Recent Posts

ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ - ೧೦ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


                                            
ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ       


 ಕವಿ/ಲೇಖಕರ ಪರಿಚಯ    
  ಕುಮಾರವ್ಯಾಸನ ( ಗದುಗಿನ ನಾರಣಪ್ಪ) ಊರು ಗದುಗಿನ ಕೋಳಿವಾಡ. ಈತನ ಕಾಲ ಸುಮಾರು 1430. ?  ಇವರು ಬರೆದ ಕೃತಿಗಳು ಕರ್ನಾಟ ಭಾರತ ಕಥಾಮಂಜರಿ ಅಥವಾ ಗದುಗಿನ ಭಾರತ ಮತ್ತು ಐರಾವತ. ?  ಈತನನ್ನು ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದು ಕರೆಯಲಾಗುತ್ತದೆ.
                                   
                                                                     ಅಭ್ಯಾಸ
1.ಪದಗಳ ಅರ್ಥ :  

ಪದ್ಯ-1
 
ಕಡೆ - ಕೊನೆ. ಹಾಯವು - ದಾಟದು; ತಾಗದು.
ಬಲಗಡಲು - ಬಲ + ಕಡಲು (ಆದೇಶ ಸಂಧಿ).  ಬಲವೆಂಬಕಡಲು (ಕರ್ಮಧಾರಯ ಸಮಾಸ).
ಬಲ - ಸೈನ್ಯ. ಕಡಲು - ಸಮುದ್ರ.
ಮನವೀಸಾಡಲಾರದು- (ಮನವು + ಈಸಾಡಲು + ಆರದು) ಮನವು ಈಜಲಾರದು.
ಒಡಲುವಿಡಿದಿರಲೇನ - ಒಡಲು+ ಪಿಡಿ - ಒಡಲುವಿಡಿ (ಅದೇಶ ಸಂಧಿ). ಒಡಲು + ಪಿಡಿದು + ಇರಲು + ಏನು - ದೇಹವನ್ನು ಹೊಂದಿ ಇರುವಾಗ ಏನನ್ನು.
ಪೊಡವಿ (ದ್ಭ) - ಪೃಥ್ವಿ (ತ್ಸ); ಭೂಮಿ.
ಈದುದೋ - ಹೆತ್ತಿದೆಯೋ; ಮರಿಹಾಕಿದೆಯೋ.
ಮೋಹರ - ಸೈನ್ಯ.
ಮೃಡ - ಶಿವ.  
ಕಾದಿಗೆಲಿದೆವು - ಯುದ್ಧಮಾಡಿ ಗೆದ್ದಂತೆಯೇ.  

ಪದ್ಯ - 2. 
ಸಂವರಿಸಿ - ಸಜ್ಜುಗೊಳಿಸಿ. ಒಟ್ಟುಗೂಡಿಸಿ.
ಮುಂಜೆರಗು - ಸೆರಗ + ಮುಂದು (ಅಂಶಿ ಸಮಾಸ) ಮುಂ+ ಸೆರಗು - ಮುಂಜೆರಗು (ಆದೇಶ ಸಂಧಿ).
ನಿಟ್ಟೋಟ - ನಿಡಿದು ಓಟ (ಕರ್ಮಧಾರಯ ಸಮಾಸ).
ಬಿಟ್ಟಮಂಡೆ - ಕೂದಲು ಕೆದರಿದ ತಲೆ.   

