Recent Posts

ನೈಸರ್ಗಿಕ ಸಂಪನ್ಮೂಲಗಳು - ೯ನೇ ತರಗತಿ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು

 ನೈಸರ್ಗಿಕ ಸಂಪನ್ಮೂಲಗಳು

1. ನೈಸರ್ಗಿಕ ಸಂಪನ್ಮೂಲಗಳು ಎಂದರೇನು?
ನಮ್ಮ ಸುತ್ತಮುತ್ತ ನಾವು ಅನೇಕ ರೀತಿಯ ವಸ್ತುಗಳನ್ನು ನೋಡುತ್ತೇವೆ. ಪ್ರಕೃತಿಯಲ್ಲಿ ದೊರಕುವ, ನಮಗೆ ಉಪಯುಕ್ತವಾಗುವ ಸಂಪನ್ಮೂಲ ಗಳು’ ಎಂದು ಕರೆಯಬಹುದು.

2. ಭೂಮಿಯ ಮೇಲಿರುವ ಸಂಪನ್ಮೂಲಗಳು ಯಾವುವು?
ಅವುಗಳೆಂದರೆ, ನೆಲ, ನೀರು ಮತ್ತು ಗಾಆ ಅರಣ್ಯಗಳು ಸೌರಶ ನ್ಯಜೀವಿಗಳು ,ಪಳೆಯುಆಕೆ ಇಂಧನಗಳು,ಖನಿಜಗಳು ಇತ್ಯಾದಿ.

3. ಜೀವಗೋಳ ಎಂದರೇನು?
ಭೂಮಿಯ ಮೇಲೆ ಜಲಗೋಳ, ವಾಯುಗೋಳ ಮತ್ತು ಭೂಗೋಳಗಳು ಒಂದರೊಡನೊಂದು ಪರಸ್ಪರ ಪ್ರತಿವರ್ತಿಸಿ ಜೀವಿಗಳು ಬದುಕಲು ಸಾಧ್ಯವಿರುವ ಪ್ರದೇಶಕ್ಕೆ ಜೀವಗೋಳ ಎನ್ನುವರು.

4. ಜೀವಗೋಳದಲ್ಲಿ ಜೈವಿಕ ಘಟಕಗಳು ಮತ್ತು ಅಜೈವಿಕ ಘಟಕ ಏನನ್ನು ಒಳಗೊಂಡಿವೆ?
ಜೀವಗೋಳದಲ್ಲಿ ಜೈವಿಕ ಘಟಕಗಳು ಜೀವಿಗಳನ್ನು ಒಳಗೊಂಡಿದ್ದು ಅಜೈವಿಕ ಘಟಕಗಳು ಗಾಆ, ನೀರು, ಮಣ್ಣು ಮುಂತಾದವುಗಳನ್ನು ಒಳಗೊಂಡಿವೆ

5. ಗಾಳಿಯ ಚಲನೆಯು ಹೇಗೆ ಉಂಟಾಗುತ್ತದೆ?
ವಾತಾವರಣದಲ್ಲಿನ ಗಾಳಿಯು ಬಿಸಿಯಾಗುವುದು ಮತ್ತು ನೀರುಆವಿಯಾಗುವುದರ ಪರಿಣಾಮವಾಗಿ ಉಂಟಾಗುತ್ತವೆ

6. ಯಾವುದು ನಮಗೆ ಮಳೆಯನ್ನು ತರುತ್ತದೆ?
ಭಾರತದ ಅತಿ ಹೆಚ್ಚು ಪ್ರದೇಶಗಳಲ್ಲ ನೈಋತ್ಯ ಅಥವಾ ಈಶಾನ್ಯ ಮಾರುತಗಳು ಮಳೆಯನ್ನು ತರುತ್ತವೆ.

7. ಗಾಳಿಯ ಪ್ರವಾಹಗಳು ಹೇಗೆ ಉಂಟಾಗುತ್ತದೆ?
ಗಾಜಯ ಅಸಮ ಶಾಸುವಿಕೆಯಿಂದ ಗಾಳಿಯ ಪ್ರವಾಹಗಳು ಉಂಟಾಗುತ್ತವೆ ಗಾಆಯು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಚಲಿಸಿದಾಗ ಮಾರುತಗಳು ಉಂಟಾಗುತ್ತವೆ.

