Recent Posts

ಭಗೀರಥ - ೩ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ಭಗೀರಥ

ಅ ) ಈ ಪ್ರಶ್ನೆಗಳಿಗೆ ಒಂದೊಂದು ಉತ್ತರಿಸು .

1. ಭಗೀರಥ ಯಾರಿಗೆ ಸ್ವರ್ಗ ಸಿಗಬೇಕೆಂದು ಚಿಂತಿಸುತ್ತಿದ್ದನು ?
ಉತ್ತರ : ಭಗೀರಥ ತನ್ನ ಅರವತ್ತು ಸಾವಿರ ಜನ ತಾತಂದಿರರಿಗೆ ಸ್ವರ್ಗ ಸಿಗಬೇಕೆಂದು ಚಿಂತಿಸುತ್ತಿದ್ದನು .

2. ಋಷಿಗಳು ಭಗೀರಥನಿಗೆ ಏನೆಂದು ಹೇಳಿದರು ?
ಉತ್ತರ : ದೇವಲೋಕದ ಗಂಗೆಯನ್ನು ಭೂಮಿಗೆ ತಂದು , ಅವನ ತಾತಂದಿರ ಬೂದಿಯ ಮೇಲೆ ಹರಿಸಬೇಕೆಂದು ಋಷಿಗಳು ಹೇಳಿದರು .

3. ಭಗೀರಥನು ಏಕೆ ತಪಸ್ಸಿಗೆ ಕುಳಿತನು ?
ಉತ್ತರ : ದೇವಲೋಕದ ಗಂಗೆಯನ್ನು ಭೂಮಿಗೆ ತರಲು ಭಗೀರಥನು ತಪಸ್ಸಿಗೆ ಕುಳಿತನು .

4. ಗಂಗೆ ಭಗೀರಥನಿಗೆ ಏನೆಂದು ಹೇಳಿದಳು ?
“ ನಿನ್ನ ಇಚ್ಛೆಯಂತೆ ನಾನು ಭೂಮಿಗೆ ಧುಮುಕುತ್ತೇನೆ ಆದರೆ ನನ್ನ ರಭಸವನ್ನು ತಡೆಯುವವರು ಯಾರು ಎಂದಳು.

5. ಗಂಗೆ ಹರಿಯುವ ರಭಸವನ್ನು ತಡೆದವರು ಯಾರು ?
ಉತ್ತರ : ಶಿವನು ಗಂಗೆ ಹರಿಯುವ ರಭಸವನ್ನು ತಡೆದನು .

ಆ ) ‘ ಅ’ಪಟ್ಟಿಯಲ್ಲಿನ ಹೆಸರುಗಳನ್ನು ‘ ಬ ‘ ಪಟ್ಟಿಯೊಂದಿಗೆ ಹೊಂದಿಸಿ ಬರೆ .

ಅ                      ಬ                 ಉತ್ತರ
ಗಂಗೆ                ರಾಜ                ನದಿ
ಜಹ್ನು             ನದಿ               ಮಹರ್ಷಿ
ಭಗೀರಥ        ಮಹರ್ಷಿ          ರಾಜ

ಇ ) ಈ ಕೆಳಗಿನ ಘಟನೆಗಳನ್ನು ಅನುಕ್ರಮವಾಗಿ ಬರೆ .

1. ಗಂಗೆ ಭೂಮಿಗೆ ಧುಮಿಕಿ ಹರಿದು ಬಂದಳು .
2. ಶಿವನು ಗಂಗೆಯನ್ನು ಶಿರದಲ್ಲಿ ಧರಿಸಿದ .
3. ಗಂಗೆಯನ್ನು ಭೂಮಿಗೆ ತರಲೇಬೇಕೆಂದು ಭಗೀರಥ ತಪಸ್ಸು ಮಾಡಿದ .
4. ಜಗ್ಗು ಮಹರ್ಷಿ ಗಂಗೆಯನ್ನು ಕಿವಿಯ ಮೂಲಕ ಹರಿಯಲು ಬಿಟ್ಟನು .

