Recent Posts

ಸುಕ್ರಿ ಬೊಮ್ಮನ ಗೌಡ - Class 8th Second Language Kannada Textbook Solutions

 ಗದ್ಯ ೪        
ಸುಕ್ರಿ ಬೊಮ್ಮನ ಗೌಡ

ಕವಿ/ಲೇಖಕರ ಪರಿಚಯ :
* ಶಾಂತಿ ನಾಯಕ ಇವರು 1943 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಬೇಲೇಕೇರಿಯಲ್ಲಿ ಜನಿಸಿದರು.
* ಇವರು ಉತ್ತರ ಕನ್ನಡ ಜಿಲ್ಲೆಯ ಜನಪದ ಆಟಗಳು, ಉತ್ತರಕನ್ನಡ ಜಿಲ್ಲೆಯ ಹವ್ಯಕರ ಕಥೆಗಳು, ಜಾಣೆ ಕನ್ನಡದ ತಿಳಿದ್ದೇಳ, ಜಾನಪದ ಸಾಧು ಸಂಚರು, 'ಕಾಗಕ್ಕ ಗುಬ್ಬಕ್ಕ, ಜಾನಪದ ವೈದ್ಯಕೀಯ ಆಡಾಗೆಗಳು, ರಂಗೋಲಿ, ಕುಡಿತ ನಿಮಗೆಷ್ಟು ಹಿತ, ದೇವಕಿ ಓದಿದಳು, ಜೀವ ಉಳಿಸುವ ಮರಗಳು, ಸುಕ್ರಿ ಬೊಮ್ಮನಗೌಡ - ಕೃತಿಗಳನ್ನು ಬರೆದಿದ್ದಾರೆ.
* ಶ್ರೀಯುತರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ, ಜಾನ ಪದ ತಜ್ಞ, ಮಲ್ಲಿಕಾ ಪ್ರಶಸ್ತಿ, ಪದಭೂಷಣ ಡಾ.ಸರೋಜಾದೇವಿ ಸಾಹಿತ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ಹಲವು ಗೌರವಗಳೂ ಲಭಿಸಿವೆ.
* ಪ್ರಸ್ತುತ ಪಾಠವನ್ನು ಇವರ 'ಸುಕ್ರಿ ಬೊಮ್ಮನಗೌಡ' ಎಂಬ ಕೃತಿಯಿಂದ ಆಯ್ದುಕೊಳ್ಳಲಾಗಿದೆ.

ಟಿಪ್ಪಣಿಗಳು 
 
1. ತಾರ್ಲೆ ಕುಣಿತ : ಮಳೆ ಬಾರದಿದ್ದಾಗ ಹಾಲಕ್ಕಿ ಒಕ್ಕಲಗಿತ್ತಿಯರು ಮಳೆಗಾಗಿ ದೇವರನ್ನು ಪ್ರಾರ್ಥಿಸುವ ವಿಶಿಷ್ಟ ನರ್ತನ,
2. ಕುಂಬರಿ ಬೇಸಾಯ ಕಾಡು ಕಡಿದು, ನೆಲವನ್ನು ಬೆಂಕಿಯಿಂದ ಸುಟ್ಟು ಬೇಸಾಯ ಮಾಡುವ ಪದ್ಧತಿ, ಕುಂಟಲ ಬೇಸಾಯದಿಂದಾಗಿ ಕಾಡು ನಾಶವಾಗುತ್ತದೆಯೆಂದು 1885 ರ ಹೊತ್ತಿಗೆ ಬ್ರಿಟೀಷರು ಈ ಪದ್ಧತಿಯನ್ನು ಪ್ರತಿಬಂಧಿಸಿದರು. ಆದರೂ ಸುಕ್ರಿಯ ಇತ್ತೀಚಿನ ಕಾಲಮಾನದವರೆಗೂ ಈ ಬೇಸಾಯ ಜೀವ ಹಿಡಿದುಕೊಂಡಿತ್ತು.     
                                                ಪದಗಳ ಅರ್ಥ
ಒಕ್ಕಲ – ಮನೆತನ: ಬೇಸಾಯ,  
ಗಣಿ – ಆಶ್ರಯಸ್ಥಾನ 
ಚಿಣ್ಣಮೊಳೆ – ಜೋರಾದ ಮಳೆ 
ಪರಂಪರಾಗತ – ಹಿಂದಿನವರಿಂದ ಬಂದಿರುವ 
ಬಂಜೆತನ – ಮಕ್ಕಳಾಗದಿರುವುದು  
ಬುಡಕಟ್ಟು - ಮೂಲ 
ಜನಾಂಗ ಸುಗ್ಗಿ = ಧಾನ್ಯಗಳ ಕೊಯ್ಲಿನ ಕಾಲ 
ಹಯನಾಗುಗದ್ದೆ - ಜಮೀನು; ಬೇಸಾಯದ ಭೂಮಿ, 
ಗವಿಯಗಳೆಲ್ಲ - ಕಾಡಿನ ಜೀವಿಗಳೆಲ್ಲ 
ಕೂಡಜರು – ವಂಶದ ಹಿರಿಯರು, 
ಟಿದೆ – ಬಿತ್ತನೆಗೆ ಹದವಾದ ಕಾಲ, 
ಮುಂಚೂಣಿ - ಮುಂದಾಳತ, ನಾಯಕತ್ವ  
ಕಲ್ಲತ್ತಿ - ಹಲ್ಲುಗಳಿರುವ ಕತ್ತಿ 
ಹೊಯ್ಯಲೆ – ಸುರಿಯುವುದು 
ಸಭೆ – ಉರುವಲು ಕಟ್ಟಿಗ

