Recent Posts

ಶಬರಿ - ೧೦ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 ಶಬರಿ

ಕವಿ – ಕಾವ್ಯ ಪರಿಚಯ
ಪು.ತಿ.ನರಸಿಂಹಚಾರ್
ಪು.ತಿ.ನ. ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್  ಇವರು ಕ್ರಿ.ಶ.೧೯೦೫ ರಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆ ಎಂಬ ಊರಿನಲ್ಲಿ ಜನಿಸಿದ್ದಾರೆ.
ಇವರು ಶಬರಿ, ಅಹಲ್ಯೆ, ಗೋಕುಲ ನಿರ್ಗಮನ, ವಿಕಟಕವಿವಿಜಯ, ಹಂಸದಯಂತಿ ಮತ್ತು ಇತರ ರೂಪಕಗಳು, ಹಣತೆ, ರಸಸರಸ್ವತಿ, ಗಣೇಶದರ್ಶನ, ಶಾರದಯಾಮಿನಿ, ಶ್ರೀಹರಿಚರಿತೆ, ರಥಸಪ್ತಮಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರ ಹಂಸದಮಯಂತಿ  ಮತ್ತು ಇತರ ರೂಪಕಗಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಶ್ರೀಹರಿಚರಿತೆ ಕಾವ್ಯಕ್ಕೆ ಪಂಪಪ್ರಶಸ್ತಿ ಗಳನ್ನು ಪಡೆದಿದ್ದಾರೆ.
ಆಶಯ ಭಾವ
ಶಬರಿ ಗೀತನಾಟಕ ರಾಮಾಯಣ ಮಹಾಕಾವ್ಯವನ್ನು ಆಧರಿಸಿದೆ. ತನ್ನ ಆರಾಧ್ಯ ಪುರುಷನ ದರ್ಶನದಿಂದ ಕೃತಾರ್ಥಳಾಗುವೆನೆಂಬ ಭಾವದಿಂದ  ಶಬರಿ ಶ್ರೀರಾಮನಿಗಾಗಿ ಹಂಬಲಿಸಿ ಕಾತರಿಸುತ್ತಾಳೆ. ಶ್ರೀರಾಮದರ್ಶನ ಆಕೆಗೆ  ಧನ್ಯತೆಯನ್ನು  ತಂದು  ಕೊಡುತ್ತದೆ.  ರಾಮಲಕ್ಷ್ಮಣರನ್ನು  ಆದರ  ಆತಿಥ್ಯದಿಂದ  ಸತ್ಕರಿಸಿ,  ಗೌರವಿಸಿದ ಶಬರಿ ತನ್ನ ಬಾಳಿನ ಹಂಬಲ ತೀರಿದನಂತರ ಬಾಳು ಅರ್ಥಹೀನವೆಂದು ಭಾವಿಸಿ, ಮುಕ್ತಿಗಾಗಿ ಪ್ರಯತ್ನಿಸುವ ಸಂವೇದನೆಗೆ ಒಳಗಾಗುತ್ತಾಳೆ.  ಶಬರಿಯ ಮುಗ್ಧತೆ, ಶ್ರೀರಾಮನ ಸರಳ, ಸಜ್ಜನಿಕೆ, ಹಿತ-ಮಿತ ಮೃದುವಚನ, ಲಕ್ಷ್ಮಣನ ವಿನಯದ ಸಹಚರತೆ ಮನೋಜ್ಞವಾಗಿ ಇಲ್ಲಿ ಮೂಡಿಬಂದಿದೆ.
ಪು.ತಿ.ನ. ವಿರಚಿತ ಶಬರಿ ಗೀತನಾಟಕವನ್ನು ಶ್ರೀರಂಗ ಮತ್ತು ನಾ.ಕಸ್ತೂರಿ ಸಂಪಾದಿಸಿರುವ ಏಕಾಂಕ ನಾಟಕಗಳು ಕೃತಿಯಿಂದ ಆಯ್ದು, ಸಂಪಾದಿಸಿ, ನಿಗದಿಪಡಿಸಲಾಗಿದೆ.

ಪೂರ್ವಕಥೆ
ರಾಮಾಯಣ  ಮಹಾಕಾವ್ಯವು  ಭಾರತೀಯರ  ಪವಿತ್ರ  ಗ್ರಂಥಗಳಲ್ಲಿ  ಒಂದು.  ಶ್ರೀರಾಮನ  ಗುಣ ಸ್ವಭಾವಗಳ ಸೆಳೆತಕ್ಕೆ ಸಿಕ್ಕಿ ಅವನನ್ನು ಕಾಣುವುದೇ ಜೀವನದ ಏಕೈಕ ಗುರಿ ಎಂದು ಭಾವಿಸಿದ್ದ ಅಸಂಖ್ಯಾತ ಭಕ್ತರಲ್ಲಿ ಶಬರಿಯೂ ಒಬ್ಬಳು. ಈಕೆ ಮತಂಗ ಋಷಿಯ ಆಶ್ರಮದಲ್ಲಿದ್ದವಳು. ಮತಂಗರು ದಿವ್ಯಲೋಕವನ್ನು ಸೇರಿದ  ಬಳಿಕ  ರಾಮಧ್ಯಾನದಲ್ಲಿ  ತೊಡಗಿ  ರಾಮನ  ದರ್ಶನಕ್ಕಾಗಿ  ಕಾದಿದ್ದಳು.  
ಸೀತಾಪಹರಣದ  ಅನಂತರ ಶೋಕತಪ್ತರಾದ  ರಾಮಲಕ್ಷ್ಮಣರು  ಸೀತೆಯನ್ನು  ಹುಡುಕುತ್ತಿರುವಾಗ  ತಪಸ್ವಿಯಾದ  ದನು  ಎಂಬವರ  ಸೂಚನೆಯಂತೆ ಮತಂಗಾಶ್ರಮವನ್ನು ಪ್ರವೇಶಿಸುತ್ತಾರೆ. ಅಲ್ಲಿ ಶ್ರೀರಾಮನ ಬರುವಿಕೆಗಾಗಿ ಕಾದು ಕಾದು ಕಾತರಿಸಿ ಮುಪ್ಪಾಗಿ ಭಕ್ತಿಯೇ ರೂಪುಗೊಂಡಂತೆ ಇದ್ದ ಶಬರಿಯನ್ನು ದರ್ಶಿಸುತ್ತಾರೆ. ತನ್ನ ಆರಾಧ್ಯದೈವ ಶ್ರೀರಾಮನನ್ನು ಕಂಡು ಆನಂದಿಸಿ, ಧನ್ಯತೆಯ ಭಾವನೆಯಿಂದ ಮುಕ್ತಿಯನ್ನು ಬಯಸಿದ ಶಬರಿಗೆ  ಶ್ರೀರಾಮನು ಮುಕ್ತಿಯನ್ನು ಕರುಣಿಸಿದ ಸಂದರ್ಭವೇ ಈ ಗೀತ ನಾಟಕ.

ಪದವಿಂಗಡಣೆ
ನೀನು + ಎಂದು + ಐತರುವೆ ; ನಿನ್ನ + ಎಡೆಗೆ + ಐದುವೆ ; ನಾನು + ಎರೆವೆ; ತೇಜಕೆ + ಎಡೆ; ಈಕೆಗೆ + ಎನ್ನಿಂದ; ಬೀಡು + ಇಲ್ಲಿ; ನಮ್ಮ + ಅಯೋಧ್ಯೆಯ + ಅರಮನೆಯೊಳು; ಇನಿತು + ಆದರ; ಎನಿತು + ಉದಾರ ; ನಿನ್ನ + ಅಭೀಷ್ಟ ; ತನ್ನ + ಎಡೆಗೆ + ಎಮ್ಮ; ನೆನೆಯುತ + ಇರಬಹುದು+ಅತ್ತಿಗೆ;  ಧೃತಿಯ + ಆನು.

ಪದಗಳ ಅರ್ಥ
ಅಣಿ                     -            ಸಿದ್ಧತೆ  
ಅಬ್ಬೆ                    -           ತಾಯಿ
ಅರಿ                      -           ತಿಳಿ  
ಅರ್ತಿ                   -           ಪ್ರೀತಿ
ಅಸುರ                 -           ರಾಕ್ಷಸ   
ಅಳಲು                -           ದುಃಖ
ಆದರ                  -           ಪ್ರೀತಿ
ಆನನ                  -           ಮುಖ
ಆನು                    -          ತಾಳು   
ಉಲ್ಕೆ                   -          ಆಕಾಶದಿಂದ ಬೂಮಿಗೆ ಬೀಳುವ ತೇಜಃಪುಂಜವಾದ ಆಕಾಶಕಾಯ,
ಊಣೆಯ             -          ಕೊರತೆ   
ಎಂಥರೋ              -          ಎಂತಹವರೋ
ಎಡೆ                        -          ಸ್ಥಳ
ಎರೆ                         -          ಬೇಡು,  ಪ್ರಾರ್ಥಿಸು.
ಐದಿ                        -           ಹೋಗಿ  
ಕಂಪು                     -           ಸುವಾಸನೆ
ಕಡು                       -           ಅತಿ  
ಕರ                          -          ಕೈ
ಕರುಕ                      -          ಉರಿದ ಬತ್ತಿಯ ಕಪ್ಪು ಭಾಗ   
ಚಿರ                         -          ಶಾಶ್ವತ
ಚೀರ (ತ್ಸ)                -           ಸೀರೆ (ದ್ಭ) - ನಾರುಬಟ್ಟೆ  
ತಣಿವು                     -          ತೃಪ್ತಿ   
ತವಸಿ(ದ್ಭ)               -          ತಪಸ್ವಿ(ತ್ಸ)   
ತುಸ                        -          ಸ್ವಲ್ಪವೂ
ತೃಷೆ                        -          ಬಾಯಾರಿಕೆ   
ತೇಜ                        -          ಕಾಂತಿ
ದಿಟ್ಟಿ (ದ್ಭ)               -          ದೃಷ್ಟಿ (ತ್ಸ)   
ಧೃತಿ                        -          ಧೈರ್ಯ
ನಲ್ಮೆ                       -          ಪ್ರೀತಿ   
ನೆಚ್ಚು                     -          ನಂಬು
ನೆರವು                     -         ಸಹಾಯ   
ಪದ                        -          ಪಾದ
ಪೆರೆ                         -          ಚಂದ್ರ   
ಪೊಗಳು                  -          ಹೊಗಳು
ಬಂಬಲ                  -          ಗುಂಪು  
ಬನ್ನ                      -          ಕಷ್ಟ, ತೊಂದರೆ
ಬಯಕೆ                  -          ಇಚ್ಛೆ   
ಬಳಿ                       -           ದಾರಿ
ಬೆರಗು                   -          ಆಶ್ಚರ್ಯ   
ಬೇಗೆ                      -         ದು:ಖವೆಂಬ ಬೆಂಕಿ
ಭೂಮಿಜಾತೆ          -         ಸೀತೆ   
ಮಧುಕರ               -        ದುಂಬಿ
ಮಧುಪರ್ಕ            -        ಅತಿಥಿಗಳಿಗೆ ನೀಡುವ ಮೊಸರು,  ತುಪ್ಪ, ಹಾಲು,                            ಜೇನುತುಪ್ಪ,   ಸಕ್ಕರೆ ಮಿಶ್ರಿತ ಪಾನೀಯ.   
ಮರುಳು                  -         ಮೋಡಿ
ರೇವು                       -         ಬಂದರು   
ಲೇಸು                      -         ಉತ್ತಮ
ವೇದಿ                       -         ಹೋಮ ನಡೆಯುವ ಸ್ಥಳ   
ಶ್ರಮಣಿ                    -          ತಪಸ್ವಿನಿ
ಸನಿಯ(ಹ)              -          ಸಮೀಪ  
ಸವಿ                         -          ಸಿಹಿ
ಸಿದ್ಧ                        -         ತಪಸ್ವಿ  
ಸುರಭಿ                     -         ಕಾಮಧೇನು
ಹವಣು                   -          ಸಿದ್ಧತೆ  
ಹಳು                       -         ಕಾಡು

ಟಿಪ್ಪಣಿ
ಶಬರಿ         :  ಶಬರನ ಮಗಳು, ಮತಂಗ ಋಷಿಯ ಶಿಷ್ಯೆ.

