Recent Posts

ಕನ್ನಡ ನಾಡು-ನುಡಿ - ೦೯ ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ಕನ್ನಡ ನಾಡು-ನುಡಿ 

ಅ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.  

1. ಪದನರಿದು ನುಡಿಯುವವರು ಯಾರು ಎಂದು ಕವಿ ಹೇಳಿದ್ದಾನೆ?  
ಉತ್ತರ: ಪದನರಿದು ನುಡಿಯುವವರು ನಾಡವರ್ಗಳು ಎಂದು ಕವಿ ಹೇಳಿದ್ದಾನೆ.  

2. ತುಪ್ಪದೊಡನೆ ಯಾವುದನ್ನು ಬೆರೆಸಬಾರದು?  
ಉತ್ತರ: ತುಪ್ಪದೊಡನೆ ಎಣ್ಣೆಯನ್ನು ಬೆರೆಸಬಾರದು.  

3. ಮಹಲಿಂಗರಂಗನ ಪ್ರಕಾರ ಸುಲದ ಬಾಳೆಯ ಹಣ್ಣಿನಂತೆ ಇರುವ ಭಾಷೆ ಯಾವುದು?  
ಉತ್ತರ: ಮಹಲಿಂಗರಂಗನ ಪ್ರಕಾರ  ಕಾಲದ ಬಾಸೆಯ ಹಣ್ಣಿನಂತೆ ಇರುವ ಭಾಷೆ ಕನ್ನಡ.  

ಆ] ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯದಲ್ಲಿ ಉತ್ತರಿಸಿ.  

1. ಕನ್ನಡಿಗರ ವಿಶೇಷತೆಯನ್ನು ಶ್ರೀವಿಜಯ ಹೇಗೆ ಸಾರಿದ್ದಾನೆ?  
ಉತ್ತರ:  ಶ್ರೀವಿಜಯನು  ಕನ್ನಡನಾಡಿನ  ಜನರು  ಪದದ  ಅರ್ಥವನ್ನು  ಅರಿತು ಮಾತನಾಡುವ  ಸಾಮಥ್ರ್ಯವುಳ್ಳವರು.  ತಾವು  ಆಡುವ  ಮಾತನ್ನು  ಅರ್ಥಮಾಡಿಕೊಂಡು ನಡೆಯುವವರಾಗಿದ್ದರು.  ಆ  ಸಾಮಾನ್ಯ  ಜನರು  ನಿಜವಾಗಿಯು  ಚತುರರು,  ಅವರು ಶಿಕ್ಷಣವನ್ನು  ಪಡೆಯದಿದ್ದರು  ಕಾವ್ಯವನ್ನು  ರಚಿಸುವಷ್ಟು  ಪರಿಣತಿ  ಹೊಂದಿದ ಬುದ್ಧಿಯುಳ್ಳವರು'  ಎಂದು  ಕನ್ನಡಿಗರ  ಗುಣ  ವಿಶೇಷತೆ  ಹಾಗೂ  ಕಾವ್ಯ  ಭಕ್ತಿಯನ್ನು ವರ್ಣಿಸಿದ್ದಾನೆ.  

2. ಕನ್ನಡ ಮತ್ತು ಸಂಸ್ಕೃತ ಭಾಷಾ ಬಳಕೆಯ ಬಗ್ಗೆ ನಯಸೇನ ಏನು ಹೇಳುತ್ತಾನೆ?
ಉತ್ತರ:  ನಯಸೇನನು,  ಕಾವ್ಯ  ರಚಿಸುವುದಾದರೆ  ಶುದ್ಧ  ಕನ್ನಡದಲ್ಲಿ  ರಚಿಸಬೇಕು;  ಇಲ್ಲವೇ ಪೂರ್ಣವಾಗಿ  ಸಂಸ್ಕೃತದಲ್ಲಿ  ರಚಿಸಬೇಕು;  ಶುದ್ಧವಾದ  ಕನ್ನಡದಲ್ಲಿ  ಸಂಸ್ಕೃತವನ್ನು  ತಂದು ತುರುಕುವುದು  ಸರಿಯೇ?  ಇವೆರಡನ್ನು  ಬೆರೆಸಿ  ಕಾವ್ಯ  ರಚನೆ  ಮಾಡಿದರೆ  ಅದು  ಎಣ್ಣೆ- ತುಪ್ಪಗಳ ಅಸ್ವಾದ ಮಿಶ್ರಣವಾಗುತ್ತದೆ' ಎಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ.  

