Recent Posts

ಕಾಫೀ ಕಪ್ಪು  - ೧೦ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

                                                       
                                            
                                                                    ಕಾಫೀ ಕಪ್ಪು                       
                                                                                              - ಡಾ|| ಗುರುರಾಜ ಕರ್ಜಗಿ

 
ಕವಿ/ಲೇಖಕರ ಪರಿಚಯ
?  ಡಾ|| ಗುರುರಾಜ ಕರ್ಜಗಿ ಇವರು ಕ್ರಿ.ಶ. 1952 ರಲ್ಲಿ ಹಾವೇರಿ ಜಿಲ್ಲೆಯ ಕರ್ಜಗಿಯಲ್ಲಿ ಜನಿಸಿದರು.  
?  ಇವರು ಕರುಣಾಳು ಬಾ ಬೆಳಕೆ ಮತ್ತು ಇಪ್ಪತ್ತಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ.
?  ಶ್ರೀಯುತರಿಗೆ ರಾಜ್ಯೋತ್ಸವ ಪ್ರಶಸ್ತಿ ಮತ್ತು ಡಾಕ್ಟರೇಟ್ ಪದವಿ ದೊರೆತಿದೆ.
?  ಪ್ರಸ್ತುತ ಲೇಖನವನ್ನು ಕರುಣಾಳು ಬಾ ಬೆಳಕೆ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.

                                                   ಅಭ್ಯಾಸ
1.ಪದಗಳ ಅರ್ಥ :  

ಅಸೂಯೆ - ಹೊಟ್ಟೆಕಿಚ್ಚು                                  ಆಸ್ವಾದಿಸು - ರುಚಿ ನೋಡುವುದು; ಸವಿಯುವುದು.
ಕೂಡ್ರಿಸಿ - ಕುಳ್ಳಿರಿಸಿ                                               ತಕರಾರು - ಅಡ್ಡಿ; ಆಕ್ಷೇಪಣೆ
ದುದರ್ೈವ - ಕೆಟ್ಟ ಅದೃಷ್ಟ; ಧೌರ್ಭಾಗ್ಯ.     ನಿವೃತ್ತಿ - ವೃತ್ತಿಯಿಂದ ಬಿಡುಗಡೆ ಮಾತು
ಎತ್ತಿದರು - ಮಾತನ್ನು ಆರಂಭಿಸಿದರು.

2.ಪ್ರಶ್ನೆಗಳು :  
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.  

1. ಹೆಡ್ ಮಾಸ್ತರರು ಸಂತೋಷಗೊಂಡದ್ದು ಏಕೆ?

ಮನೆಗೆ ಬಂದ ಹಳೆಯ ವಿದ್ಯಾಥರ್ಿಗಳನ್ನು ಕಂಡು.

2. ವಿದ್ಯಾರ್ಥಿಗಳು ಕಾಫೀ ಕುಡಿಯಲು ಎಂತಹ ಕಪ್ಪುಗಳನ್ನು ಆರಿಸಿಕೊಂಡರು?
ಬೆಲೆಬಾಳುವ ಕಪ್ಪುಗಳನ್ನು ಆರಿಸಿಕೊಂಡರು.

3. ಗುರುಗಳು ಹೇಳಿದಂತೆ ಜೀವನದ ತೊಂದರೆಗಳಿಗೆ ನಿಜವಾದ ಕಾರಣ ಯಾವುದು?
ಉತ್ತಮವಾದದ್ದನ್ನೇ ಪಡೆಯಬೇಕು ಎನ್ನುವ ಆಸೆ. ಬಹುಶಃ ಅದೇ ವಿದ್ಯಾರ್ಥಿಗಳ ತೊಂದರೆಗಳಿಗೆ ಕಾರಣ.

4. ಗುರುಗಳು ಹೇಳಿತಂತೆ ಕಾಫೀ ಮತ್ತು ಕಾಫಿಯ ಕಪ್ಪು ಯಾವುದರ ಪ್ರತೀಕಗಳು?
ಕಾಫೀ ಎಂದರೆ ಜೀವನ ಇದ್ದಂತೆ ಮತ್ತು ಕಾಫಿಯ ಕಪ್ಪು  ಹಣ, ಅಂತಸ್ತು ಅಧಿಕಾರದ ಪ್ರತೀಕವಾಗಿದೆ.