ಮತಂಗ     :  ಒಬ್ಬ ಬ್ರಹ್ಮರ್ಷಿ ಋಷ್ಯಮೂಕ ಪರ್ವತದ ಬಳಿ ತಪಸ್ಸು ಮಾಡಿಕೊಂಡಿದ್ದ.  ವಾಲಿಯು ದುಂದುಭಿಯೆಂಬ  ರಕ್ಕಸನನ್ನು  ಕೊಂದು  ಮದೋನ್ಮತ್ತನಾಗಿ  ಕಳೇಬರವನ್ನು  ಆಶ್ರಮಕ್ಕೆ ಎಸೆದಾಗ ಋಷ್ಯಾಶ್ರಮವು ಕಲುಷಿತಗೊಂಡಿತು. ಇದರಿಂದ ಕ್ರುದ್ಧನಾದ ಮತಂಗಮುನಿಯು ವಾಲಿಯು  ಈ  ಆಶ್ರಮವನ್ನು  ಪ್ರವೇಶ  ಮಾಡಿದರೆ  ಸಾವು  ಸಂಭವಿಸಲಿ  ಎಂದು ಶಪಿಸಿದನು. ವಾಲಿಯಿಂದ ಭಯಗ್ರಸ್ತನಾಗಿದ್ದ ಸುಗ್ರೀವನು ಇಲ್ಲಿ ನೆಲೆಸಿದ್ದನು. ಶಬರಿಯು ಮತಂಗರ ಆಶ್ರಮದಲ್ಲಿದ್ದಳು.

ಭೂಮಿಜಾತೆ   :  ಭೂಮಿಯ ಮಗಳು. ಜನಕ ಮಹಾರಾಜನು ಸಂತಾನ ಫಲಕ್ಕಾಗಿ ಪುತ್ರಕಾಮೇಷ್ಠಿ ಮಾಡಿ ಮಿಥಿಲೆಯಲ್ಲಿ ಭೂಮಿಯನ್ನು ಉಳುಮೆ ಮಾಡುತ್ತಿದ್ದಾಗ ದೊರೆತ ಶಿಶುವೇ ಸೀತೆ. ಹೀಗಾಗಿ ಸೀತೆಗೆ ಭೂಮಿಜಾತೆಯೆಂದು ಮತ್ತೊಂದು ಹೆಸರು.

ಚಿತ್ರಕೂಟ   :  ಒಂದು  ಪರ್ವತ.  ಉತ್ತರ  ಭಾರತದ  ಪಯೋಷ್ಣಿ  ನದಿಯ  ಪಕ್ಕದಲ್ಲಿದೆ.  ಶ್ರೀರಾಮನು ಸೀತಾಲಕ್ಷ್ಮಣರೊಂದಿಗೆ ಅರಣ್ಯವಾಸಕ್ಕೆ  ಹೊರಟಾಗ ಮೊತ್ತಮೊದಲು ಇಲ್ಲಿ  ಆಶ್ರಮವನ್ನು  ಕಟ್ಟಿಕೊಂಡನು.  ಭರತನು  ಶ್ರೀರಾಮನನ್ನು  ಭೇಟಿಯಾಗಿ  ಆತನ  ಪಾದುಕೆಗಳನ್ನು  ಇಲ್ಲಿ ಪಡೆದನು.

ದಶರಥ   :  ಅಯೋಧ್ಯೆಯ  ಅರಸು.  ರಾಮ,  ಲಕ್ಷ್ಮಣ,  ಭರತ,  ಶತ್ರುಘ್ನ  ಈತನ  ಮಕ್ಕಳು.  ಕೌಸಲ್ಯೆ, ಸುಮಿತ್ರೆ, ಕೈಕೆ ಈತನ ಮಡದಿಯರು.

ಸೌಮಿತ್ರಿ  :  ದಶರಥನ  ಎರಡನೆಯ  ಮಡದಿಯಾದ  ಸುಮಿತ್ರೆಯ  ಮಗ  ಲಕ್ಷ್ಮಣ.  ಸುಮಿತ್ರೆಯ ಮಗನಾದುದರಿಂದ ಸೌಮಿತ್ರಿ ಎಂದು ಈತನನ್ನು ಕರೆಯುತ್ತಾರೆ.

ದನು  :  ದಂಡಕಾರಣ್ಯದಲ್ಲಿ  ವಾಸಮಾಡುತ್ತಿದ್ದ  ಕಬಂಧ  ಎಂಬ  ಹೆಸರಿನ  ರಾಕ್ಷಸ.  ಹಿಂದಣ ಜನ್ಮದಲ್ಲಿ  ವಿಶ್ವಾವಸು  ಎಂಬ  ಗಂಧರ್ವನಾಗಿದ್ದ.  ಈತ  ಸ್ಥೂಲಶಿರನೆಂಬ  ಮುನಿಯನ್ನು ಅಪಮಾನಿಸಿದ್ದರಿಂದ ರಾಕ್ಷಸನಾಗಿ ಜನಿಸಿದ. ಒಮ್ಮೆ ಇಂದ್ರನ ವಜ್ರಾಯುಧದ ಪ್ರಹಾರದಿಂದ ಇವನ ಮುಖಕುಸಿದು ಹೊಟ್ಟೆಯೊಳಗೆ ಸೇರಿಕೊಂಡಿತು. ಹಾಗಾಗಿ ಈತನಿಗೆ ಉದರಮುಖ ಎಂಬ ಹೆಸರುಬಂತು. ರಾಮಲಕ್ಷ್ಮಣರಿಂದ ಈತನಿಗೆ ಶಾಪವಿಮೋಚನೆಯಾಯ್ತು. ಶಬರಿಯ ವೃತ್ತಾಂತವನ್ನು ರಾಮನಿಗೆ ತಿಳಿಸಿದ ಈತ ಸುಗ್ರೀವನಲ್ಲಿ ಸಖ್ಯಮಾಡಿ ಸೀತೆಯನ್ನು ಮರಳಿ ಪಡೆಯಬಹುದು ಎಂಬ ಸಲಹೆಯನ್ನು ನೀಡುತ್ತಾನೆ.

ಜಟಿಲಕಬರಿ  :  ಜಟಿಲ-ಜಡೆಯಾಕಾರದ, ಕಬರಿ - ತುರುಬು = ಜಡೆಯಾಕಾರದ ತುರುಬುಳ್ಳವಳು - ಶಬರಿ.

ಮೇಳ  :  ನಾಟಕಗಳಲ್ಲಿ ಹಾಡುವುದಕ್ಕಾಗಿ ಇರುವ ಒಂದು ವರ್ಗ ಇವರು ರಂಗದಲ್ಲಿ ಕಾಣಿಸಿಕೊಂಡು ನಾಟಕದ ಸನ್ನಿವೇಶಕ್ಕೆ ತಕ್ಕಂತೆ ಹಾಡುತ್ತಾರೆ.

ಬಲವಂದು  :  ಪ್ರದಕ್ಷಿಣಾಕಾರವಾಗಿ (ಎಡದಿಂದ ಬಲಕ್ಕೆ) ಸುತ್ತುಬಂದು ಎಂದರ್ಥ. ದೇವರಿಗೆ, ತುಳಸಿಕಟ್ಟೆಗೆ, ಕಾಮಧೇನು,  ಕಲ್ಪವೃಕ್ಷಗಳಿಗೆ,  ಹೋಮಕುಂಡ  ಮುಂತಾದವುಗಳಿಗೆ  ಸುತ್ತುವರಿಯುವಾಗ ಅವು ನಮ್ಮ ಬಲಭಾಗದಲ್ಲಿರುವಂತೆ ಸುತ್ತುವರಿಯುತ್ತಾರೆ. ಆಗ ಅದು ಪ್ರದಕ್ಷಿಣೆಯಾಗುತ್ತದೆ. ಸುತ್ತುವರಿಯಬೇಕಾದ ವಸ್ತುವನ್ನು ಎಡಭಾಗದಲ್ಲಿರುವಂತೆ ಸುತ್ತುವರಿದರೆ (ಎಡಬಂದು) ಅದು ಅಪ್ರದಕ್ಷಿಣೆಯಾಗುತ್ತದೆ.

ಪರ್ಣಶಾಲೆ  :  ಎಲೆಗಳಿಂದ ಮೇಲ್ಚಾವಣಿ ನಿಮರ್ಿಸಿರುವ ಕುಟೀರ.

ಅಭ್ಯಾಸ

ಅ)  ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.
1.  ಶ್ರೀರಾಮನ ತಂದೆಯ ಹೆಸರೇನು?
2.  ಶ್ರೀರಾಮನಿಗೆ ಸಮಪರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು?
3.  ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?
4.  ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?
5.  'ಶಬರಿ' ಗೀತನಾಟಕದ ಕತ್ರೃ ಯಾರು?

ಆ)  ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
1.  ರಾಮನು ಗಿರಿವನವನ್ನು ಏನೆಂದು ಪ್ರಾರ್ಥಿಸಿದನು?
2.  ಲಕ್ಷ್ಮಣನು ಅಣ್ಣನನ್ನು ಹೇಗೆ ಸಂತೈಸಿದನು?
3.  ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ಧತೆಗಳೇನು?
4.  ಶಬರಿಯು ರಾಮಲಕ್ಷ್ಮಣರನ್ನು ಉಪಚರಿಸಿದ ರೀತಿಯನ್ನು ವಿವರಿಸಿ.
5.  ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ ಏನು ಹೇಳಿದರು?

ಇ)  ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1.  ಶಬರಿಯ ಚಿಂತೆ ಹಿಂಗಿಹೋದ ಸಂದರ್ಭದ ಸ್ವಾರಸ್ಯವನ್ನು ವಿವರಿಸಿ.
2.  ಶಬರಿಯ ಸಡಗರ, ಸಂತೋಷ ಮೇಳದವರ ಹಾಡಿನಲ್ಲಿ ಹೇಗೆ ವರ್ಣಿತವಾಗಿದೆ?
3.  ನಂಬಿಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆ?

ಈ)  ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
1.  ಆವುದೀ ಮರುಳು? ನಮ್ಮೆಡೆಗೆ ಬರುತಿಹುದು.
2.  ನಾಚುತಿಹೆನೀ ಪೂಜ್ಯೆಯೀ ನಲುಮೆಯಿಂದ.
3.  ತಾಯಿ, ದಾರಿಗರಿಗೆ ಬೀಡಿಲ್ಲಿ ದೊರೆಯುವುದೇ?
4.  ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ!
5.  ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು.

ಉ)  ಹೊಂದಿಸಿ ಬರೆಯಿರಿ:    

      ಅ                            ಬ
1.  ಮತಂಗ                   ಸೀತೆ
2.  ಪು.ತಿ.ನ.                   ಆಶ್ರಮ
3.  ದಶರಥ                   ಮೇಲುಕೋಟೆ
4.  ಚಿತ್ರಕೂಟ               ಪರ್ವತ
5.  ಭೂಮಿಜಾತೆ           ರಾಮ       
                                      ಅರಣ್ಯ

ಊ) ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ.
1.  ತಾಳಿದವನು ಬಾಳಿಯಾನು.
2.  ಮನಸಿದ್ದರೆ ಮಾರ್ಗ.

ಭಾಷೆಯ ಸೊಬಗು

ಆಶ್ಚರ್ಯ  ಮತ್ತು  ವಿಸ್ಮಯ  -  ಇವೆರಡು  ಮೇಲ್ನೋಟಕ್ಕೆ  ಒಂದೇ  ರೀತಿಯ  ಅರ್ಥವನ್ನು  ಕೊಡುತ್ತವೆ ಎನಿಸಿದರೂ ಅವುಗಳಲ್ಲಿ ಅರ್ಥವ್ಯತ್ಯಾಸವಿದೆ.