3. ಕವೀಂದ್ರರ ಶ್ರೇಷ್ಠತೆಯನ್ನು ನೇಮಿಚಂದ್ರನು ಹೇಗೆ ವರ್ಣಿಸಿದ್ದಾನೆ?  
ಉತ್ತರ:  ನೇಮಿಚಂದ್ರನು  ಕವಿಗಳ  ಕಾವ್ಯ  ಶಕ್ತಿಯನ್ನು  ಕುರಿತು  ಮೆಚ್ಚುಗೆಯ ಮಾತುಗಳನ್ನಾಡುತ್ತಾ  ರಾಮಾಯಣದಲ್ಲಿ  ವಾನರ ಸೈನ್ಯವು  ಮುದ್ರಕ್ಕೆ ಸೇತುವೆಯನ್ನು ಕಟ್ಟಲಿ  ಕಟ್ಟದಿರಲಿ.  ವಾಮನಾವತಾರದಲ್ಲಿ  ವಾಮನನು  ಆಕಾಶವನ್ನು  ತನ್ನ  ಕಾಲಿನಿಂದ ಮುಟ್ಟಲಿ ಮುಟ್ಟದಿರಲಿ. ಮಹಾಭಾರತದಲ್ಲಿ ಅರ್ಜುನನು ಶಿವನ ಗಂಟಲನ್ನು ಒತ್ತಿ ಮೆಟ್ಟಲಿ ಮೆಟ್ಟದಿರಲಿ.  ಆದರೆ  ಕವಿಗಳು  ತಮ್ಮ  ಕೃತಿಗಳಲ್ಲಿ  ವಾನರ  ಸೈನ್ಯದಿಂದ  ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದರು; ವಾಮನನ ಕಾಲಿನಿಂದ ಆಕಾಶವನ್ನು  ಮುಟ್ಟಿದರು; ಅರ್ಜುನನ ಕಾಲನಿಂದ  ಶವನ  ಗಂಟನ್ನು  ಒತ್ತಿ  ಮೆಟ್ಟಿದರು;  ಇದು  ಕವಿಗಸ  ಸಾಮರ್ಥ್ಯ'  ಎಂದು ಹೇಳಿದ್ದಾನೆ.  

4. ಕನ್ನಡ ನುಡಿಯಲ್ಲೇ ಮೋಕ್ಷ ಸಾಧನೆ ಎಂದು ಕವಿ ಮಹಲಿಂಗರಂಗ ಹೇಗೆ ಸಾಧಿಸುತ್ತಾರೆ?  
ಉತ್ತರ:  ಮಹಲಿಂಗರಂಗನು  ಕನ್ನಡ  ಭಾಷೆಯ  ಬಗ್ಗೆ  ವರ್ಣಿಸುತ್ತಾ ಕುಲದ  ಬಾಸೆಯ ಹಣ್ಣಿನಂತೆ;  ಸಿಗುರು  ತೆಗೆದ  ಕಬ್ಬಿನಂತೆ;  ಶಾಖ  ಆರಿಹೋಗಿ  ತಣ್ಣಗಾದ  ಹಾಲಿನಂತೆ ಸುಲಭವಾಗಿರುವ,  ಕುಲತವಾಗಿರುವ  ಕನ್ನಡ  ಭಾಷೆಯನ್ನು  ಅರಿತು,  ಮೋಕ್ಷವನ್ನು ಗಳಸಿಕೊಂಡರೆ ಸಾಲದೇ?  ಸಂಸ್ಕೃತ ಭಾಷೆಯಲ್ಲಿ  ಅಂತಹುದು  ಏನಿದೆ?'  ಎಂದು ಪ್ರಶ್ನಿಸುತ್ತಾನೆ.  ಮುಕ್ತಿ  ಪಡೆಯಲು  ಕನ್ನಡದಲ್ಲೇ  ದೇವರನ್ನು  ಸ್ತುತಿಸಿ  ಮುಕ್ತಿ ಪಡೆಯಬಹುದಲ್ಲವೇ? ಸಂಸ್ಕೃತ ಭಾಷೆಯಷ್ಟೆ ಶಕ್ತಿ ಕನ್ನಡ ಭಾಷೆಗೂ ಇದೆ ಎಂದು ಕವಿ ಅಭಿಪ್ರಾಯಪಟ್ಟಿದ್ದಾನೆ.  