8. ಮೋಡಗಳು ಹೇಗೆ ಉಂಟಾಗುತ್ತವೆ? ಮತ್ತು ಹೇಗೆ ಮಳೆ ತರುತ್ತವೆ?
ಹಗಲಿನಲ್ಲಿ ನೀರಿನ ಮೂಲಗಳು ಬಿಸಿಯಾದಾಗ, ಸಾಕಷ್ಟು ಪ್ರಮಾಣದ ನೀರು ಆವಿಯಾಗಿ ಗಾಳಿಯನ್ನು ಸೇರುತ್ತದೆ. ಇದು ನೀರಾವಿಯೊಂದಿಗೆ ಮೇಲೇರುತ್ತದೆ. ಗಾಳಿಯು ಮೇಲಕ್ಕೆ ಹೋದಂತೆಲ್ಲಾ ಹಿಗ್ಗುತ್ತದೆ ಮತ್ತು ತಂಪಾಗುತ್ತದೆ. ಇದರಿಂದ ಗಾಳಿಯಲ್ಲಿನ ನೀರಾವಿಯು ತಂಪಾಗಿ ಚಿಕ್ಕ ಹನಿಗಳಾಗಿ ಪರಿವರ್ತನೆಯಾಗುತ್ತದೆ. ಗಾಳಿಯಲ್ಲಿರುವ ಧೂಳು ಅಥವಾ ಇತರೆ ಸಣ್ಣ ಕಣಗಳು ನ್ಯೂಕ್ಲಿಯಸ್ನಂತೆ ವರ್ತಿಸಿದಾಗ ಅದರ ಸುತ್ತಲೂ ನೀರಿನ ಹನಿಗಳು ಘನೀಭವಿಸುತ್ತವೆ. ಒಮ್ಮೆ ನೀರಿನ ಹನಿಗಳು ಉಂಟಾದ ನಂತರ ಅವು ಒಂದಕ್ಕೊಂದು ಸೇರಿ ಘನೀಭವಿಸುತ್ತಾ ದೊಡ್ಡದಾಗುತ್ತವೆ. ಈ ರೀತಿ ಅವು ಸಾಕಷ್ಟು ದೊಡ್ಡದಾದಾಗ ಮತ್ತು ಭಾರವಾದಾಗ ಅವು ಮಳೆಯಾಗಿ ಸುರಿಯುತ್ತವೆ. ಕೆಲವೊಮ್ಮೆ ಗಾಆಯ ಉಷ್ಣತೆಯು ಕಡಿಮೆ ಇದ್ದಾಗ ಹಿಮ, ಮಂಜು ಅಥವಾ ಆಲಿಕಲ್ಲಿನ ರೂಪದಲ್ಲಿ ಹನಿಯುತ್ತದೆ.

9. ಗಾಳಿಯ ಗುಣಮಟ್ಟ ಹೇಗೆ ಹದಗೆಡುತ್ತದೆ ಮತ್ತು ಗಾಳಿಯಲ್ಲಿ ಆಗುವ ಬದಲಾವಣೆಯಿಂದ ನಮಗೆ ಮತ್ತು ಇತರ ಜೀವಿಗಆಗೆ ಹೇಗೆ ಪರಿಣಾಮ ಬೀರುತ್ತದೆ?
ಫಾಸಿಲ್ ಇಂಧನಗಳಾದ ಕಲ್ಲೆದ್ದಿಲು ಮತ್ತು ಪೆಟ್ರೋಲಿಯಂಗಳು ಸ್ವಲ್ಪ ಪ್ರಮಾಣದ ನೈಟ್ರೋಜನ್ ಮತ್ತು ಫಾಸ್ಟರಸ್ ಗಳನ್ನು ಹೊಂದಿರುತ್ತವೆ. ಈ ಇಂಧನವನ್ನು ಉರಿಸಿದಾಗ ಅದರಅನನೈಟ್ರೋಜನ್ ಮತ್ತು ಫಾಸ್ಟರಸ್ಗಳೂ ದಹಿಸಿ ವಿವಿಧ ನೈಟ್ರೋಜನ್ ಮತ್ತು ಫಾಸ್ಪರಸ್ ಅಕ್ಸೆಡ್ಗಳನ್ನು ಉಂಟುಮಾಡು ತ್ತವೆ. ಅವುಗಳನ್ನುಉಸಿರಾಡುವುದರಿಂದ ತೊಂದರೆ ಯಾಗುವುದಷ್ಟೇ ಅಲ್ಲದೆ ಅವು ಮಳೆ ನೀರಿನಲ್ಲಿ ಕರಗಿ ಆಮ್ಲ ಮಳೆಯನ್ನು ಉಂಟುಮಾಡುತ್ತವೆ. ಅಲ್ಲದೆ ಫಾಸಿಲ್ ಇಂಧನಗಳ ದಹನದಿಂದ ಗಾಆಯಲ್ಲಿನ ನಿಲಂಬಿತ ಕಣಗಳ ಪ್ರಮಾಣವೂ ಹೆಚ್ಚಾಗುತ್ತದೆ. ಇದು ದಹನವಾಗದ ಕಾರ್ಬನ್ಕಣಗಳು ಅಥವಾ ಹೈಡೋಕಾರ್ಬನ್ ಗಳನ್ನು ಒಳಗೊಂಡಿರುತ್ತದೆ.ಗಾಆಯಲ್ಲಿ ಈ ಮಅನಕಾರಕಗಳ ಪ್ರಮಾಣ ಹೆಚ್ಚಾದಂತೆಲ್ಲಾ ಗೋಚರತೆ ಕಡಿಮೆಯಾಗುತ್ತದೆ. ಇಂತಹ ಮಅನಕಾರಕಗಳನ್ನು ಹೊಂದಿರುವ ಗಾಆಯನ್ನು ನಿರಂತರವಾಗಿ ಸೇವಿಸುವುದರಿಂದ ಅಲರ್ಜಿ, ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಸಂಭವನೀಯತೆ ಹೆಚ್ಚಾಗುತ್ತದೆ.

