Recent Posts

ತುತ್ತೂರಿ - ೩ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ತುತ್ತೂರಿ

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ .

1. ಕಸ್ತೂರಿಯು ತುತ್ತೂರಿಯನ್ನು ಯಾವಾಗ ಊದಿದನು ?
ಉತ್ತರ : ಕಸ್ತೂರಿಯು ತುತ್ತೂರಿಯನ್ನು ಸಂಜೆಯ ವೇಳೆಯಲ್ಲಿ ಊದಿದನು

2. ಜಂಭದ ಕೋಳಿ ಯಾರು ?
ಉತ್ತರ : ಕಸ್ತೂರಿಯು ಜಂಭದ ಕೋಳಿಯಾಗಿದ್ದಾನೆ .

3. ಕಸ್ತೂರಿಯು ಏನನ್ನು ಕೊಂಡನು ?
ಉತ್ತರ : ಕಸ್ತೂರಿಯು ತುತ್ತೂರಿಯನ್ನು ಕೊಂಡನು .

4. ಕಸ್ತೂರಿ ಎಲ್ಲಿ ತುತ್ತೂರಿ ಊದಿದನು ?
ಉತ್ತರ : ಕಸ್ತೂರಿ ತುತ್ತೂರಿಯನ್ನು ಕೊಳದ ಳ ಬಳಿ ಊದಿದನು

5. ಜಂಭದ ಕೋಳಿಗೆ ಏಕೆ ಗೋಳಾಯಿತು ?
ಉತ್ತರ : ಬಣ್ಣದ ತುತ್ತೂರಿ ಹಾಳಾಗಿದ್ದರಿಂದ ಜಂಭದ ಕೋಳಿಗೆ ಗೋಳಾಯಿತು .

6. ತುತ್ತೂರಿ ಏನಾಯಿತು ?
ಉತ್ತರ : ತುತ್ತೂರಿ ನೀರಿಗೆ ಜಾರಿತು .

ಆ ) ಈ ವಾಕ್ಯಗಳಲ್ಲಿ ಬಿಟ್ಟಿರುವ ಸ್ಥಳವನ್ನು ಪದದಿಂದ ತುಂಬಿರಿ .

1. ಬಣ್ಣದ ತಗಡಿನ …….. ಉತ್ತರ : ತುತ್ತೂರಿ

2. ಕಸ್ತೂರಿ ನಡೆದನು ಉತ್ತರ : ಬೀದಿಯಲಿ

3. ಜಾರಿತು ಉತ್ತರ : ತುತ್ತೂರಿ

4. ಬಣ್ಣದ ತುತ್ತೂರಿ …. ಉತ್ತರ : ಹಾಳಾಯ್ತು . . ………………… …

ಇ ) ನೀಡಿರುವ ಪ್ರಾಸ ಪದಗಳಿಂದ ಸರಿಯಾದುದನ್ನು ಆರಿಸಿ ಬಿಟ್ಟ ಸ್ಥಳವನ್ನು ತುಂಬಿಸಿ ಬರೆ .
( ನೀರು , ಹೆಕ್ಕಿ , ಬಾಯಿ , ಹಣ್ಣು )

1. ನೋಡಲು ಬೇಕು ಕಣ್ಣು ತಿನ್ನಲು ಬೇಕು: ಹಣ್ಣು
2. ಹಾರುತ ಬಂತು ಹಕ್ಕಿ , ತಿಂದಿತು ಕಾಳನು : ಹಕ್ಕಿ
3. ಅನ್ನಕೆ ಬೇಕು ಸಾರು , ಕುಡಿಯಲು ಬೇಕು : ನೀರು
4. ಬೌ ಬೌ ಬೊಗಳಿತು ನಾಯಿ, ತರೆಯಿತು ತನ್ನಯ: ಬಾಯಿ

ಅ ) ಈ ಕಥೆಯನ್ನು ಓದಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು .
ಬೀರೂರಿನಲ್ಲಿ ರಾಮಣ್ಣ ಎಂಬ ಕಟ್ಟಿಗೆ ವ್ಯಾಪಾರಿಯು ವಾಸಿಸುತ್ತಿದ್ದನು . ಅವನು ತುಂಬಾ ಬಡವನಾಗಿದ್ದನು . ಅವನು ಪ್ರತಿ ದಿನ ಬೆಳಿಗ್ಗೆ ಕಾಡಿಗೆ ಹೋಗಿ ಒಣ ಮರವನ್ನು ಕಡಿದು ತರುತ್ತಿದ್ದನು . ಪೇಟೆಯಲ್ಲಿ ಜೀವನ ನಡೆಸುತ್ತಿದ್ದನು . ಅವನು ಎಂದೂ ಹಸಿಮರವನ್ನು ಕಡಿದವನಲ್ಲ . ಇದಕ್ಕಾಗಿ ಇವನಿಗೆ ವನದೇವತೆಯು ಅಕ್ಷಯ ಪಾತ್ರೆಯನ್ನು ನೀಡಿದಳು . ಇದರಿಂದ ರಾಮಣ್ಣ ಶ್ರೀಮಂತನಾದನು .

1. ರಾಮಣ್ಣ ಯಾರು ?
ಉತ್ತರ : ರಾಮಣ್ಣನು ಒಬ್ಬ ಕಟ್ಟಿಗೆ ವ್ಯಾಪಾರಸ್ಥನು,

2. ರಾಮಣ್ಣ ಎಲ್ಲಿ ವಾಸಿಸುತ್ತಿದ್ದನು ?

