Recent Posts

ಮೂಡಲ್ ಕುಣಗಲ್ ಕೆರೆ - ೧೦ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

                                                           
 
 
 
        
                                                      ಮೂಡಲ್ ಕುಣಗಲ್ ಕೆರೆ                       
                                                                                                            ಜನಪದಗೀತೆ       

 ಕವಿ/ಲೇಖಕರ ಪರಿಚಯ

?  ಜನಪದ ಸಾಹಿತ್ಯವನ್ನು ರಚಿಸಿದವರು ಶ್ರೀಸಾಮಾನ್ಯರು. ಆದರೆ ಅವರ ಭಾವಶ್ರೀಮಂತಿಕೆ ಅಸಾಮಾನ್ಯವಾದುದು.
?  ಈ ಜನಪದ ಗೀತೆಯನ್ನು ಮತಿಘಟ್ಟ  ಕೃಷ್ಣಮೂತರ್ಿಯವರು ಸಂಗ್ರಹಿಸಿರುವ ಕನ್ನಡ ಜನಪದ ಸಾಹಿತ್ಯ ಭಂಡಾರ
ಸಂಪುಟ-1 ಇದರಿಂದ ಆರಿಸಿಕೊಳ್ಳಲಾಗಿದೆ.                                                        

                                                                    ಅಭ್ಯಾಸ

1.ಪದಗಳ ಅರ್ಥ :

ಮೂಡಲು - ಪೂರ್ವದಿಕ್ಕು                                      
  ಸಾರಂಗ - ಜಿಂಕೆ
ಊರುಗೋಲು - ಹುಟ್ಟು (ದೋಣಿ ನಡೆಸುವ ಸಾಧನ)                     
ಐಭೋಗ - ವೈಭವ, ಸುಖ
ಕಬ್ಬಕ್ಕಿ -ಜಲಚರಗಳನ್ನು ತಿನ್ನುವ ಪಕ್ಷಿ                                 
ಚೆಂದಿರಾಮ - ಚಂದಿರ
ಬಾಳೆಮೀನು - ಒಂದು ಜಾತಿ ಮೀನು.                                
ಅಂತಂತ್ರಿಸಿ - ನೀಳವಾಗಿ ನೋಡುವುದು.

2.ಪ್ರಶ್ನೆಗಳು :
 
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.  
 
1. ಕುಣಿಗಲ್ ಕೆರೆಯು ಯಾವ ದಿಕ್ಕಿನಲ್ಲಿದೆ?
ಮೂಡಲ ದಿಕ್ಕಿನಲ್ಲಿದೆ.

2. ಕುಣಿಗಲ್ ಕೆರೆ ಹೇಗೆ ಬಾಗಿದೆ?

ಬಾಳೆಯ ಹಣ್ಣಿನಂತೆ ಬಾಗಿದೆ.

3. ತುಂಬಿದ ಕುಣಿಗಲ್ ಕೆರೆಯನ್ನು ಯಾವುದಕ್ಕೆ ಹೋಲಿಸಲಾಗಿದೆ?
ನಿಂಬೆಯ ಹಣ್ಣಿಗೆ ಹೋಲಿಸಲಾಗಿದೆ.

4. ಕುಣಿಗಲ್ ಕೆರೆಯ ಅಂದವನ್ನು ನೋಡಲು ಯಾರು ಬಂದರೆಂದು ಉತ್ಪ್ರೇಕ್ಷಿಸಲಾಗಿದೆ?

ಶಿವನು ಬಂದರೆಂದು ಉತ್ಪ್ರೇಕ್ಷಿಸಲಾಗಿದೆ.

5. ಕೆರೆಯಲ್ಲಿ ಯಾವ ಮೀನುಗಳಿದ್ದವು?
ಕೆರೆಯಲ್ಲಿ ಬಾಳೆಮೀನುಗಳಿದ್ದವು.

6. ಜನರ ಬಾಯಿಂದ ಬಾಯಿಗೆ ಹರಿದು ಬಂದ ಸಾಹಿತ್ಯ ಯಾವುದು?
ಜನರ  ಬಾಯಿಂದ ಬಾಯಿಗೆ ಹರಿದು ಬಂದ ಸಾಹಿತ್ಯ  ಜನಪದ ಸಾಹಿತ್ಯ.

7. ಯಾವ ಸಂದರ್ಭದಲ್ಲಿ ಕೆರೆಗೆ ಬಗಿನ ಅರ್ಪಿಸುವ ವಾಡಿಕೆ ಇದೆ?