10. ಮಂಗಳ ಮತ್ತು ಶುಕ್ರ ಗ್ರಹಗಳಿಗೆ ಹೋಲಿಸಿದರೆ ನಮ್ಮ ಭೂಮಿಯ ವಾತಾವರಣ ಹೇಗೆ ಭಿನ್ನವಾಗಿದೆ?
ಮಂಗಳ ಮತ್ತು ಶುಕ್ರ ಗ್ರಹಗಆಗೆ ಹೋಲಿಸಿದರೆ ನಮ್ಮ ಭೂಮಿಯ ವಾತಾವರಣ ತುಂಬಾ ಭಿನ್ನವಾಗಿದೆ. ಭೂಮಿಯ ವಾತಾವರಣದಲ್ಲಿ 79%ನೈಟ್ರೋಜನ್.20% ಆಶ್ಲೀಜನ್ ಇದೆ.ಸ್ವಲ್ಪ ಪ್ರಮಾಣದಲ್ಲಿ ಕಾರ್ಬನ್ ಡೈ ಆಕ್ಸೆಡ್ ಇದೆ .ಆದರೆ ಮಂಗಳ ಮತ್ತು ಶುಕ್ರ ಗ್ರಹಗಳ ವಾತಾವರಣದಲ್ಲಿ 95%-97% ಪ್ರಮಾಣದಲ್ಲಿ ಕಾರ್ಬನ್ ಡೈ ಆಕ್ಸೆಡ್ ಇದೆ .

11. ವಾತಾವರಣವು ಭೂಮಿಯ ಹೊದಿಕೆಯಂತೆ ವರ್ತಿಸುತ್ತದೆ. ಹೇಗೆ?
ವಾಯುಗೋಳವು ಭೂಮಿಯನ್ನು ಒಂದು ಹೊದಿಕೆಯಂತೆ ಅವರಿಸಿದೆ. ವಾಯುಗೋಳವು ಹಗಊರುಳೂ ಹಾಗೂ ವರ್ಷವಿಡೀ ಭೂಮಿಯ ಉಷ್ಣತೆಯು ತಕ್ಕಮಟ್ಟಿಗೆ ಸ್ಥಿರವಾಗಿರುವಂತೆ ನೋಡಿಕೊಳ್ಳುತ್ತದೆ. ಬೆಳಗಿನ ಅವಧಿಯಲ್ಲಿ ಉಷ್ಣತೆಯು ಇದ್ದಕ್ಕಿದ್ದಂತೆ ಹೆಚ್ಚಾಗುವುದನ್ನು ವಾಯುಮಂಡಲವು ತಡೆಯುತ್ತದೆ ಮತ್ತು ರಾತ್ರಿ ವೇಳೆಯಲ್ಲಿ ಉಷ್ಣತೆಯು ಭೂ ಮೇಲೆಯಿಂದ ಹೊರ ಹೋಗದಂತೆ ರಕ್ಷಿಸುತ್ತದೆ.

12. ಮಾರುತಗಳು ಏಕೆ ಉಂಟಾಗುತ್ತವೆ?
ಭೂಮಿ ಮತ್ತು ಜಲಮೂಲಗಳ ಮೇಲಿನ ಗಾಆಯ ಅಸಮ ಕಾಸುವಿಕೆಯು ತಾಪಮಾನವು ಮಾರುತಗಳನ್ನು ಉಂಟುಮಾಡುತ್ತದೆ

13. ಮೋಡಗಳು ಹೇಗೆ ರಚನೆಯಾಗುತ್ತವೆ?
ಜಲಮೂಲಗಳಲ್ಲಿನ ನೀರು ಆವಿಯಾಗಿ ನಂತರ ಘನೀಭವಿಸಿ ಮೋಡಗಳಾಗುತ್ತದೆ

14. ವಾಯು ಮಾಲಿನ್ಯಕ್ಕೆ ಕಾರಣವಾದ ಮಾನವನ ಯಾವುದಾದರೂ ಮೂರು ಚಟುವಟಿಕೆಗಳನ್ನು ಪಟ್ಟಿ ಮಾಡಿ.
ಕಲ್ಲಿದ್ದಲಿನ ದಹನ ,ಡೀಸೆಲ್ ದಹನ ಪೆಟ್ರೋಲ್ ದಹನ, ನಗರ ತ್ಯಾಜ್ಯಗಳ ದಹನ ಮರಗಳನ್ನು ಕಡಿಯುವುದು