5. ಕನ್ನಡ ನಾಡಿನ ಪ್ರಾಕೃತಿಕ ವರ್ಣನೆಯನ್ನು ಆಂಡಯ್ಯ ಕವಿ ಹೇಗೆ ಸಾರಿದ್ದಾರೆ?   
ಉತ್ತರ:  ಆಂಡಯ್ಯ  ಕನ್ನಡ  ನಾಡಿನ ಸಸ್ಯ ಸಂಪತ್ತನ್ನು  ಕುರಿತು  ಕನ್ನಡನಾಡಿನಲ್ಲ  ಮಲ್ಲಗೆ ಅಲ್ಲದೆ;  ಸಂಪಗೆ  ಅಲ್ಲದೆ;  ಕೆಂಪಾದ  ತೆಂಗು  ಅಲ್ಲದೆ;  ಮಾವು  ಅಲ್ಲದೆ  ಅಡಿಕೆ  ಅಲ್ಲದೆ; ಗಿಡಮರಗಸೇ  ಇಲ್ಲ'  ಎಂದು  ವರ್ಣಿಸುತ್ತಾನೆ.  ಕನ್ನಡ  ನಾಡಿನಲ್ಲ  ಉತ್ತಮ  ಫಲ ನೀಡುವಂತಹ ಸಸ್ಯಗಳು ಸಮೃದ್ಧವಾಗಿವೆ ಎಂಬುದು ಆಂಡಯ್ಯನಿಗೆ ಕನ್ನಡ ನಾಡಿನ ಬಗ್ಗೆ ಇದ್ದ ಅಭಿಮಾನವನ್ನೂ ಅಂದಿನ ಸಮೃದ್ಧಿಯನ್ನೂ ಸೂಚಿಸುತ್ತದೆ.  

ಇ] ಕೆಳಗಿನ ಪ್ರಶ್ನೆಗೆ ಎಂಟು-ಹತ್ತು ವಾಕ್ಯದಲ್ಲಿ ಉತ್ತರಿಸಿ.  

1. ಕನ್ನಡ ನಾಡಿನ ಪ್ರಾಕೃತಿಕ ಸಂಪತ್ತಿನ ಬಗ್ಗೆ ಕವಿಗಳು ಹೇಗೆ ವರ್ಣಿಸಿದ್ದಾರೆ?  
ಉತ್ತರ:  ಆಂಡಯ್ಯ  ಕನ್ನಡ  ನಾಡಿನ  ಸಸ್ಯ ಸಂಪತ್ತನ್ನು  ಕುರಿತು  ಕನ್ನಡನಾಡಿನಲ್ಲ  ಮಲ್ಲಗೆ ಅಲ್ಲದೆ;  ಸಂಪಗೆ  ಅಲ್ಲದೆ;  ಕೆಂಪಾದ  ತೆಂಗು  ಅಲ್ಲದೆ;  ಮಾವು  ಅಲ್ಲದೆ  ಅಡಿಕೆ  ಅಲ್ಲದೆ; ಗಿಡಮರಗಳೇ  ಇಲ್ಲ  ಎಂದು  ವರ್ಣಿತ್ತಾನೆ.  ಕನ್ನಡ  ನಾಡಿನಲ್ಲ  ಉತ್ತಮ  ಫಲ ನೀಡುವಂತಹ ಸಸ್ಯಗಳು ಸಮೃದ್ಧವಾಗಿವೆ ಎಂಬುದು ಆಂಡಯ್ಯನಿಗೆ ಕನ್ನಡ ನಾಡಿನ ಬಗ್ಗೆ ಇದ್ದ ಅಭಿಮಾನವನ್ನೂ ಅಂದಿನ ಸಮೃದ್ಧಿಯನ್ನೂ ಸೂಚಿಸುತ್ತದೆ.   

