Recent Posts

ಹಕ್ಕಿಗಳು - Class 8th Second Language Kannada Textbook Solutions

ಹಕ್ಕಿಗಳು
 
* ಸಿದ್ಧಲಿಂಗಯ್ಯ ನವರು  1954 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ ಜನಿಸಿದರು. (ಈಗಿನ ರಾಮನಗರ ಜಿಲ್ಲೆ)
* ಇವರು ಮೆರವಣಿಗೆ, ಹೊಲೆಮಾದಿಗರ ಹಾಡು, ಸಾವಿರಾರು ನದಿಗಳು, ಕಪ್ಪುಕಾಡಿನ ನಾಡು, ಮೆರವಣಿಗೆ, ಅವತಾರಗಳು, ಗ್ರಾಮದೇವತೆಗಳು, ಹಕ್ಕಿನೋಟ, ಪಂಚಮ, ನೆಲಸಮ, ಏಕಲವ್ಯ, ಊರು ಕೇರಿ ಮುಂತಾದ ಕೃತಿಗಳನ್ನು ಬರೆದಿದ್ದಾರೆ.
* ಶ್ರೀಯುತರಿಗೆ ರಾಜ್ಯೋತ್ಸವ ಪ್ರಶಸ್ತಿ ಡಾ. ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಬಹುಮಾನ, ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ.
* ಪ್ರಸ್ತುತ 'ಹಕ್ಕಿಗಳು' ಕವನವನ್ನು ಅವರ 'ಮೆರವಣಿಗೆ' ಕೃತಿಯಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.

                                                  ಪದಗಳ ಅರ್ಥ
 
ಅರಸು - ಹುಡುಕು: ಶೋಧಿಸು 
ಕಮರು (ಕ್ರಿ) - ಕುಂದು; ಬಾಡು; ನಾಶವಾಗು  
ಕರಾಳ (ಗು) - ಭಯಂಕರವಾದ; 
ಎಕೃತವಾದ ಬಾಡು (ಕ್ರಿ) – ಕುಗ್ಗು: ಒಣಗು: 
ಕಳೆಗುಂದು. – ಕವಲುದಾರಿ 
ಎಂಜಲು - ತಿ೦ದು ಮಿಕ್ಕಿದ್ದು 
ಕುಸಿ (ಕ್ರಿ) - ಕುಗ್ಗು: ಆಯಾಸಗೊಂಡು ಬೀಳು 
ಹೊತ್ತು – ಸಮಯ
ಪಾತಾಳ - ಭೂಮಿ ಕೆಳಗಿನ ಏಳು ಲೋಕಗಳಲ್ಲಿ ಒಂದು; ಬಹಳ ಆಳವಾದ ಸ್ಥಳ.  
ಗಂಜಲ - ಗೋಮೂತ್ರ

                      * ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ಹಕ್ಕಿಗಳು ಕವಿತೆ ಯಾರನ್ನು ಕುರಿತು ಬರೆದುದಾಗಿದೆ?

ಉತ್ತರ:- ಹಕ್ಕಿಗಳು ಕವಿತೆ ದಲಿತರು ಮತ್ತು ಶೋಷಿತರನ್ನು ಕುರಿತು ಬರೆದುದಾಗಿದೆ. 

2. ಕುರಿದನಗಳನ್ನು ಕಾಯ್ದ ಬಾಲಕರಿಗೆ ಯಾವುದು ಸಿಗಲಿಲ್ಲ?
ಉತ್ತರ:-ಕುರಿದನಗಳನ್ನು ಕಾಯ್ದು ಬಾಲಕರಿಗೆ ಕುಡಿಯಲು ಹಾಲು ಸಿಗಲಿಲ್ಲ.

3. ಎಂಜಲು ತೊಳೆದವರಿಗೆ ಏನು ಸಿಗಬೇಕಾಗಿತ್ತು?
ಉತ್ತರ:- ಎಂಜಲು ತೊಳೆದವರಿಗೆ ಗಂಜಿ ಸಿಗಬೇಕಾಗಿತ್ತು.

4. ಗಿಡಗಳ ಜೊತೆ ಬೆಳೆದವರಿಗೆ ಯಾವ ಭಾಗ್ಯ ಸಿಗಲಿಲ್ಲ?
ಉತ್ತರ:- ಗಿಡಗಳ ಜೊತೆ ಬೆಳೆದವರಿಗೆ ಓದುವ ಬರೆಯುವ ಭಾಗ್ಯ ಸಿಗಲಿಲ್ಲ. 

