಸಂದರ್ಭದಲ್ಲಿ ರಾಹುಲ ತನ್ನ ತಾಯಿ ಯಶೋಧರೆಗೆ ಹೇಳುತ್ತಾನೆ.
ಸ್ವಾರಸ್ಯ : ಯಶೋಧರೆಯು ತಂದೆಯ ಬಳಿಗೆ ಹೋದ ಮಗ ಮತ್ತೇ ಮರಳಿ ಬರುವನೋ ಇಲ್ಲವೋ ಎಂಬ ಸಂದೇಹ, ರಾಹುಲ್ ತಂದೆಯನ್ನು ಕರೆದುಕೊಂಡು ಖಂಡಿತ ಹಿಂತಿರುಗಿ ಬರುವುದಾಗಿ ಭರವಸೆ ಕೊಡುವುದು ಸ್ವಾರಸ್ಯಕರವಾಗಿದೆ.

3. “ನಿನ್ನ ವಿಧಿ ಕೆಟ್ಟುದೆಂದೆಣಿಸದಿರು ಅಮ್ಮಾಜಿ”
ಆಯ್ಕೆ :
ಈ ವಾಕ್ಯವನ್ನು ‘ಮಾಸ್ತಿ ವೆಂಕಟೇಶ್ ಅಯ್ಯಂಗಾರ್’ ಅವರು ರಚಿಸಿರುವ ‘ಯಶೋಧರೆ’
ನಾಟಕದಿಂದ ಆಯ್ದ ‘ಯಶೋಧರೆ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಈ ಮಾತನ್ನು ಯಶೋಧರೆ ರಾಜನಿಗೆ ಹೇಳಿದಳು. ಯಶೋಧರೆಯು ತನ್ನ ವಿಧಿಯೇ ಕೆಟ್ಟದಾಗಿದೆ ಎಂದು ರಾಜನಿಗೆ ಹೇಳಿದಾಗ ಸೊಸೆ ಯಶೋಧದರಯನ್ನು ಸಮಾಧಾನ ಪಡಿಸುವಾಗ ಸಂದರ್ಭದಲ್ಲಿ ಈ ಮಾತನ್ನು ಹೇಳಲಾಗಿದೆ.
ಸ್ವಾರಸ್ಯ : ನಿನ್ನರಸನು ನಿನ್ನಿಂದ ದೂರವಿದ್ದರೂ ಲೋಕ ಪೂಜಿತನಾಗಿದ್ದಾನೆ. ಅದಕ್ಕಾಗಿ ಹೆಮ್ಮೆಪಡಬೇಕು ಎಂದು ಸಮಾಧಾನ ಪಡಿಸುವುದು, ಗೌತಮ ಬುದ್ಧನು ಶ್ರೇಷ್ಠತೆಯನ್ನು ತಿಳಿಸುವುದು ಸ್ವಾರಸ್ಯವಾಗಿದೆ.

4. “ನಿದ್ದೆಯಲಿ ಮುಳುಗುವನ್ನಾವ ಕನಸಿನ ಮೊಸಳೆ ಹಿಡಿಯುವುದೋ”

ಆಯ್ಕೆ : ಈ ವಾಕ್ಯವನ್ನು ‘ಮಾಸ್ತಿ ವೆಂಕಟೇಶ್ ಅಯ್ಯಂಗಾರ್’ ಅವರು ರಚಿಸಿರುವ ‘ಯಶೋಧರೆ’ ನಾಟಕದಿಂದ ಆಯ್ದ ‘ಯಶೋಧರೆ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಈ ಮಾತನ್ನು ಯಶೋಧರೆ ರಾಜನಿಗೆ ಹೇಳುತ್ತಾಳೆ. ಇಂದು ಇರುಳಾಗುತ್ತಿದೆ ಕನಸಿನ ಮೊಸಳೆ ಹಿಡಿದು ನನಗೆ ಇನ್ನೂ ಯಾವ ನೋವು ಕೊಡುತ್ತದೆಯೋ! ಇನ್ನೆನಿತು ತೊಳಲಬೇಕೋ, ಭಯದಿಂದ ನನ್ನ ಚೇತನಗಳೆಲ್ಲ ಕಲಕಿಹೋಗಿವೆ. ನನ್ನನುದ್ಧರಿಸಬೇಕು. ಎಂದು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ : ಯಶೋಧರೆಯು ಇದೊಂದು ಕೆಟ್ಟ ಕನಸು, ಇದು ನಿದ್ದೆಯನ್ನು  ಹಾಳು ಮಾಡುವುದೇ ಅಲ್ಲದೆ ಮನಸ್ಸನ್ನು ಗಾಬರಿಗೊಳಿಸುವುದು. ಎಂದು ಕನಸಿಗೆ ಭಯಪಡುವುದು ಸ್ವಾರಸ್ಯಕರವಾಗಿದೆ .