 5. ಗುರುಗಳು ಯಾವುದನ್ನು ರ್ದುದೈವದ ಸಂಗತಿ ಎಂದು ಬಣ್ಣಿಸಿದರು?

ಮತ್ತೊಬ್ಬರ ಕಪ್ಪನ್ನು ನೋಡಿ ಅಸೂಯೆ ಪಡುತ್ತೇವೆ. ಇದು ರ್ದುದೈವದ ಸಂಗತಿ.

6.ಗುರುರಾಜ ಕರ್ಜಗಿ ಅವರ ಅಂಕಣ ಬರಹದ ಶೀಷರ್ಿಕೆ ಯಾವುದು?

ಕರುಣಾಳು ಬಾ ಬೆಳಕೆ.

 7. ಗುರುಗಳು ತಿಳಿಸುವಂತೆ ಯಾವುದನ್ನು ಚೆನ್ನಾಗಿ ಆಸ್ವಾದಿಸಬೇಕು?
ಕಾಫಿಯನ್ನು ಚೆನ್ನಾಗಿ ಆಸ್ವಾದಿಸಬೇಕು.

 8. ಕಾಫಿಯ ರುಚಿಯನ್ನು ಯಾವುದು ಬದಲಾಯಿಸಲಾರದು?
ಕಾಫಿಯ ರುಚಿಯನ್ನು ಕಪ್ಪು ಬದಲಾಯಿಸಲಾರದು.  

ಆ) ಈ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ
 
1. ಹಿರಿಯ ವಿದ್ಯಾಥರ್ಿಳು ಹೆಡ್ ಮಾಸ್ತರರ ಬಳಿ ಯಾವ ವಿಚಾರಗಳನ್ನು ಹೇಳಿಕೊಳ್ಳುತ್ತಿದ್ದರು?
ತಮ್ಮ ತಮ್ಮ ಜೀವನದ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಒಂದಲ್ಲ ಒಂದು ತಕರಾರು, ಎಲ್ಲ ಕಡೆ ವ್ಯಾಪಾರ ಕಡಿಮೆಯಾಗುತ್ತ್ತಿದೆ. ರೂಪಾಯಿ ಬೆಲೆ ಕುಸಿಯುತ್ತದೆ. ಹಣಕ್ಕೆ ಬೆಲೆಯೇ ಇಲ್ಲ, ಮಕ್ಕಳು ಬೆಳೆಯುತ್ತಿದ್ದಾರೆ. ಅವರನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ಈ ರೀತಿಯಾಗಿ ತೊಂದರೆಗಳ ಸರಮಾಲೆ ಬೆಳೆೆಯುತ್ತಿದೆ ಎಂದು ವಿದ್ಯಾರ್ಥಿಗಳು ಹೇಳಿಕೊಳ್ಳುತ್ತಿದ್ದರು.

2. ಹೆಡ್ಮಾಸ್ತರರು ತಂದಿಟ್ಟ ಟ್ರೇನಲ್ಲಿ ಯಾವ ಯಾವ ತರಹದ ಕಪ್ಪುಗಳಿದ್ದವು?
ಹೆಡ್ಮಾಸ್ತರರು  ಒಂದೆರಡು  ಟ್ರೇನಲ್ಲಿ  ಸಮಾರು  30-35  ಕಪ್ಪುಗಳನ್ನು  ತಂದಿಟ್ಟರು.  ತಂದಿಟ್ಟ  ಟ್ರೇನಲ್ಲಿ    ಕೆಲವು  ಅತ್ಯಂತ  ಬೆಲೆ ಬಾಳುವಂತಹವು.  ಚೈನಾ  ಪಿಂಗಾಣಿಗಳು,  ಕೆಲವು  ಸುಂದರ  ಗಾಜಿನವು,  ಕೆಲವು  ಪ್ಲಾಸ್ಟಿಕ್  ಕಪ್ಪುಗಳು  ಇನ್ನೂ  ಕೆಲವು  ಏನೂ  ಬೆಲೆ ಬಾಳದ ಗಾಜಿನವು ಮತ್ತು ಕೆಲವು ಸ್ಟೀಲಿನ ಲೋಟಗಳು ಇದ್ದವು.