5. ಬಾಲಕರು ಚಳಿಯನು ತಡೆಯದೆ ಕುಸಿದುದು ಏಕೆ?
ಉತ್ತರ:- ಬಾಲಕರು ಎಂಜಲನ್ನು ತೊಳೆದು ಬಳಿದು ಗಂಜಿಯನ್ನು ಕಾಣದೆ, ಗುಡಿಗೋಪುರಗಳ ಬಣ್ಣಗಳಾಗಿ ಚಳಿಯನ್ನು ತಡೆಯದೆ ಕುಸಿದರು.

6.ಬಾಲಕರ ಕನಸುಗಳು ಹೇಗೆ ಕಮರಿಹೋಗಿವೆ?
ಉತ್ತರ:- ಬಾಲಕರ ಕನಸುಗಳು ಬಿರಿಯುವ ಮೊದಲೇ ಕಮರಿಹೋಗಿವೆ.

ಆ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ಹಕ್ಕಿಗಳು ಕವಿತೆಯಲ್ಲಿ ಬಾಲಕರು ಯಾವ ಯಾವ ಅವಕಾಶಗಳಿಂದ ವಂಚಿತರಾಗಿದ್ದಾರೆ?

ಉತ್ತರ:- ಹಕ್ಕಿಗಳು ಕವಿತೆಯಲ್ಲಿ ಬಾಲಕರು ಹಾಲು ಕುಡಿಯುವ, ಓದುವ ಬರೆಯುವ, ಗಂಜಿಯ ಕುಡಿಯುವ, ಅವಕಾಶಗಳಿಂದ ವಂಚಿತರಾಗಿದ್ದಾರೆ. 

2. ನೋವುಂಡ ಬಾಲಕರಿಗೆ ಯಾವ ಯಾವ ಅನುಭವಗಳಾಗಿವೆ?
ಉತ್ತರ:- ನೋವುಂಡ ಬಾಲಕರಿಗೆ ಬೆಟ್ಟವ ಹತ್ತುವ ಇಳಿಯುವ, ಪಾತಾಳದ ಕರಾಳ ನೋವನು ಕಾಣುವ, ಕುರಿ ದನಗಳ ಕಾಯ್ದು ಮೇಯಿಸುವ, ಗಿಡಗಳ ಜೊತೆ ಬೆಳೆಯುವ ಎಂಜಲು ತೊಳೆಯುವ, ಗಂಜಲ ಬಳಿಯುವ, ಉರಿಬಿಸಿಲಲ್ಲಿ ಉರಿಯುವ, ಬಿರಿಯುವ ಮೊದಲೇ ಬಾಡುವ ಅನುಭವಗಳಾಗಿವೆ.

3. ಬಾಲಕರ ಹಾಡು ಮತ್ತು ನಾಡು ಯಾವ ಸ್ವರೂಪದ್ದಾಗಿದೆ? ಏಕೆ?
ಉತ್ತರ:- ಬಾಲಕರ ಹಾಡು ದಲಿತರ ಜೀವನ ಶೈಲಿಯನ್ನು ಮತ್ತು ದಾರುಣ್ಯ ಪರಿಸ್ಥಿತಿಯನ್ನು ವ್ಯಕ್ತಪಡಿಸಿದೆ. ಸಮಾಜದಲ್ಲಿ ನಾಗರಿಕ ಜೀವನ ನಡೆಸಲು ಕೂಡ ಸಾಧ್ಯವಾಗದ ಪರಿಸ್ಥಿತಿ ಮೇಲ್ವರ್ಗದವರಿಂದ ಏರ್ಪಟ್ಟಿತ್ತು ನಾಡಿನಲ್ಲಿ ಮನುಷ್ಯ ಮಾನವತೆಯನ್ನು ಮರೆತಿದ್ದ, ಏಕೆಂದರೆ ನಾಡಿನಲ್ಲಿ ಜಾತಿಪದ್ಧತಿಯೇ ಇದಕ್ಕೆ ನೇರ ಕಾರಣವಾಗಿದೆ.
 
*  ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

1. ಬಾಲಕರದು ನೋವಿನ ಹಾಡು, ಕತ್ತಲ ನಾಡು ಎಂದು ಕವಿ ಏಕೆ ಕರೆದಿದ್ದಾರೆ?