15. ಮಣ್ಣು ಹೇಗೆ ರೂಪುಗೊಳ್ಳುತ್ತದೆ?
ಮಿಲಿಯನ್ ವರ್ಷಗಳ ಸುದೀರ್ಘ ಅವಧಿಯಲ್ಲಿ ಭೂ ಮೇಯಲ್ಲಿನ ಬಂಡೆಗಳು ಭೌತಿಕ, ರಾಸಾಯನಿಕ ಮತ್ತು ಜೈವಿಕ ಪ್ರಕ್ರಿಯೆಗಳಿಗೆ ಒಳಗಾಗಿ ಒಡೆಯುತ್ತವೆ. ಸೂರ್ಯಬಿಸಿಲು, ನೀರು, ಗಾಳಿ,ಸಣ್ಣ ಸಸ್ಯಗಳಂತಹ ಮಾಸ್ಗಳು,ದೊಡ್ಡ ಮರಗಳ ಬೇರುಗಳು ದೊಡ್ಡ ಬಂಡೆಗಳುಸವೆಯಲು ಕಾರಣವಾಗುತ್ತವೆ. ಕ್ರಮೇಣ ಬಂಡೆಗಳು ಚಿಕ್ಕ ಚಿಕ್ಕ ಚೂರುಗಳಾಗುತ್ತಾ ಮಣ್ಣು ಉಂಟಾಗುತ್ತದೆ.

16. ಮಣ್ಣಿನ ರಚನೆಗೆ ಕಾರಣವಾಗುವ ಅಂಶಗಳು ಅಥವಾ ಪ್ರಕ್ರಿಯೆಗಳು ಯಾವುವು?
ಮಿಲಿಯನ್ ವರ್ಷಗಳ ಸುದೀರ್ಘ ಅವಧಿಯಲ್ಲಿ ಭೂ ಮೇಯಲ್ಲಿನ ಬಂಡೆಗಳು ಭೌತಿಕ, ರಾಸಾಯನಿಕಮತ್ತು ಜೈವಿಕ ಪ್ರಕ್ರಿಯೆಗಳಿಗೆ ಒಳಗಾಗಿ ಒಡೆಯುತ್ತವೆ. ಇದರಿಂದಾಗಿ ಬಂಡೆಗಳು ಕೊನೆಗೆ ಸಣ್ಣ ಕಣಗಳಾಗುತ್ತವೆ. ಹಗಲಿನಲ್ಲಿ ಸೂರ್ಯನ ಬಿಸಿಲು, ನೀರು ಘನೀಕರಿಸುವಿಕೆ, ಗಾಆಯೂ ಸಹ ಬಂಡೆಗಳು ಒಂದಕ್ಕೊಂದು ತಿಕ್ಕುವಂತೆ ಮಾಡಿ ಅವು ಸವೆಯಲು ಕಾರಣವಾಗುತ್ತವೆ.ಜೊತೆಗೆ ಸಣ್ಣ ಸಸ್ಯಗಳಂತಹ ಮಾಸ್ಗಳು ಇದೇ ರೀತಿಯಲ್ಲಿ ಬಂಡೆಯ ಮೇಲೆ ಬೆಳೆದು ಮಣ್ಣಿನ ರಚನೆಗೆ ಸಹಕರಿಸುತ್ತವೆ. ದೊಡ್ಡ ಮರಗಳ ಬೇರುಗಳು ಬಂಡೆಯ ಬಿರುಕುಗಳಲ್ಲಿ ಸೇರಿಕೊಂಡು ಕ್ರಮೇಣ ಬೇರು ದೊಡ್ಡದಾದಂತೆ ಬಿರುಕಿನ ಗಾತ್ರವನ್ನು ಹಿಗ್ಗಿಸುತ್ತವೆ. ಇವರಿಂದ ಬಂಡೆಗಳಲ್ಲಿ ಬಿರುಕುಗಳು ಉಂಟಾಗುತ್ತವೆ. ಕೊನೆಗೆ ದೊಡ್ಡ ಬಂಡೆಗಳು ಚಿಕ್ಕ ಚಿಕ್ಕ ಚೂರುಗಳಾಗುತ್ತಾ ಮಣ್ಣು ಉಂಟಾಗುತ್ತದೆ.

17. ಮಣ್ಣಿನ ಸವಕಳಿ ಎಂದರೇನು?
ಭೂ ಮೇಲ್ಮೈ ಯಲ್ಲಿ ಕಂಡು ಬರುವ ಸಡಿಲವಾದ ಪದರವು ವಿವಿಧ ಪ್ರಾಕೃತಿಕ ಶಕ್ತಿಗಳಿಂದ ಸ್ಥಳಾಂತರ ಹೊಂದುವ ಕ್ರಿಯೆಯನ್ನೇ “ಮಣ್ಣಿನ ಸವೆತ” ಅಥವಾ “ಭೂ ಸವೆತ” ಎಂದು ಕರೆಯುತ್ತಾರೆ.

18.ಮಣ್ಣಿನ ಸವಕಳಿಗೆ ಕಾರಣಗಳು ಯಾವುವು?
ಹರಿಯುವ ನೀರು, ಗಾಆ ಸಮುದ್ರದ ಅಲೆ ಮುಂತಾದವುಗಳು ಭೂಸವೆತದ ಮುಖ್ಯ ಕರ್ತೃಗಳಾಗಿವೆ. ಇದಕ್ಕೆ ಮುಖ್ಯ ಕಾರಣಗಳೆಂದರೆ
1)ಅರಣ್ಯಗಳ ನಾಶ,
2) ಸಾಕು ಪ್ರಾಣಿಗಳನ್ನು ಮೇಯಿಸುವುದು
3) ಅವೈಜ್ಞಾನಿಕ ಬೇಸಾಯ,