2 . ಕನ್ನಡ ಭಾಷೆ ಹಾಗೂ ಸಾಹಿತ್ಯದ ಬಗ್ಗೆ ಕವಿಗಳಿಗಿರುವ ಅಭಿಮಾನ ಹೇಗೆ ವ್ಯಕ್ತವಾಗಿದೆ.?  
ಉತ್ತರ:  ಶ್ರೀವಿಜಯನು  ಕನ್ನಡನಾಡಿನ ಸಾಮಾನ್ಯ  ಜನರು  ನಿಜವಾಗಿಯು  ಚತುರರು, ಅವರು  ಶಕ್ಷಣವನ್ನು  ಪಡೆಯದಿದ್ದರು  ಕಾವ್ಯವನ್ನು  ರಚಿಸುವಷ್ಟು ಪರಿಣತಿ  ಹೊಂದಿದ ಬುದ್ಧಿಯುಸ್ಳವರು' ಎಂದು ಕನ್ನಡಿಗರ ಗುಣ ವಿಶೇಷತೆ ವರ್ಣಿಸಿದ್ದಾನೆ.  ನೇಮಿಚಂದ್ರನು  ಕವಿಗಳ  ಕಾವ್ಯ  ಶಕ್ತಿಯನ್ನು  ಕುರಿತು  ಮೆಚ್ಚುಗೆಯ  ಮಾತುಗಳನ್ನಾಡುತ್ತಾ ಕವಿಗಸು  ತಮ್ಮ  ಕೃತಿಗಸಲ್ಲ  ವಾನರ ಸೈನ್ಯದಿಂದ  ಮುದ್ರಕ್ಕೆ ಸೇತುವೆಯನ್ನು  ಕಟ್ಟಿದರು; ವಾಮನನ  ಕಾಲಿನಿಂದ  ಆಕಾಶವನ್ನು  ಮುಟ್ಟಿದರು;  ಅರ್ಜುನನ  ಕಾಲಿನಿಂದ  ಶಿವನ ಗಂಟಲನ್ನು ಒತ್ತಿ ಮೆಟ್ಟಿದರು; ಇದು ಕವಿಗಸ ಸಾಮರ್ಥ್ಯ' ಎಂದು ಹೇಳಿದ್ದಾನೆ.  ನಯಸೇನನು,  ಕಾವ್ಯ  ರಚಿಸುವುದಾದರೆ  ಶುದ್ಧ  ಕನ್ನಡದಲ್ಲಿ  ರಚಿಸಬೇಕು;  ಇಲ್ಲವೇ ಪೂರ್ಣವಾಗಿ  ಸಂಸ್ಕೃತದಲ್ಲಿ  ರಚಿಸಬೇಕು;  ಶುದ್ಧವಾದ  ಕನ್ನಡದಲ್ಲಿ  ಸಂಸ್ಕೃತವನ್ನು  ತಂದು ತುರುಕುವುದು ಸರಿಯಲ್ಲ. ಎಂದು ಹೇಳುತ್ತಾ ಅಚ್ಚಗನ್ನಡದ ಪರದನಿ ಎತ್ತಿದ್ದಾನೆ.  ಮಹಾಲಿಂಗರಂಗನು  ಕನ್ನಡ  ಭಾಷೆಯ  ರಸತೆ,  ಮಧುರತೆ,  ಶಕ್ತಿಯ  ಬಗ್ಗೆ  ವರ್ಣಿಸುತ್ತಾ ಕುಲದ ಬಾಸೆಯ ಹೆಣ್ಣಿನಂತೆ; ಹಗುರು ತೆಗೆದ ಕಬ್ಬಿನಂತೆ; ಶಾಖ ಆರಿಹೋಗಿ ತಣ್ಣಗಾದ ಹಾಲಿನಂತೆ  ಸುಲಭವಾಗಿದ್ದು,  ಅದರಲ್ಲೇ  ಮೋಕ್ಷವನ್ನು  ಗಳಿಸಬಹುದು;  ಸಂಸ್ಕೃತ ಭಾಷೆಯಲ್ಲಿ  ಅಂತಹುದು  ಏನಿದೆ?'  ಎಂದು  ಕನ್ನಡ  ಭಾಷೆಯ  ಸತ್ವವನ್ನು ಅಭಿಮಾನದಿಂದ ಹೇಳಿಕೊಂಡಿದ್ದಾನೆ.  

ಈ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.  

1. ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣಿತಮತಿಗಳ್.  
ಆಯ್ಕೆ:  ಈ  ವಾಕ್ಯವನ್ನು  ಕನ್ನಡ  ನಾಡು  ನುಡಿ  ಪದ್ಯದಲ್ಲರುವ  ಶ್ರೀವಿಜಯ  ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  
ಸಂದರ್ಭ:  ಕವಿರಾಜಮಾರ್ಗದಲ್ಲಿ  ಶ್ರೀವಿಜಯನು  ಕನ್ನಡನಾಡಿನ  ಶ್ರೀಸಾಮಾನ್ಯರೂ  ಸಹ ಹೇಗೆ ಕಾವ್ಯ ರಚನಾ ಶಕ್ತಿಯನ್ನು ಹೊಂದಿದ್ದರೆಂಬುದನ್ನು ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು  ಹೇಳಿದ್ದಾನೆ.  ಕನ್ನಡ  ನಾಡಿನ  ಸಾಮಾನ್ಯಜನರು  ಓದು-ಬರೆಹ ಕಲಿಯದಿದ್ದರೂ ಕಾವ್ಯ ಪ್ರಯೋಗಮಾಡುವುದರಲ್ಲಿ ಪರಿಣಿತರಾಗಿದ್ದರು ಎಂದು ಕವಿ ಹೇಳಿದ್ದಾನೆ.  
ಸ್ವಾರಸ್ಯ:  ಇಲ್ಲಿ ಕನ್ನಡ  ನಾಡಿನ  ಜನಪದರ  ಕವಿತಾ  ಸಾಮಥ್ರ್ಯವನ್ನು  ಕುರಿತು  ಕವಿ ಹೆಮ್ಮೆಯಿಂದ ಹೊಗಳಿರುವುದು ಸ್ವಾರಸ್ಯಕರವಾಗಿದೆ.  

2. ತಕ್ಕುದೆ ಬೆರೆಸಲ್ಕೆ ಘೃತಮುಮಂ ತೈಲಮುಮಂ.  
ಆಯ್ಕೆ:  ಈ  ವಾಕ್ಯವನ್ನು  ಕನ್ನಡ  ನಾಡು  ನುಡಿ  ಪದ್ಯದಲ್ಲಿರುವ  ನಯೇನನು  ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  
ಸಂದರ್ಭ:  ನಯಸೇನನು,  ಕಾವ್ಯ  ರಚಿಸುವುದಾದರೆ  ಶುದ್ಧ  ಕನ್ನಡದಲ್ಲಿ  ರಚಿಸಬೇಕು; ಇಲ್ಲವೇ ಪೂರ್ಣವಾಗಿ ಸಂಸ್ಕೃತದಲ್ಲಿ ರಚಿಸಬೇಕು; ಶುದ್ಧವಾದ ಕನ್ನಡದಲ್ಲಿ ಸಂಸ್ಕೃತವನ್ನು ತಂದು  ತುರುಕುವುದು  ಸರಿಯಲ್ಲ.  ಇವೆರಡನ್ನು  ಬೆರೆಸಿ  ಕಾವ್ಯ  ರಚನೆ  ಮಾಡಿದರೆ  ಅದು ಎಣ್ಣೆ-ತುಪ್ಪಗಳ ಅಸ್ವಾದ ಮಿಶ್ರಣವಾಗುತ್ತದೆ' ಎಂದು ಈ ಸಂದರ್ಭದಲ್ಲಿ ಹೇಳಿದ್ದಾನೆ.  
ಸ್ವಾರಸ್ಯ ಸಂಸ್ಕೃತ ಭಾಷೆಯ  ಪ್ರಭಾವಕ್ಕೆ  ಸಿಕ್ಕಿ  ನಾಶವಾಗುತ್ತಿದ್ದ  ಅಚ್ಚ  ಕನ್ನಡ  ಭಾಷೆಯನ್ನು ಸಂರಕ್ಷಿಸಲು ನಯಸೇನ ಕವಿ ದನಿ ಎತ್ತಿರುವುದು ಇಲ್ಲಿ ಸ್ವಾರಸ್ಯಕರವಾಗಿದೆ.  

