Recent Posts

ಬಿಡುಗಡೆಯ ಹಾಡು - ೭ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 
ಬಿಡುಗಡೆಯ ಹಾಡು

ಅ ) ಕೊಟ್ಟಿರುವ ಒಂದು ವಾಕ್ಯದಲ್ಲಿ ಉತ್ತರಿಸಿ .
 
1 . ಪಂಜರದ ಹಕ್ಕಿ ಯಾವುದರ ಸಂಕೇತವಾಗಿದೆ ?
ಉತ್ತರ : ಪಂಜರದ ಹಕ್ಕಿ ಭಾರತೀಯರ ( ಬಂಧನದಲ್ಲಿರುವವರ ) ಸಂಕೇತವಾಗಿದೆ .

2 . ಹಂಗಿನ ಅರಮನೆಯಲ್ಲಿ ಹಕ್ಕಿ ಹೇಗೆ ನರಳುತ್ತಿದೆ ?
ಉತ್ತರ : ಹಂಗಿನರಮನೆಯಲ್ಲಿ ರೆಕ್ಕೆಗಳ ಬಿಗಿ ಹಿಡಿದು ನರಳುತ್ತಿದೆ .  

3 . ಮೃಗರಾಜ ಏನೆಂದು ಗೊಣಗುತ್ತಿದೆ ?  
ಉತ್ತರ : ಮೃಗರಾಜ ಇನ್ನು ಈ ಬಂಧನ ಸಾಕು ಎಂದು ಗೊಣಗುತ್ತಿದೆ .

4 . ಯಾವುದು ರವಿಕಿರಣಗಳನ್ನು ಸೆರೆಯೊಳಗೆ ಅಡಗಿಸಿಟ್ಟುಕೊಂಡಿದೆ ?
ಉತ್ತರ : ಕಾರಿರುಳು ತನ್ನ ಸೆರೆಯೊಳಗೆ ರವಿಕಿರಣಗಳನ್ನು ಅಡಗಿಸಿಟ್ಟುಕೊಂಡಿದೆ .

5 . ನಮ್ಮ ಗುಡಿಯು ( ಬಾವುಟ ) ಎಷ್ಟು ಬಣ್ಣಗಳನ್ನು ಹೊಂದಿದೆ ?
ಉತ್ತರ : ನಮ್ಮ ಬಾವುಟವು ಮೂರು ಬಣ್ಣಗಳನ್ನು ಹೊಂದಿದೆ .

ಆ ) ಕೊಟ್ಟಿರುವ ಎರಡು – ಮುಾರು ವಾಕ್ಯಗಳಲ್ಲಿ

1 . ಪಂಜರದಲ್ಲಿ ನರಳುತ್ತಿರುವ ಹಕ್ಕಿ ಹರ್ಷದಲ್ಲಿ ವಿಹರಿಸಲು ಏನು ಮಾಡಬೇಕು ?
 ಉತ್ತರ : ಪಂಜರದಲ್ಲಿ ನರಳುತ್ತಿರುವ ಹಕ್ಕಿ  ಪಂಜರದ ಬಾಗಿಲನ್ನು ಮುರಿದು ಹೆಣೆದ ಬಂಧನದಿಂದ ಮುಕ್ತಿ ಹೊಂದುತ್ತದೆ . ಬಾನಾಡಿಯಾಗಿ ( ಪಕ್ಷಿಯಾಗಿ ) ಆಕಾಶದಲ್ಲಿ ವಿಹರಿಸುತ್ತಾ ಹರ್ಪಿಸಲಿ ಎಂದು ಕವಿ ಹಾರೈಸುತ್ತಾರೆ .

2 . ತಿಳಿನೀರ ಮಳೆ ಏಕೆ ಸುರಿಯಬೇಕು ?
 ಉತ್ತರ : ಕಾರಿರುಳಿನಿಂದ ಜಡಗೊಂಡ ಮೈ ಹಾಗೂ ಮನಸ್ಸುಗಳು ತನ್ನ ಮಲಿನತೆಯನ್ನು ಕಳೆದುಕೊಳ್ಳಲು ತಿಳಿನೀರ ಮಳೆ ಸುರಿಯಬೇಕು . ಈ ರೀತಿ ಸುರಿದ ಮಳೆಯಿಂದ ಕೊಳಕು ಮಾಯವಾಗುತ್ತದೆ . ಒಳ ಹೊರಗೆ ಶುಚಿಯಾಗಬೇಕಾದರೆ ತಿಳಿ ನೀರ ಮಳೆ ಸುರಿಯಬೇಕಾಗುತ್ತದೆ .

3 . ಕಡಲುಗಳ ರಾಣಿಗೆ ಇನ್ನು ಉಳಿಗಾಲವಿಲ್ಲವೇಕೆ ?
ಉತ್ತರ : ಶತ ಶತಮಾನಗಳಿಂದ ಮೆರೆದ ಕಡಲುಗಳ ರಾಣಿಗೆ ಇನ್ನು ಮುಂದೆ ಉಳಿಗಾಲವಿಲ್ಲ ಏಕೆಂದರೆ ಭಾರತೀಯರಲ್ಲಿ ಇಂದು ಐಕ್ಯತೆಯಿದೆ . ಅವರೆಲ್ಲ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸಿಡಿಲ ಹೋರಾಟ ಮಾಡುತ್ತಿದ್ದಾರೆ . ಅದೂ ತಾಯಿ ಭಾರತೀಯ ಮೇಲೆ ಆಣೆ ಹಾಕಿ & ಬ್ರಿಟಿಷರನ್ನು ನಮ್ಮ ದೇಶದಿಂದ ತೊಲಗಿಸಿ ಧೈಯದಿಂದ ಹೋರಾಡುತ್ತಿರುವುದರಿಂದ ಕಡಲ ರಾಣಿಗೆ ಉಳಿಗಾಲವಿಲ್ಲ .