ಪದ್ಯ - 3.
ಮನದಲೊಡಲೊಡೆವಂತೆ - ಮನದಲಿ + ಒಡಲು + ಒಡೆವಂತೆ,
ಒಡಲು - ದೇಹ, ಶರೀರ. ಗಜರು -ಗದರಿಸು.
ವನಜ - ಜಲದಲ್ಲಿ ಜನಿಸಿದ್ದು; ತಾವರೆ.
ವನಜಮುಖಿ - ತಾವರೆಯಂತೆ ಮುಖ ಉಳ್ಳವಳು.
ಸೊರಹು - ಬಾಯಿಗೆ ಬಂದಂತೆ ಹೇಳು.
ಅನುವರದೊಳೇನಾಯ್ತು -ಅನುವರದೊಳು + ಏನು +ಆಯ್ತು.
ಅನುವರ - ಯುದ್ಧ.
ರಿಪು - ಶತ್ರು.
ವಾಹಿನಿ - ಸೈನ್ಯ.
ಹಲುಗಿರಿಯೆ -ಹಲು + ಕಿರಿಯೆ(ಆದೇಶ ಸಂಧಿ).
ನಾಡ ನರಿ - ಊರಿನ ನರಿ ; ಅಂಜುಬುರುಕ ನರಿ.  

ಪದ್ಯ - 4.
ಧುರದಲೋಡಿದ -ಧುರದಲಿ + ಓಡಿದ.
ಧುರ - ಯುದ್ಧ. ಪಾತಕ - ಪಾಪ.
ಧರಣಿ - ಭೂಮಿ.ಭೂಸುರರು - ಭೂಮಿಯ ಸುರರು (ಷಷ್ಠಿ ತತ್ಪುರುಷ ಸಮಾಸ); ಬ್ರಾಹ್ಮಣರು.
ಸುರರ ಸತಿ - ದೇವಸ್ತ್ರೀ;ಅಪ್ಸರೆ.
ಸತಿಯರನೊಲ್ಲೆವೆಮಗೆಮ್ಮರಮನೆಯ - ಸತಿಯರನು + ಒಲ್ಲೆವು + ಎಮಗೆ + ಎಮ್ಮ +ಅರಮನೆಯ.
ಸಾಕೆಮ್ಮರಸುತನವೆಮಗಿಂದ್ರ. - ಸಾಕು + ಎಮ್ಮ + ಅರಸು ತನವು + ಎಮಗೆ + ಇಂದ್ರ.
ಇಂದ್ರಪದವಿ - ಇಂದ್ರನ ಪದವಿ (ಷಷ್ಠಿ ತತ್ಪುರುಷ ಸಮಾಸ).

2. ಪ್ರಶ್ನೆಗಳು :
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.  


1. ಕೌರವನ ಸೇನೆಯು ಉತ್ತರನಿಗೆ ಹೇಗೆ ಕಾಣಿಸಿತು?
 ವಿಶಾಲವಾದ ಸಮುದ್ರದಂತೆ ಕಾಣಿಸಿತು.

2. ಉತ್ತರನು ನಿಟ್ಟೋಟದಲ್ಲಿ ಓಡಿದ್ದು ಏಕೆ?
ವಿಸ್ತಾರವಾದ ಸಮುದ್ರದಂತೆ ಕಾಣುವ ಸೈನ್ಯವನ್ನು ಕಂಡು ಯುದ್ಧ ಮಾಡಲು ಹೆದರಿ ಓಡಿದನು,

3. ಧುರಕ್ಕೆ ಬೆನ್ನು ಹಾಕಿದರೆ ಏನು ಪ್ರಾಪ್ತಿಯಾಗುತ್ತದೆ.
ಪಾಪ ಪ್ರಾಪ್ತಿಯಾಗುತ್ತದೆ

4. ಅರ್ಜುನನು ಯಾರನ್ನು ನಾಡನರಿ ಎಂದು ಕರೆದಿದ್ದಾನೆ?
ಉತ್ತರನನ್ನು ಕರೆದಿದ್ದಾನೆ.

5. ಉತ್ತರನಿಗೆ ಇಂದ್ರಪದವಿಯು ಏಕೆ ಬೇಕಿಲ್ಲ?
ಉತ್ತರನಿಗೆ ಅರಸುತನವೆ ಸಾಕು, ಹಾಗಾಗಿ ಇಂದ್ರ ಪದವಿ ಬೇಕಿಲ್ಲ.