●    ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. 

1. ಸುಕ್ರಿಯ ತಂದೆ ತಾಯಿಗಳ ಹೆಸರೇನು?

ಉತ್ತರ:- ಸುಕ್ರಿಯ ತಂದೆ ತಾಯಿಗಳ ಹೆಸರು ಸುಬ್ಬ ಮತ್ತು ದೇವಿ

2. ಸುಕ್ರಿಯ ತಂದೆಯಲ್ಲಿದ್ದ ಜಾನಪದ ಕಲೆಗಳಾವುವು?
ಉತ್ತರ:- ಸುಕ್ರಿಯತಂದೆಗುಮಟೆವಾದಗಾರಿಕೆಯನ್ನು, ಸುಗ್ಗಿ ನೃತ್ಯಗಾರಿಕೆಯನ್ನು ಬಲ್ಲವರಾಗಿದ್ದರು. 

3. ಲೇಖಕರಿಗೆ ಸುಕ್ರಿ ಪರಿಚಯಿಸಿದ ಉದ್ದದ ಹೆಸರಿನ ಹುಲ್ಲು ಯಾವುದು?
ಉತ್ತರ:- ಲೇಖಕರಿಗೆ ಸುಕ್ರಿ ಪರಿಚಯಿಸಿದ ಉದ್ದದ ಹೆಸರಿನ ಹಲ್ಲು "ಕಟ್ಟಾಡೆ ಕುಟ್ಟಾಡೆ ಕಟ್ಟಿದ್ರೆ ಚೂಡಾಡೇ",

4. ಸುಕ್ರಿಯವರಿಗೆ ದೊರೆತ ನಾಡಿನ ಅತ್ಯುನ್ನತ ಪ್ರಶಸ್ತಿ ಯಾವುದು?
ಉತ್ತರ:- ಸುಕ್ರಿಯವರಿಗೆ ದೊರೆತ ನಾಡಿನ ಅತ್ಯುನ್ನತ ಪ್ರಶಸ್ತಿ ನಾಡೋಜ ಪ್ರಶಸ್ತಿ, 