19. ಮಣ್ಣಿನ ಸವಕಳಿಯನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳುಯಾವುವು?
ಮಣ್ಣಿನ ಸವೆತವನ್ನು ತಡೆಗಟ್ಟುವ ವಿಧಾನಗಳು
1) ಇಆಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು.
2) ಅಡ್ಡ ಬದುಗಳನ್ನು ನಿರ್ಮಿಸುವುದು
3) ಹಂತ ಹಂತವಾಗಿ ವ್ಯವಸಾಯ ಕ್ಷೇತ್ರಗಳ ನಿರ್ಮಾಣ.
4) ಅರಣ್ಯ ಪ್ರೋತ್ಸಾಹಿಸುವುದು. ಯಾವುದು ಮತ್ತು ಅರಣ್ಯಗಳ ಬೆಳವಣಿಗೆಯನ್ನು
5) ಪ್ರಾಣಿಗಳನ್ನು ಮೇಯಿಸುವುದನ್ನು ನಿಯಂತ್ರಿಸುವುದು.
6) ನೀರಿನ ಯೋಜತ ಬಳಕೆ,
7) ಚೆಕ್ ಡ್ಯಾಮ್ಗಳ ನಿರ್ಮಾಣ ಇತ್ಯಾದಿ.

20. ಸಮುದ್ರದಿಂದ ಆವಿಯಾದ ನೀರು ಪುನಃ ಅಲ್ಲಿಗೆ ಹೇಗೆ ಹಿಂದಿರುಗುತ್ತದೆ?
ಜಲಚಕ್ರದ ಮೂಲಕ ಹಿಂದುರುಗುತ್ತದೆ.

21. ಜಾಗತಿಕ ತಾಪಮಾನದ ಏರಿಕೆಯ ಪರಿಣಾಮಗಳನ್ನು ಕಂಡುಕೊಳ್ಳಿ.
ಜಾಗತಿಕ ತಾಪ ಏರಿಕೆಯಿಂದ ಮಂಜಿನ ಗಡ್ಡೆಗಳು ಕರಗಿ ಸಮುದ್ರಮಟ್ಟ ಹೆಚ್ಚಾಗುತ್ತದೆ. ಇದರಿಂದ ಪ್ರವಾಹ ಉಂಟಾಗಿ ತೀರ ಪ್ರದೇಶಗಳು ಮುಳುಗಡೆಯಾಗುತ್ತವೆ. ಇದರಿಂದ ಜಲ ಹಾಗೂ ನೆಲವಾಸಿ ಜೀವಿಗಳಿಗೆ ಹಾನಿಕಾರಕವಾಗಿದೆ.

22. ಇತರೇ ಹಸಿರುಮನೆ ಅನಿಲಗಳ ಹೆಸರುಗಳನ್ನು ಕಂಡುಕೊಳ್ಳಿ.
ಕಾರ್ಬನ್ ಡೈ ಆಕ್ಸೆಡ್, ನೈಟ್ರೋಜನ್ ಆಕ್ಸೆಡ್ ಗಳು, ಮೀಥೇನ್,ಓಜೋನ್ ಇವು ಹಸಿರು ಮನೆ ಪ್ರಮುಖ ಅನಿಲಗಳು.

23. ಓಝೊನ್ ಪದರಕ್ಕೆ ಧಕ್ಕೆಯುಂಟುಮಾಡುವ ಇತರೇ ಅಣುಗಳು ಯಾವುವು?
ವಾತಾವರಣದಲ್ಲಿರುವ ನೆರಳಾತೀತ ಕಿರಣಗಳು ಸಿ.ಎಫ್.ಸಿ.ಗಳನ್ನು ವಿಘಟಿಸಿ ಕ್ಲೋರಿನ್ ಅಣುಗಳನ್ನು ಬಿಡುಗಡೆ ಮಾಡುತ್ತವೆ. ಕ್ಲೋರಿನ್ ಓಝೋನ್ ಜೊತೆ ಪ್ರತಿವರ್ತಿಸಿ ಒಂದು ಸರಣಿ ಕ್ರಿಯೆಯಲ್ಲಿ ಓಝೋನ್ ನ್ನು ನಾಶಪಡಿಸುತ್ತದೆ.