ಆಶ್ಚರ್ಯ  ಎಂಬುದು  ಅನಿರೀಕ್ಷಿತವಾದದ್ದು  ಘಟಿಸಿದಾಗ  ಮೂಡುವ  ಭಾವ.  
ಉದಾ:  ಮನೆಗೆ  ಬಂದ ಅಳಿಯನನ್ನು  ಕಂಡು  ಅವರು  ಆಶ್ಚರ್ಯಗೊಂಡರು  (ಅರ್ಥಾತ್,  ಅವರು  ಅಳಿಯನ  ನಿರೀಕ್ಷೆಯಲ್ಲಿರಲಿಲ್ಲ. ಅಳಿಯನು ದಿಢೀರನೆ ಮನೆಗೆ ಬಂದುಬಿಟ್ಟನು. ಆಗ ಅವನ ಆಗಮನವನ್ನು ಕಂಡು, ಅದನ್ನು ನಿರೀಕ್ಷಿಸಿರದಿದ್ದವರು ಆಶ್ಚರ್ಯ ಪಟ್ಟರು)

ವಿಸ್ಮಯ  ಎಂಬುದು  ಅದ್ಭುತವಾದ  ಸಂಗತಿಯೊಂದು  ಘಟಿಸಿದಾಗ  ಮನಸ್ಸಿನಲ್ಲಿ  ಉಂಟಾಗುವ  ಭಾವ. ಉದಾ:  ಮ್ಯಾಜಿಕ್  ಶೋದಲ್ಲಿ  ಆ  ವ್ಯಕ್ತಿಯು  ಯಾವ  ಆಧಾರವೂ  ಇಲ್ಲದೆ  ಗಾಳಿಯಲ್ಲಿ ತೇಲಾಡುವುದನ್ನು ನೋಡಿ ನಾನು ಮೂಕವಿಸ್ಮಿತನಾದೆನು.
ವಿಸ್ಮಯ ಎಂಬುದು ಅತ್ಯಾಶ್ಚರ್ಯವನ್ನು ಕೊಡುವಂಥ ಭಾವವಾಗಿದೆ.
ಕೆಲವರು ಅತ್ಯಂತ ಆಶ್ಚರ್ಯ ಎಂಬುದನ್ನು ಹೇಳಲು ಸಖೇದಾಶ್ಚರ್ಯ ಎಂಬ ಶಬ್ದವನ್ನು ಬಳಸುತ್ತಾರೆ. ಆದರೆ ಇದು ತಪ್ಪು. ಸಖೇದಾಶ್ಚರ್ಯ ಎಂದರೆ ಖೇದವೂ ಆಶ್ಚರ್ಯವೂ ಎಂದು ಅರ್ಥ. ಖೇದ ಎಂದರೆ ತೀವ್ರವಾದ ದುಃಖ ಎಂದು ಅರ್ಥ. ಆಶ್ಚರ್ಯ ಮತ್ತು ದುಃಖ ಎರಡೂ ಒಟ್ಟಿಗೇ ಆದಾಗ ಮಾತ್ರ ಈ ಶಬ್ದವನ್ನು ಬಳಸಬಹುದು.
ಉದಾ: ಅಷ್ಟು ಚಿಕ್ಕ ವಯಸ್ಸಿನಲ್ಲೇ ಆಕೆ ತೀರಿಕೊಂಡಳೆಂದು ತಿಳಿದು ನನಗೆ ಸಖೇದಾಶ್ಚರ್ಯವಾಯಿತು. ಇಂಥ ಶಬ್ದಗಳನ್ನು ಪಟ್ಟಿ ಮಾಡಿ.

ಸೈದ್ಧಾಂತಿಕ ಭಾಷಾಭ್ಯಾಸ
ಈಗಾಗಲೇ  ಎಂಟು  ಮತ್ತು  ಒಂಬತ್ತನೆಯ  ತರಗತಿಗಳಲ್ಲಿ  ವ್ಯಾಕರಣ, ಛಂದಸ್ಸು  ಅಲಂಕಾರಗಳಲ್ಲಿ ಬಹುತೇಕ ಅಂಶಗಳನ್ನು ತಿಳಿದುಕೊಳ್ಳಲಾಗಿದೆ. ಅವುಗಳ ಪುನರವಲೋಕನದೊಂದಿಗೆ ಉಳಿದ ಅಂಶಗಳನ್ನು ತಿಳಿದುಕೊಳ್ಳೋಣ

 ಗುಣಿತಾಕ್ಷರಗಳು
ಒಂದು ವ್ಯಂಜನಾಕ್ಷರಕ್ಕೆ ಒಂದು ಸ್ವರಾಕ್ಷರ ಸೇರಿ ಆಗುವ ಅಕ್ಷರವನ್ನು ಗುಣಿತಾಕ್ಷರ ಎಂದು ಕರೆಯುತ್ತಾರೆ.
ಉದಾ : ಕ್+ಅ= ಕ ; ಕ್+ಆ=ಕಾ ; ಯ್+ಉ=ಯು ಇತ್ಯಾದಿ. ಹೀಗೆ ಒಂದು ವ್ಯಂಜನಕ್ಕೆ 13 ಸ್ವರಗಳನ್ನು ಎರಡು ಯೋಗವಾಹಗಳನ್ನು ಸೇರಿಸಿ ಗುಣಿತಾಕ್ಷರಗಳನ್ನು ಮಾಡಲಾಗುತ್ತದೆ.

ಸಂಯುಕ್ತಾಕ್ಷರಗಳು
ಎರಡು  ಅಥವಾ  ಎರಡಕ್ಕಿಂತ  ಹೆಚ್ಚು  ವ್ಯಂಜನಗಳಿಗೆ  ಒಂದು  ಸ್ವರ  ಅಂತ್ಯದಲ್ಲಿ  ಸೇರಿ  ಆಗುವ  ಅಕ್ಷರವನ್ನು ಸಂಯುಕ್ತಾಕ್ಷರ ಅಥವಾ ಒತ್ತಕ್ಷರ ಎಂದು ಕರೆಯಲಾಗುತ್ತದೆ.
ಇದರಲ್ಲಿ ಸಜಾತೀಯ ಮತ್ತು ವಿಜಾತೀಯ ಸಂಯುಕ್ತಾಕ್ಷರ ಎಂದು ಎರಡು ವಿಧಗಳಿವೆ.
ಸಜಾತೀಯ ಸಂಯುಕ್ತಾಕ್ಷರಗಳು  ಅಪ್ಪ, ಅಕ್ಕ, ಅಜ್ಜ, ಕಜ್ಜ ಇತ್ಯಾದಿ
ವಿಜಾತೀಯ ಸಂಯುಕ್ತಾಕ್ಷರಗಳು  ಉಷ್ಣ, ಅಸ್ತ್ರ, ಅಕ್ಷರ ಇತ್ಯಾದಿ

ಕನ್ನಡ ಅಂಕಿಗಳು
ಭಾರತೀಯ ಭಾಷೆಗಳಲ್ಲಿ ಬಹುತೇಕ ಭಾಷೆಗಳು ಸ್ವಂತ ಅಂಕಿಗಳನ್ನು ಹೊಂದಿವೆ. 1, 2, 3 ಇತ್ಯಾದಿಗಳು ಕನ್ನಡದ ಅಂಕಿಗಳು. ಹಾಗೆಯೇ ಕಾಲು, ಅರ್ಧ, ಮುಕ್ಕಾಲು ಎಂಬುದನ್ನು ಸೂಚಿಸಲೂ ಕನ್ನಡದಲ್ಲಿ ಪ್ರತ್ಯೇಕ ಸಂಕೇತಗಳಿವೆ. | (ಕಾಲು) || (ಅರ್ಧ) ||| (ಮುಕ್ಕಾಲು) ಇವೇ ಆ ಸಂಕೇತಗಳು.

ಪ್ರಬಂಧ ರಚನೆ
ಯಾವುದಾದರೊಂದು  ಸೂಕ್ತ  ವಿಷಯವನ್ನು  ಆರಿಸಿಕೊಂಡು  ಅದಕ್ಕೆ  ಸಂಬಂಧಿಸಿದಂತೆ  ವಿವೇಚಿಸುತ್ತ ಹತ್ತಾರು  ವಾಕ್ಯವೃಂದಗಳನ್ನು  ಬರೆಯಬಹುದು.  ಇಂತಹ  ಬರೆಹವು  ಅಖಂಡವಾಗಿ  ಕಲಾತ್ಮಕವಾಗಿ ಅನುಭವಪೂರ್ವಕವೆಂಬಂತೆ  ಸುಂದರವಾಗಿ  ರೂಪಿತಗೊಳ್ಳುವುದನ್ನು  ಪ್ರಬಂಧ  ಎನ್ನಬಹುದು.  ಆಯ್ಕೆ ಮಾಡಿದ  ವಿಷಯದ  ಬಗ್ಗೆ  ತೂಕವಾಗಿ  ಅಥವಾ  ಲಘುವಾಗಿ  ಬರೆಯುವುದು  ಅವರವರ  ಮನೋಧರ್ಮ, ಅನುಭವ, ಸಂಸ್ಕಾರಗಳ ಮೇಲೆ ಅನ್ವಯಿಸುತ್ತದೆ. ಗಡಿಯಾರ, ವಿಮಾನ, ಪೆನ್ನು ಮುಂತಾದ ವಿಷಯಗಳ ಬಗ್ಗೆ  ಪ್ರಬಂಧಗಳನ್ನು ಬರೆಯುವುದಾದರೆ ಅವು ವಸ್ತುನಿಷ್ಠ ಪ್ರಬಂಧಗಳೆನಿಸುತ್ತವೆ. ಇಂತಹ ಪ್ರಬಂಧಗಳನ್ನು ಹತ್ತಾರು ಮಂದಿ ಬರೆದರೂ ಎಲ್ಲವೂ ಒಂದೇ ತೆರನಾಗಿರುತ್ತವೆ. ವಿಚಾರ ವೈವಿಧ್ಯವಿರುವುದಿಲ್ಲ. ಮಳೆ ಬಂದ ಮಾರನೆಯ ದಿನ, ಅವನ ಕರವಸ್ತ್ರ, ಆ ಪಾರ್ಕಿನಲ್ಲಿ ಮುಂತಾದ ವಿಷಯಗಳ ಕುರಿತು ಬರೆದಾಗ ಬರೆಹಗಾರನ ಅನುಭವದ ಇತಿಮಿತಿಗಳು  ವ್ಯಕ್ತವಾಗುತ್ತವೆ.  ನಿರೂಪಣೆಯಲ್ಲಿ  ಹೊಸಹೊಸ  ಭಾವನೆಗಳನ್ನು  ನಿರೀಕ್ಷಿಸಬಹುದು.
ಸಾರಿಗೆ ರಾಷ್ಟ್ರೀಕರಣ, ವ್ಯವಸಾಯ ಯೋಜನೆಗಳು, ಶಿಕ್ಷಣ ಮಾಧ್ಯಮ  ಮುಂತಾದವು  ವಿಚಾರಪರ  ಪ್ರಬಂಧಗಳು. ಹಾಗಾಗಿ ಪ್ರಬಂಧಗಳನ್ನು ವಸ್ತುನಿಷ್ಠ, ಭಾವನಿಷ್ಠ ಮತ್ತು ವಿಚಾರಪರ ಎಂಬುದಾಗಿ ವಿಂಗಡಿಸಬಹುದು.
ಹಿಂದೆ  ಕಾವ್ಯ,  ಮಹಾಕಾವ್ಯಗಳನ್ನು  ಪ್ರಬಂಧಗಳೆಂದೂ  ಕರೆಯುತ್ತಿದ್ದರು.  ಆದರೆ  ಇಂದು  ಖಚಿತವಾಗಿ ಗದ್ಯಪ್ರಕಾರದಲ್ಲಿ  ಪ್ರಬಂಧ  ಸಾಹಿತ್ಯವೇ  ಹುಲುಸಾಗಿ  ಬೆಳೆಯುತ್ತ  ಬಂದು  ಸಾಹಿತ್ಯದ  ನಾನಾ  ಪ್ರಕಾರಗಳಲ್ಲಿ ಒಂದೆನಿಸಿ, ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದಿದೆ. ಪ್ರಬಂಧಕಾರನು ಸಹೃದಯನನ್ನು ಆತ್ಮೀಯ ಗೆಳೆಯನಂತೆ ಮಾಡಿಕೊಂಡು ತನ್ನ ವಿಚಾರಗಳೆಡೆಗೆ ಕರೆದೊಯ್ಯುವನು. ಅಷ್ಟರಮಟ್ಟಿಗೆ ಆತನಿಗೆ ಸ್ವಾತಂತ್ರ್ಯವಿದೆ.
ಪ್ರಬಂಧ  ರಚನೆಗೆ  ಸೂಕ್ತ  ವಿಷಯವನ್ನು  ಮೊದಲು  ಆಯ್ಕೆಮಾಡಿಕೊಳ್ಳಬೇಕು.  ಬಳಿಕ  ಪೀಠಿಕೆ,  ವಿಷಯ ನಿರೂಪಣೆ,  ಉಪಸಂಹಾರ  ಎಂಬ  ಮೂರು  ವಿಭಾಗಗಳಲ್ಲಿ  ಬರೆವಣಿಗೆ  ಸಾಗಬೇಕು.  ಹೀಗೆ  ಬರೆವಣಿಗೆ ಸಾಗುತ್ತಿರುವಾಗ ಪ್ರಬಂಧದ ಅಖಂಡತೆಗೆ ತೊಡಕಾಗಬಾರದು, ಭಾವನೆಗಳು ಕಲಸುಮೇಲೋಗರವಾಗಬಾರದು. ಅಂತೆಯೇ ಭಾಷೆಯೂ ಸ್ಪಷ್ಟ ಶುದ್ಧವಾಗಿರಬೇಕು.
ವಿಷಯ  ನಿರೂಪಣಾ  ವಿಧಾನ  ಗಂಭೀರವಾಗಿಯೂ  ಇರಬೇಕು,  ಸನ್ನಿವೇಶ,  ವಿಚಾರ  ವೈವಿಧ್ಯಕ್ಕೆ ತಕ್ಕಂತೆ ರಸಭಾವನೆಗಳ ಗಾರುಡಿ ಇರಬೇಕು. ವಿಷಯ ಸಂಗ್ರಹ, ವಿಷಯ ವಿಸ್ತಾರ, ಸರಳ ಶೈಲಿ, ಸಂಕ್ಷಿಪ್ತತೆ, ಸುಸಂಬದ್ಧತೆ,  ವಿಷಯದ  ತಾರ್ಕಿಕ ಜೋಡಣೆ ಮುಂತಾದ  ಅಂಶಗಳು  ಸತ್ವಪೂರ್ಣವಾಗಿದ್ದಾಗ  ಉತ್ತಮ ಪ್ರಬಂಧ ಮೂಡಿಬರುತ್ತದೆ.

