Recent Posts

ವಚನಗಳು - ೧೦ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


                                                                          ವಚನಗಳು             
                                                         
 ಕವಿ/ಲೇಖಕರ ಪರಿಚಯ 
  
                      
1) ಬಸವಣ್ಣ
?  ಬಸವಣ್ಣನವರು 12 ನೇ ಶತಮಾನದಲ್ಲಿ ಬಿಜಾಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಜನಿಸಿದರು.
?  ಇವರು ಬರೆದ ಕೃತಿಗಳು ಬಸವಣ್ಣನವರ ವಚನಗಳು.
?  ಇವರ ವಚನಗಳ ಅಂಕಿತ ಕೂಡಲ ಸಂಗಮ ದೇವ.                       
               
2) ಅಕ್ಕಮಹಾದೇವಿ.
?  ಅಕ್ಕಮಹಾದೇವಿ ಅವರು 12 ನೇ ಶತಮಾನದಲ್ಲಿ ಶಿವಮೊಗ್ಗ ಜಿಲ್ಲೆಯ ಉಡುತಡಿ ಎಂಬಲ್ಲಿ ಜನಿಸಿದರು.
?  ಇವರು ಬರೆದ ಕೃತಿಗಳೆಂದರೆ ಯೋಗಾಂಗ ತ್ರಿವಿಧಿ ಮತ್ತು ಅಕ್ಕಮಹಾದೇವಿ ವಚನಗಳು.
?  ಇವರ ವಚನಗಳ ಅಂಕಿತ ಚೆನ್ನಮಲ್ಲಿಕಾರ್ಜುನ.                                             
                           
3)ಸೊನ್ನಲಿಗೆಯ ಸಿದ್ಧರಾಮ
?  ಸೊನ್ನಲಿಗೆ ಸಿದ್ಧರಾಮ ಅವರು 12ನೇ ಶತಮಾನದಲ್ಲಿ ಸೊನ್ನಲಿಗೆಯಲ್ಲಿ ಜನಿಸಿದರು.
?  ಇವರು ಬರೆದ ಕೃತಿಗಳು ಸೊನ್ನಲಿಗೆ ಸಿದ್ಧರಾಮನ ವಚನಗಳು.
?  ಇವರ ವಚನಗಳ ಅಂಕಿತ ಕಪಿಲಸಿದ್ಧ ಮಲ್ಲಕಾರ್ಜುನ.

                                                                          ಅಭ್ಯಾಸ
1.ಪದಗಳ ಅರ್ಥ :  

ಅಗಲು - ಊಟದ ತಟ್ಟೆ                                                 
ಅನ್ನಕ್ಕ - ತನಕ ಬಾನ - ಅನ್ನ                                                      
ಹಯನು - ಹಾಲು; ಹಾಲಿಗೆ ಸಂಬಂಧಿಸಿದ್ದು.

 2. ಪ್ರಶ್ನೆಗಳು :
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.  


1. ಬಸವಣ್ಣನವರು ಜನರ ಯಾವ ಧಾರ್ಮಿಕ ನಂಬಿಕೆಗಳನ್ನು ಖಂಡಿಸಿದ್ದಾರೆ?

ಆ ಕಾಲದಲ್ಲಿದ್ದ ಮೂಢನಂಬಿಕೆಗಳನ್ನು ಖಂಡಿಸಿದ್ದಾರೆ.

2. ವೇಷ ಮತ್ತು ಆಚರಣೆಗಳ ನಡುವಿನ ಸಂಬಂಧ ಹೇಗಿರಬೇಕೆಂದು ಸಿದ್ಧರಾಮ ಹೇಳುತ್ತಾರೆ?
ಸಿದ್ಧರಾಮನ ಪ್ರಕಾರ ವೇಷ ಮತ್ತು ಆಚರಣೆಗಳ ನಡುವಿನ ಸಂಬಂಧ ಒಂದೇ ಆಗಿರಬೇಕು.  

3. ವೇದಾಂತವನ್ನು ಓದಿದವನು ಹೇಗಿರಬೇಕೆಂದು ಸಿದ್ಧರಾಮ ಹೇಳುತ್ತಾರೆ?
ಮಾನವ ಅರ್ಥ ಮಾಡಿಕೊಂಡ ಮೇಲೆ ಬ್ರಹ್ಮನಾಗಬೇಕು.

'4. ಕೆರೆಗಳು ನಿಷ್ಪ್ರಯೋಜಕ ಆಗುವುದು ಯಾವಾಗ?
 ಪುಣ್ಯ ತೀರ್ಥಗಳು ಬರದ ಮೇಲೆ ನಾನಾ ಕೆರೆಗಳನ್ನು ತೋಡಿ ಫಲವಿಲ್ಲವೆಂದು ಹೇಳಿದ್ದಾರೆ.