5. ಸುಕ್ರಿಯವರಲ್ಲಿ ಕಾಣಬರುವ ವಿಶೇಷ ಗುಣ ಯಾವುದು?
ಉತ್ತರ:- ಸುಕ್ರಿಯವರ ಪೂರ್ವಜರು ಕಾಡಿನಲ್ಲಿ ನೆಲೆಸಿ ಪಥದ ಅನುಭವವೂ ಪರಂಪರಾಗತವಾಗಿ ಇದರ ಬಳಿಗೆ ಬಂದಿದೆ. ಇವರ ವಿಶೇಷ ಗುಣ,
6.ಸುಕ್ರಿ ಯಾದ ಒಕ್ಕಲು ಜನಾಂಗಕ್ಕೆ ಸೇರಿದ ಮಹಿಳೆ?
ಉತ್ತರ:- ಸುಕ್ರಿ, ಹಾಲಕ್ಕಿ ಒಕ್ಕಲು ಜನಾಂಗಕ್ಕೆ ಸೇರಿದ ಮಹಿಳೆ,

●    ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ಸುಕ್ರಿ ಬಾಲ್ಯದಲ್ಲಿ ಜನಪದ ಆಟಗಳನ್ನು ಹೇಗೆ ಕಲಿತಳು.

ಉತ್ತರ:- ಸುಕ್ರಿ ಚಿಕ್ಕವಳಿರುವಾಗ ತನ್ನ ಕೇರಿಯ ಮಕ್ಕಳ ಜೊತೆಗೆ ಸಗಣಿ ತರಲು ಹೋಗುತ್ತಿದ್ದಳು, ಸಗಣಿ ಹಕ್ಕಿ ಸುಸ್ತಾಗದ ಈ ಬಾಲ್ಯದಲ್ಲಿಯೇ ಆಟಗಳನ್ನು ಕಲಿತರು. 

2 ತಾರ್ಲೆ ಕುಣಿತದ ವಿಶೇಷವೇನು?
ಉತ್ತರ:- ಮಳೆ ಬಾರದಿದ್ದಾಗ ಹಾಲಕ್ಕಿ ಒಕ್ಕಲಗಿತ್ತಿಯರು ಮಳೆಗಾಗಿ ದೇವರನ್ನು ಪ್ರಾರ್ಥಿಸುವ ವಿಶಿಷ್ಟ ನರ್ತನ, ಈ ಹಾಡಿನಲ್ಲಿ ಬೆಳತನಕ ಹಾಡಬಲ್ಲ ಸಾಹಿತ್ಯವಿದೆ, ಜನ ಜೀವನದ ಚಿತ್ರವಿದೆ, ಕೇಳುಗರಿಲ್ಲ ದಾಖಲಿಸುವವರಿಲ್ಲ 

3. ಸುಕ್ರಿಯವರಿಗೆ ಯಾವ ಯಾವ ಸೊಪ್ಪುಗಳ ಜ್ಞಾನವಿದೆ?
ಉತ್ತರ:- ಮಕ್ಕಳು ತಮ್ಮ ಬುಟ್ಟಿಗಳನ್ನು ಗದ್ದೆ ಬಯಲಿನಲ್ಲಿಟ್ಟು ಗದ್ದೆ ಬಯಲನ್ನ ಕ್ರೀಡಾಂಗಣವನ್ನಾಗಿಸಿಕೊಳ್ಳುತ್ತಿದ್ದರು. ಚಿಟ್ಟೆ ಆಟ ಕಗ್ಗಟ್ಟಾಟ; ಹಳ್ಳಿ ಮಂಡದ ಆಟಗಳಿಗೆ ಈ ಬಯಲುಗಳೇ ಜನಪದ ಆಟಗಳ ತರಬೇತಿ ಶಾಲೆಗಳಾದವು, ಈ ರೀತಿ ಚಿರಕಲ, ಹಣ್ಣು, ಪಪ, ಸಗಡೆ, ಹಪ್ಪಗಡೆ, ಕುಚುಮಾಲೆ, ಏಕನಾಯಕ, ಅಡಕೋಳಿ ಮುಂತಾದ ಸೊಪ್ಪುಗಳ ಜ್ಞಾನ ಸುಕ್ರಿಯವರಿಗೆ ಇತ್ತು.