ಭಾಷಾ ಚಟುವಟಿಕೆ

1.  ಕೊಟ್ಟಿರುವ ಪದಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರಗಳನ್ನು ಆರಿಸಿ ಬರೆಯಿರಿ.
ಕಾರ್ಯ, ಕತ್ತಲೆ, ಇಲ್ಲ, ಶಸ್ತ್ರ, ಎಚ್ಚರ, ಕಣ್ಣಿಗೆ, ಅದ್ಭುತ, ಬಟ್ಟೆ.

2.  ನೀಡಿರುವ ಪದಗಳಲ್ಲಿ ಅವರ್ಗೀಯ ವ್ಯಂಜನಾಕ್ಷರಗಳನ್ನು ಆರಿಸಿ ಬರೆಯಿರಿ.
ಸಮನಾಗಿ, ದೇಶ, ಮನೆಯ, ಬಳಿಕ, ನೆಲ, ಮದುವೆ, ಮಾನುಷ, ಹೊತ್ತು, ಒಳಗ

3.  ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ನಾಲ್ಕನೆಯ ಪದವನ್ನು ಬರೆಯಿರಿ.
ಅ)  ಕ್, ಗ್ : ಅಲ್ಪಪ್ರಾಣಾಕ್ಷರಗಳು : : ಛ್, ಝ್ : _________
ಆ)  ವರ್ಗೀಯ ವ್ಯಂಜನಾಕ್ಷರಗಳು : 25 : : ಅವರ್ಗೀಯ ವ್ಯಂಜನಾಕ್ಷರಗಳು : _________
ಇ)  ಆ, ಈ, ಊ : ದೀರ್ಘಸ್ವರಗಳು : : ಅ, ಇ, ಉ, ಋ : _________
ಈ)  ಸ್ವರಗಳು : 13 : : ಯೋಗವಾಹಗಳು : _________

4.   ಕೊಟ್ಟಿರುವ ವಿಷಯಗಳನ್ನು ಕುರಿತು ಪ್ರಬಂಧ ರಚಿಸಿರಿ.
1. ರಾಷ್ಟ್ರೀಯ ಹಬ್ಬಗಳ ಮಹತ್ವ  
2. ಗ್ರಂಥಾಲಯಗಳ ಮಹತ್ವ  
3. ಸಾಮಾಜಿಕ ಪಿಡುಗುಗಳು

ಪೂರಕ ಓದು
ಶಿವರಾಮ ಕಾರಂತರ ಕಿಸಾಗೋತಮಿ ಮತ್ತು ಪು.ತಿ.ನ. ಅವರ ಅಹಲ್ಯೆ ಗೀತನಾಟಕಗಳನ್ನು ಓದಿ.
ವಿ.ಸೀ. ಅವರ ಶಬರಿ ಪದ್ಯವನ್ನು ಸಂಗ್ರಹಿಸಿ ಓದಿರಿ.

ಬಹು ಆಯ್ಕೆ ಪ್ರಶ್ನೆಗಳು

1] ‘ನಿತ್ಯ ‘ ಇದರ ತದ್ಭವ ರೂಪ.
ಅ] ನೆಚ್ಚ ಅ] ನಿತ್ತ ಇ] ನಿಚ್ಚ ಈ] ಸತ್ಯ.

2] ‘ಚಂದ್ರಾಗನೇ’ ಈ ಅಲಂಕಾರಕ್ಕೆ ಉದಾಹರಣೆ.
ಅ] ರೂಪಕ ಆ] ಉಪಮಾ ಇ] ಉತ್ಪ್ರೇಕ್ಷ ಈ] ದೃಷ್ಟಾಂತ

3] ‘ಚೆಂದಳಿರು’ ಈ ಸಮಾಸಕ್ಕೆ ಸೇರಿದೆ.
ಅ] ಕರ್ಮಧಾರಯಾ ಆ] ದ್ವಿಗು. ಇ] ಕ್ರಿಯಾ ಈ] ಅಂಶಿ.

4] ‘ಅನುಜ’ ಇದರ ಅನ್ಯಲಿಂಗ ರೂಪ.
ಅ] ಸುತೆ. ಆ] ತಮ್ಮ. ಇ] ಅನುಜೆ ಈ] ವತ್ಸ

5] ‘ಉಪಕಾರ’ ಇದರ ವಿರುದ್ಧಾರ್ಥಕ ಪದ ಇದಾಗಿದೆ .
ಅ] ಪರೋಪಕಾರ. ಆ] ಪ್ರತ್ಯುಪಕಾರ. ಇ] ಪ್ರತೀಕಾರ. ಈ] ಅಪಕಾರ.

6] ‘ಪ್ರಾಣಾಹುತಿ’ ಈ ಸಂಧಿಗೆ ಉದಾಹರಣೆ.
ಅ] ಯಣ್ಸಂಧಿ. ಆ] ಆದೇಶ ಸಂಧಿ. ಇ] ಸವರ್ಣಧೀರ್ಘ ಸಂಧಿ. ಈ] ಆಗಮ ಸಂಧಿ.

7] ‘ರಾಮಲಕ್ಷ್ಮಣರು ’ ಇದು ಈ ಸಮಾಸಕ್ಕೆ ಉದಾಹರಣೆ.
ಅ] ಕರ್ಮಾಧಾರಯಾ ಆ] ದ್ವಂದ್ವ ಇ] ದ್ವಿಗು ಈ] ತತ್ಪುರುಷ.

8] ಬಾಬಾ ಇದು ಈ ವಾಕ್ಯಾರಾಣಾಂಶವಾಗಿದೆ.
ಅ] ಕ್ರಿಯೆ ಆ] ಅನುಕರಣಾವ್ಯಯ. ಇ] ದ್ವಿರುಕ್ತಿ ಈ] ಜೋಡಿನುಡಿ.

9] ‘ಸುರಭಿ’ ಪದದ ಅರ್ಥ.
ಅ] ಸುಂದರ ಆ] ನಕ್ಷತ್ರ. ಇ] ಕಾಮಧೇನು. ಈ] ಆಕಾಶ

10] ‘ಹಸುಳೆ ‘ ಪದದ ಅರ್ಥ
ಅ] ಎಳೆ. ಆ] ಬೆಳೆ ಇ] ಮಗು. ಈ] ಕರು.

11] ‘ಉದರಮುಖ‘ ಇದು ಈ ನಾಮಪದಕ್ಕೆ ಉದಾಹರಣೆ.
ಅ] ಅಂಕಿತನಾಮ ಆ] ಭಾವನಾಮ ಇ] ಅನ್ವರ್ಥನಾಮ ಈ] ರೂಢನಾಮ.

12] ‘ದನು ಪೇಳ್ದದಾರಿಯೊಳೆ  ನಾವು ಬಂದಿಹೆವೆ’ ಈ ವಾಕ್ಯದ ಕೊನೆಗಿರಬೇಕಾದ ಲೇಖನ ಚಿಹ್ನೆ ಇದಾಗಿದೆ.
ಅ] ಪೂರ್ಣವಿರಾಮ ಆ] ಭಾವಸೂಚಕ ಇ] ಉದ್ಧರಣ ಈ] ಪ್ರಶ್ನಾರ್ಥಕ.

13] ‘ವನ’ ಪದದ ತದ್ಭವ ರೂಪ
ಅ] ಮನ ಆ] ವನ ಇ] ಬನ ಈ] ದನ

14] ‘ಶೋಕದುಲ್ಕೆ’ ಈ ಸಂಧಿಯಾಗಿದೆ
ಅ] ಆದೇಶ ಆ] ಲೋಪಸಂಧಿ ಇ] ಸವರ್ಣಧೀರ್ಘ ಈ] ಯಣ್ಸಂದಿ

15] ‘ಐದಿ’ ಪದದ ಅರ್ಥ
ಅ] ಕಾಡು ಆ] ಆಸರೆ ಇ] ಹೋಗಿ ಈ] ವೇದಿ

16] ‘ದಿಟ್ಟಿ’ ಇದರ ತತ್ಸಮ ರೂಪ
ಅ] ದಿಟ್ಟ ಆ] ದಿಟ್ಟಿ ಇ] ದೃಷ್ಟಿ ಈ] ಮುಷ್ಠಿ

17. ಒಂದು ವ್ಯಂಜನಕ್ಕೆ ಒಂದು ಸ್ವರ ಸೇರಿ ಆಗುವ ಅಕ್ಷರವನ್ನು
ಅ] ಸಂಯುಕ್ತಾಕ್ಷರಗಳು ಆ] ಸ್ವರಗಳು ಇ] ಗುಣಿತಾಕ್ಷರಗಳು ಈ] ಯೋಗವಾಹಗಳು

18] ಸಜಾತೀಯ ಸಂಯುಕ್ತಾಕ್ಷರಗಳಿಗೆ ಇದು ಉದಾಹರಣೆಯಾಗಿದೆ
ಅ] ಉಷ್ಣ ಆ] ಅಸ್ತ್ರ ಇ] ಅಜ್ಜ ಈ] ಅಕ್ಷರ

19] ಸ್ವರಾಕ್ಷರಗಳಲ್ಲಿನ ಪ್ಲುತಾಕ್ಷರಗಳು ಇವಾಗಿವೆ
ಅ] ಅ,ಇ,ಉ ಆ] ಆ,ಈ,ಐ ಇ] ಕ್,ಗ್,ಚ್ ಈ] ಅs

20] ವರ್ಗೀಯ ವ್ಯಂಜನಗಳಲ್ಲಿ ಮೊದಲ ಮತ್ತು ಮೂರನೆಯ ಸಾಲಿನ ಅಕ್ಷರಗಳನ್ನು ಹೀಗೆನ್ನುತ್ತಾರೆ
ಅ] ವಿಸರ್ಗ ಆ] ಅನುಸ್ವಾರ ಇ] ಅಲ್ಪಪ್ರಾಣ ಈ] ಮಹಾಪ್ರಾಣ

21] ವರ್ಗೀಯ ವ್ಯಂಜನಗಳಲ್ಲಿ ಐದನೆ ಸಾಲಿನ ಅಕ್ಷರಗಳನ್ನು ಹೀಗೆನ್ನುತ್ತಾರೆ
ಅ] ಅಲ್ಪಪ್ರಾಣ ಆ] ಮಹಾಪ್ರಾಣ ಇ] ಅನುನಾಸಿಕ ಈ] ವಿಸರ್ಗ

22] ವರ್ಣಮಾಲೆಯಲ್ಲಿನ ಸ್ವರಾಕ್ಷರಗಳೆಷ್ಟು
ಅ]೦೮ ಆ] ೧೦ ಇ] ೧೨ ಈ] ೧೩

23] ಯೋಗವಾಹಗಳು ಇವಾಗಿವೆ
ಅ] ಯ್ ರ್ ಆ] ಕ್ ಖ್ ಇ] ಃ ಂ ಈ]ಓ o o

24] ಅವರ್ಗೀಯ ವ್ಯಂಜನಾಕ್ಷರಗಳೆಷ್ಟು
ಅ] ೦೨ ಆ]೦೮ ಇ] ೦೭ ಈ] ೦೯

25] ಇವುಗಳಲ್ಲಿ ಅವರ್ಗೀಯ ವ್ಯಂಜಾನಾಕ್ಷರಗಳಾಗಿವೆ
ಅ] ಮ ಆ] ಬ ಇ] ರ ಈ] ಚ

26] ಇವುಗಳಲ್ಲಿ ವಿಜಾತಿಯ ಸಂಯುಕ್ತಾಕ್ಷರಗಳನ್ನು  ಆರಿಸಿ ಬರೆಯಿರಿ
ಅ] ಎನ್ನ ಆ] ಪ್ರವೇಶ ಇ] ಅಹಂಕೃತಿ ಈ] ಹಾಯಾಗಿ