ಕೆರೆಗಳು ತುಂಬಿದಾಗ ಬಾಗಿನ ಅರ್ಪಿಸುವ ವಾಡಿಕೆ ಈಗಲೂ ಇದೆ.

8.ಕುಣಿಗಲ್ ಕೆರೆ ಹೇಗೆ ತಂಬಿದೆ?
ಕುಣಿಗಲ್ ಕೆರೆ ನಿಂಬೆಯ ಹಣ್ಣಿನಂತೆ ತುಂಬಿದೆ.  

ಆ) ಈ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ
 
.ಕುಣಿಗಲ್ ಕೆರೆ ಎಂಥವರನ್ನು ಬೆರಗುಗೊಳಿಸುವಂತಿತ್ತು ಏಕೆ? ಅಥವಾ ಕುಣಿಗಲ್ ಕೆರೆಯ ಅಂದವನ್ನು ಹೇಗೆ ವರ್ಣಿಸಲಾಗಿದೆ?
ಕುಣಿಗಲ್ ಕೆರೆ ನೋಡುವವರಿಗೆ ಒಂದು ವೈಭೋಗವೆಂಬಂತೆ ಇದೆ. ಅದು ಮನಸ್ಸಿಗೆ ಆನಂದವನ್ನು ನೀಡುವಂತೆ ಕಾಣುತ್ತಿತ್ತು. ಇದು ಸಂತೆಯ ಹಾದಿಯಲ್ಲಿದ್ದು, ಕಲ್ಲುಕಟ್ಟೆಯಿಂದ ಇದು ಸುಂದರವಾಗಿ ನಿರ್ಮಾಣಗೊಂಡಿತ್ತು. ಇದು ಬಾಳೆಯ ಹಣ್ಣಿನಂತೆ ಬಾಗಿಕೊಂಡು, ನಿಂಬೆಯ  ಹಣ್ಣಿನಂತೆ  ತುಂಬಿಕೊಂಡಂತೆ  ಕಾಣಿಸುತ್ತಿತ್ತು.  ಇದು  ತನ್ನ  ಸೌಂದರ್ಯದಿಂದಾಗಿ  ಎಂಥವರನ್ನು  ಬೆರಗುಗೊಳಿಸುವಂತೆ ಕಾಣಿಸುತ್ತಿತ್ತು.   

2. ಭಾವ ಬಣ್ಣದ ಸೀರೆಯನ್ನು ತಂದಿದ್ದು ಏಕೆ?
ಕೆರೆ  ತುಂಬಿದ  ಸಂದರ್ಭದಲ್ಲಿ  ಬಾಗಿನ  ಅರ್ಪಿಸುವುದು  ವಾಡಿಕೆಯಾಗಿದೆ.  ಬಾಗಿನ  ಕೊಡುವಾಗ  ಪೂಜಾ  ಸಾಮಗ್ರಿಯೊಂದಿಗೆ ಖುಷಿಯಿಂದ ಸೀರೆ, ಕುಪ್ಪಸ, ಹಣ್ಣು ಹಂಪಲುಗಳನ್ನು ತಂದು ನೀರಿಗೆ ಬಿಡುವುದು ಇಲ್ಲಿನ ವಾಡಿಕೆ. ಕೆರೆ ತುಂಬಿದ ಖುಷಿಗೆ ಭಾವನು ಬಣ್ಣದ ಸೀರೆಯನ್ನು ಬಾಗಿನ ಅಪರ್ಿಸಲು ತಂದಿದ್ದಾನೆ.

3. ಕುಣಿಗಲ್ ಕೆರೆಯ ಬಾಳೆಮೀನುಗಳು ಬೊಬ್ಬೆ ಹೊಡೆಯಲು ಕಾರಣವೇನು?

ಕುಣಿಗಲ್  ಕೆರೆಯಲ್ಲಿ  ಜಲಚರಗಳು  ಹೆಚ್ಚಿನ  ಸಂಖ್ಯೆಯಲ್ಲಿ  ಇರುವುದರಿಂದ  ಮೀನುಗಾರಿಕೆ  ಕೃಷಿಕರ  ಉಪಕಸುಬಾಗಿದೆ.  ಈ  ಕೃಷಿಕರು ಕೆರೆಯ ಮೀನುಗಳನ್ನು ಹಿಡಿಯಲು ಬಲೆ ಬೀಸುತ್ತಾರೆ. ಅದರಲ್ಲಿ ಸಿಕ್ಕಿಕೊಂಡ ಮೀನುಗಳು ಉಸಿರಾಡಲಾರದೆ ವಿಲವಿಲ ಒದ್ದಾಡುತ್ತವೆ.   ಮೀನುಗಳ ಈ ಒದ್ದಾಡುವ ಪರಿಯನ್ನು ಹೇಳುವ ಸಂದರ್ಭದಲ್ಲಿ  ಬೊಬ್ಬೆ ಹೊಡೆಯುತ್ತವೆ ಎಂದು ಹೇಳಲಾಗಿದೆ.        