4. ಸುಕ್ರಿಯವರು ಪಾಲ್ಗೊಂಡ ಚಳುವಳಿಗಳಾವುವು?
ಉತ್ತರ:- ಸುಕ್ರಿ ರೈತರ ಜೊತೆ ಕಾಲ್ನಡಿಗೆಯಲ್ಲಿಯೇ ಕಾರವಾರಕ್ಕೆ ಹೋಗಿ ಚಳುವಳಿ ನಡೆಸಿದರು. ಸಮಾಜಕ್ಕೆ ಒಳಿತಾಗುವ ಎಲ್ಲ ಚಳುವಳಿಗಳಲ್ಲಿ ಅಗ್ರ ಪಂಕ್ತಿಯಲ್ಲಿ ನಿಂತರು. ಕೋಟೆಬಾವಿ ಚಳುವಳಿ, ಬುಡಕಟ್ಟು ಜಿಲ್ಲಾ ಚಳುವಳಿ, ಸಾಕ್ಷರತಾ ಆಂದೋಲನ, ಮದ್ಯಪಾನ ವಿರೋಧಿ ಚಳುವಳಿಗಳಲ್ಲಿ ಸುಕ್ರಿಯವರ ಕಲಾ ತಂಡ ಪಾಲ್ಗೊಂಡಿರುತ್ತಿತ್ತು. 

5. ಸುಕ್ರಿಯವರ ವೇಷಭೂಷಣಗಳು ಹೇಗಿರುತ್ತವೆ?
ಉತ್ತರ:- ಸುಕ್ರಿಯವರು ಕೊರಳ ತುಂಬ ಅಂಕೋಲೆಯ ಪರಂಪರಾಗತ ಶೈಲಿಯಲ್ಲಿ ಮಣಿಸರಗಳನ್ನು ಧರಿಸಿ ಅಲ್ಲಿಯ ಹಾಲಕ್ಕಿ ಒಕ್ಕಲ ಗೇಟ್ ಶೈಲಿಯಲ್ಲಿ ಸೀರೆಯುಟ್ಟಿರುತ್ತಾರೆ.

6. ಸುಕ್ರಿಯವರಿಗೆ ದೊರೆತ ಪ್ರಶಸ್ತಿಗಳಾವುವು?
ಉತ್ತರ:- ಸುಕ್ರಿಯವರಿಗೆ ನಾಡಿನ ಬಹುದೊಡ್ಡ ಪ್ರಶಸ್ತಿಗಳಾದ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿ ಸುಕ್ರಿಯವರ ಮುಡಿಗೇರಿದವು. ಇವರಿಗೆ ನಾಡಿನ ಅತ್ಯುನ್ನತ ನಾಡೋಜ ಪ್ರಶಸ್ತಿಯು 2007 ರಲ್ಲಿ ದೊರೆತಿದೆ.

●    ಕೆಳಗಿನ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ,

1.ಸುಕ್ರಿಯವರು ಜಾನಪದದ ಗಣಿ ಅದುದು ಹೇಗೆ?