27] ಇವುಗಳನ್ನು ಕನ್ನಡ  ಅಂಕೆಗಳೆಂದು  ಕರೆಯುತ್ತಾರೆ
ಅ] ಮುಕ್ಕಾಲು ಆ] ಗಂಟೆ ಇ] ತಾಸು ಈ] ಅವಧಿ

28] ವರ್ಗೀಯ ವ್ಯಂಜಾನಾಕ್ಷರಗಳು ಎಷ್ಟು?
ಅ] ೨೫ ಆ] ೨೪ ಇ] ೨೫ ಈ] ೧೨

29] ‘ತಪಸ್ವಿ’ ಪದದ ತದ್ಭವ ರೂಪ ಬರೆಯಿರಿ
ಅ] ತವಸಿ ಆ] ತಪಸ್ವಿ ಇ] ತಪಸಿ ಈ] ತವಸ

30] ತ ವರ್ಗದ ಅನುನಾಸಿಕ ಅಕ್ಷರ ಯಾವುದು. [ಮಾರ್ಚ್ ೨೦೦೯]
ಅ]ಙ ಬ]ಣ ಕ]ಮ ಡ]ನ

31] ಎರಡು ಮಾತ್ರ ಕಾಲದಲ್ಲಿ ಉಚ್ಚರಿಸುವ ಸ್ವರಾಕ್ಷಾರಗಳಿಗೆ ಏನೆಂದು ಕರೆಯುತ್ತಾರೆ.
ಅ] ದೀರ್ಘಸ್ವರ ಬ]ಹೃಸ್ವಸ್ವರ  ಕ] ಪ್ಲುತ ಸ್ವರ ಡ] ಸಪ್ತ ಸ್ವರ [ಮಾ೨೦೧೧]

32) ಘ, ಝ, ಢ, ಧ, ಭ, ಅಕ್ಷರಗಳನ್ನು ಹೀಗೆಂದು ಕರೆಯುತ್ತೇವೆ [ಏ- ೨೦೧೩]
ಅ] ದೀರ್ಘಸ್ವರಾಕ್ಷರಗಳು ಬ] ಅಲ್ಪಪ್ರಾಣಾಕ್ಷರಗಳು
ಉತ್ತರಗಳು
ಕ]ಮಹಾಪ್ರಾಣಾಕ್ಷರಗಳು ಡ]ಅನುನಾಸಿಕಾಕ್ಷರಗಳು
1] ಇ 2] ಅ 3] ಅ 4] ಇ 5] ಈ 6] ಇ 7] ಅ 8] ಇ 9] ಇ ೯] ಇ 10] ಇ 11] ಈ 12] ಇ 13] ಆ 14] ಇ 15] ಇ 16] ಇ 17] ಇ 18] ಈ 19] ಇ 20] ಇ 21] ಈ 22] ಇ 23] ಈ 24] ಈ 25] 26] ಇ 27] ಅ 28] ಅ 29] ಅ 30] ಡ 31] ಅ 32] P

ಅಭ್ಯಾಸ ಪ್ರಶ್ನೋತ್ತರಗಳು

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದುವಾಕ್ಯಗಳಲ್ಲಿ ಉತ್ತರಿಸಿ.

1. ಶ್ರೀ ರಾಮನ ತಂದೆಯ ಹೆಸರೇನು?
ಶ್ರೀ ರಾಮನ ತಂದೆಯ ಹೆಸರು ದಶರಥ.

2. ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನನ್ನ  ಸಂಗ್ರಹಿಸಿದ್ದಳು?
ಶ್ರೀರಾಮನಿಗೆ ಸಮರ್ಪಿಸಲು ಶಬರಿ ಪರಿಮಳದ ಹೂವು, ರುಚಿಕರವಾದ ಹಣ್ಣುಹಂಪಲುಗಳು ಮತ್ತುಮಧುಪರ್ಕ ಎಂಬ ಪಾನಿಯವನ್ನುಸಂಗ್ರಹಿಸಿದ್ದಳು.

3. ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?
ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಶಬರಿ.

4. ರಾಮಲಕ್ಶ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದ ವ ರು ಯಾರು?
ರಾಮಲಕ್ಶ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ದನು ಮಹರ್ಷಿ.

5. ಶಬರಿ ಗೀತನಾಟಕದ ಕರ್ತೃ ಯಾರು?
ಶಬರಿ ಗೀತನಾಟಕದ ಕರ್ತೃ ಪು.ತಿ. ನರಸಿಂಹಾಚಾರ್ಯರು.
ಹೆಚ್ಚುವರಿ ಪ್ರಶ್ನೋತ್ತರಗಳು

6.ಭೂಮಿಜಾತೆ ಎಂದರೆ ಯಾರು ?
ಭೂಮಿಜಾತೆ ಎಂದರೆ ಸೀತೆ.

7.ಶಬರಿ ಯಾರಿಗಾಗಿ ಕಾದಿದ್ದಳು ?
ಶಬರಿ ಶ್ರೀರಾಮನಿಗಾಗಿ ಕಾದಿದ್ದಳು.

8.ಯಾರೊಡನೆ ಕಾಡಿಗೆ ಬರಲು ಶ್ರೀರಾಮನಿಗೆ ಭಯವಿಲ್ಲ ?
ಲಕ್ಷ್ಮಣನೊಡನೆ ಕಾಡಿಗೆ ಬರಲು ಶ್ರೀರಾಮನಿಗೆ ಭಯವಿಲ್ಲ.

9.ಶಬರಿಗೆ ಯಾರ ವರ ಫಲಿಸಿತು ?
ಶಬರಿಗೆ ಸಿದ್ಧರ ವರ ಫಲಿಸಿತು.

10.ಶಬರಿಯ ಪೂಣ್ಕೆ ಏನಾಗಿತ್ತು ?
ಶಬರಿಯ ಪೂಣ್ಕೆ ಮುಕ್ತಿ ಬಯಸುವುದಾಗಿತ್ತು.

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.


1. ರಾಮನು ಗಿರಿವನವನ್ನು ಏನೆಂದು ಪ್ರಾರ್ಥಿಸಿದನು?
ರಾಮನು “ಎಲೈ ಗಿರಿ ವನವೇ ನಾನು ನಿಮ್ಮನ್ನು ಬೇಡಿಕೊಳ್ಳತ್ತಿದ್ದೇನೆ ಹೇಳಿರಿ ನನ್ನ ಪ್ರೀತಿಯ ರಾಣಿ ಸೀತೆಯು ದೊರೆಯುವಳೇ ? ದೊರೆಯುವುದಿಲ್ಲವೋ ? ಅವಳು ಇರುವ ನೆಲೆ ಯಾರಾದರೂ ತಿಳಿದಿರುವಿರಾ. ನನ್ನ ಹೃದಯದ ಈ ದುಃಖವು ನಾಶವಾಗುತ್ತಿಲ್ಲವಲ್ಲ.” ಎಂದು ಗಿರಿವನಗಳನ್ನು ಪ್ರಾರ್ಥಿಸುತ್ತಾನೆ.

2. ಲಕ್ಷ್ಮಣನು ಅಣ್ಣನನ್ನು ಹೇಗೆ ಸಂತೈಸಿದನು ತಿಳಿಸಿ.
ಲಕ್ಷ್ಮಣನು  “ತಾಳಿಕೋ ಅಣ್ಣ ತಾಳಿಕೋ ಸೂರ್ಯನೇ ಕಾಂತಿ ಕಳೆದುಕೊಂಡರೆ ಕಾಂತಿಯನ್ನು ನೀಡುವವರು ಯಾರು? ರಾಮನೇ ಧೈರ್ಯ ಕಳೆದುಕೊಂಡರೆ ಈ ಲೋಕಕ್ಕೆ ¸ ನೀಡುವವರು ಯಾರು ? ಎಂದು ಅಣ್ಣನನ್ನು ಸಂತೈಸಿದನು.

3. ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ಧತೆಗಳೇನು?
ರಾಮನ ಸ್ವಾಗತಕ್ಕಾಗಿ ಶಬರಿ ಕಡುಸವಿಯಾದ ಬಗೆಬಗೆಯ ಹಣ್ಣು ಹಂಪಲುಗಳನ್ನು, ಜೇನುತುಪ್ಪ  ಅಧಿಕವಾಗಿರುವ ಮಧುಪರ್ಕವೆಂಬ ಪಾನೀಯವನ್ನು , ತಳಿರು , ಸುವಾಸನೆಯಿಂದ ಕೂಡಿದ ಹೂವುಗಳನ್ನು ಸಂಗ್ರಹಿಸಿ ಸಿದ್ಧತೆಮಾಡಿಕೊಂಡಿದ್ದಳು.

4. ಶಬರಿಯು ರಾಮಲಸ್ಕ್ಮಣರನ್ನು  ಉಪಚರಿಸಿದ ರೀತಿಯನ್ನು ವಿವರಿಸಿ.
ರಾಮ-ಲಕ್ಷ್ಮಣ  ಬಂದು ತನ್ನ ಮುಂದೆ ನಿಂತಿರುವದನ್ನು ಕಂಡು ಶಬರಿ ಬೆರಗಾದರೆ . ಬೆರಗು ಕಳೆದ ಮೇಲೆ ರಾಮನ  ಹತ್ತಿರಕ್ಕೆ ಬಂದು ಮೈಯನ್ನು ಮುಟ್ಟಿ ಪಾದಕ್ಕೆ ಬಿದ್ದಳು. ಕೈಯನ್ನು ಕಣ್ಣಿಗೆ  ಒತ್ತಿಕೊಂಡು ಆನಂದದ ಕಣ್ಣೀರನ್ನು ಸುರಿಸಿದಳು. ಬನ್ನಿರಿ ಎಂದು ಗದ್ಗದಿಸುತ್ತಾ ಅಯ್ಯೋ ಏನೂ ಸಿದ್ಧವೇ ಇಲ್ಲ. ನಿನ್ನೆಯಷ್ಟು ಚೆಂದವಿಲ್ಲ ಎನ್ನುತ್ತ ಬಹಳ ಹಂಬಲದಿಂದ ತನ್ನ ಮನದ ಬಯಕೆಯಂತೆ ಬಗೆ ಬಗೆಯ ಸುವಾಸನೆಯನ್ನು ಬೀರುವ ಹೂಮಾಲೆಯನ್ನು ರಾಮನ ಕೊರಳಿಗೆ ಹಾಕಿ ಸಂಭ್ರಮಿಸಿದಳು. ತಾನು ತಂದಿದ್ದ ರುಚಿಯಾದ ಹಣ್ಣುಗಳನ್ನು ತಾನೆ ರಾಮಲಕ್ಷ್ಮಮಣರ ಕೈಯೊಳಗೆ ಇಟ್ಟು ಜಗದೊಳಗೆ ಇದರಷ್ಟು ರುಚಿಯಾದ ಹಣ್ಣು ಯಾವುದು ಇಲ್ಲ , ನಿಮಗಾಗಿಯೇ  ತಂದಿರುವೆನು ಎಂದು ತಿನ್ನಲು ಹೇಳಿದಳು.
ಮಧುಪರ್ಕವನ್ನು ಸವಿಯಲು ಕೊಟ್ಟು ಉಪಚರಿಸಿದಳು.

5. ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು  ಶಬರಿಗೆ ಏನು ಹೇಳಿದರು?
ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣ  “ತಾಯಿ ನಿನ್ನ ಪ್ರೀತಿಯಲ್ಲಿ , ನಿನ್ನ ಸುಖದಲ್ಲಿ ನಾವು ಸುಖಿಗಳಾಗಿದ್ದೇವೆ. ಕಾಡಿನಲ್ಲಿ ಈ ಆನಂದ ಕಾಣುವ ಪುಣ್ಯಕ್ಕೆ ಎಂದೆದಿಗೂ ನಿನಗೆ ನಾವು ಚಿರಋಣಿಗಳಾಗಿದ್ದೇವೆ. ನಿಮ್ಮ ಆತಿಥ್ಯದಲ್ಲಿ ಸ್ವಲ್ಪವೂ ಕೊರೆತ ಕಾಣಲಿಲ್ಲ. ನಮ್ಮ ಅಯೋದ್ಯೇಯ ಅರಮನೆಯಲ್ಲೂ ಕೂಡ ಇದಕ್ಕಿಂತ ಹಿತವಾದದ್ದು ಇಲ್ಲ. ಇಂದು ನಾವು ಕಾಡು ಎಂಬುದನ್ನು ಮರೆತು  ಮನೆಯೆಂದೇ ತಿಳಿದೆ. ಇಷ್ಟೊಂದು ಪ್ರೀತಿ ತೋರುವ ನಿನ್ನನ್ನು ತಾಯಿ ಎಂದೆ ತಿಳಿದೆವು” ಎಂದು ಶಬರಿಗೆ ಹೇಳಿದರು.
ಹೆಚ್ಚುವರಿ ಪ್ರಶ್ನೋತ್ತರಗಳು

6)ಶಬರಿ ಶ್ರೀ ರಾಮನ ಗುಣಗಣಗಳನ್ನು ಹೇಗೆ ಹಾಡಿ ಹೊಗಳಿದಳು ?
“ದಶರಥನ ಮಗನಂತೆ, ಸಾಧು-ಸಜ್ಜನರ ಮಿತ್ರನಂತೆ, ಧೀರ ಶೂರ ವೀರ ಗಂಭೀರ ಸದ್ಗುಣಗಳ ಸಾರನಂತೆ, ಹೆದರಿಸುವವರ ಹೆದರುವಂತೆ ಬಿಲ್ಲು ಹಿಡಿದು ಬರುವನಂತೆ ತುಂಬ ಸೌಮ್ಯಸ್ವಭಾವದವನಂತೆ, ಮಗುವಿನಂತೆ ಕಾಣುವನಂತೆ, ರಾಜಪದವಿಯ ತ್ಯಾಗ ಮಾಡಿದನಂತೆ, ತಪಸ್ವಿತನವ ಹಿಡಿದನಂತೆ, ತಮ್ಮನೊಡನೆ ಕಾಡಿಗೆ ಬರಲು ಮನದಲ್ಲಿ ಭಯವೇ ಇಲ್ಲವಂತೆ, ಕೆಟ್ಟಕನಸಿನ ರಾತ್ರಿಯನ್ನು ಕಳೆಯುವ ಸುಂದರವಾದ ಬೆಳಗಿನಂಥವನು. ಗುರುಗಳು,ತಪಸ್ವಿಗಳು ಮೆಚ್ಚಿದಂತ ಸನ್ಮಂಗಳ ಮೂರ್ತಿಯನ್ನು ಎಂದು ಕಾಣುವೆನೋ” ಎಂದು ಶಬರಿ ಶ್ರೀರಾಮನ ಗುಣಗಾನ ಮಾಡುತ್ತಾ ಹಾಡಿ ಹೊಗಳಿದಳು.

7. ಶಬರಿ ರಾಮನಿಗೋಸ್ಕರ ತಂದಿರುವ ಹೂ ಹಣ್ಣು ತಳಿರುಗಳನ್ನು ಉದ್ದೇಶಿಸಿ ಯಾವ ತೆರನಾಗಿ ಹಾಡುತ್ತಾಳೆ ?
ಶಬರಿ ರಾಮನಿಗೋಸ್ಕರ ಹೂವು-ಹಣ್ಣು ಹಂಪಲುಗಳನ್ನು ಹೊಂದಿಸುತ್ತ ಅವುಗಳನ್ನು ಉದ್ದೇಶಿಸಿ “ಎಲೈ ಕೆಂಪಾದ ಚಿಗುರೇ ನಿನ್ನ ಎಳೆಯತನ ಕೋಮಲತೆಯನ್ನು ಅವನು ಮುಟ್ಟದೆ ಬರಿ ಗಾಳಿಗೆ ಒಣಗಿರುವೆಯಲ್ಲ. ದುಂಬಿಗಳ ಸಮೂಹದ ವರ್ಣನೆಗೆ ಆಶ್ರಯವಾದ ಅರಳಿದ ಹೂವುಗಳು ನಿಮ್ಮ ಸುವಾಸನೆಯಿಂದ ಅವನ ಜೀವವನ್ನು ಉತ್ತೇಜಿಸದೇ ಬಾಡಿ ಹೋಗಿರುವಿರಲ್ಲವೇ ! ಅವನ ಜೀವಕ್ಕೆ ಆಹಾರವಾಗದೆ ರುಚಿ ಹದಗೆಟ್ಟು ಹುಳುವಿಗೆ ಆಸರೆಯಾದ ಎಲೆ ವನ್ಯಫಲವೇ” ಎಂಬ ತೆರನಾಗಿ ಹಾಡುತ್ತಾಳೆ.

8. ರಾಮಲಕ್ಷ್ಮಣರನ್ನು ಉಪಚಾರ ಮಾಡಿದ ಶಬರಿ ತನ್ನ ಅಂತಸ್ಸುಖವನ್ನು ತೋರಿಸಲು ಹೇಗೆ ಹಾಡುತ್ತಾಳೆ ?
ರಾಮಲಕ್ಷ್ಮಣರನ್ನು ಉಪಚಾರ ಮಾಡಿದ ಶಬರಿ ತನ್ನ ಅಂತಸ್ಸುಖವನ್ನು ತೋರಿಸಲು “ಸುಖಿ ನಾನು ಆಸೆ ತೀರಿ ಹಾಯಾಗಿರುವೆನು. ನನ್ನ ಹಂಬಲ ಅಳಿದು ಸಂತೋಷ ತುಂಬಿದೆ. ಹೊಳೆ ಕಡಲಿಗೆ ಸೇರುವ ರೀತಿಯಲ್ಲಿ , ದೋಣಿಯು ಬಂದರಿಗೆ ಬರುವ ರೀತಿಯಲ್ಲಿ, ಬಗೆಬಗೆಯ ಪಟಗಳನ್ನು ಇಳಿಸಿ ನಿಂತಂತೆ ತನ್ನ  ಮುಕ್ತಿ ಬಯಸಿ ನಿಂತಿದೆ. ನಿಮ್ಮನ್ನು ನೋಡುತ್ತಾ , ಮಾತನಾಡಿಸುತ್ತ ಸುಖವಾಗಿದ್ದೇನೆ. ನಿಮಗಾದ ತೃಪ್ತಿ ,ಆನಂದದಲ್ಲಿ ನಾನು ಸುಖವಾಗಿದ್ದೇನೆ. ಇಂದು ನನ್ನ ಮನದ ಚಿಂತೆಗಳೆಲ್ಲವೂ ಕಳೆದು ನನ್ನ ಮನ ಬಹಳ ಹಗುರವಾಗಿದೆ. ಪರಲೋಕವು ನನ್ನನ್ನು ಕರೆದುಕೊಳ್ಳಲು ತನ್ನ ಕೈಯನ್ನು ಚಾಚಿದೆ. ನಿನ್ನೆ ನಾಳೆ ಎಂಬುದೇ ನನಗಿಲ್ಲ ಈ ಆನಂದವೇ ಶಾಶ್ವತ ಎಂಬ ರೀತಿಯಲ್ಲಿ ನಾನು ಸುಖಿಯಾಗಿದ್ದೇನೆ” ಎಂದು ಹಾಡುತ್ತಾಳೆ.

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

1.ಶಬರಿಯ ಚಿಂತೆ ಹಿಂಗಿ ಹೋದ ಸಂದರ್ಭದ ಸ್ವಾರಸ್ಯವನ್ನು ವಿವರಿಸಿ.
ಶಬರಿ ಶ್ರೀರಾಮನ ದರ್ಶನದ ಚಿಂತೆಯಲ್ಲಿ ಇದ್ದಾಗ ಒಂದು ದಿನ ರಾಮಲಕ್ಷö್ಮಣರು ಮತಂಗಾಶ್ರಮಕ್ಕೆ ಬರುತ್ತಾರೆ. ರಾಮನನ್ನು ಕಂಡು ಹತ್ತಿರಕ್ಕೆ ಬಂದು ಮೈಯನ್ನು ಮುಟ್ಟಿ ಪಾದಕ್ಕೆ ಬಿದ್ದಳು. ಕೈಯನ್ನು ಕಣ್ಣಿಗೆ ಒತ್ತಿಕೊಂಡು ತನ್ನ ಮನದ ಬಯಕೆಯಂತೆ ಹೂ ಮಾಲೆಯನ್ನು ರಾಮನ ಕೊರಳಿಗೆ ಹಾಕಿ ಸಂಭ್ರಮಿಸಿದಳು. ತಾನು ತಂದಿದ್ದ ರುಚಿಯಾದ ಹಣ್ಣುಗಳನ್ನು ಮಧುಪರ್ಕವನ್ನು ಸವಿಯಲು ಕೊಟ್ಟಳು. ಶಬರಿಯ ಆತಿಥ್ಯದಿಂದ ರಾಮಲಕ್ಷಣರು ಸುಪ್ರಸನ್ನರಾಗಿ ಮಂದಹಾಸ ತೋರಿದರು. ಇದನ್ನು ನೋಡಿದ ಶಬರಿ ಧನ್ಯತಾಭಾವದಿಂದ ಕೂಡಿದವಳಾದಳು. ಸುಖಿ ನಾನು ಆಸೆ ತೀರಿ ಹಾಯಾಗಿರುವೆನು. ನನ್ನ ಹಂಬಲ ಅಳಿದು ¸ಸಂತೋಷ ತುಂಬಿದೆ. ನನ್ನ ಮತ್ತು ಮುಕ್ತಿಬಯಸಿ ನಿಂತಿದೆ. ಎಂದು ಹಾಡುತ್ತಾ ನರ್ತಿಸುತ್ತಾಳೆ.
ಇದನ್ನು ಕಂಡ ರಾಮ ತಾಯಿ ನಿನ್ನ ಪ್ರೀತಿಯಲ್ಲಿ , ನಿನ್ನ ಸುಖದಲ್ಲಿ ನಾವು ಸುಖಿಗಳಾಗಿದ್ದೇವೆ. ಆನಂದ ಕಾಣುವ ಪುಣ್ಯಕ್ಕೆ ಎಂದೆದಿಗೂ ನಿನU ೆ
ನಾವು ಚಿರಋಣಿಗಳಾಗಿದ್ದೇವೆ ಎಂದಾಗ ಶಬರಿ. ರಾಮ ನನಗೆ ಬಹಳ ಸಂತೋಷವಾಯಿತು. ಕೊನೆಗೂ ನನ್ನಾ¸  ದಾರಿ ಹಿಡಿದು ಬಂದಿರಲ್ಲವೇ,
ದಣಿದು ಬಂದ ನಿಮಗೆ ಈಗ ಸಮಾಧಾನವಾಯಿತಾ ? ಹಸಿವು – ಬಾಯಾರಿಕೆ ನೀಗಿತಾ ? ಅಯ್ಯೋ ಇವಳು ಬಡವಳು ಒಬ್ಬಳೇ ಏನು ಮಾಡುತ್ತಾಳೆ ಎಂದು ನನ್ನ ಮೇಲೆ ದಯೆ ತೋರಿದಿರಾ ? ಎಂದಾಗ ತಾಯಿ ನಿಮ್ಮ ಆತಿಥ್ಯದಲ್ಲಿ ಸ್ವಲ್ಪವೂ ಕೊರೆತ ಕಾಣಲಿಲ್ಲ. ನಮ್ಮ ಅಯೋಧ್ಯೆಯ ಅರಮನೆಯಲ್ಲೂ ಕೂಡ ಇದಕ್ಕಿಂತ ಹಿತವಾದದ್ದು ಇಲ್ಲ. ಇಂದು ನಾವು ಕಾಡು ಎಂಬುದನ್ನು ಮರೆತು ಮನೆಯೆಂದೇ ತಿಳಿದೆಯ . ಇಷ್ಟೊಂದು ಪ್ರೀತಿ ತೋರುವ ನಿನ್ನನ್ನು ತಾಯಿ ಎಂದೆ ತಿಳಿದೆವು. ಎಂದು ರಾಮ ಶಬರಿಗೆ ಹೇಳಿದಾಗ ಶಬರಿ“ ನಿನ್ನ ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ !” ನಾನು ಇಂದು. ಮತಂಗ ತಪಸ್ವಿಗಳ ನೀಡಿದ ವರ ಇಂದು ನನಗೆ ಸಲ ನೀಡಿದೆ. ನಿಮ್ಮನ್ನು ಕಂಡ ಪುಣ್ಯವಂತೆ ನಾನು. ಚಿಂತೆಯೆಲ್ಲ ಹಿಂಗಿ ಹೋಯಿತು ಎನ್ನುತ್ತಾಳೆ.