4 . ಒಕ್ಕೊರಲ ಹಾಡನ್ನು ಬಯಸುತ್ತಾನೆ ? ವೆ ಎಂಬ ಹೇಗೆ ಹಾಡಬೇಕೆಂದು ಕವಿ – ಸರಿ
ಉತ್ತರ : ಜಾತಿ ಮನೋವುಗಳ ಬೇಧವಿಲ್ಲದೆ ನಾವೆಲ್ಲಾ ಒಂದೇ ಎಂಬ ಮನೋಭಾವದಿಂದ ಮನುಜಮತವನ್ನು ಎತ್ತಿ ಹಿಡಿದಿದ್ದೇವೆ . ನಮ್ಮ ಮೂರು ಬಣ್ಣದ ಬಾವುಟವನ್ನು ಹಾರಿಸುತ್ತಾ ಸರ್ವರಿಗೂ ನಾವು ಸಮ ಎಂದು ಮನದುಂಬಿ ದನಿಯೆತ್ತಿ ಒಕ್ಕೊರಲ ಹಾಡನ್ನು ಹಾಡಬೇಕು ಎಂದು ಕವಿ ಬಯಸುತ್ತಾರೆ .

ಇ ) ಖಾಲಿ ಬಿಟ್ಟ ಜಾಗವನ್ನು ಸೂಕ್ತ ಪದಗಳಿಂದ ತುಂಬಿರಿ.
೧. ಚಡಪಡಿಸುತಿದೆ __________ ಹಾದಿ ಹುಡುಕಿ.
೨. ಸೆರೆಯಿಂದ ನಾ __________ ಸದರೇರಬೇಕು.
೩. ಇನ್ನೆಲ್ಲ ನೀನೇಳು _______ ರಾಣಿ.
೪. ಹಾಡುವೆವು ಬಿಡುಗಡೆಯ ________ ಹಾಡು.
 
ಉತ್ತರಗಳು :
1 ) ಮುನ್ನಡೆವ
2 ) ಜಿಗಿದು
3 ) ಕಡಲುಗಳ
4 ) ಒಕ್ಕೊರಲ
ಭಾಷಾ ಚಟುವಟಿಕೆ

ಅ . ಸೂಚನೆಗಳನ್ನು ಗಮನಿಸಿ.
 
1 . ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಹೋರಾಟಗಾರರನ್ನು ಪಟ್ಟಿ ಮಾಡಿರಿ .
ಉತ್ತರ : ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಮುಖರು ಪ್ರಮುಖರ ಹೆಸರುಗಳನ್ನು ಶಾಸಿ , ಜವಹರಲಾಲ್ ನೆಹರೂ , ಲಾಲ್ಬಹದ್ದೂರ್ ಶಾಸ್ತ್ರಿ , ಸರ್ದಾರ್ ವಲ್ಲಬಾಯಿ ಪಟೇಲ್ , ಸುಭಾಷ್ ಚಂದ್ರ ಬೋಸ್ ಈ ರೀತಿ ಸಾವಿರಾರು ಜನರಿದ್ದಾರೆ .
 
2 . ನಮ್ಮ ದೇಶದ ಬಾವುಟದ ಚಿತ್ರವನ್ನು ಬರೆದು ಚಿತ್ರಕ್ಕೆ ಸೂಕ್ತ ಬಣ್ಣವನ್ನು ಹಚ್ಚಿರಿ .

3.ಈ ಪದ್ಯದಲ್ಲಿ 2 ನೇ ಹಾಗೂ 5 ನೇ ಪದ್ಯಗಳನ್ನು ಕಂಠಪಾಠ ಮಾಡಿರಿ.

ಆ ) ಈ ಕೆಳಗಿನ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿ .
1.ಸೆರೆಯಿಂದ = ಸೆರೆ + ಇಂದ = ‘ ಯ ‘
2.ಉಳಿಗಾಲ = ಉಳಿ + ಕಾಲ = ಆದೇಶಸಂಧಿ
3.‘ಹತ್ತಡಿಯ = ಹತ್ತು + ಅಡಿಯ = ಲೋಪಸಂಧಿ
4.ಮನದುಂಬಿ = ಮನ + ತುಂಬಿ = ದೇಶಸಂಧಿ

ಇ ) ಈ ಕೆಳಗಿನ ಪದಗಳಿಗೆ  ತತ್ಸಮ- ತತ್ಬವ ಬರೆಯಿರಿ.
1.ಮೃತ = ಮಿಗ .
2.ರಾಜ = ರಾಯ
3.ಬಣ್ಣ = ವರ್ಣ
4.ಪ್ರಾಣ ಹರಣ
5.ವಸನ = ಬೆಸನ
6.ಹಕ್ಕಿ = ಪಕ್ಷಿ ತದ್ಭವ ಪದಗಳನ್ನು

ಈ ) ಈ ಕೆಳಗಿನ ವಾಕ್ಯಗಳನ್ನು ವೇಗವಾಗಿ ಓದುವುದನ್ನು ಅಭ್ಯಾಸ ಮಾಡಿ .
1.ಗಿಡ ತಳಿರೊಡೆದೆರಡೆಲೆಯಾಯ್ತು .
You Might Like

Post a Comment

0 Comments