ಉತ್ತರ:- ಬಾಲಕರದು ನೋವಿನ ಹಾಡು, ಕತ್ತಲ ನಾಡು ಏಕೆಂದರೆ ದಲಿತರು ಶತಶತಮಾನಗಳಿಂದ ಮೇಲ್ವರ್ಗದವರಿಂದ, ಶ್ರೀಮಂತರಿಂದ ತುಳಿತಕ್ಕೆ ಒಳಗಾದವರು ಇಲ್ಲಿ ಕವಿಯು ದಲಿತರ ಮನಸ್ಥಿತಿಯನ್ನು ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಬಾಲಕರ ಮುಖೇನ ಕವಿ ಸಿದ್ಧಲಿಂಗಯ್ಯನವರು ದಲಿತರು ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿನ ಅಡೆತಡೆಗಳನ್ನು ವಿವರಿಸಿದ್ದಾರೆ. ಆ ಪ್ರಯತ್ನದಲ್ಲಿ ವಿಫಲತೆಯನ್ನು ಕತ್ತಲಿಗೆ ಹೋಲಿಸಿದ್ದಾರೆ. ಕತ್ತಲಿನಲ್ಲಿ ಬೆಳಕನ್ನು ಹುಡುಕುವ ಬಾಲಕರೆಂದು ಕರೆದಿದ್ದಾರೆ. ಸಮಾಜದಲ್ಲಿನ ದಲಿತರ ತುಳಿತವನ್ನು ನೇರವಾಗಿ ಪದ್ಯದ ಮುಖೇನ ಹೊರಹಾಕಿದ್ದಾರೆ.

2. 'ಹಕ್ಕಿಗಳು' ಕವಿತೆಯಲ್ಲಿ ವ್ಯಕ್ತಗೊಂಡಿರುವ ಕವಿಯ ಭಾವನೆಗಳೇನು?
ಉತ್ತರ:- ಶತಶತಮಾನಗಳಿಂದ ಶೋಷಣೆ, ಅನ್ಯಾಯ, ಅವಮಾನ, ನಿರ್ಲಕ್ಷ್ಯ ಹಾಗೂ ತುಳಿತಕ್ಕೆ ಒಳಗಾಗಿದ್ದಾರೆ. ಈ ರೀತಿ ತುಳಿತಕ್ಕೆ ಒಳಗಾದವರು ಎಲ್ಲರಂತೆ ಬದುಕಬೇಕು. ಸಮಾಜದಲ್ಲಿನ ಎಲ್ಲ ಸವಲತ್ತುಗಳು ಅವರಿಗೂ ಸಿಗಬೇಕು ಎಂದಿದ್ದಾರೆ. ಪಾಲು ಕುಡಿಯುವ, ಓದುವ ಬರೆಯುವ, ಗಂಜಿಯ ಕುಡಿಯುವ ಎಂದೂ ಬಾಡದಿರುವ ಕನಸುಗಳ ನನಸು ಮಾಡುವ ಹೊತ್ತು ದಿಕ್ಕನ್ನು ಅರಿಯುವ, ಬೆಳಕನ್ನು ಕಾಣುವ ಪರಿಸ್ಥಿತಿ ನನ್ನ ಜನಗಳಾದ ದಲಿತರಿಗೆ ಸಿಗಬೇಕು ಎಂಬ ಅನಿವಾರ್ಯತೆಯನ್ನು ಹೊರಹಾಕಿದ್ದಾರೆ. ಎಲ್ಲರಂತೆ ಮಾನವೀಯ ಬದುಕು ನನ್ನ ಜನಗಳದ್ದು ಆಗಿರಬೇಕು ಎಂಬುದೇ ಕವಿಯ ಭಾವನೆಗಳಾಗಿವೆ.
 
*  ಸಂದರ್ಭದೊಂದಿಗೆ ವಿವರಿಸಿರಿ.

1. ಹಾಲನು ಕುಡಿಯದೆ ಹೋದವರು,
ಆಯ್ಕೆ:
- ಈ ವಾಕ್ಯವನ್ನು "ಸಿದ್ದಲಿಂಗಯ್ಯ" ಅವರು ಬರೆದಿರುವ 'ಮೆರವಣಿಗೆ'ಎಂಬ ಕೃತಿಯಿಂದ ಆಯ್ದ"ಹಕ್ಕಿಗಳು" ಎಂಬಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕವಿ ಹೇಳಿದ್ದಾರೆ. ಹಾಲು ಕೊಡುವ ಹಸುಗಳ ಜೊತೆಯಲ್ಲಿಯೇ ಇದ್ದು, ಅವುಗಳ ಮೇಯಿಸಿ ಗಂಜಲ ತೊಳೆದು, ಎಂಜಲು ಬಳಿದರು ನನ್ನ ಜನಗಳು, ಹಾಲು ಕುಡಿಯದೇ ಹೋದವರು, ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