3. ಕಟ್ಟುಗೆ ಕಟ್ಟುದಿರ್ಕೆ ಕಡಲಂ ಕಪಿಸಂತತಿ.  
ಆಯ್ಕೆ: ಈ ವಾಕ್ಯವನ್ನು ಕನ್ನಡ ನಾಡು ನುಡಿ ಪದ್ಯದಲ್ಲಿರುವ ನೇಮಿಚಂದ್ರನು ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  
ಸಂದರ್ಭ:  ಕವಿಗಳ  ಕವಿತಾ  ಸಾಮಥ್ರ್ಯವನ್ನು  ವರ್ಣಿಸುವ  ಸಂದರ್ಭದಲ್ಲಿ  ನೇಮಿಚಂದ್ರನು ಈ  ಮಾತನ್ನು  ಹೇಳಿದ್ದಾನೆ.  ಪ್ರಸಿದ್ಧ ಕಾವ್ಯಗಳಲ್ಲಿ  ಬರುವ  ಘಟನೆಗಳು  ನಡೆದವೋ ಇಲ್ಲವೋ ಆದರೆ ಅವನ್ನು ಕವಿಗಳು ತಮ್ಮ ಕಾವ್ಯಗಳ ಮೂಲಕ ಸಾಧ್ಯವಾಗಿಸಿದ್ದಾರೆ ಎಂದು ಕವಿ ಅಭಿಪ್ರಾಯ ಪಟ್ಟಿದ್ದಾನೆ.  
ಸ್ವಾರಸ್ಯ: ರವಿ ಕಾಣದ್ದನ್ನು ಕವಿ ಕಂಡ ಎಂಬ ಲೋಕೋಕ್ತಿಯನ್ನು ನೇಮಿಚಂದ್ರನು ಇಲ್ಲ ಸ್ವಾರಸ್ಯಕರವಾಗಿ ಸಮರ್ಥಿಸಿದ್ದಾನೆ.  

4. ಕಳಿದ ಸಿಗುರಿನ ಕಬ್ಬಿನಂದದಿ.  
ಆಯ್ಕೆ:  ಈ  ವಾಕ್ಯವನ್ನು  ಕನ್ನಡ  ನಾಡು  ನುಡಿ  ಪದ್ಯದಲ್ಲಿರುವ  ಮಹಲಿಂಗರಂಗನು ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  
ಸಂದರ್ಭ:  ಕನ್ನಡ  ಭಾಷೆಯ  ಸರಳತೆ  ಮತ್ತು  ಅದರ  ಶಕ್ತಿಯನ್ನು  ಕುರಿತು  ವರ್ಣಿಸುವ ಸಂದರ್ಭದಲ್ಲಿ  ಕವಿ  ಈ  ಮಾತನ್ನು  ಹೇಳಿದ್ದಾನೆ.  ತಣ್ಣಗಿನ  ಹಾಲಿನಂತೆ,  ಸಿಗುರಿಲ್ಲದ ಕಬ್ಬಿನಂತೆ, ಸುಲಿದ ಬಾಳೆಯ ಹಣ್ಣಿನಂತೆ ಕನ್ನಡ ಸುಲಭ ಮತ್ತು ರುಚಿಕರವೆಂದಿದ್ದಾನೆ.  
ಸ್ವಾರಸ್ಯ:  ಕನ್ನಡ  ಭಾಷೆಯ  ಸರಳ ಸುಂದರತೆಯನ್ನೂ  ಮುಕ್ತಿಗಾಗಿ  ಕನ್ನಡವೇ ಲೇಸೆಂಬುದನ್ನೂ ಕವಿ ಸ್ವಾರಸ್ಯಕರವಾಗಿ ಹೇಳಿದ್ದಾನೆ.  