3. ಭಗವಂತ ಕೊಟ್ಟ ಈ ಬದುಕನ್ನು ಯಾವ ರೀತಿ ನಡೆಸಬೇಕೆಂದು ಗುರುಗಳು ಹೇಳಿದರು?
ಭಗವಂತ  ಜೀವನ  ಎನ್ನುವ  ಕಾಫೀ  ಕೊಟ್ಟಿದ್ದಾನೆ.  ಅವನು  ಕೊಡುವುದು  ಈ  ಕಾಫೀ  ಮಾತ್ರ.  ಕಪ್ಪುಗಳನ್ನಲ್ಲ.  ಅವನ್ನೆಲ್ಲ  ನಾವು ಮಾಡಿಕೊಂಡಿದ್ದೇವೆ. ಭಗವಂತ ಕೊಟ್ಟ ಈ ಜೀವನವನ್ನು ಆಸ್ವಾದಿಸಿ ಅಲಂಕಾರಗಳ ಬೆನ್ನತ್ತಿ ಓಡಿ ಓಡಿ ಜೀವನವನ್ನು ಮರೆಯಬೇಡಿ ಸಂತೋಷವಾಗಿರುವವರಿಗೆ ಜೀವನದಲ್ಲಿ ಎಲ್ಲವೂ ಚೆನ್ನಾಗಿರುವುದು ಸಿಕ್ಕಿರಲಿಕ್ಕಿಲ್ಲ. ಎಂದು ಹೆಡ್ಮಾಸ್ತರರು ತಿಳಿಸಿದರು.  

ಇ) ಈ ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ

 
1. ಗುರುಗಳು ಸುಖ ಜೀವನದ ಪಾಠವನ್ನು ವಿದ್ಯಾರ್ಥಿಗಳಿಗೆ ಹೇಗೆ ಮನವರಿಕೆ ಮಾಡಿಕೊಟ್ಟರು?
ಗುರುಗಳು ಸುಖ ಜೀವನದ ಪಾಠವನ್ನು ಕಾಫೀ ಕಪ್ಪುಗಳಿಗೆ ಹೋಲಿಸುತ್ತಾ ಈ ರೀತಿಯಾಗಿ ಹೇಳಿದರು. ಮಕ್ಕಳೇ! ನೀವೆಲ್ಲರೂ ಬೆಲೆ ಬಾಳುವ ಕಪ್ಪುಗಳನ್ನೇ ಆರಿಕೊಂಡಿದ್ದೀರಾ! ಸಾಧಾರಣ ಕಪ್ಪುಗಳನ್ನು ಅಲ್ಲಿಯೇ ಬಿಟ್ಟುಬಂದಿರಿ. ಅಂದರೆ ನಿಮಗೆ ಉತ್ತಮವಾದದ್ದನ್ನೇ ಪಡೆಯಬೇಕು ಎನ್ನುವ ಆಸೆ. ಬಹುಶಃ ಅದೇ ನಿಮ್ಮ ತೊಂದರೆಗೆ ಕಾರಣ. ಏಕೆಂದರೆ ಕಾಫೀ ಎಂದರೆ ಜೀವನ, ಕಪ್ಪು ಎಂದರೆ ಹಣ, ಅಂತಸ್ತು ಅಧಿಕಾರ ಇದ್ದಂತೆ. ಅವೆಲ್ಲ ಜೀವನವನ್ನು ಧರಿಸಲು ಬೇಕಾದ ಸಾಧನಗಳು ಅಷ್ಟೇ, ನೀವು ಹಿಡಿದುಕೊಂಡ ಕಪ್ಪು ಕಾಫೀಯ ರುಚಿಯನ್ನು ಬದಲಿಸಲಾರದು. ಆದರೆ ರ್ದುದೈವವೆಂದರೆ ನಾವು ಕಾಫೀಗಿಂತ ಕಪ್ಪಿಗೆ ಹೆಚ್ಚು ಮಹತ್ವಕೊಡುತ್ತೇವೆ. ಮತ್ತೊಬ್ಬರ ಕಪ್ಪನ್ನು ನೋಡಿ ಅಸೂಯೆ ಪಡುತ್ತೇವೆ. ಭಗವಂತ ನಮಗೆ ಜೀವನ ಎನ್ನುವ ಕಾಫೀ ಕೊಟ್ಟಿದ್ದಾನೆ. ಅವನು ಕೊಡುವುದು ಕಾಫೀ ಮಾತ್ರ, ಕಪ್ಪುಗಳನ್ನಲ್ಲ. ಅವನ್ನೆಲ್ಲ ನಾವು ಮಾಡಿಕೊಂಡಿದ್ದೇವೆ ಜೀವನವನ್ನು ಅಸ್ವಾದಿಸಿ ಅಲಂಕಾರಗಳ ಬೆನ್ನಟ್ಟಿ ಓಡಿ ಓಡಿ ಜೀವನವನ್ನು ಮರೆಯಬೇಡಿರಿ. ಜೀವನವನ್ನು ಆಸ್ವಾದಿಸಿ ಕಪ್ಪುಗಳ ಚಿಂತೆ ಬೇಡ, ಕಾಫೀ ಆಶ್ವಾದಿಸಿ ಎಂದು ಹೇಳಿದ್ದಾರೆ.