24. ಓಝೋನ್ ರಂಧ್ರದ ಗಾತ್ರ ಬದಲಾಗುತ್ತಿದೆಯೇ? ಅದು ಜೀವಿಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ಯೋಚಿಸುತ್ತಿದ್ದಾರೆ ?
ಹೌದು. ಓಝೋನ್ ರಂಧ್ರದ ಗಾತ್ರವು ಕ್ರಮೇಣ ದೊಡ್ಡದಾಗುತ್ತಾ ಸಾಗುತ್ತಿದೆ. ಇದರಿಂದಾಗಿ ನೆರಳಾತೀತ ಕಿರಣಗಳು ನೇರವಾಗಿ ಭೂಮಿಯನ್ನು ತಲುಪಿ ಜೀವಿಗಳಲ್ಲಿ ಉತ್ಪರಿವರ್ತನೆ’ ಉಂಟಾಗುತ್ತದೆ. ಮಾನವರಲ್ಲಿ ಚರ್ಮದ ಕ್ಯಾನ್ಸರ್, ಕ್ಯಾಟರಾಕ್ಟ್ ನಂತಹಾ ಕಾಯಿಲೆಗಳು ಉಂಟಾಗುತ್ತದೆ. ಸಸ್ಯ ಮತ್ತು ಪ್ರಾಣಿಗಳ ಬೆಳವಣಿಗೆ ಮತ್ತು ಶಾರೀರಿಕ ಕ್ರಿಯೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಸಸ್ಯ ಪ್ಲವಕಗಳಲ್ಲಿ ಜೀವಿಸಂಖ್ಯೆಯ ಅನುಪಾತದಲ್ಲಿ ಏರುಪೇರು ಉಂಟಾಗುತ್ತದೆ.

25. ಜಲಚಕ್ರದಲ್ಲಿ ನೀರು ಯಾವ ಯಾವ ಸ್ಥಿತಿಗಳಲ್ಲಿ ಕಂಡುಬರುತ್ತದೆ?
ಘನ,ದ್ರವ ಮತ್ತು ಅನಿಲ ಸ್ಥಿತಿಯಲ್ಲಿ ಕಂಡುಬರುತ್ತದೆ

26. ಆಕ್ಸಿಜನ್ ಮತ್ತು ನೈಟ್ರೋಜನ್ ಎರಡನ್ನೂ ಹೊಂದಿರುವ ಯಾವುದಾದರೂ ಎರಡು ಪ್ರಮುಖ ಜೈವಿಕ ಅಣುಗಳನ್ನು ಹೆಸರಿಸಿ.
ಪ್ರೋಟೀನ್ ಗಳು ಮತ್ತು ನ್ಯೂಕ್ಲಿಕ್ ಆಮ್ಲಗಳು

27. ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೆಡ್ನ ಹೆಚ್ಚಳಕ್ಕೆ ಕಾರಣವಾದ ಯಾವುದಾ ದರೂ ಮೂರು ಮಾನವನ ಚಟುವಟಿಕೆಗಳನ್ನು ತಿಳಿಸಿ,
ಕಲ್ಲಿದ್ದಲಿನ ದಹನ ಡೀಸೆಲ್ ದಹನ ಪೆಟ್ರೋಲ್ ದಹನ, ನಗರ ದಹನ ಮರಗಳನ್ನು ಕಡಿಯುವುದು

28. ಹಸಿರುಮನೆ ಪರಿಣಾಮ ಎಂದರೇನು?
ಸೂರ್ಯನ ಕಿರಣಗಳು ಭೂಮಿಯನ್ನು ಬಿಸಿ ಮಾಡಿದ ಪರಿಣಾಮವಾಗಿ ಬಿಡುಗಡೆಯಾಗುವ ಅವಕೆಂಪು ಕಿರಣಗಳನ್ನು ಕೆಲವು ಅನಿಲಗಳು ಸೆರೆಹಿಡಿದ ಕಾರಣ ವಾಯುಮಂಡಲದ ತಾಪ ಏರಿಕೆಯಾಗುವುದಕ್ಕೆ ಹಸಿರುಮನೆ ಪರಿಣಾಮ ಎಂದೂ, ಈ ಏರಿಕೆಗೆ ಕಾರಣವಾದ ಅನಿಲಗಳನ್ನು ಹಸಿರುಮನೆ ಅನಿಲಗಳೆಂದೂ ಕರೆಯಲಾಗುತ್ತದೆ.

29. ವಾತಾವರಣದಲ್ಲಿ ಕಂಡುಬರುವ ಅಕ್ಸಿಜನ್ನ ಎರಡು ರೂಪಗಳಾವುವು?
O2 ಮತ್ತು O3

30. ಜೀವಿಗಳಿಗೆ ವಾಯುಗೋಳ ಏಕೆ ಅವಶ್ಯಕ?
ವಾಯುಗೋಳವು ಭೂಮಿಯನ್ನು ಒಂದು ಹೊದಿಕೆಯಂತೆ ಆವರಿಸಿದೆ. ವಾಯುಗೋಳವು ಹಗಊರುಳೂ ಹಾಗೂ ವರ್ಷವಿಡೀ ಭೂಮಿಯ ಉಷ್ಣತೆಯು ತಕ್ಕಮಟ್ಟಿಗೆ ಸ್ಥಿರವಾಗಿರುವಂತೆ ನೋಡಿಕೊಳ್ಳುತ್ತದೆ. ಬೆಳಗಿನ ಅವಧಿಯಲ್ಲಿ ಉಷ್ಣತೆಯು ಇದ್ದಕ್ಕಿದ್ದಂತೆ ಹೆಚ್ಚಾಗುವುದನ್ನು ವಾಯುಮಂಡಲವು ತಡೆಯುತ್ತದೆ ಮತ್ತು ರಾತ್ರಿ ವೇಳೆಯಲ್ಲಿ ಉಷ್ಣತೆಯು ಭೂ ಮೇಲೆಯಿಂದ ಹೊರ ಹೋಗದಂತೆ ರಕ್ಷಿಸುತ್ತದೆ.