4.ಕುಣಿಗಲ್ ಕೆರೆಯು ನೀರುಂಡು ಬೆಳೆದ ಬಾಳೆಯನ್ನು ಜನಪದರು ಏನೆಂದು ವಣರ್ಿಸಿದ್ದಾರೆ?  ಅಥವಾ  ಹೊಂಬಾಳೆ ನಡುಗ್ಯಾವ ಎಂದರೇನು?
ಕುಣಿಗಲ್ ಕೆರೆಯು ಬಹಳ ಅಂದವಾಗಿದ್ದು ಅದರ ದಡದಲ್ಲಿ ಬಾಳೆಮರಗಳಿವೆ. ಅವು ನೀರುಂಡು  ದಷ್ಟಪುಷ್ಟವಾಗಿ ಬೆಳೆದು ನಿಂತಿವೆ. ಬಾಳೆಯ ಗಿಡಗಳು ಗಾಳಿಯ ಹೊಯ್ದಾಟಕ್ಕೆ ಅತ್ತಿತ್ತ ತೂಗಾಡುತ್ತವೆ. ಹೀಗಾಗಿ ಹಣ್ಣಿನ  ಭಾರದಿಂದ ತೂಗಾಡುತ್ತಿರುವ ಬಾಳೆಯನ್ನು  ಜನಪದರು  ಹೊಂಬಾಳೆ ನಡುಗ್ಯಾವ ಎಂದು ವರ್ಣಿಸಿದ್ದಾರೆ.  

ಇ) ಈ ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ
 
1.ಕುಣಿಗಲ್ ಕೆರೆ ಜೀವಸಂಕುಲಕ್ಕೆ ಆಶ್ರಯವಾಗಿರುವುದನ್ನು ಗೀತೆಯಲ್ಲಿ ಯಾವ ರೀತಿ ವರ್ಣಿಸಲಾಗಿದೆ?  
ಕೆರೆಯಲ್ಲಿ, ಹಾರಕ್ಕೊಂದು ಹಾರುಕೋಲು, ಹಾರುವುದಕ್ಕೆ , ಹಾಯಿಸುವುದಕೆ ದೋಣಿ ಸಾಗಲು ಹುಟ್ಟು ಹಾಕಬೇಕು. ಮತ್ತು ಬಾಳೆಹಣ್ಣಿನ ಗಾತ್ರದ ಮೀನುಗಳು ಬೊಬ್ಬೆ ಹಾಕುತ್ತಿವೆ. ಅಂದರೆ ಸಂತೋಷಕ್ಕೆ ಕೂಗಿಕೊಳ್ಳುತ್ತಿವೆಯೆಂತೆ ಇದಲ್ಲದೆ ಪ್ರಾಣಿ ಪಕ್ಷಿಗಳು ಸಂತೋಷದಿಂದ ನಗುತ್ತಿವೆಯಂತೆ, ಕಾರಣ ಕೆರೆ ತುಂಬಿ ತುಳುಕುತ್ತಿವೆ. ಗುಬ್ಬಿಗಳು, ಸಾರಂಗಗಳು ಸಂತೋಷದಿಂದ ನಗುತ್ತಿವೆ ಎಂದು ಹೋಲಿಸಿದ್ದಾರೆ. ಹಾಗೆಯೆ ಕುಣಿಗಲ್ ಕೆರೆಯ ಅಂದವನ್ನು ನೋಡಲು ಶಿವನೆ ಬಂದು ಯೋಗಿಯಂತಾಗಿದ್ದಾನೆ. ಅಂದರೆ ಅದರ ಸೊಬಗು ಎಷ್ಟಿರಬಹುದು. ಅಲ್ಲದೇ ಕಪ್ಪಗಿರುವ ಹಕ್ಕಿಗಳು ಬಾಯನ್ನು ಬಿಟ್ಟು ನೋಡುತ್ತವೆ, ಕೊನೆಯದಾಗಿ ಕುಣಿಗಲ್ ಕೆರೆ ಜೀವಸಂಕುಲಕ್ಕೆ  ಆಶ್ರಯವಾಗುತ್ತದೆ ಎಂದು ವಿವರಿಸಲಾಗಿದೆ.