2. ಸುಖ ಜೀವನ ವ್ಯಕ್ತಿಯ ಒಳಗಿದೆಯೇ ಅಥವಾ ಹೊರಗಿದೆಯೇ ? ಚರ್ಚಿಸಿ.
ಸುಖ ಜೀವನ ವ್ಯಕ್ತಿಯ ಒಳಗಿದೆ. ಏಕೆಂದರೆ ಮನಸ್ಸು ಶುದ್ಧವಾಗಿರಬೇಕು. ನಿರ್ಮಲವಾಗಿರಬೇಕು. ಇವೆರೆಡು ಇರಬೇಕಾದರೆ ಮೊದಲು ದುರಾಸೆ ಬಿಡಬೇಕು. ನಾವು ಕಷ್ಟಪಟ್ಟು ದುಡಿದು ತಿನ್ನಬೇಕು. ಹಾಗೂ ಇತರರಿಗೂ ಸಹಾಯ ಮಾಡಬೇಕು. ಕಷ್ಟ ಇದ್ದವರಿಗೆ ಹಣದ ಮೂಲಕ ಇಲ್ಲವೇ ಮಾರ್ಗದರ್ಶನದ ಮೂಲಕ ಮುಂದೆ ಬರಲು ಸಹಕರಿಸಬೇಕು. ಯಾವುದೇ ಸಹಾಯ ಮಾಡಬೇಕಾದರೆ ಯಾವುದೇ ಫಲವನ್ನು ಬಯಸಬಾರದು, ನಮ್ಮಲ್ಲಿ ಇರುವುದರ ಬಗ್ಗೆ ಹೆಮ್ಮೆ ಪಡಬೇಕು ಹೊರತು ಇತರರ ವಸ್ತುವಿನ ಮೇಲೆ ವ್ಯಾಮೋಹ ಬೇಡ. ಭಗವಂತ ನಮಗೆ ಅಂತಲೇ ಒಂದು ಜೀವನ ನೀಡಿದ್ದಾನೆ. ಅದನ್ನು ಇನ್ನೂ ಸುಂದರವಾಗಿಸೋಣ. ಪ್ರತಿಯೊಂದು ಸನ್ನಿವೇಶವನ್ನು ಆಸ್ವಾದಿಸೋಣ. ಇನ್ನೂ ಎತ್ತರ ಎತ್ತರ ಶ್ರೇಣಿಯನ್ನು ತಲುಪೋಣ. ನಮ್ಮ ಜೀವನದಲ್ಲಿ ಇವೆಲ್ಲವನ್ನು ಶುದ್ಧ ಮನಸ್ಸಿನಿಂದ ಮಾಡಿದರೆ ನಮ್ಮ ಜೀವನ ಸುಖಜೀವನವಾಗುತ್ತದೆ. ಈ) ಸಂದರ್ಭದೊಡನೆ ವಿವರಿಸಿ 1. ನಿಜವಾದ ಶಿಕ್ಷಕನಿಗೆ ಸ್ವಂತ ಮಕ್ಕಳಿಗಿಂತ ವಿದ್ಯಾಥರ್ಿಗಳೇ ಹೆಚ್ಚು ಪ್ರಿಯವಾಗುತ್ತಾರೆ. ಈ  ವಾಕ್ಯವನ್ನು  ಗುರುರಾಜ  ಕರ್ಜಗಿಯವರು  ಬರೆದಿರುವ  ಕರುಣಾಳು  ಬಾ  ಬೆಳಕೆ  ಎಂಬ  ಲೇಖನದಿಂದ  ಆಯ್ದ  ಕಾಫೀ-ಕಪ್ಪು ಎಂಬ ಗದ್ಯಭಾಗದಿಂದ ಆರಿಸಲಾಗಿದೆ. ಈ  ವಾಕ್ಯವನ್ನು  ಲೇಖಕರು  ಹೆಡ್  ಮಾಸ್ಟರನ್ನು  ಕುರಿತು  ಹೇಳಿದ್ದಾರೆ.  ಹಳೆಯ  ವಿದ್ಯಾರ್ಥಿಗಳನ್ನು  ಕಂಡು  ಗುರುಗಳಿಗೆ  ತುಂಬಾ ಸಂತೋಷವಾಗುತ್ತದೆ.  ಅವರಿಗೆ  ಸ್ವಂತ  ಮಕ್ಕಳಿಗಿಂತ  ವಿದ್ಯಾರ್ಥಿಗಳು  ಹೆಚ್ಚು  ಪ್ರಿಯರಾಗುತ್ತಾರೆ.  ಬದುಕಿನ  ಪಾಠ  ಕಲಿಸುತ್ತಾರೆ ವಿದ್ಯಾರ್ಥಿಗಳ ಯಶಸ್ಸನ್ನು ಬಯಸುತ್ತಾರೆ. ಸ್ವಂತ ಮಕ್ಕಳಿಗಿಂತ ವಿದ್ಯಾರ್ಥಿಗಳೇ ಅವರಿಗೆ ಹೆಚ್ಚು ಪ್ರಿಯರಾಗುತ್ತಾರೆ.