2) ಶಬರಿಯ ಸಡಗರ ,ಸಂತೋಷ ಮೇಳದವರ ಹಾಡಿನಲ್ಲಿ ಹೇಗೆ ವರ್ಣಿತವಾಗಿದೆ ?
ರಾಮಲಕ್ಷ್ಮಣರ ಬಂದು ತನ್ನ ಮುಂದೆ ನಿಂತಿರುವದನ್ನು ಕಂಡು ಶಬರಿ ಬೆರಗಾದಳು. ಬೆರಗು ಕಳೆದ ಮೇಲೆ ರಾಮನ ಹತ್ತಿರಕ್ಕೆ ಬಂದು ಮೈಯನ್ನು ಮುಟ್ಟಿ ಪಾದಕ್ಕೆ ಬಿದ್ದಳು. ಕೈಯನ್ನು ಕಣ್ಣಿಗೆ  ಒತ್ತಿಕೊಂಡು ಆನಂದದ ಕಣ್ಣೀರನ್ನು ಸುರಿಸಿದಳು. ಬನ್ನಿರಿ ಎಂದು ಗದ್ಗದಿಸುತ್ತಾ ಅಯ್ಯೋ ಏನೂ ಸಿದ್ಧವೇ ಇಲ್ಲ. ನಿನ್ನೆಯಷ್ಟು ಚೆಂದವಿಲ್ಲ ಎನ್ನುತ್ತ ಬಹಳ ಹಂಬಲಿಸಿದಳು.ತನ್ನ ಮನದ ಬಯಕೆಯಂತೆ ಬಗೆ ಬಗೆಯ ಸುವಾಸನೆಯನ್ನು ಬೀರುವ ಕಾಡಿನ ಹೂವುಗಳಿಂದ ಮಾಡಿದ ಮಾಲೆಯನ್ನು ರಾಮನ ಕೊರಳಿಗೆ ಹಾಕಿ ಸಂಭ್ರಮಿಸಿದಳು. ತಾನು ತಂದಿದ್ದ ರುಚಿಯಾದ ಹಣ್ಣುಗಳನ್ನು ತಾನೆ ರಾಮಲಕ್ಷ್ಮಣರ ಕೈಯೊಳಗೆ ಇಟ್ಟು ಜಗದೊಳಗೆ ಇದದ್ದಷ್ಟು  ರುಚಿಯಾದ ಹಣ್ಣು ಯಾವುದು ಇಲ್ಲ , ನಿಮಗಾಗಿ  ತಂದಿರುವೆನು ಎಂದು ತಿನ್ನಲು ಹೇಳಿದಳು. ಮಧುಪರ್ಕವನ್ನು ಸವಿಯಲು ಕೊಟ್ಟಳು. ಶಬರಿಯ ಆತಿಥ್ಯದಿಂದ ರಾಜಕುಮಾರರಾದ ರಾಮಲಕ್ಷ್ಮಮಣರು ಸುಪ್ರಸನ್ನರಾಗಿ ಮಂದಹಾಸ ತೋರಿದರು.ಇದನ್ನು ನೋಡಿದ ಶಬರಿ ಧನ್ಯತಾಭಾವದಿಂದ ಕೂಡಿದವಳಾದಳು. ಹೀಗೆ ಶಬರಿಯ ಸಡಗರ,ಸಂತೋಷ ಮೇಳದವರು ಹಾಡಿನಲ್ಲಿ ವರ್ಣಿಸುತ್ತಾರೆ.

3. ನಂಬಿಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆ ?
ಶಬರಿ ಬೇಡರಾಜನ ಮಗಳು. ಆಕೆ ಮತಂಗಾಶ್ರಮದಲ್ಲಿ ಬಂದು ಇದ್ದಳು. ಮತಂಗ ಋಷಿಗಳು ಪ್ರತಿನಿತ್ಯ ದಶರಥ ಪುತ್ರನಾದ ಶ್ರೀರಾಮನ ಗುಣ ಸ್ವಭಾವಗಳನ್ನು ಹಾಡಿ ಹೊಗಳುತಿರುತ್ತಾರೆ. ಇದರಿಂದ ಶ್ರೀರಾಮನ ಗುಣ ಸ್ವಭಾವಗಳ ಸೆಳೆತಕ್ಕೆ ಸಿಕ್ಕಿ ಅವನನ್ನು  ಕಾಣುವುದೇ ಜೀವನದ ಏಕೈಕ ಗುರಿ ಎಂಬ ಹಂಬಲದಲ್ಲಿ ಇರುತ್ತಾಳೆ. ಮತಂಗ ಋಷಿಗೆ  ಶಬರಿಯ ಮನ  ಹಂಬಲವನ್ನು ತಿಳಿದು ಇಲ್ಲಿಗೆ ಶ್ರೀರಾಮ ಬಂದೇ ಬರುತ್ತಾನೆ ಅವನ ದರ್ಶನ  ಮುಕ್ತಿ ಸಿಗುತ್ತದೆ ಎಂದು ಹೇಳಿದ್ದರು. ಅದರಂತೆ ಶಬರಿ ಮತಂಗ ಋಷಿಗಳ ಮಾತನ್ನು ನಂಬಿ ಶ್ರೀರಾಮನ ದರ್ಶನಕ್ಕಾಗಿ
ಕಾಯುತ್ತಿದ್ದಳು. ಮತಂಗ ಋಷಿಗಳು ದಿವ್ಯಲೋಕವನ್ನು ¸ ಬಳಿಕ ರಾಮಧ್ಯಾನದಲ್ಲಿ ತೊಡಗಿ ರಾಮನ ದರ್ಶನಕ್ಕಾಗಿ ಕಾದಿದ್ದಳು.
ಶ್ರೀರಾಮಗಾಗಿ ದಿನಾಲೂ ಹೂ-ಹಣ್ಣುಹಂಪಲುಗಳನ್ನುತಿಂದು ಇಟ್ಟುಕೊಂಡು ರಾಮ ಇವತ್ತು ಬರುವನೋ ನಾಳೆ ಬರುವುನೋ ಎಂಬ ಚಿಂತೆಯಲ್ಲಿ ಇರುತ್ತಾಳೆ.ಮತಂಗರ ಮಾತಿನಂತೆ ಒಂದು ದಿನ ರಾಮಲಕ್ಷö್ಮಣರು ಮತಂಗಾಶ್ರಮಕ್ಕೆ ಬರುತ್ತಾರೆ.ಶಬರಿ ಶ್ರೀರಾಮನ ದರ್ಶನದಿಂದ ಪುಳಕಿತಳಾಗುತ್ತಾಳೆ.ತನ್ನ ಮನದ ಬಯಕೆಯಂತೆ ಹೂಮಾಲೆಯನ್ನು ಹಾಕಿ,ಹಣ್ಣು-ಹಂಪಲುಗಳನ್ನು ಕೊಟ್ಟು ತನ್ನ ಮನದ ಬಯಕೆಯನ್ನು
ಈಡೇರಿಸಿಕೊಂಡು ಧನ್ಯಳಾಗುತ್ತಾಳೆ .ಮುಕ್ತಿಯನ್ನು ಪಡೆಯುತ್ತಾಳೆ. ಹೀಗೆ ತಾಳುವಿಕೆಗಿಂತ ತಪವಿಲ್ಲ ಎನ್ನುವ ಹಾಗೆ ಶಬರಿ ಶ್ರೀರಾಮನಿಗೋಸ್ಕರ ಕಾದು ಕೆಡಲಿಲ್ಲ. ಆದ್ದರಿಂದ ನಂಬಿಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ನಿಜವಾಗಿದೆ.

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

1. “ಆವುದೀ ಮರುಳು? ನಮ್ಮೆಡೆಗೆ ಬರುತಿಹುದು.”
ಆಯ್ಕೆ :-ಈ ವಾಕ್ಯವನ್ನು ಪು. ತಿ. ನರಸಿಂಹಾಚಾರ್ ಅವರು ರಚಿಸಿರುವ ‘ಶಬರಿ’ಗೀತನಾಟಕದಿಂದ ಆಯ್ದ ‘ಶಬರಿ’ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ :- ಈ ವಾಕ್ಯವನ್ನು ರಾಮನು ಲಕ್ಷ್ಮಣನಿಗೆ  ಹೇಳುತ್ತಾನೆ.ಸೀತಾಪಹರಣದನಂತರ ಶೋಕತಪ್ತರಾದ ರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತ ಬರುವಾಗ ತಪಸ್ವಿ ದನು ಮಹರ್ಷಿಗಳು ಸಿಗುತ್ತಾರೆ. ಅವರು ಶಬರಿಯ ವೃತ್ತಾಂತವನ್ನು ಶಬರಿ ಇರುವ ಮತಂಗಾಶ್ರಮಕ್ಕೆ
ಹೋಗಲು ಸೂಚಿಸುತ್ತಾರೆ. ಅವರ ಸೂಚನಿಯಂತೆ  ಮಾತಂಗಾಶ್ರಮವನ್ನು ಪ್ರವೇಶಿಸುವ ಸಂದರ್ಭದಲ್ಲಿ ಎದುರಿಗೆ ಬರುತ್ತಿದ್ದ (ಶಬರಿಯನ್ನು) ಕಂಡ ರಾಮನು ಅಗೋ ನೋಡು ಲಕ್ಷ್ಮಣ  “ಆವುದೀ ಮರುಳು ? ನಮ್ಮೆಡೆಗೆ ಬರುತಿಹುದು” ಇದರ ಬಯಕೆ ಏನೆಂದು ತಿಳಿಯೋಣ ಎಂದು ಲಕ್ಷ್ಮಣನಿಗೆ ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ :- ಶ್ರೀರಾಮನ ದರ್ಶನಕ್ಕಾಗಿ ಕಾದು, ಕಾತರಿಸಿ, ಹುಚ್ಚಿಯಂತೆ  ಆಗಿದ್ದ ವೃದ್ಧೆ ಶಬರಿಯನ್ನು ಕಂಡು  ರಾಮಲಕ್ಷ್ಮರರು  ಭಯಗೊಂಡದ್ದನ್ನು
ಈ ಮಾತಿನಲ್ಲಿ ಸ್ವಾರಸ್ಯ ಪೂರ್ಣವಾಗಿ ವರ್ಣಿಸಲಾಗಿದೆ.

2. “ನಾಚುತಿಹೆನೀ ಪೂಜ್ಯೆಯೀ ನಲುಮೆಯಿಂದ.”
ಆಯ್ಕೆ :-ಈ ವಾಕ್ಯವನ್ನು ಪು. ತಿ. ನರಸಿಂಹಾಚಾರ್ ಅವರು ರಚಿಸಿರುವ ‘ಶಬರಿ’ಗೀತನಾಟಕದಿಂದ ಆಯ್ದ ‘ಶಬರಿ’ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ :- ಈ ಮಾತನ್ನು ರಾಮನು ಲಕ್ಷ್ಮಣಗೆ ಹೇಳುತ್ತಾನೆ.ಶಬರಿ ಶ್ರೀರಾಮನಿಗೋಸ್ಕರ ತಳಿರು, ಹೂವು, ಹಣ್ಣು-ಹಂಪಲುಗಳನ್ನು ಕೊಂಡು
ಬರುವಾಗ ಅವನು ತಿನ್ನದ ಈ ಅತಿಸವಿಯಾದ ಹಣ್ಣುಗಳನ್ನು ಏನು ಮಾಡಲಿ, ಈ ಮಧುಪರ್ಕವನ್ನು ನಾನು ಯಾರಿಗೆ ಕೊಡಲಿ. ನೀನು ಬರದೆ ನನಗೆ ಏನು ಸೇರುತ್ತಿಲ್ಲ ಎಂದು ಹಾಡುತ್ತಾ ರಾಮಧ್ಯಾನದಲ್ಲಿ ತೊಡಗಿದ್ದಾಳೆ. ಇದನ್ನು ಕಂಡ ಶ್ರೀರಾಮ ನನಗೋಸ್ಕರ ಇಷ್ಟೊಂದು ಹಂಬಲಿಸುª
ಈ ಜಟಿಲಕಬರಿಗೆ  ತನ್ನಿಂದ ಸ್ವಲ್ಪವೂ ಉಪಕಾರವಿಲ್ಲ ಆದರೂ ಪ್ರೀತಿಯಿಂದ ನನ್ನನ್ನು ನೆನೆಯುತ್ತಿದ್ದಾಳೆ.“ನಾಚುತಿಹೆನೀ ಪೂಜ್ಯೆಯೀ ನಲುಮೆಯಿಂದ
”ಎಂದು ಲಕ್ಷ್ಮಣನಿಗೆ ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ :-ಶಬರಿಯು ತನ್ನನ್ನು ಪ್ರೀತಿಯಿಂದ ನೆನೆಯುತ್ತ , ಹಂಬಲಿಸುತ್ತ ಇರುವ ದೃಶ್ಯವನ್ನು ನೋಡಿ ರಾಮನು ಈ ಪೂಜ್ಯಳ ಅನುರಾಗದಿಂದ ನಾನು ನಾಚುತಿರುವೆನು ಎಂದು ಹೇಳುವುದುಸ್ವಾರಸ್ಯಪೂರ್ಣವಾಗಿದೆ.