ಉತ್ತರ : ರಾಮಣ್ಣನು ಬೀರೂರಿನಲ್ಲಿ ವಾಸಿಸುತ್ತಿದ್ದನು .

3. ರಾಮಣ್ಣ ಯಾವಾಗ ಕಾಡಿಗೆ ಹೋಗುತ್ತಿದ್ದನು ?
ಉತ್ತರ : ರಾಮಣ್ಣನು ಪ್ರತಿದಿನ ಬೆಳಿಗ್ಗೆ ಕಾಡಿಗೆ ಹೋಗುತ್ತಿದ್ದನು .

4. ವನದೇವತೆಯು ರಾಮಣ್ಣನಿಗೆ ಅಕ್ಷಯ ಪಾತ್ರೆಯನ್ನು ಏಕೆ ನೀಡಿದಳು ?
ಉತ್ತರ : ರಾಮಣ್ಣನು ಎಂದೂ ಹಸಿಮರವನ್ನು ಕಡಿದಿರಲಿಲ್ಲ . ಅದಕ್ಕಾಗಿ ಇವನಿಗೆ ವನದೇವತೆಯು ” ಅಕ್ಷಯ ಪಾತ್ರೆಯನ್ನು ನೀಡಿದಳು .

ಭಾಷಾಭ್ಯಾಸ
” ಕನ್ನಡ ವರ್ಣಮಾಲೆ ” :

1. ಸ್ವರಾಕ್ಷರಗಳು : ಅ , ಆ , ಇ , ಈ , ಉ , ಊ , ಋ , ಎ , ಏ , ಐ , ಒ , ಓ , ಔ

2. ಯೋಗವಾಹಕಗಳು : ಅಂ ಅಃ

3. ವ್ಯಂಜನಗಳು :
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ

1. ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?
ಕನ್ನಡ ವರ್ಣಮಾಲೆಯಲ್ಲಿ 49 ಅಕ್ಷರಗಳಿವೆ

2. ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಎಷ್ಟು ಗುಂಪುಗಳಾಗಿ ವಿಂಗಡಿಸಿದ್ದಾರೆ ?
ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಐದು ( 5 ) ಗುಂಪುಗಳಾಗಿ ವಿಂಗಡಿಸಿದ್ದಾರೆ .
 
3. ವಂಜನಗಳನ್ನು ಬರೆ .
ಕ      ಖ    ಗ     ಘ      ಙ
ಚ     ಛ    ಜ    ಝ    ಞ
ಟ     ಠ     ಡ    ಢ     ಣ
ತ      ಥ    ದ     ಧ     ನ
ಪ     ಫ     ಬ    ಭ     ಮ
ಯ    ರ    ಲ    ವ      ಶ    ಷ    ಸ    ಹ    ಳ

4. ಈ ಕೆಳಗೆ ಗುಂಪಿನಲ್ಲಿರುವ ಸ್ವರಗಳನ್ನು ಆರಿಸಿ ಬರೆ .
“ ಕ ಗ ಎ ಬ ಅ ಚ : ಠ ಋ ಇ ಈ ಉ ರ ಒ . ವ ಶ ಅಕ್ಷರಗಳಲ್ಲಿ – ಟ ಊ ಏ ಲ ಸ ಔ ಣ “
ಉತ್ತರ : ಅ , ಆ , ಇ , ಈ , ಉ , ಊ ಋ , ಎ , ಏ , ಐ , ಒ , ಓ , ಔ – ಇವು ಸ್ವರಗಳು .

ಭಾಷಾಭ್ಯಾಸ

ಅ ) ‘ ಅ ‘ ಪಟ್ಟಿಯಲ್ಲಿನ ಶಬ್ದಗಳಲ್ಲಿ ಬಿಡಿಸಿದ ರೂಪವನ್ನು ‘ ಬ ‘ ಪಟ್ಟಿಯಲ್ಲಿನ ಶಬ್ದಗಳಿಗೆ ಸರಿ ಹೊಂದಿಸಿ ಬರೆ .
೧. ಪಾಲು + ಆಯ್ತು ಗೋಳಾಯ್ತು : ಪಾಲಾಯ್ತು
೨. ಬೋಳು + ಆಯ್ತು ಹಾಳಾಯ್ತು : ಬೋಳಾಯ್ತು
೩. ಹಾಳು + ಆಯ್ತು ಪಾಲಾಯ್ತು : ಹಾಳಾಯ್ತು
೪. ಗೋಳು + ಆಯ್ತು ಬೋಳಾಯ್ತು : ಗೋಳಾಯ್ತು

ಆ ) ಈ ಪದ್ಯದಲ್ಲಿ ಬರುವ ಪ್ರಾಸ ಪದಗಳನ್ನು ಹುಡುಕಿ ಬರೆ .
ಮಾದರಿ : ಹಾಳಾಯ್ತು : ಗೋಳಾಯ್ತು
1. ಪಾಲಾಯ್ತು – ಬೋಳಾಯ್ತು
2. ತುತ್ತೂರಿ – ಕಸ್ತೂರಿ
3. ಬೀದಿಯಲಿ – ಸಂಜೆಯಲಿ
4. ನೋಡಿದನು – ಮಾಡಿದನು .
You Might Like

Post a Comment

0 Comments