Recent Posts

ಸರ್ವಜ್ಞನ ತ್ರಿಪದಿಗಳು - ೪ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 ಸರ್ವಜ್ಞನ ತ್ರಿಪದಿಗಳು

 ಪದ್ಯದ ಸಾರಾಂಶ : ‘ ಕವಿ ಸರ್ವಜ್ಞನು ಈ ಲೋಕದ ಡೊಂಕನ್ನು ತಿದ್ದಿದವರು .
ಅವರು ತಮ್ಮ ತ್ರಿಪದಿ ವಚನಗಳ ಮೂಲಕ – ಈ ಜಗತ್ತಿನಲ್ಲಿ ಮಾನವರು ನಡೆದುಕೊಳ್ಳುವ
ಕೆಟ್ಟ ನಡವಳಿಕೆಗಳನ್ನು ತಿದ್ದಿ ಎಚ್ಚರಿಸಿದ್ದಾರೆ . ಈ ಲೋಕದಲ್ಲಿ ಅನ್ನವನ್ನು ನೀಡುವುದು , ನುಡಿಯುವುದು , ತನಂತೆಯೇ ಇತರರು ಎಂದು ಭಾವಿಸಿಕೊಂಡಾಗ ಮಾತ್ರ ಇಲ್ಲಿಯೇ ,
ಕೆಲಾಸವನ್ನು ಕಾಣಬಹುದು ಎನ್ನು : ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಕೊಟ್ಟಿದ್ದು
ಕೆಟ್ಟಿತೆನ್ನಬೇಡ , ನೀನು ಯಾವುದನ್ನು ನನಗಾಗಿ ಎಂದು ನಿನ್ನಲ್ಲಿ ಬಚ್ಚಿಟ್ಟು ಕೊಂಡಿದ್ದಿಯೊ
ಅದನ್ನು ಪರರ ಸೇವೆ ಅಥವಾ ದಾನಕ್ಕಾಗಿ ಮುಡುಪಾಗಿಡು , ಮುಂದೆ ಜೀವನದಲ್ಲಿ
 ನಿನಗೆ ಅದರ ಫಲಗಳು ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ . ಜಾತಿಯಿಂದ ಹಿಂದೆ ಇರುವವನ
 ಮನೆಯ ಜೊತಿಯು ಎಂದೂ ಹೀನವಲ್ಲ . ನಾವು ವಾಸಿಸುವ ಎಲ್ಲರ ಮನೆಯ ಜೋತಿಯು
 ಒಂದೇ ಆಗಿದೆ . ಇಲ್ಲಿ ನಾವು ಮಾಡುವ ಕೆಲಸಗಳು ಬೇರೆ ಬೇರೆ ಇರಬಹುದು . ನಮ್ಮ ಬಣ್ಯಗಳು
ಬೇರೆ ಇರಬಹುದು . ಆದರೆ ನಾವು ಜಾತಿ ಎನ್ನದೆ ಎಲ್ಲರೂ ಒಗ್ಗಟ್ಟಾಗಿ ಬಾಳಬೇಕಿದೆ .
ನಾವು ಬೆಳಗುವ ಜೊತಿ ಒಂದೇ ಆಗಿದೆ ಎನ್ನುತ್ತಾನೆ .  ,
 
ಅಭ್ಯಾಸ
 
ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
 
1.    ಯಾರ ಮನೆಯ ಜೋತಿಯು ಹೀನವಲ್ಲ .
ಉತ್ತರ :
ಜಾತಿಹೀನನ ಮನೆಯ ಜೋತಿಯು ಹೀನವಲ್ಲ ,
 
2.    ಪರರನ್ನು ಏನೆಂದು ಬಗೆಯಬೇಕು ?
ಉತ್ತರ :
ಪರರನ್ನು ತನ್ನವರಂತೆ ಬಗೆಯಬೇಕು .
 
3.    ಕೊಟ್ಟಿದ್ದ ತನಗಾದರೆ ಬಚ್ಚಿ ದು ಯಾರಿಗೆ ?
 ಉತ್ತರ :
ಕೊಟ್ಟಿದ್ದು ತನಗಾದರೆ ಬಚ್ಚಿಟ್ಟಿದ್ದು ಪರರಿಗೆ .
 
4.    ಪಾಪದ ನೆಲಗಟ್ಟು ಯಾವುದು ?
ಉತ್ತರ :
ಕೋಪವು ಪಾಪದ ನೆಲಗಟ್ಟು .
 
 ಆ ) ಎರಡು / ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ .
 
1.    ಕೈಲಾಸ ಯಾವಾಗ ಬಿನ್ನಣವಾಗುವುದು ?
 ಉತ್ತರ :
ಇತರರಿಗೆ ಅನ್ನವನ್ನು ನೀಡಿದಾಗ , ನಿಜವನ್ನು ನುಡಿದಾಗ ಮತ್ತು ಇತರರನ್ನು ತನ್ನವರಂತೆ ಕಂಡಾಗಕೈಲಾಸ ಬಿನ್ನಾಣವಾಗುವುದು .
 