5. ದಾಳಿಂಬಮಲ್ಲದೊಪ್ಪುವ ಚೆಂದೆಂಗಲ್ಲದೆ.  
ಆಯ್ಕೆ:  ಈ  ವಾಕ್ಯವನ್ನು  ಕನ್ನಡ  ನಾಡು  ನುಡಿ  ಪದ್ಯದಲ್ಲಿರುವ  ಆಂಡಯ್ಯನು  ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  
ಸಂದರ್ಭ:  ಆಂಡಯ್ಯ  ಕವಿ  ಕನ್ನಡ  ನಾಡಿನ  ಸಸ್ಯ  ಸಂಪತ್ತನ್ನು  ಕುರಿತು  ವರ್ಣಿಸುವ ಸಂದರ್ಭದಲ್ಲಿ  ಕನ್ನಡನಾಡಿನಲ್ಲಿ ಮಲ್ಲಿಗೆ  ಅಲ್ಲದೆ;  ಸಂಪಗೆ  ಅಲ್ಲದೆ;  ಕೆಂಪಾದ  ತೆಂಗು ಅಲ್ಲದೆ; ಮಾವು ಅಲ್ಲದೆ ಅಡಿಕೆ ಅಲ್ಲದೆ; ಗಿಡಮರಗಳೇ ಇಲ್ಲ' ಎಂದು ವರ್ಣಿಸಿದ್ದಾನೆ.  
ಸ್ವಾರಸ್ಯ:  ಆಂಡಯ್ಯನಿಗೆ  ಕನ್ನಡ  ನಾಡಿನ  ಬಗ್ಗೆ  ಇದ್ದ  ಅಭಿಮಾನವನ್ನೂ  ಅಂದಿನ ಸಮೃದ್ಧಿಯನ್ನೂ ಇದು ಸೂಚಿಸುತ್ತದೆ.

ಭಾಷಾ ಚಟುವಟಿಕೆ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.  

1. ಖ್ಯಾತಕರ್ಣಾಟಕ ವೃತ್ತಗಳು ಯಾವುವು?  
ಉ: ಕನ್ನಡದಲ್ಲಿ  ಮುಖ್ಯವಾಗಿ  ಉತ್ಪಲಮಾಲ,  ಚಂಪಕಮಾಲ,  ಶಾರ್ದೂಲ  ವಿಕ್ರೀಡಿತ, ಮತ್ರೇಭವಿಕ್ರೀಡಿತ,  ಸ್ರಗ್ಥರಾ,  ಮಹಾಸ್ರಗ್ಥರಾ  ಎಂಬ  ಆರು  ವೃತ್ತಗಳು  ಹೆಸರುವಾಸಿಯಾಗಿವೆ. ಇವುಗಳನ್ನು  ಖ್ಯಾತಕರ್ಣಾಟಕಗಳು ಎನ್ನುತ್ತಾರೆ.

2. ಅಕ್ಷರಗಣಗಳಲ್ಲ ಎಷ್ಟು ವಿಧ? ಅವುಗಳು ಯಾವುವು?  
ಉ: ಅಕ್ಷರಗಣಗಳಲ್ಲಿ  ಎಂಟು ವಿಧಗಳು. ಅವುಗಳೆಂದರೆ,  
ಯಮಾತಾರಾಜಭಾನಸಲಗಂ  
1.  ಯಗಣ  
2.  ಮಗಣ  
3.  ತಗಣ  
4.  ರಗಣ  
5.  ಜಗಣ  
6.  ಭಗಣ  
7.  ನಗಣ  
8.  ಸಗಣ

ಆ) ಕೊಟ್ಟಿರುವ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ, ಗಣ ವಿಭಾಗ ಮಾಡಿ, ಛಂದಸ್ಸಿನ ಹೆಸರನ್ನು ಬರೆಯಿರಿ.

ಇ) ಕೊಟ್ಟಿರುವ ಪದ್ಯಭಾಗಗಳನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ.   
 
1. ಪದನರಿದು ನುಡಿಯಲುಂ ನುಡಿ     
ದುದನರಿದಾರಯಲುಮಾರ್ಪರಾ ನಾಡವರ್ಗಳ್|     
ಚದುರರ್ ನಿಜದಿಂ ಕುರಿತೋ     
ದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್||  

2. ಮಲ್ಲಿಗೆಯಲ್ಲದೆ ಸಂಪಗೆ|     
ಯಲ್ಲದೆ ದಾಳಿಂಬಮಲ್ಲದೊಪ್ಪುವ ಚೆಂದೆಂ||     
ಗಲ್ಲದೆ ಮಾವಲ್ಲದೆ ಕೌಂ|     
ಗಲ್ಲದೆ ಗಿಡುಮರಗಳೆಂಬುವಿಲ್ಲಾ ನಾಡೊಳ್||  

       


 





 
You Might Like

Post a Comment

0 Comments