2. ಮೂಡಲ್ ಕುಣಿಗಲ್ ಕೆರೆ ಜನಪದ ಗೀತೆಯ ಭಾವಾರ್ಥವನ್ನು ಬರೆಯಿರಿ?
ಮೂಡಲ ದಿಕ್ಕಿನಲ್ಲಿರುವ ಕುಣಿಗಲ್ ಕೆರೆ ನೋಡುವವರಿಗೆ ಒಂದು ವೈಭೋಗ ಅಷ್ಟೊಂದು ಸುಂದರವಾಗಿರುವ ಕುಣಿಗಲ್ ಕೆರೆಗೆ ಚಂದಿರನು ಮೂಡಿಬರುತ್ತಾನೆ, ಎಷ್ಟು ಸೌಂದರ್ಯದಿಂದ ಕೂಡಿರುತ್ತದೆ ಎಂದರೆ ಅಬ್ಬಾ ಎಂದು ಆಶ್ಚರ್ಯವಾಗಿ ವರ್ಣನೆ ಮಾಡಲು ಅಸಾಧ್ಯ ಎಂದು ವರ್ಣಿಸಿದ್ದಾರೆ. ಕುಣಿಗಲ್ ಕೆರೆ ಸೊಬಗು ಸೌಂದರ್ಯವನ್ನು ಬಾಳೆಹಣ್ಣಿಗೆ ಹೋಲಿಸಲಾಗಿದೆ. ಹೇಗೆ ಬಾಳೆಹಣ್ಣು ಬಾಗಿದ ಹಾಗೆ ಕೆರೆಯು ಸಹ ಬಾಗಿರುವ ರೀತಿ ಕಾಣಿಸುತ್ತದೆ. ಮತ್ತು ಸಂಬಂಧದಲ್ಲಿ ಭಾವ ಎಂದರೆ ಹೆಣ್ಣುಮಗಳಿಗೆ ಎಲ್ಲಿಲ್ಲದ ಅಕ್ಕರೆ. ಆಗಿನ ಕಾಲದಲ್ಲಿ ಮದುವೆ ಆಗುವ ಹುಡುಗ ಅಥವಾ ಮಾವನ ಮಗನನ್ನು ತುಂಬಾ ಅಕ್ಕರೆಯಿಂದ ಕಾಣುವಂತ ಸಂಬಂಧ, ಅದಲ್ಲದೇ ಅವನು ತಂದುಕೊಟ್ಟಂತಹ ಸೀರೆಯ ಬಣ್ಣವು ಎಷ್ಟು ಚೆನ್ನಾಗಿದೆಯೋ, ಅಷ್ಟೇ ಕೆರೆಯು ತುಂಬಾ ಸುಂದರವಾಗಿದೆ. ಕೆರೆಯಲ್ಲಿ, ಹಾರಕ್ಕೊಂದು ಹಾರುಕೋಲು, ಹಾರುವುದಕ್ಕೆ , ಹಾಯಿಸುವುದಕ್ಕೆ, ದೋಣಿ ನಡೆಸಲು ಬಳಸುವ ಕೋಲು (ಹಾಯಿಕೋಲು) ಅದನ್ನು ನೂಕಲು ನೂಕುವುದಕ್ಕೆ ಇನ್ನೊಂದು ಕೋಲು ಮತ್ತು ಬಾಳೆಹಣ್ಣಿನ ಗಾತ್ರದ ಮೀನುಗಳು ಬೊಬ್ಬೆ ಹಾಕುತ್ತಿವೆ ಅಂದರೆ ಸಂತೋಷಕ್ಕೆ ಕೂಗಿಕೊಳ್ಳುತ್ತಿವೆಯಂತೆ. ಇದು ಕುಣಿಗಲ್ ಕೆರೆ ಜನಪದ ಗೀತೆಯ ಭಾವಾರ್ಥವಾಗಿದೆ.  