ಉತ್ತರ:- ಸುಕ್ರಿಯ ಅಕ್ಕ ಮತ್ತು ತಾಯಿ ಉತ್ತಮ ಹಾಡುಗಾರರಾಗಿದ್ದರು. ಅಪ್ಪ ಗುಮಟೆ ವಾದ್ಯಗಾರಿಕೆಯನ್ನು ಸುಗ್ಗಿ ನೃತ್ಯಗಾರಿಕೆಯನ್ನು ಬಲ್ಲವರಾಗಿದ್ದರು. ಸುಕ್ರಿಯೂ ಶಾಲೆ ಕಲಿತವಳಲ್ಲ. ಚಿಕ್ಕವಳಿರುವಾಗ ತನ್ನ ಕೇರಿಯ ಮಕ್ಕಳ ಜೊತೆಗೆ ಸಗಣಿ ತರಲು ಹೋಗುತ್ತಿದ್ದಳು, ಸಗಣಿ ಹೆಕ್ಕಿ ಸುಸ್ತಾಗದ ಈ ಮಕ್ಕಳು ತಮ್ಮ ಸಗಣಿ ಬುಟ್ಟಿಗಳನ್ನು ಗದ್ದೆ ಬಯಲಿನಲ್ಲಿಟ್ಟು ಗದ್ದೆ ಬಯಲನ್ನೆ ಕ್ರೀಡಾಂಗಣವನ್ನಾಗಿಸಿಕೊಳ್ಳುತ್ತಿದ್ದರು. ಆಟೋ ಆಟ; ಕಟ್ಟಾಟ; ಹಳ್ಳಿ ಮಂಡದ ಆಟಗಳಿಗೆ ಈ ಬಯಲುಗಳೇ ಜನಪದ ಆಟಗಳ ತರಬೇತಿ ಶಾಲೆಗಳಾದವು. ಇಲ್ಲಿಯೇ ಸುಕ್ರಿ ಹೆಣ್ಣುಮಕ್ಕಳ ಜೊತೆ ತಾರ್ಲೆ ಕುಣಿದರು. ಗೊಬ್ಬರಹಾಕಿ ಹಾಳೆ ಕೊಚ್ಚಿ ಹೂಡಿ ಬೀಜಬಿತ್ತಲು ಅಣಿ ಮಾಡಿಕೊಂಡಿರುವಾಗ ಮಳೆರಾಯ ಬೆದೆಬಂದ ಭೂಮಿಗೆ ನೀರು ಹನಿಸದೆ ಮೋಡಗಟ್ಟಿ ಮುನಿಸಿನಲ್ಲಿರುತ್ತಾನೆ. ಆಗ ಮಳೆರಾಯನನ್ನು ಒಲಿಸಿಕೊಳ್ಳಲು ಆಯಾ ಊರಿನ ಹೆಂಗಸರು ಪುರಸೊತ್ತು ಆದ ದಿನ ತಮ್ಮೊಳಗೆ ಮಾತಾಡಿಕೊಂಡು ಕತ್ತಲೆಯಾದ ಬಳಿಕ ಬಯಲಿಗಿಳಿಯುತ್ತಾರೆ; ಹಾಡುತ್ತ ಕುಣಿಯುತ್ತಾರೆ. ಈ ರೀತಿ ಸುಕ್ರಿ ಜಾನಪದ ಗಣಿಯಾದರು.

2. ಸುಕ್ರಿಗೆ ಕಾಡಿನ ಸಸ್ಯಜ್ಞಾನ ಹೇಗೆ ದೊರೆಯಿತು?
ಉತ್ತರ:- ಸುಕ್ರಿ ಪ್ರಾಣಿ, ಪಕ್ಷಿ ಮುಂತಾದ ಚರಜೀವಿಗಳ, ಸಸ್ಯಾದಿ ಅಚರ ಜೀವವೈವಿಧ್ಯದ ಜ್ಞಾನ ನಿಧಿ, ಅಪ್ಪ ಬೆಟ್ಟದಲ್ಲಿರುವ ಒಡೆಯನ ಗದ್ದೆಯನ್ನು ಹೂಡಲು ಹೋಗುತ್ತಿದ್ದಾಗ ತಾಯಿ ಹಾಗೂ ಮನೆಯ ಸದಸ್ಯರು ಕೃಷಿ ಕೆಲಸಕ್ಕೆ ಹೊರಡುತ್ತಿದ್ದರು. ಸುಕ್ತಿ ತನ್ನ ಸುಮಾರು ಹತ್ತನೆಯ ವರ್ಷಕ್ಕೆ ಇವರ ಜೊತೆಗೆ ಕೃಷಿ ಕೆಲಸಕ್ಕೆ ಹೋಗುತ್ತಿದ್ದರು. ಸೊಂಟಕ್ಕೆ ತಾಡಿದ ಚಿಕ್ಕ ಸುಳಿ ಮುಟ್ಟಿ ; ಈ ಮುಟ್ಟಿಯಲ್ಲೊಂದು ಚಿಕ್ಕ ಹಲ್ಕತ್ತಿ ಇವರ ಜೊತೆಯಲ್ಲಿರುತ್ತಿತ್ತು. ಬೆಟ್ಟದಲ್ಲಿ ನಡೆಯುವಾಗ, ಹಾದಿಯ ಇಕ್ಕೆಲಗಳಲ್ಲಿಯ ಮರಗಿಡಗಳು ಇವರಿಗೆ ಆಪ್ತವಾದವು. ಚಿರಕಲ, ಹಳೆರಿ, ಪೆಪೆ, ಸಗಡೆ, ಹಪ್ಪಗಡೆ, ಕುಚುಮಾಲೆ, ಏಕನಾಯಕ, ಅಡಕೋಳಿ ಮುಂತಾದ ಸೊಪ್ಪುಗಳ ಜ್ಞಾನ ಇವರಿಗಾಯಿತು. ದೊಡ್ಡವರಾದ ಮೇಲೆ ಸೌದೆ ತರುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆಗ ಮರಮುಟ್ಟುಗಳ ಇನ್ನಷ್ಟು ಜ್ಞಾನ ಇವರ ಮಡಿಲು ತುಂಬಿದವು, ಸುಕ್ರಿಯವರ ಜೊತೆ ಕಾಡಿನಲ್ಲಿ ನಡೆಯುವುದೊಂದು ಅಪೂರ್ವ ಅನುಭವ. ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ ಔಷಧಶಾಸ್ತ್ರ ಮುಂತಾದ ಜನಪದ ಶಾ ಶಾಸ್ತ್ರಗಳ ಭಂಡಾರವೇ ನಮ್ಮ ಜೊತೆ ನಡೆಯುತ್ತಿದ್ದಂತೆ ಅನಿಸುತ್ತದೆ. ಸುಕ್ರಿ ಪ್ರತಿ ಗಿಡಕ್ಕೂ ತನ್ನ ಪರಿಸರದ ಕನ್ನಡ ಜನಪದ ಹೆಸರುಗಳನ್ನು ಹೇಳುತ್ತ ಆಯಾ ಸಸ್ಯಗಳನ್ನು ತೋರಿಸುತ್ತ ಸಾಗುತ್ತಾರೆ. ಇವರ ಈ ಸಸ್ಯ ಜ್ಞಾನ ನಿಧಿಯನ್ನು ಅಕ್ಷರಕ್ಕಿಳಿಸಿದರೆ ಹಲವು ಗ್ರಂಥಗಳು ಸಿದ್ಧವಾಗಬಹುದು.