ಉತ್ತರ :
1. ಗಂಗೆಯನ್ನು ಭೂಮಿಗೆ ತರಲೇಬೆ ತಪಸ್ಸು ಮಾಡಿದ .
2. ಗಂಗೆ ಭೂಮಿಗೆ ಧುಮ್ಮಿಕ್ಕಿ ಹರಿದು ಬಂದಳು .
3. ಶಿವನು ಗಂಗೆಯನ್ನು ಶಿರದಲ್ಲಿ ಧರಿಸಿದ .
4. ಜಹ್ನು ಮಹರ್ಷಿ ಗಂಗೆಯನ್ನು ಕಿವಿಯ ಮೂಲಕ ಹರಿಯಲು ಬಿಟ್ಟನು .

ಈ ) ಕೊಟ್ಟಿರುವ ಮಾತನ್ನು ಯಾರು , ಯಾರಿಗೆ ಹೇಳಿದರು ?

1. “ ಗಂಗೆಯನ್ನು ನಾನು ಶಿರದಲ್ಲಿ ಧರಿಸುತ್ತೇನೆ . ”
ಉತ್ತರ : ಈ ಮಾತನ್ನು ಶಿವನು ಭಗೀರಥನಿಗೆ ಹೇಳುತ್ತಾನೆ .

2. “ ನಿನ್ನ ಇಚ್ಚೆಯಂತೆ ನಾನು ಭೂಮಿಗೆ ಧುಮುಕುತ್ತೇನೆ ” .
ಉತ್ತರ : ಈ ಮಾತನ್ನು ಗಂಗೆಯು ಭಗೀರಥನಿಗೆ ಹೇಳುತ್ತಾಳೆ .

ಭಾಷಾ ಚಟುವಟಿಕೆ
ಅ ) ಈ ಪದಗಳಿಗೆ ನಾನಾರ್ಥ ಬರೆ .
ಉತ್ತರ :
1. ಮುನಿ = ಋಷಿ , ತಪಸ್ವಿ ,
2. ತರು = ಮರ , ವೃಕ್ಷ

ಆ ) ಈ ನುಡಿಗಟ್ಟುಗಳನ್ನು ನಿನ್ನ ವಾಕ್ಯಗಳಲ್ಲಿ ಬಳಸಿ ಬರೆ .
ಉತ್ತರ : 
1. ಎಳ್ಳಷ್ಟು = ನಾನು ದಾನ ಮಾಡಿದ್ದರಲ್ಲಿ ಎಳ್ಳಷ್ಟು ಮರಳಿ ಕೇಳುವುದಿಲ್ಲ .
2. ಎದೆಗುಂದು = ನಾನು ವಾರ್ಷಿಕ ಪರೀಕ್ಷೆಯನ್ನು ಎದೆಗುಂದದೆ ಎದುರಿಸುತ್ತೇನೆ .

ಅ) ಈ ಕೆಳಗಿನ ಪದ್ಯ ಭಾಗಕ್ಕೆ ಸೂಕ್ತ ಲೇಖನ ಚಿಹ್ನೆಗಳನ್ನು ಹಾಕಿ.
 
1. ಭಗೀರಥನ ಅನೇಕ ವರ್ಷಗಳ ಕಠಿಣ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷಳಾದ ಗಂಗೆ ನಿನ್ನ ಇಚ್ಛೆಯಂತೆ ನಾನು ಭೂಮಿಗೆ ಧುಮುಕುತೇನೆ ‘ ಆದರೆ ನನ್ನ ರಭಸವನ್ನು ತಡೆಯುವವರು ಯಾರು ಎಂದಳು
ಉತ್ತರ : ಭಗೀರಥನ ಅನೇಕ ವರ್ಷಗಳ ಕಠಿಣ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷಳಾದ ಗಂಗೆ , “ ನಿನ್ನ ಇಚ್ಛೆಯಂತೆ ನಾನು ಭೂಮಿಗೆ ಧುಮುಕುತ್ತೇನೆ . ಆದರೆ , ನನ್ನ ರಭಸವನ್ನು ತಡೆಯುವವರು ಯಾರು ? ‘ ‘ ಎಂದಳು .

ಚಟುವಟಿಕೆ
 
ಆ ) ನಮ್ಮ ರಾಜ್ಯದಲ್ಲಿ ಹರಿಯುವ ನದಿಗಳ ಹೆಸರನ್ನು ಪಟ್ಟಿ ಮಾಡು .
ಉತ್ತರ : ತುಂಗಾ , ಭದ್ರಾ , ತುಂಗಭದ್ರಾ , ಕಾವೇರಿ , ಮಲಪ್ರಭಾ .
You Might Like

Post a Comment

0 Comments