2. ಗಂಜಿಯ ಕಾಣದೆ ದುಡಿದವರು.
ಆಯ್ಕೆ:
- ಈ ವಾಕ್ಯವನ್ನು "ಸಿದ್ದಲಿಂಗಯ್ಯ" ಅವರು ಬರೆದಿರುವ'ಮೆರವಣಿಗೆ'ಎಂಬ ಕೃತಿಯಿಂದ ಆಯ್ದ"ಹಕ್ಕಿಗಳು" ಎಂಬಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕವಿ ಹೇಳಿದ್ದಾರೆದಲಿತರು ಪ್ರತಿದಿನ ಊಟದ ಎಲೆಯನ್ನು ಸ್ವಚ್ಛಗೊಳಿಸಿದರು. ಗಂಜಲವನ್ನೇ ಬಳಿದರು. ಹಸಿವಾದಾಗ ಕುಡಿಯುವ ಗಂಜಿಗೂ ಕಷ್ಟಪಡಬೇಕು ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

3 ಕಮರುವ ಬಣ್ಣದ ಕನಸುಗಳು.
ಆಯ್ಕೆ:
- ಈ ವಾಕ್ಯವನ್ನು "ಸಿದ್ದಲಿಂಗಯ್ಯ" ಅವರು ಬರೆದಿರುವ 'ಮೆರವಣಿಗೆ'ಎಂಬ ಕೃತಿಯಿಂದ ಆಯ್ದ "ಹಕ್ಕಿಗಳು" ಎಂಬಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕವಿ ಹೇಳಿದ್ದಾರೆ ಶೋಷಿತ ವರ್ಗದವರು ಎಲ್ಲರಂತೆ ತಾವುಗಳೂ ಬಣ್ಣ ಬಣ್ಣದ ಕನಸುಗಳನ್ನು
ಕಟ್ಟಿಕೊಂಡವರು, ಆದರೆ ಆ ಕನಸು ನನಸಾಗುವ ಮೊದಲೇ ಕಮರಿ ಹೋಗುತ್ತವೆ ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ. 

4. ಬೆಳಕನು ಅರಸುವ ಹಕ್ಕಿಗಳು.
ಆಯ್ಕೆ:
- ಈ ವಾಕ್ಯವನ್ನು "ಸಿದ್ದಲಿಂಗಯ್ಯ" ಅವರು ಬರೆದಿರುವ 'ಮೆರವಣಿಗೆ'ಎಂಬ ಕೃತಿಯಿಂದ ಆಯ್ದ"ಹಕ್ಕಿಗಳು" ಎಂಬಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕವಿ ಹೇಳಿದ್ದಾರೆ ಗೊತ್ತುಗುರಿಯಿಲ್ಲದ ದಲಿತರು ಸದಾಕಾಲ ಕವಲು ದಾರಿಯಲ್ಲಿ ಪ್ರಯಾಣ ಮಾಡುತ್ತಾರೆ. ಆ ಕತ್ತಲ ದಾರಿಯ ಬೆಳಕು ತಮ್ಮ ಜೀವನದಲ್ಲೂ ಮೂಡಿ ಬರುವುದೇನೋ? ಎಂಬ ಆಶಾಭಾವನೆ ಉಳ್ಳವರಾಗಿದ್ದಾರೆ ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

                            ಭಾಷಾಭ್ಯಾಸ :

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

ಇಳಿ X ಹತ್ತು, 
ಕತ್ತಲು X ಬೆಳಕು, 
ಕನಸು X ನನಸು, 
ಕಮರು X ಅರಳು.

ಈ) ಹಕ್ಕಿಗಳು ಕವಿತೆಯಲ್ಲಿ ಬಳಕೆಯಾಗಿರುವ ಕ್ರಿಯಾಪದಗಳನ್ನು ಪಟ್ಟಿಮಾಡಿರಿ.
ಉದಾ : ಹತ್ತಿ, ಇಳಿ, ಕಾಯ್ದು, ಮೇಯಿಸಿ, ಕುಸಿದು, ಬಾಡಿ, ದುಡಿ, ಕಮರು,

ಉ) ಯಾವುದೇ ಒಂದು ಪದಕ್ಕೆ 'ಗಳು' ಮತ್ತು 'ಆರು' ಪ್ರತ್ಯಯ ಸೇರಿದಾಗ ಬಹುವಚನ ರೂಪ ಅಂತಹ ಪದಗಳನ್ನು 'ಹಕ್ಕಿಗಳು' ಕವಿತೆಯಿಂದ ಆರಿಸಿ ಬರೆಯಿರಿ.'ಗಳು' ಪ್ರತ್ಯಯದ ಪಡೆಯುತ್ತದೆ.
 