3. “ತಾಯಿ, ದಾರಿಗರಿಗೆ ಬೀಡಿಲ್ಲಿ ದೊರೆವುದೇ?”
ಆಯ್ಕೆ :-ಈ ವಾಕ್ಯವನ್ನು ಪು. ತಿ. ನರಸಿಂಹಾಚಾರ್ ಅವರು ರಚಿಸಿರುವ ‘ಶಬರಿ’ಗೀತನಾಟಕದಿಂದ ಆಯ್ದ ‘ಶಬರಿ’ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ :- ಈ ಮಾತನ್ನು ರಾಮನು ಶಬರಿಗೆ ಕೇಳಿದನು. ರಾಮಲಕ್ಷ್ಮಣರು ಮಾತಂಗಾಶ್ರಮವನ್ನು ಪ್ರವೇಶಿಸು  ಶಬರಿಯು “ಎಂದು ಕಾಣುವೇನೋ ರಾಮನನ್ನು ದಶರಥನ ಮಗನಂತೆ, ಸಾಧು-ಸಜ್ಜನರ ಮಿತ್ರನಂತೆ,_________ಗುರುಗಳು,ತಪಸ್ವಿಗಳು ಮೆಚ್ಚಿದಂತ ಸನ್ಮಂಗಳ
ಮೂರ್ತಿಯನ್ನು ಎಂದು ಕಾಣುವೆನೋ” ಎಂದು ಶ್ರೀರಾಮನ ಗುಣಗಾನ ಮಾಡುತ್ತಾ ಹಾಡುತ್ತಿರುತ್ತಾಳೆ. ಇದನ್ನುನೋಡುತ್ತಾ ನಿಂತಿದ್ದ ರಾಮ
ಶಬರಿಯ ಬಳಿಗೆ ಬಂದು “ತಾಯಿ, ದಾರಿಗರಿಗೆ ಬೀಡಿಲ್ಲಿ ದೊರೆವುದೇ ?”ಎಂದುಕೇಳಿದ ಸಂದರ್ಭವಾಗಿದೆ.
ಸ್ವಾರಸ್ಯ :- ತನಗಾಗಿ ಹಂಬಲಿಸುತ್ತಿರುವ, ಗುಣಗಾನ ಮಾಡುತ್ತಿರುವ ಶಬರಿಯನ್ನು ಕುರಿತು ರಾಮನು ಏನೂ ಅರಿಯದವನಂತೆ “ತಾಯಿ ಪ್ರಯಾಣಿಕರಿಗೆ ಇಲ್ಲಿ ಆಶ್ರಯ ಸಿಗುವುದೇ?”ಎಂದು ಕೇಳುವುದು ಸ್ವಾರಸ್ಯಪೂರ್ಣವಾಗಿದೆ.

4. “ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ !”
ಆಯ್ಕೆ :-ಈ ವಾಕ್ಯವನ್ನು ಪು. ತಿ. ನರಸಿಂಹಾಚಾರ್ ಅವರು ರಚಿಸಿರುವ ‘ಶಬರಿ’ಗೀತನಾಟಕದಿಂದ ಆಯ್ದ ‘ಶಬರಿ’ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ :- ಈ ಮಾತನ್ನು ಶಬರಿಯು ರಾಮನಿಗೆ ಹೇಳುತ್ತಾಳೆ. ಶಬರಿಯ ಆತಿಥ್ಯ ಸ್ವೀಕರಿಸಿದ ರಾಮನು “ಅಯೋಧ್ಯೆಯ ಅರಮನೆಯಲ್ಲೂ ಕೂಡ ಇದಕ್ಕಿಂತ ಹಿತವಾದದ್ದು ಇಲ್ಲ. ಇಂದು ನಾವು ಕಾಡು ಎಂಬುದನ್ನು ಮರೆತು ಮನೆಯೆಂದೇ ತಿಳಿದೆಯಾ . ಇಷ್ಟೊಂದು ಪ್ರೀತಿ ತೋರುವ ನಿನ್ನನ್ನು ತಾಯಿ ಎಂದೇ ತಿಳಿದೆವು” ಎಂದು ಶಬರಿಗೆ ಹೇಳಿದಾಗ ಶಬರಿ, “ನಿನ್ನ ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ !”. ನಾನು ಇಂದು ಧನ್ಯಳಾಗಿದ್ದೇನೆ ಎಂದು ರಾಮನಿಗೆ ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ :- “ರಾಮ ನಿನ್ನ ರೂಪದಂತೆ ಮಾತು ಕೂಡ ಎಷ್ಟೊಂದು ಧಾರಾಳವಾಗಿದೆ ” ಎಂದು ಹೇಳುವ ಮೂಲಕ ಶಬರಿಯು ರಾಮನ ವ್ಯಕ್ತಿತ್ವವನ್ನು ಬಹು ಸ್ವಾರಸ್ಯಪೂರ್ಣವಾಗಿ ವರ್ಣಿಸಿದ್ದಾಳೆ.

5. “ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು.”
ಆಯ್ಕೆ :-ಈ ವಾಕ್ಯವನ್ನು ಪು. ತಿ. ನರಸಿಂಹಾಚಾರ್ ಅವರು ರಚಿಸಿರುವ ‘ಶಬರಿ’ಗೀತನಾಟಕದಿಂದ ಆಯ್ದ ‘ಶಬರಿ’ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ :- ಈ ಮಾತನ್ನು ರಾಮನು , ಲಕ್ಷ್ಮಣನಿಗೆ ಹೇಳಿದ್ದಾನೆ.ರಾಮನ ದರ್ಶನ ಭಾಗ್ಯದಿಂದ ಸಂತುಷ್ಟಳಾದ ಶಬರಿಯು ಮೋಕ್ಷಕ್ಕೆ ಪ್ರಾಪ್ತಳಾದ ನಂತರ ರಾಮನು  .ಈಪ್ರಪಂಚ ಶಬರಿಯನ್ನು ಮರೇಯುವುದು ಸಾಧ್ಯವಿಲ್ಲ ಎಂದಾಗ , ಲಕ್ಷ್ಮಣ ಅಣ್ಣಾ ಶಬರಿ ಮಗುವಿನಂತೆ ಇಷ್ಟವಾದಳು. ನಮ್ಮನ್ನು ಕಡುತ್ತಲೆ ಬಹಳ ಆನಂದ ಪಟ್ಟಳು ಎಂದು ಶಬರಿಯ ಗುಣಗಾನ ಮಾಡಿದಾಗ ರಾಮ ಹೀಗೆ ಹೇಳುತ್ತಾನೆ, ಲಕ್ಷ್ಮಣ  “ಬೆಳಕಿಗೆ ಒಲಿದವರ್ ಉರಿವ ಬತ್ತಿಯ ಕರುಕ ಕಾಣರು”ಎಂದು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ :- “ಬೆಳಕನ್ನು ಇಷ್ಟಪಡುವವರು ಉರಿಯುವ ಬತ್ತಿಯ ಕಪ್ಪನ್ನು ನೋಡುವುದಿಲ್ಲ.” ಎಂಬ ಮಾತು ಶಬರಿಯ ರಾಮಭಕ್ತಿಯನ್ನು ಬಹು ಸ್ವಾರಸ್ಯಪೂರ್ಣವಾಗಿ ವರ್ಣಿಸುತ್ತದೆ.

ಉ) ಹೊಂದಿಸಿ ಬರೆಯಿರಿ:              
    ಅ ಪಟ್ಟಿ                ಬ ಪಟ್ಟಿ            ಉತ್ತರಗಳು

1    ಮತಂಗ                ಸೀತೆ                   ಆಶ್ರಮ
2    ಪು.ತಿ.ನ.               ಆಶ್ರಮ              ಮೇಲುಕೋಟೆ
3    ದಶರಥ             ಮೇಲುಕೋಟೆ      ರಾಮ
4    ಚಿತ್ರಕೂಟ          ಪರ್ವತ               ಪರ್ವತ
5    ಭೂಮಿಜಾತೆ       ರಾಮ                 ರಾಮ
        ಅರಣ್ಯ    
 
ಶಬರಿ ಪಾಠದ ಭಾಷಾ ಚಟುವಟಿಕೆ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.


1.ಕನ್ನಡ ಸಂಧಿಗಳನ್ನು ಹೆಸರಿಸಿ, ಎರಡೆರಡು ಉದಾಹರಣೆಗಳನ್ನು ಬರೆಯಿರಿ.
ಕನ್ನಡ ಸಂಧಿಗಳು-1.ಲೋಪಸಂಧಿ 2.ಆಗಮಸಂಧಿ 3.ಆದೇಶಸಂಧಿ.
1.ಲೋಪಸಂಧಿ = ಊರೂರು, ಬಲ್ಲೆನೆಂದು, ಮಾತಂತು, ಸಂಪನ್ನರಾದ
2.ಆಗಮಸಂಧಿ = ಕೈಯನ್ನು, ಮಳೆಯಿಂದ, ಶಾಲೆಯಲ್ಲಿ , ಮರವನ್ನು, ಮಗುವಿಗೆ.
3.ಆದೇಶ ಸಂಧಿ = ಮಳೆಗಾಲ, ಮೈದೋರು, ಬೆಂಬತ್ತು, ಕಡುವೆಳ್ಪು, ಮೆಲ್ವಾತು.

2.ಸಂಸ್ಕೃತ ಸಂಧಿಗಳ ಹೆಸರುಗಳನ್ನು ಸ್ವರ ಮತ್ತು ವ್ಯಂಜನ ಸಂಧಿಗಳಿಗಾಗಿ ವಿಂಗಡಿಸಿ ಬರೆಯಿರಿ.
ಸಂಸ್ಕೃತ ಸ್ವರ ಸಂಧಿಗಳು: 1.ಸವರ್ಣದೀರ್ಘ ಸಂಧಿ   2.ಗುಣಸಂಧಿ   3.ವೃದ್ಧಿ ಸಂಧಿ   4.ಯಣ್ ಸಂಧಿ
ಸಂಸ್ಕೃತ ವ್ಯಂಜನ ಸಂಧಿಗಳು: 1.ಜಾಶ್ವಸಂಧಿ    2.ಶ್ಚುತ್ವಸಂಧಿ   3.ಅನುನಾಸಿಕ¸ ಸಂಧಿ

3.ಕೊಟ್ಟಿರುವ ಪದಗಳನ್ನು ಬಿಡಿಸಿ, ಸಂಧಿ ಹೆಸರಿಸಿ.
ಸುರಾಸುರ, ಬಲ್ಲೆನೆಂದು, ಸೂರ್ಯೋದಯ, ಮಳೆಗಾಲ, ಅಸ್ಟೈಶರ್ಯ , ವೇದಿಯಲ್ಲಿ.
ಸುರ + ಅಸುರ = ಸುರಾಸುರ – ಸವರ್ಣದೀರ್ಘ ಸಂಧಿ
ಬಲ್ಲೆನು + ಎಂದು = ಬಲ್ಲೆನೆಂದು – ಲೋಪಸಂಧಿ
ಸೂರ್ಯ + ಉದಯ = ಸೂರ್ಯೋದಯ – ಗುಣಸಂಧಿ
ಮಳೆ + ಕಾಲ = ಮಳೆಗಾಲ – ಆದೇಶ ಸಂಧಿ
ಅಷ್ಟ + ಐಶ್ವರ್ಯ = ಅಸ್ಟೈಶರ್ಯ  – ವೃದ್ಧಿ ಸಂಧಿ
ವೇದಿ + ಅಲ್ಲಿ = ವೇದಿಯಲ್ಲಿ – ಆಗಮಸಂಧಿ

ಆ) ಮೊದಲೆರಡು ಪದಗಳಿಗಿರುವ ಸಂಬಂಧಿಸಿದಂತೆ  ಮೂರನೆಯ ಪದಕ್ಕೆ ಸರಿಯಾದ ನಾಲ್ಕನೆಯ ಪದ ಬರೆಯಿರಿ.
1. ನಮೋ ನಮೋ : ದ್ವಿರುಕ್ತಿ : : ಧೀರ ಶೂರ : ಜೋಡುನುಡಿ
2. ಲೋಪ ಸಂಧಿ : ಸ್ವರ ಸಂಧಿ : : ಆದೇಶ ಸಂಧಿ : ವ್ಯಂಜನ ಸಂಧಿ
3. ಕಟ್ಟಕಡೆಗೆ : ಕಡೆಗೆ ಕಡೆಗೆ : : ಮೊತ್ತಮೊದಲು : ಮೊದಲು ಮೊದಲು
4. ಶರಚ್ಚಂದ್ರ : ಶ್ಚುತ್ವ ಸಂಧಿ : : ದಿಗಂತ : ಜಶ್ವಸಂದಿ


You Might Like

Post a Comment

0 Comments