31. ಜೀವಿಗಳಿಗೆ ನೀರು ಏಕೆ ಅವಶ್ಯಕ?
ನಮ್ಮ ದೇಹದಲ್ಲಿ ಮತ್ತು ಜೀವಕೋಶಗಳಲ್ಲಿ ನಡೆಯುವ ಎಲ್ಲಾ ರಾಸಾಯನಿಕ ಕ್ರಿಯೆಗಳು ನೀರಿನಲ್ಲಿ ಕರಗಿರುವ ವಸ್ತುಗಳ ನಡುವೆಯೇ ನಡೆಯುತ್ತವೆ. ವಸ್ತುಗಳ ದೇಹದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ನೀರಿನಲ್ಲಿ ಕರಗಿರುವ ರೂಪದಲ್ಲಿಯೇ ಸಾಗಿಸಲ್ಪಡುತ್ತವೆ. ಆದ್ದರಿಂದ ಜೀವಿಗಳು ಬದುಕಬೇಕಾದರೆ ತಮ್ಮ ದೇಹದಲ್ಲಿ ನಿರ್ದಿಷ್ಟ ಪ್ರಮಾಣದ ನೀರನ್ನು ಹೊಂದಿರಬೇಕು

32. ಜೀವಿಗಳು ಮಣ್ಣಿನ ಮೇಲೆ ಹೇಗೆ ಅವಲಂಬಿತವಾಗಿವೆ? ನೀರಿನಲ್ಲಿ ಬದುಕುವ ಜೀವಿಗಳು ಮಣ್ಣಿಲ್ಲದೆ ಬದುಕಬಲ್ಲವೆ?
ಎಲ್ಲಾ ಜೀವಿಗಳು ಪ್ರತ್ಯಕ್ಷವಾಗಿ ಮತು ಪರೋಕ್ಷವಗಿ ಮಣ್ಣಿನ ಮೇಲೆಯೇ ಅವಲಂಭಿತವಾಗಿದೆ.ಸಸ್ಯಗಳು ಲವಣಾಂಶಗಳಗಾಗಿ ಮತ್ತು ಆಧಾರ ಪಡೆಯಲು ಮಣ್ಣಿನ ಮೇಲೆ ಅವಲಂಭಿತವಾಗಿದೆ.ಪ್ರಾಣಿಗಳು ಆಹಾರಕ್ಕಾಗಿ ಸಸ್ಯಗಳ ಮೇಲೆ ಅವಲಂಭಿತವಾಗಿದೆ. ಹಾಗಾಗಿ ಪ್ರಾಣಿಗಳು ಆಹಾರಕ್ಕಾಗಿ ಪರೋಕ್ಷವಗಿ ಮಣ್ಣಿನ ಮೇಲೆಯೇ ಅವಲಂಭಿತವಾಗಿದೆ. ನೀಲಿನಲ್ಲಿ ಬದುಕುವ ಜೀವಿಗಳು ಮಣ್ಣಿಲ್ಲದೆ ಬದುಕಲು ಆಗುವುದಿಲ್ಲ. ನೀರಿನಲ್ಲಿ ಬದುಕುವ ಜೀವಿಗಳು ಕೂಡ ಪರೋಕ್ಷವಗಿ ಮಣ್ಣಿನ ಮೇಲೆಯೇ ಅವಲಂಭಿತವಾಗಿದೆ .ನದಿ,ಕೆರೆ,ಮಳೆ ನೀರು ಮಣ್ಣಿನಲ್ಲಿರುವ ಕರಗಿಸಿಕೊಂಡಿರುತ್ತದೆ .ಆ ಲವಣಾಂಶಗಳನ್ನು ಜಲಚರ ಸಸ್ಯಗಳು ಆಹಾರ ತಯಾರಿಸಲು ಬಳಸಿಕೊಳ್ಳುತ್ತದೆ. ಹಾಗಾಗಿ ನೀರಿನಲ್ಲಿ ಬದುಕುವ ಜೀವಿಗಳು ಮಣ್ಣಿಲ್ಲದೆ ಬದುಕಲು ಆಗುವುದಿಲ್ಲ.