 6. ಸುರರ ಸತಿಯರ ಸ್ಥಾನವನ್ನು ಯಾರು ತುಂಬುತ್ತಾರೆ?
ಅರಮನೆಯ ನಾರಿಯರು ತುಂಬುತ್ತಾರೆ.

7. ಕಾದು ನಡೆ ಎಂದು ಅರ್ಜುನನು ಯಾರಿಗೆ ಹೇಳುತ್ತಾನೆ?
ಉತ್ತರ ಕುಮಾರನಿಗೆ ಹೇಳುತ್ತಾನೆ.

8. ಉತ್ತರನು ರಥದಿಂದ ಹೇಗೆ ಧುಮ್ಮಿಕ್ಕಿದನು?
ಮೈ ಮೇಲಿನ ಸೆರಗನ್ನು ಒಟ್ಟುಗೂಡಿಸಿ ರಥದಲ್ಲಿ ಹಿಂದಕ್ಕೆ ಬಂದು ನಿಂತು ಕೆಳಗೆ ಧುಮುಕಿದನು.  

9. ಧುರದಲೋಡಿದ  ಪಾತಕವನ್ನು ಭೂಸುರರು ಹೇಗೆ ಪರಿಹರಿಸಿಕೊಳ್ಳುತ್ತಾರೆ?
ಭೂಸುರರು ಅಶ್ವಮೇಧ ಯಾಗ ಮಾಡಿ ಪಾತಕವನ್ನು ಪರಿಹರಿಸಿಕೊಳ್ಳುತ್ತಾರೆ.

10. ಬೃಹನ್ನಳೆಯ ವೇಷದಲ್ಲಿದ್ದವರು ಯಾರು?
ಬೃಹನ್ನಳೆಯ ವೇಷದಲ್ಲಿದ್ದವರು ಅರ್ಜುನ.  

ಆ) ಈ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ
 
1. ಶತ್ರುಬಲಕ್ಕೆ ನಮೋ ಎಂದು ಉತ್ತರನು ಏಕೆ ಹೇಳಿದನು?

ಕೌರವರ ಸೇನೆಯನ್ನು ಕಂಡ ಉತ್ತರನಿಗೆ ಎಂದೂ ಕಾಣದ     ಅದ್ಭುತವನ್ನು ಕಂಡಂತಾಯಿತು. ಇಡೀ ಭೂಮಿ ಸೈನ್ಯದಿಂದ ತುಂಬಿತ್ತು . ಇವರೊಡನೆ  ಕಾದಲು  ಸಾಕ್ಷಾತ್  ಶಿವನಿಂದ  ಮಾತ್ರ  ಸಾಧ್ಯ.  ಇವರೊಡನೆ  ಯುದ್ಧ  ಮಾಡಿ  ಗೆದ್ದಂತೆಯೇ  ನಮೋ  ಎಂದು  ಓಡಲು ಪ್ರಾರಂಭಿಸಿದನು.

2. ಒಡಲು ಒಡೆವಂತೆ ಅರ್ಜುನನು ಮನದಲ್ಲಿ ನಗಲು ಕಾರಣವೇನು?
ಅಜರ್ುನನು ರಥವನ್ನು ನಾಲ್ಕೆಂಟು ಅಡಿಗಳಷ್ಟು ಮುಂದಕ್ಕೆ ನೂಕಿದನು. ಉತ್ತರನು ಈ ಸಾರಥಿ ನನ್ನನ್ನು ಕೊಂದು ಬಿಟ್ಟನು ಎಂದು ಮೈ ಮೇಲಿನ ಸೆರಗನ್ನು ಒಟ್ಟುಗೂಡಿಸಿ ರಥದಲ್ಲಿ ಹಿಂದಕ್ಕೆ ಬಂದು ನಿಂತು ಕೆಳಗೆ ಧುಮುಕಿದನು. ಬದುಕಿದೆ ಎಂದು ತಲೆಗೂದಲು ಕೆದರಿ ಹಾರಾಡುವಂತಹ ವೇಗದಿಂದ ಓಡಲು ತೊಡಗಿದುದನ್ನು ನೋಡಿ ಅರ್ಜುನನು ಒಡಲು ಒಡೆವಂತೆ ಮನದಲ್ಲಿ ನಕ್ಕನು.