5. ಧನವಿದ್ದವರಲ್ಲಿ ಇರಬೇಕಾದ ಗುಣ ಯಾವುದು?
ಧನವಿದ್ದವರಲ್ಲಿ ಇರಬೇಕಾದ ಗುಣ ದಯೆ.

6. ಅಕ್ಕಮಹಾದೇವಿಯು ತನ್ನ ಬದುಕು ಯಾವಾಗ ಫಲದಾಯಕ ಆಗುತ್ತದೆಂದು ಹೇಳುತ್ತಾರೆ.?
ಚೆನ್ನ ಮಲ್ಲಿಕಾರ್ಜುನ ದೇವರ ಜ್ಞಾನವಿದ್ದರೆ.

7. ಸೊನ್ನಲಿಗೆ ಸಿದ್ಧರಾಮನ ವಚನಗಳ ಅಂಕಿತ ಯಾವುದು?
ಕಪಿಲಸಿದ್ಧ ಮಲ್ಲಿಕಾರ್ಜುನ.

 8. ಬಸವಣ್ಣನವರು ಮರ ಮತ್ತು ಜಲ ಏನಾಗುತ್ತವೆಂದು ಹೇಳಿದ್ದಾರೆ?
ಮರವು ಒಣಗಿ ಹೋಗುತ್ತದೆ. ಜಲವು  ಬತ್ತಿ ಹೋಗುತ್ತದೆಂದು ಹೇಳಿದ್ದಾರೆ.   

ಆ) ಈ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ

1. ಬಸವಣ್ಣನವರು ಜನರ ಧಾರ್ಮಿಕ ನಂಬಿಕೆಗಳನ್ನು ಏಕೆ ಖಂಡಿಸಿದ್ದಾರೆ?

ಜನರು  ನೀರನ್ನು  ಕಂಡಲ್ಲಿ  ಮುಳುಗುತ್ತಾರೆ.  ಮರವ     ನ್ನು  ಕಂಡಾಗ  ಸುತ್ತುತ್ತಾರೆ.  ಹೀಗೆ  ಬತ್ತುವ  ಜಲವನ್ನು,    ಒಣಗಿದ  ಮರವನ್ನು ಮೆಚ್ಚಿದವರು  ಕೂಡಲಸಂಗಮನನ್ನು  ಅರಿಯಲು  ಸಾಧ್ಯವಿಲ್ಲ  ಎಂದು  ಹೇಳುತ್ತಾರೆ.  ಹೀಗೆ  ಆ  ಕಾಲದಲ್ಲಿದ್ದ  ಮೂಢನಂಬಿಕೆಯನ್ನು ಖಂಡಿಸುತ್ತಾ  ಜನರು  ಅರ್ಥವಿಲ್ಲದ  ಆಚರಣೆಯನ್ನು  ದೂರವಿಡಬೇಕು.  ಆದುದರಿಂದ  ಬಸವಣ್ಣನವರು  ಧಾಮರ್ಿಕ  ನಂಬಿಕೆಯನ್ನು ಖಂಡಿಸಿದ್ದಾರೆ.

2. ರೂಪಿಸಿದ್ದು ಫಲವೇನು ಗುಣವಿಲ್ಲದನಕ್ಕೆ ಈ ಮಾತಿನ ವೈಶಿಷ್ಟ್ಯವೇನು?
ಗುಣವಿಲ್ಲದ ಮೇಲೆ ಸುಂದರವಾದ ರೂಪವಿದ್ದು ಫಲವಿಲ್ಲ ಎಂದು ಅಕ್ಕಮಹಾದೇವಿ ವಿವರಿಸಿದ್ದಾರೆ. ಮಾನವನ ರೂಪಕ್ಕಿಂತ ಅವನಲ್ಲಿರುವ ಗುಣವು ಹೆಚ್ಚು ಪ್ರಾಮುಖ್ಯತೆಯನ್ನು ವಹಿಸುತ್ತದೆ. ಆದ್ದರಿಂದ ಮಾನವನ ರೂಪಕ್ಕಿಂತ ಅವನಲ್ಲಿರುವ ಗುಣವು ಮಿಗಿಲಾಗಿದೆ. ರೂಪವಿಲ್ಲದ್ದಿದ್ದರೂ  ಒಳ್ಳೆಯ ಗುಣವಿದ್ದಲ್ಲಿ ಎಲ್ಲರೂ ಮೆಚ್ಚುತ್ತಾರೆ  

ಇ) ಈ ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿರಿಸಿರಿ

1. ಬಸವಣ್ಣನವರು ಜನರ ಮೌಡ್ಯತೆಯನ್ನು ಯಾವ ರೀತಿ ಖಂಡಿಸಿದ್ದಾರೆ?