ಈ) ಸಂದರ್ಭದೊಡನೆ ವಿವರಿಸಿ
 
1. ಭಾವಾ ತಂದಾನೋ ಬಣ್ಣದ ಸೀರೆ ಈ ವಾಕ್ಯವನ್ನು ಜನಪದ ಗೀತೆಯಾದ ಮೂಡಲ್ ಕುಣಿಗಲ್ ಕೆರೆ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಈ  ವಾಕ್ಯವನ್ನು  ಜನಪದರು  ಹೇಳಿದ್ದಾರೆ.  ಕುಣಿಗಲ್  ಕೆರೆಯ  ಸೊಬಗು  ಸೌಂದರ್ಯವನ್ನು  ಬಾಳೆಯ  ಹಣ್ಣಿಗೆ  ಹೋಲಿಸಲಾಗಿದೆ. ಬಾಳೆಯ  ಹಣ್ಣು  ಹೇಗೆ  ಬಾಗಿದೆ.  ಹಾಗೆ  ಕೆರೆಯು  ಸಹ  ಬಾಗಿರುವ  ರೀತಿ  ಕಾಣಿಸುತ್ತದೆ.  ಭಾವ  ಎಂದರೆ  ಹೆಣ್ಣುಮಗಳಿಗೆ  ಎಲ್ಲಿಲ್ಲದ ಅಕ್ಕರೆ. ಆಗಿನ ಕಾಲದಲ್ಲಿ ಮದುವೆ ಆಗುವ ಹುಡುಗ ಅಥವಾ ಮಾವನ ಮಗನನ್ನು ತುಂಬಾ ಅಕ್ಕರೆಯಿಂದ ಕಾಣುತ್ತಿದ್ದರು.

2. ಕಪ್ಪಕ್ಕಿ ಬಾಯ ಬಿಡುತಾವೆ
ಈ ವಾಕ್ಯವನ್ನು ಜನಪದರು ಹೇಳಿದ್ದಾರೆ. ಜನಪದ ಗೀತೆಯಾದ ಮೂಡಲ್ ಕುಣಿಗಲ್ ಕೆರೆ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
 ಈ  ವಾಕ್ಯವನ್ನು  ಕೆರೆಯ  ಸೌಂದರ್ಯದಿಂದ  ಹಕ್ಕಿಗಳು  ಹೇಗೆ  ಕಾಣುತ್ತವೆ  ಎಂದು  ಹೇಳುವಾಗ  ಹೇಳಿದ್ದಾರೆ.  ಕೆರೆಯ  ಅಂದವನ್ನೆ ನೋಡಲು  ಶಿವನು  ಬಂದು  ಯೋಗಿಯಂತಾಗಿದ್ದಾನೆ.  ಅಂದರೆ  ಇದರ  ಸೊಬಗು  ಎಷ್ಟಿರಬಹುದು  ಅಲ್ಲದೇ  ಕಪ್ಪಗಿರುವ  ಹಕ್ಕಿಗಳು ಬಾಯನ್ನು ಬಿಟ್ಟು ನೋಡುತ್ತವೆ ಎಷ್ಟೊಂದು ಸುಂದರವಾಗಿದೆ ಎಂದು ಹೇಳುವಾಗ ಹೇಳಿದ್ದಾರೆ.

3. ಬೊಬ್ಬೆ ಹೊಡೆದಾಬೆ ಬಾಳ ಮೀನು
ಈ ವಾಕ್ಯವನ್ನು ಜನಪದ ಗೀತೆಯಾದ ಮೂಡಲ್ ಕುಣಿಗಲ್ ಕೆರೆ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಈ  ವಾಕ್ಯವನ್ನು  ಜನಪದರು  ಹೇಳಿದ್ದಾರೆ.  ಕೆರೆಯಿಂದ  ಯಾವ  ಯಾವ  ಉಪಯೋಗವಾಗುತ್ತದೆ  ಎಂದು  ಹೇಳುವ  ಸಂದರ್ಭದಲ್ಲಿ ಹೇಳಿದ್ದಾರೆ.  ಕೆರೆಯಲ್ಲಿ  ಹಾರಕ್ಕೊಂದು  ಹಾರುಕೋಲು,  ಹಾರುವುದಕ್ಕೆ  ಹಾಯಿಸುವುದಕ್ಕೆ  ಬಳಸುವ  ಕೋಲು  ಅದನ್ನು  ನೂಕಲು ನೂಕುವುದಕ್ಕೆ  ಇನ್ನೊಂದು  ಕೋಲು  ಮತ್ತು  ಬಾಳೆ  ಹಣ್ಣಿನ  ಗಾತ್ರದ  ಮೀನುಗಳು  ಬೊಬ್ಬೆ  ಹಾಕುತ್ತಿವೆ  ಅಂದರೆ  ಸಂತೋಷದಿಂದ ಕೂಗಿಕೊಳ್ಳುತ್ತವೆ ಎಂದು ಹೇಳಿದ್ದಾರೆ.   
You Might Like

Post a Comment

0 Comments