2. ನನ್ನ ಕಾಫೀ ಕೂಡಾ ತುಂಬಾ ಚನ್ನಾಗಿರುತ್ತದೆ.
ಈ  ವಾಕ್ಯವನ್ನು  ಗುರುರಾಜ  ಕರ್ಜಗಿಯವರು  ಬರೆದಿರುವ  ಕರುಣಾಳು  ಬಾ  ಬೆಳಕೆ  ಎಂಬ  ಲೇಖನದಿಂದ  ಆಯ್ದ  ಕಾಫೀ-ಕಪ್ಪು ಎಂಬ ಗದ್ಯಭಾಗದಿಂದ ಆರಿಸಲಾಗಿದೆ. ಈ  ವಾಕ್ಯವನ್ನು  ಹಿರಿಯ  ವಿದ್ಯಾರ್ಥಿಗಳು  ಹೆಡ್  ಮಾಸ್ಟರರನ್ನು  ನೋಡಲು  ಮನೆಗೆ  ಬಂದಾಗ  ಹೆಡ್  ಮಾಸ್ಟರ್  ಹಿರಿಯ ವಿದ್ಯಾರ್ಥಿಗಳಿಗೆ ಈ ಮಾತನ್ನು ಹೇಳುತ್ತಾರೆ. ವಿದ್ಯಾರ್ಥಿಗಳನ್ನು ಕಂಡರೆ ಸ್ವಂತ ಮಕ್ಕಳಿಗಿಂತ ಹೆಚ್ಚು ಪ್ರೀತಿ, ಒಡನಾಟ, ಬಾಂಧವ್ಯವನ್ನು ನಾವು ಇಲ್ಲಿ ಕಾಣಬಹುದು.

3. ನೀವೇ ಕಾಫೀ ಹಾಕಿಕೊಳ್ಳಿ ಆ ಮೇಲೆ ಕುಳಿತು ಮಾತನಾಡೋಣ
ಈ  ವಾಕ್ಯವನ್ನು  ಗುರುರಾಜ  ಕರ್ಜಗಿಯವರು  ಬರೆದಿರುವ  ಕರುಣಾಳು  ಬಾ  ಬೆಳಕೆ  ಎಂಬ  ಲೇಖನದಿಂದ  ಆಯ್ದ  ಕಾಫೀ-ಕಪ್ಪು ಎಂಬ ಗದ್ಯಭಾಗದಿಂದ ಆರಿಸಲಾಗಿದೆ. ಈ ಮಾತನ್ನು ಹೆಡ್ ಮಾಸ್ಟರ್ ವಿದ್ಯಾರ್ಥಿಗಳಿಗೆ ಹೇಳಿದರು. ಬಿಸಿ ಬಿಸಿ ಕಾಫೀಯನ್ನು ತಂದು ಒಂದು  ಪಾತ್ರೆಯಲ್ಲಿಡುತ್ತಾರೆ. ಮತ್ತು 30-35 ಕಾಫೀ ಕಪ್ಪುಗಳನ್ನು ಸಹ ಇಡುವ ಸಂದರ್ಭದಲ್ಲಿ ಹೇಳುತ್ತಾರೆ. ಅಂದರೆ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಹೊಂದಲು ಮನಃಶಾಂತಿ  ಕಳೆದು  ಕೊಳ್ಳುತ್ತಾರೆ.  ಕಾಫೀ  ಕಪ್ಪುಗಳು  ಉದಾಹರಣೆ  ತೆಗೆದುಕೊಳ್ಳುತ್ತಾ  ಅವರ  ಸಮಸ್ಯೆಗೆ  ಕಾರಣ  ತಿಳಿಸುತ್ತಾ ನೆಮ್ಮದಿಯ ಜೀವನ ನಡೆಸಲು ಮಾರ್ಗದರ್ಶನ ನೀಡುತ್ತಾರೆ.