ತಮ್ಮ ವಚನದಲ್ಲಿ ಜನರ ಸ್ವಭಾವವನ್ನು ವಿವರಿಸುತ್ತಾ, ಜನರು ನೀರನ್ನು ಕಂಡಲ್ಲಿ ಮುಳುಗುತ್ತಾರೆ. ಮರವನ್ನು ಕಂಡಾಗ ಸುತ್ತುತ್ತಾರೆ. ಹೀಗೆ ಬತ್ತುವ ಜಲವನ್ನು, ಒಣಗಿದ ಮರವನ್ನು ಮೆಚ್ಚಿದವರು ಕೂಡಲಸಂಗಮನನ್ನು ಅರಿಯಲು ಸಾಧ್ಯವಿಲ್ಲವೆಂದು ಹೇಳುತ್ತಾರೆ. ಹೀಗೆವನ್ನು ನಡೆಸಬೇಕೆಂದು ತಿಳಿಸುತ್ತಾರೆ.

2. ಬಾಹ್ಯ ಹಾಗೂ ಆಂತರಿಕ ನಡುವಳಿಕೆಗಳಲ್ಲಿ ಸಾಮ್ಯತೆ ಇರಬೇಕೆಂದು ಸಿದ್ಧರಾಮನು ತನ್ನ ವಚನದಲ್ಲಿ ಹೇಗೆ ಪ್ರತಿಪಾದಿಸಿದ್ದಾನೆ?

ಸೊನ್ನಲಿಗೆಯ ಸಿದ್ಧರಾಮ ತನ್ನ ವಚನದಲ್ಲಿ ಧರಿಸಿದಂತೆ ವೇಷಕ್ಕೆ ತಕ್ಕ ಆಚರಣೆ ಇಲ್ಲದ ಮೇಲೆ     ವೇಷ ಧರಿಸಿ ಫಲವಿಲ್ಲ. ತನ್ನ ತಾನು ಅರ್ಥ ಮಾಡಿಕೊಂಡು ಬ್ರಹ್ಮನಾಗದ ಮೇಲೆ ವೇದಾಂತವನ್ನು ಓದಿ ಫಲವಿಲ್ಲ. ಪುಣ್ಯ ತೀರ್ಥಗಳು ಬರದ ಮೇಲೆ ನಾನಾ ಕೆರೆಗಳನ್ನು ತೋಡಿ ಫಲವಿಲ್ಲ ಎಂದು ತಿಳಿಸುತ್ತಾರೆ. ಹೀಗೆ ವಚನಕಾರರು ಅರ್ಥವಿಲ್ಲದ ಆಚರಣೆಗಳನ್ನು ದೂರವಿಟ್ಟು ಪ್ರಾಮಾಣಿಕವಾಗಿರಬೇಕು ಎಂದು ತಿಳಿಸುತ್ತಾರೆ.

3. ಅಕ್ಕಮಹಾದೇವಿ ತನ್ನ ಬದುಕು ಫಲದಾಯಕವಾಗುವುದನ್ನು ಯಾವ ನಿದರ್ಶನಗಳೊಂದಿಗೆ ಸಮರ್ಥಿಸುತ್ತಾಳೆ?
ನೆರಳಿಲ್ಲದ ಮೇಲೆ ಮರವಿದ್ದು ಪ್ರಯೋಜನವಿಲ್ಲ, ದಯವಿಲ್ಲದ ಮೇಲೆ ಅಂತಹ ವ್ಯಕ್ತಿಯ ಬಳಿ ಅಪಾರವಾದ ಧನವಿದ್ದೂ ಫಲವಿಲ್ಲ. ಹಯನು ಎಂದರೆ ಹಾಲು ಮತ್ತು ಹಾಲಿಗೆ ಸಂಬಂಧಿಸಿದ ಪದಾರ್ಥಗಳಿಲ್ಲದ ಮೇಲೆ ಮನೆಯಲ್ಲಿ ಹಸುವಿದ್ದೂ ಫಲವಿಲ್ಲ. ಒಳ್ಳೆಯ ಗುಣವಿಲ್ಲದ ಮೇಲೆ ಸುಂದರವಾದ ರೂಪವಿದ್ದೂ ಫಲವಿಲ್ಲ. ಬಾನ ಎಂದರೆ ಅನ್ನವಿಲ್ಲದ ಮೇಲೆ ಅಗಲು ಎಂದರೆ ಊಟದ ಬಟ್ಟಲು ಇದ್ದು ಫಲವಿಲ್ಲ. ಹಾಗೆಯೇ ಚೆನ್ನ ಮಲ್ಲಕಾರ್ಜುನ ದೇವರ ಜ್ಞಾನವಿಲ್ಲದ ಮೇಲೆ ತಾನಿದ್ದೂ ಫಲವಿಲ್ಲ. ಎಂದು ತಿಳಿಸುತ್ತಾರೆ..  