3. ಸುಕ್ರಿ ಬೊಮ್ಮನಗೌಡ ಸಾಮಾಜಿಕ ಕಳಕಳಿ ಹೊಂದಿರುವ ಮಹಿಳೆ ಎಂಬುದನ್ನು ಹೇಗೆ ಹೇಳಬಹುದು?
ಉತ್ತರ:- ಸುಕ್ರಿ ರೈತರ ಜೊತೆ ಕಾಲ್ನಡಿಗೆಯಲ್ಲಿಯೇ ಕಾರವಾರಕ್ಕೆ ಹೋಗಿ ಚಳುವಳಿ ನಡೆಸಿದರು. ಸಮಾಜಕ್ಕೆ ಒಳಿತಾಗುವ ಎಲ್ಲ ಚಳುವಳಿಗಳಲ್ಲಿ ಅಗ್ರ ಪಂಕ್ತಿಯಲ್ಲಿ ನಿಂತರು. ಕೋಟೆಬಾವಿ ಚಳುವಳಿ, ಬುಡಕಟ್ಟು ಜಿಲ್ಲಾ ಚಳುವಳಿ, ಸಾಕ್ಷರತಾ ಆಂದೋಲನ, ಮದ್ಯಪಾನ ವಿರೋಧಿ ಚಳುವಳಿಗಳಲ್ಲಿ ಸುಕ್ರಿಯವರ ಕಲಾ ತಂಡ ಪಾಲ್ಗೊಂಡಿರುತ್ತಿತ್ತು. ಓದು-ಬರಹ ಅರಿಯದವರಾದರೂ ಸಾಮಾಜಿಕ ಕೆಡಕು ಯಾವುದು, ಒಳಿತು ಯಾವುದು ಎಂಬುದರ ಅರಿವುಳ್ಳವರು, ಸಮಾಜಕ್ಕೆ ಒಳಿತಾಗುವ ಚಳುವಳಿಗಳಲ್ಲಿ ಭಾಗವಹಿಸಿ ಜೊತೆಯ ಹೋರಾಟಗಾರರಿಗೆ ಪ್ರೋತ್ಸಾಹ ನೀಡುವಲ್ಲಿ ಸುಕ್ರಿಯದು ಎತ್ತಿದ ಕೈ. ಇವರು ಕೊರಳ ತುಂಬ ಅಂಕೋಲೆಯ ಪರಂಪರಾಗತ ಶೈಲಿಯಲ್ಲಿ ಮಣಿಸರಗಳನ್ನು ಧರಿಸಿ ಅಲ್ಲಿಯ ಹಾಲಕ್ಕಿ ಒಕ್ಕಲ ಗೇಟ್ಟಿ ಶೈಲಿಯಲ್ಲಿ ಸೀರೆಯುಟ್ಟು ಮುಂಚೂಣಿಯಲ್ಲಿದ್ದಾರೆಂದರೆ ಚಳುವಳಿಕಾರರಿಗೆ ಆನೆಬಲ ಬರುತ್ತದೆ.