3. ಕಾದುನಡೆ ಎಂದು ಅಜರ್ುನನು ಉತ್ತರನನ್ನು ಏಕೆ ಒತ್ತಾಯಿಸಿದನು?
ಉತ್ತರನು ಹೆಂಗೆಳೆಯರ ಮುಂದೆ ಕೌರವನ ಸೇನೆಯನ್ನು ಸುಲಭವಾಗಿ ಎದುರಿಸಬಹುದೆಂದು ಬಾಯ್ಗೆ ಬಂದಂತೆ ಮಾತನಾಡಿದನು. ಆದರೆ  ಯುದ್ಧದಲ್ಲಿ  ಕೌರವ  ಸೇನೆಯನ್ನು  ಕಂಡು  ಹೆದರಿ  ಓಡಲು  ಪ್ರಾರಂಭಿಸಿದನು.  ಆಗ  ಅರ್ಜುನನು  ಸೈನ್ಯವನ್ನು  ಸರಿಯಾಗಿ ಅರಿಯದೆ  ಹಲ್ಲುಕಿರಿದು  ಮಾತನಾಡಿದ್ದೆ,  ಈಗ  ಅಂಜುಬುರಕ  ನರಿಯಂತೆ  ಓಡುವುದು  ಸರಿಯಲ್ಲ.  ಕಾದುನಡೆ  ಎಂದು  ಅರ್ಜುನನು ಉತ್ತರನಿಗೆ ಹೇಳಿದನು.

4. ಯುದ್ಧವನ್ನು ಮಾಡದಯೆ ಸುಖಪಡಬಹುದೆಂಬುದನ್ನು ಉತ್ತರನು ಹಿಗೆ ಸಮರ್ಥಿಸಿದನು ?
ಯುದ್ಧ  ಭೂಮಿಯಿಂದ  ಓಡಿ  ಬಂದ  ಪಾತಕವನ್ನು  ಬ್ರಾಹ್ಮಣರು  ಕಳೆಯುತ್ತಾರೆ.  ಅಶ್ವಮೇಧ  ಯಾಗದ  ಫಲವನ್ನು  ಪ್ರತ್ಯಕ್ಷವಾಗಿಯೇ ಮಾಡಬಹುದು.  ಅದರ  ಫಲವನ್ನು  ಪಡೆಯಲು  ಸ್ವರ್ಗಲೋಕದ  ಅಪ್ಸರೆಯರು  ಬೇಕಾಗಿಲ್ಲ.  ನನ್ನ  ಅರಮನೆಯ  ನಾರಿಯರೇ  ಸಾಕು. ನಮ್ಮ  ದೊರೆತ ಓಡಲು ಪ್ರಾರಂಭಿಸಿದನು. 3.  ನಾಡನರಿಯೊಲ್ ಹಲುಗಿರಿಯೆ ಬಿಡುವೆನೆ ಈ ವಾಕ್ಯವನ್ನು ಕುಮಾರವ್ಯಾಸನು (ಗದುಗಿನ ನಾರಣಪ್ಪ) ಬರೆದಿರುವ ಕರ್ನಾಟ ಭಾರತ ಕಥಾಮಂಜರಿ ಎಂಬ ಮಹಾಕಾವ್ಯದಿಂದ ಆಯ್ದ ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ ಎಂಬ ಪದ್ಯದಿಂದ ಆರಿಸಲಾಗಿದೆ. ಈ  ವಾಕ್ಯವನ್ನು  ಅರ್ಜುನನವೇ  ನಮಗೆ  ಇಂದ್ರ  ಪದವಿ  ಎಂಬುದಾಗಿ  ಯುದ್ಧವನ್ನು  ಮಾಡದೆಯೇ  ಸುಖ  ಪಡಬಹುದೆಂಬುದನ್ನು  ಉತ್ತರನು ಸಮರ್ಥಿಸಿದನು.  