ಉ. ಹೊಂದಿಸಿ ಬರೆಯಿರಿ.

1.  ಯಶೋಧರೆ       –   ಯುವರಾಣಿ
2. ಶುದ್ಧೋದನ        –  ರಾಜ
3. ಅಂಬಿಕೆ               –  ಸಖಿ
4. ರಾಹುಲ               –  ಬುದ್ಧನ ಮಗ
5. ಸಿದ್ಧಾರ್ಥ             –  ಗೌತಮ ಬುದ್ಧ

ಊ. ಈ ಕೆಳಗಿನ ಪದಗಳಿಗೆ ತದ್ಭವ ಪದಗಳನ್ನು ಬರೆಯಿರಿ.
ವಿನೋದ      –     ಬಿನೋದ, ಬಿನದ
ದುಃಖ           –       ದುಕ್ಕೆ
ರಾಜ             –      ರಾಯ
ಕಾರ್ಯ        –      ಕಜ್ಜ

ಋ. ಈ ಪದಗಳನ್ನು ಬಿಡಿಸಿ ಸಂಧಿಯನ್ನು ಹೆಸರಿಸಿ.
ನಿನ್ನಾಣ್ಮ  =   ನಿನ್ನ  +   ಆಣ್ಮ   =  ಲೋಪ ಸಂಧಿ
ಚಕ್ರಾಧಿಪತಿ =   ಚಕ್ರ  +  ಅಧಿಪತಿ  =  ಸವರ್ಣದೀರ್ಘ ಸಂಧಿ
ಹರಕೆಯನು = ಹರಕೆ  +  ಅನು  =  ಆಗಮ ಸಂಧಿ
ಪತಿಯೊಡನೆ = ಪತಿ   +  ಒಡನೆ  =  ಆಗಮ ಸಂಧಿ
ಇಂದಳುತ   =  ಇಂದು +  ಆಳುತ  =  ಲೋಪ ಸಂದಿ

ಅಭ್ಯಾಸ ಚಟುವಟಿಕೆ

ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ
1. ಲಿಂಗದ ವಿಧಗಳಾವುವು?
ಉತ್ತರ :
ಲಿಂಗದ ವಿಧಗಳು
 1. ಪುಲ್ಲಿಂಗ
2. ಸ್ತ್ರೀಲಿಂಗ
3. ನಪುಂಸಕಲಿಂಗ
2. ಬಹುವಚನವನ್ನು ನಿದರ್ಶನದ ಮೂಲಕ ವಿವರಿಸಿ.
ಉತ್ತರ : ಒಂದಕ್ಕಿಂತ ಹೆಚ್ಚು  ಇರುವ ವಸ್ತು ಅಥವಾ ವ್ಯಕ್ತಿಗಳನ್ನು ಸೂಚಿಸುವ ಪದಗಳೇ ಬಹುವಚನ.ಏಕವಚನದ ನಾಮಪ್ರಕೃತಿಗಳಿಗೆ ಅರು, ವು, ಗಳು, ಅಂದಿರು ಇತ್ಯಾದಿ ಬಹುವಚನ ಸೂಚಕಗಳು ಸೇರಿ ಬಹುವಚನ ಪದಗಳಾಗುತ್ತವೆ.
ಉದಾ : ರಾಜ + ಅರು > ರಾಜರು
              ನೀನು + ವು > ನೀವು
              ಮರ + ಗಳು > ಮರಗಳು
               ಅಣ್ಣ + ಅಂದಿರು > ಅಣ್ಣಂದಿರು
               ರಾಣಿ + ಅರು > ರಾಣಿಯರು