●     ಸಂದರ್ಭದೊಡನೆ ವಿವರಿಸಿ.

I. ಈ ಬಯಲುಗಳೇ ಜನಪದ ಆಟಗಳ ತರಬೇತಿ ಶಾಲೆಗಳಾದವು.
ಆಯ್ಕೆ:-
ಈ ವಾಕ್ಯವನ್ನು ಶಾಂತಿ ನಾಯಕ ಅವರು ಬರೆದಿರುವ ಸುಕ್ರಿ ಬೊಮ್ಮನ ಗೌಡ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಲೇಖಕಿಯವರು ಸುಕಿಯ ಬಾಲ್ಯದ ಬಗ್ಗೆ ತಿಳಿಸುತ್ತಾ ಹೇಳಿದ್ದಾರೆ. ಸುಕ್ರಿಯೂ ಶಾಲೆ ಕಲಿತವಳಲ್ಲ. ಚಿಕ್ಕವಳಿರುವಾಗ ತನ್ನ ಕೇರಿಯ ಮಕ್ಕಳ ಜೊತೆಗೆ ಸಗಣಿ ತರಲು ಹೋಗುತ್ತಿದ್ದಳು. ಸಗಣಿ ಹೆಕ್ಕಿ ಸುಸ್ತಾಗದ ಈ ಮಕ್ಕಳು ತಮ್ಮ ಸಗಣಿ ಬುಟ್ಟಿಗಳನ್ನು ಗದ್ದೆ ಬಯಲಿನಲ್ಲಿಟ್ಟು ಗದ್ದೆ ಬಯಲನ್ನೆ ಕ್ರೀಡಾಂಗಣವನ್ನಾಗಿಸಿಕೊಳ್ಳುತ್ತಿದ್ದರು. ಅಷ್ಟೆ ಆಟ ಕಣ್ಯಟ್ಟಾಟ: ಹುಳ್ಳಿ ಮಂಡದ ಆಟಗಳಿಗೆ ಈ ಬಯಲುಗಳೇ ಜನಪದ ಆಟಗಳ ತರಬೇತಿ ಶಾಲೆಗಳಾದವು ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ. 

2. ಜನಪದ ಶಾಸ್ತ್ರಗಳ ಭಂಡಾರವೇ ನಮ್ಮ ಜೊತೆ ನಡೆಯುತ್ತಿದ್ದಂತೆ ಅನಿಸುತ್ತದೆ.
ಆಯ್ಕೆ:-
ಈ ವಾಕ್ಯವನ್ನು ಶಾಂತಿ ನಾಯಕ ಅವರು ಬರೆದಿರುವ ಸುಕ್ರಿ ಬೊಮ್ಮನ ಗೌಡ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಲೇಖಕಿಯವರು ಹೇಳಿದ್ದಾರೆ. ಸುತ್ಕ್ರಿಯವರೊಡನೆ ಲೇಖಕಿಯವರು ಕಾಡಿನಲ್ಲಿ ಹೆಜ್ಜೆ ಹಾಕುತ್ತಿರುವಾಗ ಸುಕ್ರಿಯವರು ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಔಷಧಶಾಸ್ತ್ರ ಮುಂತಾದವುಗಳ ಬಗ್ಗೆ ಅವರಿಗಿದ್ದ ಜ್ಞಾನ ಕಂಡು ಲೇಖಕಿಯವರು ಈ ಮೇಲಿನ ಮಾತನ್ನು ಹೇಳಿದ್ದಾರೆ.