ಈ) ಸಂದರ್ಭದೊಡನೆ ವಿವರಿಸಿ

1. ನೀರ ಕಂಡಲ್ಲಿ ಮುಳುಗುವರಯ್ಯ
 ಈ ವಾಕ್ಯವನ್ನು ವಚನಗಳು ಎಂಬ ಪದ್ಯದಿಂದ ಆರಿಸಲಾಗಿದೆ.
ಈ  ವಾಕ್ಯವನ್ನು  ಬಸವಣ್ಣನರವರು  ಹೇಳಿದ್ದಾರೆ.  ಜನರು  ನಿಜವಾಗಿ  ಹೊಂದಿರಬೇಕಾದ  ಭಕ್ತಿಯನ್ನು  ವಿವರಿಸುತ್ತಾ  ಜನರು  ನೀರನ್ನು ಕಂಡಲ್ಲಿ  ಮುಳುಗುವರು,  ಮರ  ಕಂಡಲ್ಲಿ  ಸುತ್ತುವರು,  ಬತ್ತುವ  ಜಲವ  ಒಣಗುವ  ಮರವ  ಮೆಚ್ಚಿದವರು  ದೇವರ  ಜ್ಞಾನವನ್ನು ತಿಳಿಯುವರೇ?  ಎಂದು  ಪ್ರಶ್ನಿಸುತ್ತ  ಮೂಢನಂಬಿಕೆಯನ್ನು  ಖಂಡಿಸುತ್ತ,  ಅರ್ಥವಿಲ್ಲದ  ಆಚರಣೆ  ಬಿಡಬೇಕೆಂದು  ತಿಳಿಸುವಾಗ ಹೇಳಿದ್ದಾರೆ.

2. ವೇದಾಂತವನೋದಿ ಫಲವೇನಯ್ಯಾ?
ಈ ವಾಕ್ಯವನ್ನು ಸೊನ್ನಲಿಗೆಯ ಸಿದ್ಧರಾಮನ ವಚನಗಳು ಎಂಬ ಪದ್ಯದಿಂದ ಆರಿಸಲಾಗಿದೆ.
ಈ  ವಾಕ್ಯವನ್ನು  ಸೊನ್ನಲಿಗಿಯ  ಸಿದ್ಧರಾಮರು  ವೇದಾಂತದ  ವೈಶಿಷ್ಠದ  ಬಗ್ಗೆ  ವಿವರಿಸುವಾಗ  ಹೇಳಿದ್ದಾರೆೆ.  ವೇದಾಂತವು  ಹೆಚ್ಚು ಮುಖ್ಯವಾಗಿದೆ. ಇಂದಿನ ಯುಗದಲ್ಲಿ ವೇದಾಂತ ತಿಳಿಯದಿದ್ದರೂ ವೇದಾಂತ ತಿಳಿಯುವಂತೆ ತೋರ್ಪಡಿಕೆ ಮಾಡುತ್ತಾರೆ. ಆದ್ದರಿಂದ ತಾನು ಅರ್ಥ ಮಾಡಿಕೊಂಡು ಬ್ರಹ್ಮನಾಗದ ಮೇಲೆ ವೇದಾಂತವನ್ನು ಓದಿ ಫಲವೇನು? ಎಂದು ಹೇಳಿದ್ದಾರೆ.

3. ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ
ಈ ವಾಕ್ಯವನ್ನು ವಚನಗಳು ಎಂಬ ಪದ್ಯದಿಂದ ಆರಿಸಲಾಗಿದೆ.
ಈ  ವಾಕ್ಯವನ್ನು  ಅಕ್ಕಮಹಾದೇವಿ  ಹೇಳಿದ್ದಾರೆ.  ನಿಜವಾದ  ಜ್ಞಾನವಿರಬೇಕು.  ಎಂದು  ವಿವರಿಸುತ್ತಾ,  ನೆರಳು  ನೀಡದ  ಮರ,  ಹಾಲು ಕೊಡದ  ಹಸು,  ಗುಣವಿಲ್ಲದ  ರೂಪದಿಂದ  ಯಾವ  ಫಲವಿಲ್ಲವೋ  ಹಾಗೆ  ಅನ್ನವಿಲ್ಲದ  ತಟ್ಟೆಯಿಂದ  ಏನು  ಪ್ರಯೋಜನವಿಲ್ಲ  ಎಂದು ತಿಳಿಸುವಾಗ ಹೇಳಿದ್ದಾರೆ.   
You Might Like

Post a Comment

0 Comments