ಇ) ಈ ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ಯತರಿಸಿ
 
1. ಅರ್ಜುನ ಮತ್ತು ಉತ್ತರ ಇವರ ಸಂಭಾಷಣೆಯ  ಸ್ವಾರಸ್ಯವನ್ನು ಬರೆಯಿರಿ.

ಕೌರವರು ವಿರಾಟರಾಜನ ಗೋವುಗಳನ್ನು ಅಪಹರಿಸುತ್ತಾರೆ. ಪಾಂಡವರನ್ನು ಹುಡುಕುವ ಉದ್ದೇಶ ಅವರದಾಗಿರುತ್ತದೆ. ಉತ್ತರ ಕುಮಾರನ ಸಾರಥಿಯಾಗಿ ಅರ್ಜುನನು ಬೃಹನ್ನೆಳೆಯ ವೇಷದಲ್ಲಿ ರಣರಂಗಕ್ಕೆ ಬಂದಾಗ ಕೌರವರ ಭಯಂಕರ ಸೈನ್ಯವನ್ನು ಕಂಡು, ಶಿವನಿಂದ ಮಾತ್ರ ಈ ಸೇನೆಯನ್ನು ಗೆಲ್ಲುವುದಕ್ಕೆ ಸಾಧ್ಯ. ತನ್ನಿಂದಾಗದು, ಎಂದು ಉತ್ತರನು ರಥದ ಹಿಂಬದಿಯಿಂದ ಧುಮುಕಿ, ಬೆನ್ನು ತಿರುಗಿಸಿ ಬಿಟ್ಟಮಂಡೆಯಲ್ಲಿ ಓಡಲು ತೊಡಗುತ್ತಾನೆ. ಆಗ ಅರ್ಜುನ ಅವನನ್ನು ತಡೆದು ಅರಮನೆಯಲ್ಲಿ ಹೆಂಗೆಳೆಯರ ಮುಂದೆ ಜಂಭ ಕೊಚ್ಚಿದ ಪ್ರಸಂಗವನ್ನು ನೆನೆಪಿಸುತ್ತಾನೆ. ಆದರೆ ಉತ್ತರ ಕುಮಾರನು ತನಗೆ ತನ್ನ ಅರಮನೆಯ ಸೌಖ್ಯವೇ ಸಾಕು ಎಂದು ಉತ್ತರಿಸುತ್ತಾನೆ. ಇಂದ್ರಪದವಿಯು ತನಗೆ ಬೇಡ, ಅಪ್ಸರೆಯರು ಬೇಡ, ನನಗೆ ನಮ್ಮ ಅರಮನೆಯ ಸ್ತ್ರೀಯರೇ ಸಾಕು, ನನ್ನ ಜೀವ ಉಳಿದರೆ ಅಷ್ಟೇ ಸಾಕೆಂದು ಓಡತೊಡಗಿದನು. ಆಗ ಅರ್ಜುನನು ಉತ್ತರನಿಗೆ ಅಂಜುಬುರುಕ ನಾಡನರಿಯ ಹಾಗೆ ಓಡುವುದು ಸರಿಯಲ್ಲ ಕಾದು ನಡೆ ಎಂದನು.