3. 'ಕಟ್ಟಾಡೆ ಕುಟ್ಟಾಡೆ ಕಟ್ಟಿದ್ರೆ ಚೂಡಾಡೆ
ಆಯ್ಕೆ:-
ಈ ವಾಕ್ಯವನ್ನು ಶಾಂತಿ ನಾಯಕ ಅವರು ಬರೆದಿರುವ ಸುಕ್ರಿ ಬೊಮ್ಮನ ಗೌಡ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಲೇಖಕಿಯವರು ಹೇಳಿದ್ದಾರೆ.  ಸುಕ್ರಿಯವರು ಸಾಮಾನ್ಯ ಹುಲ್ಲುಕಡ್ಡಿಗಳ ಬಗ್ಗೆಯೂ ಚೆನ್ನಾಗಿ ಬಲ್ಲರು. ಒಮ್ಮೆ ನನ್ನ ಜೊತೆ ಬಯಲಿನಲ್ಲಿ ನಡೆಯುತ್ತಿದ್ದಾಗ ಸುಕ್ರಿ ಒಂದು ಜಾತಿಯ ಹುಲ್ಲಿನ ಉದ್ದದೇಟಿನ ಹತ್ತಾರು ಹೂ ತೆನೆಗಳನ್ನು ಕೊಯ್ದುಕೊಂಡು 'ಕಟ್ಟಾಡ ಕುಟ್ಟಾಡ ಕಟ್ಟಿದ್ರೆ ಚೂಡಾಡೆ' ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ. 

4. ಚಳುವಳಿಗಾರರಿಗೆ ಆನೆಬಲ ಬರುತ್ತದೆ.
ಆಯ್ಕೆ:
- ಈ ವಾಕ್ಯವನ್ನು ಶಾಂತಿ ನಾಯಕ ಅವರು ಬರೆದಿರುವ ಸುಕ್ರಿ ಬೊಮ್ಮನ ಗೌಡ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಲೇಖಕಿಯವರು ಹೇಳಿದ್ದಾರೆ. ಸಮಾಜಕ್ಕೆ ಒಳಿತಾಗುವ ಚಳುವಳಿಗಳಲ್ಲಿ ಭಾಗವಹಿಸಿ ಜೊತೆಯ ಹೋರಾಟಗಾರರಿಗೆ ಪ್ರೋತ್ಸಾಹ ನೀಡುವಲ್ಲಿ ಸುಕ್ರಿಯದು ಎತ್ತಿದ ಕೈ. ಸುಕ್ರಿಯವರು ಚಳುವಳಿಗೆ ಮುಂಚೂಣಿಯಲ್ಲಿದ್ದಾರೆಂದರೆ ಚಳುವಳಿಕಾರರಿಗೆ ಆನೆಬಲ ಬರುತ್ತದೆ ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬ೦ದಿದೆ.

                                                         ಭಾಷಾಭ್ಯಾಸ 

ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.

ಸುಸ್ತಾಗದ=ಸುಸ್ತು+ಆಗದ 
ಕ್ರೀಡಾಂಗಣ=ಕ್ರೀಡಾ+ಅಂಗಣ, 
ಕಟ್ಟಾಟ = ಕಟ್ಟು+ಆಟ,  
ಕಾಲ್ನಡಿಗೆ = ಕಾಲು + ನಡಿಗೆ, 
ಅತ್ಯುನ್ನತ = ಅತಿ + ಉನ್ನತ.

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥ ಬರೆಯಿರಿ.
ಚರ X ಸ್ಥಿರ, 
ಜ್ಞಾನ X ಅಜ್ಞಾನ,  
ಕೆಡಕು X ಒಳಿತು.

You Might Like

Post a Comment

0 Comments