33. ಮಾನವರ ಕೆಲವು ಚಟುವಟಿಕೆಗಳು ನೆಲ, ಜಲ ಮತ್ತು ವಾಯು ಮಾಅನ್ಯವನ್ನು ಹೆಚ್ಚಿಸುತ್ತಿರುವುದು ನಮಗೆ ತಿಆದಿದೆ. ಈ ಚಟುವಟಿಕೆಗಳನ್ನು ಪ್ರತ್ಯೇಕಿಸಿ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತಗೊಆಸುವುದರಿಂದ ಮಾಅನ್ಯದ ಪ್ರಮಾಣದ ಕಡಿಮೆಯಾಗುತ್ತದೆ ಎಂದು ಆಲೋಚಿಸಬಹುದೇ?
ಹೌದು. ಮಾನವರ ಕೆಲವು ಚಟುವಟಿಕೆಗಳನ್ನು ಪ್ರತ್ಯೇಕಿಸಿ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತಗೊಆಸುವುದರಿಂದ ಮಾಲಿನ್ಯದ ಪ್ರಮಾಣದ ಕಡಿಮೆಯಾಗುತ್ತದೆ. ಉದಾಹ ರಣೆಗೆ ಜನವಸತಿ ಪ್ರದೇಶದಿಂದ ಕಾರ್ಖಾನೆಗಳನ್ನು ಪ್ರತ್ಯೇಕಿಸಿ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತಗೊಆಸುವುದರಿಂದ ನೀರಿನ ಮೂಲಗಳನ್ನು, ಜಮೀನುಗಳನ್ನು ಮತ್ತು ಫಲವತ್ತಾದ ಭೂ ಪ್ರದೇಶವನ್ನು ಸ್ವಲ್ಪಮಟ್ಟಿಗೆ ಮಾಅನ್ಯತೆಯಿಂದ ರಕ್ಷಿಸಬಹುದಾಗಿದೆ

34. ಗಾಳಿ, ನೀರು ಮತ್ತು ಮಣ್ಣಿನ ಗುಣಮಟ್ಟವನ್ನು ಕಾಪಾಡುವಲ್ಲಿ ಕಾಡುಗಳ ಪಾತ್ರವನ್ನು ವಿವರಿಸಿ.
ಅರಣ್ಯಗಳು ಪರಿಸರಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡುತ್ತಿರುವ ನವೀಕರಿಸಬಹುದಾದ ನೈಸರ್ಗಿಕಸಂಪನ್ಮೂಲಗಳು, ಅರಣ್ಯಗಳು ಜಲಚಕ್ರವನ್ನು ಉಆಸುತ್ತವೆ.. ಮಣ್ಣಿನ ಸವಕಆಯನ್ನು ತಡೆಯುವ ಮೂಲಕ ಅರಣ್ಯಗಳು ಮಣ್ಣಿನ ಗುಣಮಟ್ಟವನ್ನು ಕಾಪಾಡುತ್ತವೆ. ಕಾಡುಗಳು ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ. ಇಂಗಾಲದ ಡೈ ಆಡನ್ನು ಹೀರಿಕೋಂಡು ಆಮ್ಲಜನಕವನ್ನು ಒದಗಿಸುತ್ತದೆ,ಅಂತರ್ ಜಲವನ್ನು ಹೆಚ್ಚಿಸುತ್ತದೆ.

35. ನೀವು ಟಿ.ವಿ ಮತ್ತು ವಾರ್ತಾ ಪತ್ರಿಕೆಗಳಲ್ಲಿ ಹವಾಗುಣದ ವರದಿಗಳನ್ನು ನೋಡಿರುತ್ತೀರಿ, ಹವಾಗುಣವನ್ನು ಹೇಗೆ ಮುನ್ಸೂಚಿಸಲು ಸಾಧ್ಯವಾಗುತ್ತದೆ ಎಂದು ನೀವು ಯೋಚಿಸುವಿರಿ.?
ಪ್ರಸ್ತುತ ದಿನಗಳಲ್ಲಿ ಹವಾಗುಣವನ್ನು ಹೇಗೆ ಮುನ್ಸೂಚಿಸಲು ಸಾಧ್ಯವಿದೆ,ಏಕೆಂದರೆ ವಾತಾವರಣವನ್ನು ಅಧ್ಯಯನ ಮಾಡುವ ತಜ್ಞರು ರೈನ್ಗೇಟ್, ಅನಿಮೋಮೀಟರ್, ಕನಿಷ್ಟ-ಗರಿಷ್ಟ ದಿನದ ಉಷ್ಣತೆಯನ್ನು ಸೂಚಿಸುವ ಉಷ್ಣತಾ ಮಾಪಕಗಳ ಸಹಾಯದಿಂದ ಮಳೆಯ ಪ್ರಮಾಣ,ಗಾಆಯ ವೇಗ, ದಿನದ ಉಷ್ಣತೆಯನ್ನು,ಸಮುದ್ರದ ಲಕ್ಷಣವನ್ನು ನಿಖರವಾಗಿ ತಿಳಿದು ಜೊತೆಗೆ ಉಪಗ್ರಹಗಳು ನೀಡುವ ಮಾಹಿತಿಯ ಆಧಾರದ ಮೇಲೆ ಇಂದಿನ ಮತ್ತು ನಾಳೆಯ ಹವಾಗುಣದ ವರದಿಗಳನ್ನು ತಯಾರಿಸಿ ರೇಡಿಯೋ , ಟಿ.ವಿ ಮತ್ತು ವಾರ್ತಾ ಪತ್ರಿಕೆಗಳಲ್ಲಿ ಹವಾಗುಣದ ವರದಿಗಳನ್ನು ಪ್ರಸಾರ ಮಾಡುತ್ತಾರೆ.

36. ನೀನು ಇರುವ ನಗರ/ಪಟ್ಟಣ/ಹಳ್ಳಿಗೆ ಸಿಹಿನೀರಿನ ಮೂಲ ಯಾವುದು?
ನದಿಗಳು


You Might Like

Post a Comment

0 Comments