2. ಅರ್ಜುನ ಮತ್ತು ಉತ್ತರ ಇವರ ಗುಣ ಸ್ವಭಾವದಲ್ಲಿಯ ವ್ಯತ್ಯಾಸಗಳನ್ನು ಬರೆಯಿರಿ.
ಅರ್ಜುನನು ಧೈರ್ಯ, ಪರಾಕ್ರಮ, ವೀರತನದ ಸಂಕೇತವಾದರೆ ಉತ್ತರನು ಹೇಡಿತನ ಜಂಭದ ಪ್ರತೀಕವಾಗಿದ್ದಾನೆ. ನಗೆಪಾಟಲಿಗೆ ಗುರಿಯಾಗುವ ಉತ್ತರನಂತಹ ಬದುಕು ಬೇಡ, ಅಜರ್ುನನ ಹಾಗೆ ಧೀಮಂತರಾಗಬೇಕು ಎಂಬ ಸಂದೇಶವೂ ಇವರ ಗುಣಸ್ವಭಾವಗಳಲ್ಲಡಗಿದೆ. ಅರಮನೆಯಲ್ಲಿ ಹೆಂಗೆಳೆಯರ ಮುಂದೆ ಜಂಭ ಕೊಚ್ಚಿಕೊಂಡ ಉತ್ತರ ಕುಮಾರ ಕೌರವ ಸೈನ್ಯವನ್ನು ನೋಡಿ ಭಯದಿಂದ ಬಿಟ್ಟಮಂಡೆಯಲಿ ಓಡುತ್ತಾನೆ. ಇವನನ್ನು ನೋಡಿ ಎಲ್ಲರೂ ನಗುತ್ತಾರೆ. ನನಗೆ ಇಂದ್ರಪದವಿಯು ಬೇಡ, ಅಪ್ಸರೆಯರು ಬೇಡ, ನನ್ನ ಅರಮನೆಯ ಸ್ತ್ರೀಯರೇ ಸಾಕು, ನನ್ನ ಜೀವ ಉಳಿದರೆ ಅಷ್ಟೇ ಸಾಕೆಂದು ಓಡತೊಡಗಿದನು ಅವನ ಈ ನಡುವಳಿಕೆ ಎಲ್ಲರಿಗೂ ನಗುವನ್ನು ತರಿಸುತ್ತದೆ. ಆದರೆ ಅರ್ಜುನ ಶೌರ್ಯದ ಪ್ರತೀಕವಾಗಿದ್ದಾನೆ. ತನ್ನ ಪರಾಕ್ರಮದಿಂದ ಕೌರವರ ಸೇನೆಯೊಡನೆ ಹೋರಾಡಿ, ವಿಕ್ರಮವನ್ನು ಪಡೆದು, ವಿಜಯಶಾಲಿಯಾದುದು ಅವನ ಭುಜಬಲ ಪರಾಕ್ರಮಕ್ಕೆ ಕನ್ನಡಿಯಾಗಿದೆ. ಇದಕ್ಕಾಗಿಯೇ ಎಲ್ಲರೂ ಬಯಸುವುದು ಅಜರ್ುನನಂತಹ ಮಗನನ್ನು ಉತ್ತರಕುಮಾರನಂತವನ್ನಲ್ಲ.  

ಈ) ಸಂದರ್ಭದೊಡನೆ ವಿವರಿಸಿ

1. ಶಿವಶಿವ ಕಾದಿಗೆಲಿದವು

ಈ ವಾಕ್ಯವನ್ನು ಕುಮಾರವ್ಯಾಸನು (ಗದುಗಿನ ನಾರಣಪ್ಪ) ಬರೆದಿರುವ ಕಣರ್ಾಟ ಭಾರತ ಕಥಾಮಂಜರಿ ಎಂಬ ಮಹಾಕಾವ್ಯದಿಂದ ಆಯ್ದ ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ ಎಂಬ ಪದ್ಯದಿಂದ ಆರಿಸಲಾಗಿದೆ.
ಈ  ವಾಕ್ಯವನ್ನು  ವಿರಾಟರಾಜನ  ಮಗನಾದ  ಉತ್ತರಕುಮಾರನು  ಬೃಹನ್ನಳೆ  ವೇಷಧಾರಿ  ಅರ್ಜುನನಿಗೆ  ಹೇಳಿದನು.  ಕೌರವರ ಭಯಂಕರ  ಸೇನೆಯನ್ನು  ಕಂಡು  ಹೆದರಿ  ರಣರಂಗದಿಂದ  ಓಡಲು  ತೊಡಗಿದಾಗ  ಬೃಹನ್ನಳೆ  ವೇಷಧರಿಸಿದ  ಅರ್ಜುನನು  ತಡೆದು. ಯುದ್ಧ ಭೂಮಿಯಿಂದ ಓಡುವುದು ಪಾಪವೆಂದು ಹೇಳಿದಾಗ ಈ ಮೇಲಿನ ಮಾತನ್ನು ಹೇಳಿ ತನ್ನ ಅಂಜುಬುರುಕುತನವನ್ನು ವ್ಯಕ್ತ ಪಡಿಸಿದ್ದಾನೆ. ಜಂಭ ಕೊಚ್ಚಿದ ಉತ್ತರಕುಮಾರನ ಪೌರುಷದ ಬಗ್ಗೆ ಇದರಿಂದ ತಿಳಿಯುತ್ತದೆ.

2. ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ
ಈ ವಾಕ್ಯವನ್ನು ಕುಮಾರವ್ಯಾಸನು (ಗದುಗಿನ ನಾರಣಪ್ಪ) ಬರೆದಿರುವ ಕಣರ್ಾಟ ಭಾರತ ಕಥಾಮಂಜರಿ ಎಂಬ ಮಹಾಕಾವ್ಯದಿಂದ ಆಯ್ದ ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ ಎಂಬ ಪದ್ಯದಿಂದ ಆರಿಸಲಾಗಿದೆ.
ಕೌರವ  ಸೇನೆಯಮ್ಮು  ಕಂಡು  ಹೆದರಿದ  ಉತ್ತರನು  ಕೌರವ  ಸೇನೆಯೋಡನೆ  ಯುದ್ಧ  ಮಾಡಲು  ತನ್ನಿಂದ  ಸಾಧ್ಯವಿಲ್ಲವೆಂದು ನಿಧಾನವಾಗಿ ರಥದ ಹಿಂದಿನಿಂದ ಧುಮುಕಿ ಬದುಕಿದೆ ಎಂದು ಕೆದರಿದ ತಲೆಯಲ್ಲಿಯೇ ಒಂದೇ ಸಮನೆ  ಉತ್ತರನಿಗೆ  ಹೇಳಿದನು.  ಉತ್ತರನು  ಹೆಂಗೆಳೆಯರ  ಮುಂದೆ  ಕೌರವ  ಸೇನೆಯನ್ನು  ಸುಲಭವಾಗಿ ಎದುರಿಸಬಹುದೆಂದು ಬಾಯ್ಗೆ ಬಂದಂತೆ ಮಾತನಾಡಿದನು. ಆದರೆ ಯುದ್ಧರಂಗದಲ್ಲಿ ಕೌರವ ಸೇನೆಯನ್ನು ಕಂಡು ಹೆದರಿ ಓಡಲು ಪ್ರಾರಂಭಿಸಿದನು.  ಆಗ  ಅರ್ಜುನನು  ಹೆಂಗೆಳೆಯರ  ಮುಂದೆ  ಜಂಭದಿಂದ  ಮಾತನಾಡುತ್ತಿದ್ದೆ,  ಈಗ  ಹಲ್ಲು  ಕಿರಿದು  ಅಂಜುಬುರುಕ ನರಿಯಂತೆ ಓಡಿಹೋಗಲು ಬಿಡುವುದಿಲ್ಲ ಕಾದು ನಡೆ ಎಂದು ಅರ್ಜುನನು ಉತ್ತರನಿಗೆ ಹೇಳಿದನು.