ಪದಗಳು 'ಆರು' ಪ್ರತ್ಯಯದ ಪದಗಳು
I. ನಾವುಗಳು
1. ಹೋದವರು  
2. ಕುಸಿದವರು  
3. ಹಕ್ಕಿಗಳು  
4. ಪಯಣಿಗರು  
5. ಬೆಳೆದವರು  
6. ಕನಸುಗಳು  
7. ದುಡಿದವರು  
8. ಹೂವುಗಳು

ಊ) ಈ ಕೆಳಗಿನ ಪದ್ಯದ ಭಾವಾರ್ಥ ಬರೆಯಿರಿ.

ಕುರಿಗಳ ಕಾಯ್ದು ದನಗಳ ಮೇಯಿಸಿ
ಹಾಲನು ಕುಡಿಯುದೆ ಹೋದವರು
ಓದುವ ಬರೆಯುವ ಭಾಗ್ಯವು ಸಿಗದೆ
ಗಿಡಗಳ ಜೊತೆಯಲ್ಲಿ ಬೆಳೆದವರು

          ಶತಶತಮಾನಗಳಿಂದ ಶೋಷಣೆ, ಅನ್ಯಾಯ, ಅವಮಾನ, ನಿರ್ಲಕ್ಷ್ಯ ಹಾಗೂ ತುಳಿತಕ್ಕೆ ಒಳಗಾಗಿದ್ದಾರೆ. ಕುರಿ ದನಗಳ ಕಾಯ್ದು ಮೇಯಿಸುವ, ಹಾಲು ಕೊಡುವ ಹಸುಗಳ ಜೊತೆಯಲ್ಲಿಯೇ ಇದ್ದು, ನನ್ನ ಜನಗಳು, ಹಾಲು ಕುಡಿಯದೇ ಹೋದವರು, ಓದುವ ಬರೆಯುವ ಭಾಗ್ಯವು ಸಿಗದೆ ಗಿಡಗಳ ಜೊತೆಯಲ್ಲಿ ಬೆಳೆದವರಾಗಿದ್ದಾರೆ. ಇಲ್ಲಿ ಕವಿಯು ದಲಿತರ ಮನಸ್ಥಿತಿಯನ್ನು ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಬಾಲಕರ ಮುಖೇನ ಕವಿ ಸಿದ್ಧಲಿಂಗಯ್ಯನವರು ದಲಿತರು ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿನ ಅಡೆತಡೆಗಳನ್ನು ವಿವರಿಸಿದ್ದಾರೆ.

2.ಎಂಜಲು ತೊಳೆದು ಗಂಜಲ ಬಳಿದು
ಗಂಜಿಯ ಕಾಣದೆ ದುಡಿದವರು
ಗುಡಿಗೋಪುರದ ಬಣ್ಣಗಳಾಗಿ

ಚಳಿಯನು ತಡೆಯದೆ ಕುಸಿದವರು  ಬಾಲಕರ ಹಾಡು ದಲಿತರ ಜೀವನ ಶೈಲಿಯನ್ನು ಮತ್ತು ದಾರುಣ್ಯ ಪರಿಸ್ಥಿತಿಯನ್ನು ವ್ಯಕ್ತಪಡಿಸಿದೆ. ದಲಿತ ವರ್ಗದ ಬಾಲಕರು ಎಂಜಲನ್ನು ತೊಳೆದು ಬಳಿದು ಗಂಜಿಯನ್ನು ಕಾಣದೆ, ಗಂಜಿಯ ಕುಡಿಯುವ, ಅವಕಾಶಗಳಿಂದ ವಂಚಿತರಾಗಿದ್ದಾರೆ. ಗುಡಿಗೋಪುರಗಳ ಬಣ್ಣಗಳಾಗಿ ಚಳಿಯನ್ನು ತಡೆಯದೆ ಕುಸಿದರು. ಕವಿ ಸಮಾಜದಲ್ಲಿನ ದಲಿತರ ತುಳಿತವನ್ನು ನೇರವಾಗಿ ಪದ್ಯದ ಮುಖೇನ ಹೊರಹಾಕಿದ್ದಾರೆ.

You Might Like

Post a Comment

0 Comments