2.    ಕುಲಗೋತ್ರಗಳ ನಡುವೆ ಭಿನ್ನತೆ ಏಕೆ ಇರಬಾರದು ?
 ಉತ್ತರ :
ನಾವು ನಡೆಯುವ ಭೂಮಿಯು ಒಂದೇ ಆಗಿದೆ , ನಾವು ಕುಡಿಯುವದು ಒಂದೇ ನೀರು ಮತ್ತು ಸುಡುವ ಬೆಂಕಿ ( ಅಗ್ನಿ ) ಯು ಒಂದೇ ಆಗಿರುವಾಗ ಜಾತಿ – ಮತ – ಪಂಥ ಎಂದೆನ್ನುತ ಕುಲಗೋತ್ರಗಳ ಮಧ್ಯೆ ಭಿನ್ನತೆ ಇರಬಾರದು .
 
ಭಾಷಾ ಚಟುವಟಿಕೆ
 
ಆ ) ಮಾದರಿಯಂತೆ ಪದಗಳನ್ನು
( ಮಾದರಿ : ಟ್ಯು – ಕಟ್ಟು – ಅಟು ತಟ್ಟು – ಪೆಟ್ಟು )
 ಉತ್ತರ
:
1.ಡ್ಡ  – ಅಡ್ಡ – ಗುಡ್ಯ – ದಡ್ಡ
2.    – ಅತ್ತ – ಇತ್ತ – ಸುತ್ತ – ಬೆತ್ತ
3.    – ಅಕ್ಕ – ಪಕ್ಕ – ತಕ್ಕ – ಲೆಕ್ಕ
 
ಇ ) ಮಾದರಿಯಂತೆ ಸೂಕ್ತ ಸ್ಥಳದಲ್ಲಿ ಸ , ಶ , ಪ ಸೇರಿಸಿ ಪದ ರಚಿಸು .
  ಮಾದರಿ :ಸನ್ಯಾಸ           ವಿನಾಶ                 ಪುರುಷ
ಉತ್ತರ   :  ಪ್ರಯಾಸ          ಆಕಾಶ                    ದೋಷ
                ಪ್ರವಾಸ          ವಿವಶ                    ರೋಷ
                ನೀರಸ            ವಿದೇಶ                   ಹರುಷ
                ವಿಶ್ವಾಸ          ಹತಾಶ                   ವಿಶೇಷ
                ವಿಲಾಸ          ವಶ                       ನಿಮಿಷ
 
 ಬಳಕೆ ಚಟುವಟಿಕೆ
 
ಅ ) ಈ ವಾಕ್ಯವನ್ನು ಸ್ಪುಟವಾಗಿ ನಕಲು ಮಾಡಿ .
 
1.    ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಂಗೆ
 ಉತ್ತರ :
ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರಲಿಂಗೆ
 ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರಲಿಂಗೆ
 
ಆ ) ಈ ಪದ್ಯದ ಮೊದಲ ಆರು ಸಾಲಗಳನ್ನು ಕಂಠಪಾಠ ಮಾಡಿ ನಿಮ್ಮದೇ ಹಾಡಿ .
 ಉತ್ತರ :
ಅನ್ನವನು ಇಕ್ಕುವುದು | ನನ್ನಿಯನು ನುಡಿಯುವುದ
ತನ್ನಂತೆ ಪರರ ಬಗೆದೊಡೆ ಕೈಲಾಸ |
ಬಿನ್ನಾಣವಕ್ಕು ಸರ್ವಜ್ಞ
ಕೊಟ್ಟಿದ್ದ ತನಗೆ ಬಚ್ಚಿಟ್ಟಿದ್ದು ಪರರಿಂಗೆ
 ಕೊಟ್ಟಿದ್ದು ಕೆಟ್ಟಿತೆನಬೇಡ ಮುಂದಕ್ಕೆ |
ಕಟ್ಟಿಹುದು ಬುತ್ತಿ ಸರ್ವಜ್ಞ
 
ಇ ) ರಾಷ್ಟ್ಯಗೀತೆಯನ್ನು ಇಲ್ಲಿ ಬರೆ .
ಉತ್ತರ :
ಜನಗಣ ಮನ ಅಧಿನಾಯಕ ಜಯ ಹೇ
 ಭಾರತ ಭಾಗ್ಯ ವಿಧಾತ ||
ಪಂಜಾಬ ಸಿಂಧು ಗುಜರಾತ ಮರಾಠಾ ।
ದ್ರಾವಿಡ ಉತ್ಕಲ ವಂಗಾ ||
ವಿಂಧ್ಯ ಹಿಮಾಚಲ ಯಮುನಾ ಗಂಗಾ ।
ಉಚ್ಛಲ ಜಲಧಿತರಂಗಾ ||
ತವ ಶುಭ ನಾಮೇ ಜಾಗೇ ತವ ಶುಭ ಆಶಿಸ ಮಾಗೇ ।
ಗಾಹೇ ತವ ಜಯ ಗಾಥಾ || ಜನಗಣ
ಮಂಗಲದಾಯಕ ಜಯ ಹೇ |
 ಭಾರತ ಭಾಗ್ಯ ವಿಧಾತಾ || ಜಯ ಹೇ ,
ಜಯ ಹೇ , ಜಯ ಹೇ । ಜಯ ಜಯ ಜಯ ಜಯ ಹೇ ||
 


You Might Like

Post a Comment

0 Comments