 3.  ನಾಡನರಿಯೊಲ್ ಹಲುಗಿರಿಯೆ ಬಿಡುವೆನೆ
ಈ ವಾಕ್ಯವನ್ನು ಕುಮಾರವ್ಯಾಸನು (ಗದುಗಿನ ನಾರಣಪ್ಪ) ಬರೆದಿರುವ ಕಣರ್ಾಟ ಭಾರತ ಕಥಾಮಂಜರಿ ಎಂಬ ಮಹಾಕಾವ್ಯದಿಂದ ಆಯ್ದ ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ ಎಂಬ ಪದ್ಯದಿಂದ ಆರಿಸಲಾಗಿದೆ.
ಈ  ವಾಕ್ಯವನ್ನು  ಅರ್ಜುನ  ಉತ್ತರನಿಗೆ  ಹೇಳಿದನು.  ಉತ್ತರನು  ಹೆಂಗೆಳೆಯರ  ಮುಂದೆ  ಕೌರವ  ಸೇನೆಯನ್ನು  ಸುಲಭವಾಗಿ ಎದುರಿಸಬಹುದೆಂದು ಬಾಯ್ಗೆ ಬಂದಂತೆ ಮಾತನಾಡಿದನು. ಆದರೆ ಯುದ್ಧರಂಗದಲ್ಲಿ ಕೌರವ ಸೇನೆಯನ್ನು ಕಂಡು ಹೆದರಿ ಓಡಲು ಪ್ರಾರಂಭಿಸಿದನು.  ಆಗ  ಅರ್ಜುನನು  ಹೆಂಗೆಳೆಯರ  ಮುಂದೆ  ಜಂಭದಿಂದ  ಮಾತನಾಡುತ್ತಿದ್ದೆ,  ಈಗ  ಹಲ್ಲು  ಕಿರಿದು  ಅಂಜುಬುರುಕ ನರಿಯಂತೆ ಓಡಿಹೋಗಲು ಬಿಡುವುದಿಲ್ಲ ಕಾದು ನಡೆ ಎಂದು ಅರ್ಜುನನು ಉತ್ತರನಿಗೆ ಹೇಳಿದನು.

4. ಎಮ್ಮರಮನೆಯ ನಾರಿಯರೆ ಸಾಕು
ಈ ವಾಕ್ಯವನ್ನು ಕುಮಾರವ್ಯಾಸನು (ಗದುಗಿನ ನಾರಣಪ್ಪ) ಬರೆದಿರುವ ಕರ್ನಾಟ ಭಾರತ ಕಥಾಮಂಜರಿ ಎಂಬ ಮಹಾಕಾವ್ಯದಿಂದ ಆಯ್ದ ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ ಎಂಬ ಪದ್ಯದಿಂದ ಆರಿಸಲಾಗಿದೆ.
ಈ ವಾಕ್ಯವನ್ನು ಉತ್ತರನು ಅರ್ಜುನನಿಗೆ ಹೇಳಿದನು. ಕೌರವ ಸೇನೆಗೆ ಹೆದರಿ ಓಡಿ ಹೋಗುತ್ತಿದ್ದ ಉತ್ತರನಿಗೆ ಅರ್ಜುನನು ಈ ರೀತಿ ಯುದ್ಧರಂಗದಿಂದ ಓಡಿಹೋದರೆ ಪಾಪ ಸುತ್ತಿಕೊಳ್ಳುವುದೆಂದು ಹೇಳಿದಾಗ, ಉತ್ತರನು ಯುದ್ಧರಂಗದಿಂದ ಓಡಿಹೋದ ಪಾಪವನ್ನು ಬ್ರಾಹ್ಮಣರು ಹೋಗಲಾಡಿಸುತ್ತಾರೆ. ನನಗೆ ಯುದ್ಧದಲ್ಲಿ ಸೋತು ವೀರ ಸ್ವರ್ಗ ಸೇರುವುದು ಬೇಡ, ಇಂದ್ರ ಪದವಿಯೂ ಬೇಡ ಸುರರ ಸತಿಯರೂ ಬೇಡ, ನನಗೆ ನಮ್ಮ ಅರಮನೆಯ ನಾರಿಯರೇ ಸಾಕು ಎಂದು ಹೇಳುವಾಗ ಈ ವಾಕ್ಯವನ್ನು ಹೇಳಿದ್ದಾರೆ.                                     
You Might Like

Post a Comment

0 Comments