 4 ನೀವು ಗಮನಿಸಿದ್ದೀರಾ ? ನೀವೆಲ್ಲ ಎಂಥೆ ಕಪ್ಪು ಆರಿಸಿಕೊಂಡಿದ್ದೀರಿ?
ಈ ವಾಕ್ಯವನ್ನು ಗುರುರಾಜ ಕರ್ಜಗಿಯವರು ಬರೆದಿರುವ ಕರುಣಾಳು ಬಾ ಬೆಳಕೆ ಎಂಬ ಲೇಖನದಿಂದ ಆಯ್ದ ಕಾಫೀ-ಕಪ್ಪು ಎಂಬ ಗದ್ಯಭಾಗದಿಂದ ಆರಿಸಲಾಗಿದೆ
 ಈ ವಾಕ್ಯವನ್ನು ಕಾಫೀಯನ್ನು ತಂದಿಟ್ಟು ಕಪ್ಪುಗಳಿಗೆ ಕಾಫಿ     ಹಾಕಿಕೊಳ್ಳಲು ಹೇಳುತ್ತಾ ಮೇಲಿನ ಮಾತು ಹೇಳುತ್ತಾರೆ. ಆಸೆಯೇ ತೊಂದರೆಗೆ ಕಾರಣ. ಕಾಫೀ ಜೀವನವನ್ನು, ಕಪ್ಪು ಹಣ, ಆಸೆ, ಅಧಿಕಾರಕ್ಕೆ ಹೋಲಿಸಿ ಜೀವನ ಮಾರ್ಗವನ್ನು ವಿದ್ಯಾಥರ್ಿಗಳಿಗೆ ತಿಳಿಸಿ ಕೊಡುತ್ತಾ ಮೇಲಿನ ಮಾತು ಹೇಳುತ್ತಾರೆ.

5. ಭಗವಂತ ನಿಮಗೆ ಜೀವನ ಎನ್ನುವ ಕಾಫೀ ಕೊಂಡಿದ್ದಾನೆ.

ಈ ವಾಕ್ಯವನ್ನು ಗುರುರಾಜ ಕರ್ಜಗಿಯವರು ಬರೆದಿರುವ ಕರುಣಾಳು ಬಾ ಬೆಳಕೆ ಎಂಬ ಲೇಖನದಿಂದ ಆಯ್ದ ಕಾಫೀ-ಕಪ್ಪು ಎಂಬ ಗದ್ಯಭಾಗದಿಂದ ಆರಿಸಲಾಗಿದೆ 
ಈ ವಾಕ್ಯವನ್ನು ಹೆಡ್ ಮಾಸ್ಟರ್ ವಿದ್ಯಾಥರ್ಿಗಳಿಗೆ ಹೇಳುತ್ತಾರೆ. ನಾವು ಕಾಫಿಗಿಂತ ಕಪ್ಪಿಗೆ ಹೆಚ್ಚು ಮಹ ತ್ವ ಕೊಡುತ್ತೇವೆ. ಮತ್ತು ಬೇರೆಯವರ ಕಪ್ಪನ್ನು ನೋಡಿ ಅಸೂಯೆ ಪಡುತ್ತೇವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತಾ ಮಾರ್ಗದರ್ಶನ ಮಾಡುತ್ತಾರೆ. 
You Might Like

Post a Comment

0 Comments