3. ವಾಕ್ಯ ಎಂದರೇನು?
ಉತ್ತರ : ವಾಕ್ಯ ಎಂದರೆ ಕರ್ತೃ, ಕರ್ಮ, ಕ್ರಿಯಾಪದಗಳಿಂದ ವ್ಯವಸ್ಥಿತವಾಗಿ ಕೂಡಿರುವ ಪದಸಮೂಹ. ಪ್ರಾಯೋಗಿಕ ಭಾಷಾಭ್ಯಾಸ

1. ಕೊಟ್ಟಿರುವ ಪದಗಳನ್ನು ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕ ಲಿಂಗಗಳಾಗಿ ವರ್ಗೀಕರಿಸಿ.
ರಾಹುಲ        ಯಶೋಧರೆ       ಸಖಿ ಅಮ್ಮಾಜಿ
ರಾಜ              ವಿಧಿ                   ಅಂಬಿಕೆ ಲೋಕ
ಅರಮನೆ      ತಂದೆ                 ಸನ್ಯಾಸ ಸತಿ
ಹುಲಿ           ಕನಸು
1. ಪುಲ್ಲಿಂಗ :  ರಾಹುಲ,   ರಾಜ,   ತಂದೆ
2. ಸ್ತ್ರೀಲಿಂಗ : ಯಶೋಧರೆ,  ಅಂಬಿಕೆ,  ಸತಿ , ಅಮ್ಮಾಜಿ,
3. ನಪುಂಸಕ ಲಿಂಗ : ವಿಧಿ,  ಲೋಕ,  ಅರಮನೆ,  ಸನ್ಯಾಸ,  ಹುಲಿ ,  ಕನಸು

2. ಕೊಟ್ಟಿರುವ ಪದಗಳ ಬಹುವಚನ ರೂಪ ಬರೆಯಿರಿ.
ನಾನು  –  ನಾವು               ಅಮ್ಮ –  ಅಮ್ಮಂದಿರು
ಕಿರಿಯ  –  ಕಿರಿಯರು        ರಾಜ   –  ರಾಜರು
ನನ್ನ –  ನಮ್ಮ                ಲೋಕ – ಲೋಕಗಳು
ಬಾಲಕ  –  ಬಾಲಕರು       ಮಗು  –  ಮಕ್ಕಳು
ತಾಯಿ   –  ತಾಯಂದಿರು    ದೇವ  – ದೇವರು
ಸ್ವರ –   ಸ್ವರಗಳು              ತಾತ –    ತಾತಂದಿರು
ನೀನು  –  ನೀವು

3. ಕೊಟ್ಟಿರುವ ವಾಕ್ಯಗಳಲ್ಲಿರುವ ಕರ್ಮ, ಕ್ರಿಯಾ ಹಾಗೂ ಕರ್ತೃಪದಗಳನ್ನು ಆರಿಸಿ ಬರೆಯಿರಿ.

1. ಅಮ್ಮ ಅನ್ನ ಣ್ಣನನ್ನು ಕರೆಯುವೆನು.
2 ಸನ್ಯಾಸವನು ಕೊಂಡು ಪತಿಯನ್ನು ಸೇರುವೆನು.
3. ಸಿದ್ಧಾರ್ಥನು ಕರೆಯನ್ನು ಕೇಳಿಸಿಕೊಳ್ಳಲಿಲ್ಲ .
 
ಕತೃಪದ     ಕರ್ಮಪದ     ಕ್ರಿಯಾಪದ
ಅಮ್ಮ     ಅಣ್ಣನನ್ನು    ಕರೆಯುವೆನು
 ಸನ್ಯಾಸವನ್ನು      ,ಪತಿಯನ್ನು       ಸೇವೇನು
ಸಿದ್ದಾರ್ಥ      ಕರೆಯನ್ನು    ಕೇಳಿಸಿಕೊಳ್ಳಲಿಲ್ಲ


You Might Like

Post a Comment

0 Comments